newsfirstkannada.com

ಟೀಂ ಇಂಡಿಯಾಗೆ ವಾರ್ನಿಂಗ್​ ಕೊಟ್ಟ ಆಸೀಸ್​ ಮಾಜಿ ಆಟಗಾರ ಬ್ರೆಟ್​ ಲೀ!

Share :

25-02-2023

    ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್​-ಗವಾಸ್ಕರ್​ ಟ್ರೋಫಿ ಸರಣಿ

    ರೋಹಿತ್​ ಶರ್ಮಾ ಮತ್ತು ತಂಡದವರಿಗೆ ಬ್ರೇಟ್​ ಲೀ ವಾರ್ನಿಂಗ್

    ಆಸೀಸ್​ ಕ್ರಿಕೆಟಿಗ ಟಾಡ್​ ಮರ್ಫಿಯನ್ನು ಹೊಗಳಿ ಎಚ್ಚರಿಕೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್​-ಗವಾಸ್ಕರ್​ ಟ್ರೋಫಿ ಸರಣಿ ನಡೆಯುತ್ತಿದೆ. ಈವರೆಗೆ ನಡೆದಿರುವ ಪಂದ್ಯಗಳಲ್ಲಿ ಟಿಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಾರ್ಜಿನ್​ನಲ್ಲಿದೆ. ಇದೀಗ ಮಾರ್ಚ್​ನಿಂದ ನಡೆಯುವ ಪಂದ್ಯದಲ್ಲಿ ಆಸೀಸ್​​ ಮತ್ತು ರೋಹಿತ್​ ಪಡೆ ಮತ್ತೆ ಮುಖಮುಖಿಯಾಗಲಿದೆ. ಆದರೆ ಮುಂಬರುವ ಪಂದ್ಯಕ್ಕೂ ಮುನ್ನವೇ ಆಸೀಸ್​ ಮಾಜಿ ಆಟಗಾರ ಬ್ರೇಟ್​​ ಲೀ ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಮತ್ತು ತಂಡದವರಿಗೆ ವಾರ್ನಿಂಗ್​ ನೀಡಿದ್ದಾರೆ.

ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ಮಾತನಾಡಿದ ಬ್ರೆಟ್​​ ಲೀ, ಆಸೀಸ್​ ಕ್ರಿಕೆಟಿಗ ಟಾಡ್​ ಮರ್ಫಿಯನ್ನು ಹೊಗಳಿದ್ದಾರೆ. ನಾಗ್ಪುರದಲ್ಲಿ ಭಾರತದ ನಡುವೆ ನಡೆದ ಪಂದ್ಯದಲ್ಲಿ ಮರ್ಫಿ 7 ವಿಕೆಟ್​ ಪಡೆದಿದ್ದರು. ಆದರೂ ತಂಡದವರು ಜಯವನ್ನು ಕೈಬಿಟ್ಟರು. ಮರ್ಫಿ ನಾಥನ್​ ಲಿಯಾನ್​ನಂತೆಯೇ ನಿಜವಾದ ಸಾಧನೆಗಾರ. ತಂಡದಲ್ಲಿ ರೆಡ್​ ಬಾಲ್​​ ಫಾರ್ಮೆಟ್​ನಲ್ಲಿ ಪ್ರಾಥಮಿಕ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ ಎಂದರು.

ಬ್ರೆಟ್​ ಲೀ ಟೀಂ ಇಂಡಿಯಾದ ಫಾರ್ಮೇಟ್​ನಲ್ಲಿರುವ ಕೊಹ್ಲಿ, ಚೇತೇಶ್ವರ ಪೂಜಾರಾ ಮತ್ತು ರವೀಂದ್ರ ಜಡೇಜಾರಂತಹ ಬ್ಯಾಟರ್​​ಗಳಂತೆಯೇ ಮರ್ಫಿ ತೆಗೆದುಕೊಂಡ 7 ವಿಕೆಟ್​ಗಳ ಆಟವನ್ನು ನೆನಪಿಸಿಕೊಂಡರು.

ಆಸೀಸ್​​ ಮಾಜಿ ಕ್ರಿಕೆಟಿಗ ಬ್ರೆಟ್​​ ಲೀ ಯುವ ಸ್ಪಿನ್ನರ್​ ಮರ್ಫಿ ಬಗ್ಗೆ ಗಮನಹರಿಸುವಂತೆ ಭಾರತಕ್ಕೆ ಮಾತ್ರವಲ್ಲದೆ, ಜಗತ್ತಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಮುಂಬರುವ ಸರಣಿಯಲ್ಲಿ ಸಾಕಷ್ಟು ಕಠಿಣಗಳಿವೆ. ಆದರೆ ಅವಕಾಶ ಸಿಕ್ಕಿತ್ತೋ ಅಥವಾ ಇಲ್ಲವೋ ಗೊತ್ತಿಲ್ಲ. ಬಾರ್ಡರ್​ -ಗವಾಸ್ಕರ್​ ಟ್ರೋಫಿ ಆಸೀಸ್​ ಕ್ರಿಕೆಟಿಗರ ವೃತ್ತಿಜೀವನದ ಮೊದಲ ಅಧ್ಯಾಯವಾಗಲಿದೆ ಎಂದು ಭಾವಿಸುತ್ತೇನೆ. ಭಾರತ ಇದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಟೀಂ ಇಂಡಿಯಾಗೆ ವಾರ್ನಿಂಗ್​ ಕೊಟ್ಟ ಆಸೀಸ್​ ಮಾಜಿ ಆಟಗಾರ ಬ್ರೆಟ್​ ಲೀ!

https://newsfirstlive.com/wp-content/uploads/2023/02/New-Project-2023-02-22T065119.434.jpg

    ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್​-ಗವಾಸ್ಕರ್​ ಟ್ರೋಫಿ ಸರಣಿ

    ರೋಹಿತ್​ ಶರ್ಮಾ ಮತ್ತು ತಂಡದವರಿಗೆ ಬ್ರೇಟ್​ ಲೀ ವಾರ್ನಿಂಗ್

    ಆಸೀಸ್​ ಕ್ರಿಕೆಟಿಗ ಟಾಡ್​ ಮರ್ಫಿಯನ್ನು ಹೊಗಳಿ ಎಚ್ಚರಿಕೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್​-ಗವಾಸ್ಕರ್​ ಟ್ರೋಫಿ ಸರಣಿ ನಡೆಯುತ್ತಿದೆ. ಈವರೆಗೆ ನಡೆದಿರುವ ಪಂದ್ಯಗಳಲ್ಲಿ ಟಿಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಾರ್ಜಿನ್​ನಲ್ಲಿದೆ. ಇದೀಗ ಮಾರ್ಚ್​ನಿಂದ ನಡೆಯುವ ಪಂದ್ಯದಲ್ಲಿ ಆಸೀಸ್​​ ಮತ್ತು ರೋಹಿತ್​ ಪಡೆ ಮತ್ತೆ ಮುಖಮುಖಿಯಾಗಲಿದೆ. ಆದರೆ ಮುಂಬರುವ ಪಂದ್ಯಕ್ಕೂ ಮುನ್ನವೇ ಆಸೀಸ್​ ಮಾಜಿ ಆಟಗಾರ ಬ್ರೇಟ್​​ ಲೀ ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಮತ್ತು ತಂಡದವರಿಗೆ ವಾರ್ನಿಂಗ್​ ನೀಡಿದ್ದಾರೆ.

ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ಮಾತನಾಡಿದ ಬ್ರೆಟ್​​ ಲೀ, ಆಸೀಸ್​ ಕ್ರಿಕೆಟಿಗ ಟಾಡ್​ ಮರ್ಫಿಯನ್ನು ಹೊಗಳಿದ್ದಾರೆ. ನಾಗ್ಪುರದಲ್ಲಿ ಭಾರತದ ನಡುವೆ ನಡೆದ ಪಂದ್ಯದಲ್ಲಿ ಮರ್ಫಿ 7 ವಿಕೆಟ್​ ಪಡೆದಿದ್ದರು. ಆದರೂ ತಂಡದವರು ಜಯವನ್ನು ಕೈಬಿಟ್ಟರು. ಮರ್ಫಿ ನಾಥನ್​ ಲಿಯಾನ್​ನಂತೆಯೇ ನಿಜವಾದ ಸಾಧನೆಗಾರ. ತಂಡದಲ್ಲಿ ರೆಡ್​ ಬಾಲ್​​ ಫಾರ್ಮೆಟ್​ನಲ್ಲಿ ಪ್ರಾಥಮಿಕ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ ಎಂದರು.

ಬ್ರೆಟ್​ ಲೀ ಟೀಂ ಇಂಡಿಯಾದ ಫಾರ್ಮೇಟ್​ನಲ್ಲಿರುವ ಕೊಹ್ಲಿ, ಚೇತೇಶ್ವರ ಪೂಜಾರಾ ಮತ್ತು ರವೀಂದ್ರ ಜಡೇಜಾರಂತಹ ಬ್ಯಾಟರ್​​ಗಳಂತೆಯೇ ಮರ್ಫಿ ತೆಗೆದುಕೊಂಡ 7 ವಿಕೆಟ್​ಗಳ ಆಟವನ್ನು ನೆನಪಿಸಿಕೊಂಡರು.

ಆಸೀಸ್​​ ಮಾಜಿ ಕ್ರಿಕೆಟಿಗ ಬ್ರೆಟ್​​ ಲೀ ಯುವ ಸ್ಪಿನ್ನರ್​ ಮರ್ಫಿ ಬಗ್ಗೆ ಗಮನಹರಿಸುವಂತೆ ಭಾರತಕ್ಕೆ ಮಾತ್ರವಲ್ಲದೆ, ಜಗತ್ತಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಮುಂಬರುವ ಸರಣಿಯಲ್ಲಿ ಸಾಕಷ್ಟು ಕಠಿಣಗಳಿವೆ. ಆದರೆ ಅವಕಾಶ ಸಿಕ್ಕಿತ್ತೋ ಅಥವಾ ಇಲ್ಲವೋ ಗೊತ್ತಿಲ್ಲ. ಬಾರ್ಡರ್​ -ಗವಾಸ್ಕರ್​ ಟ್ರೋಫಿ ಆಸೀಸ್​ ಕ್ರಿಕೆಟಿಗರ ವೃತ್ತಿಜೀವನದ ಮೊದಲ ಅಧ್ಯಾಯವಾಗಲಿದೆ ಎಂದು ಭಾವಿಸುತ್ತೇನೆ. ಭಾರತ ಇದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

Load More