newsfirstkannada.com

ಹೊಸ ಕನಸು, ಹೊಸ ಹೆಜ್ಜೆ ಇಟ್ಟ ರಿಷಬ್​ ಶೆಟ್ಟಿ! ಕಾಂತಾರ-2 ​ಬ್ಯುಸಿಯಲ್ಲೂ ಕೊಟ್ರು ಸಿಹಿ ಸುದ್ದಿ

Share :

25-05-2023

    ಹೊಸ ಕನಸು, ಹೊಸ ಹೆಜ್ಜೆ ಇಟ್ಟ ರಿಷಬ್​ ಶೆಟ್ಟಿ

    ಮತ್ತೊಂದು ಸಿಹಿ ಸಂಗತಿಯನ್ನ ಹೊತ್ತು ತಂದ ಶೆಟ್ರು

    ಹುಟ್ಟೂರಲ್ಲಿ ಶೆಟ್ರು ಏನು ಮಾಡಿದ್ದಾರೆ ಗೊತ್ತಾ?

ಶೆಟ್ರು ಸಮ್ನೆ ಕುಳಿತುಕೊಳ್ಳುವ ವ್ಯಕ್ತಿಯೇ ಅಲ್ಲ. ಏನಾದರೊಂದು ಮಾಡುತ್ತಿರುತ್ತಾರೆ. ಅದರಲ್ಲೂ ಕಾಂತಾರ ಪಾರ್ಟ್​-1 ಹಿಟ್​ ಕೊಟ್ಟ ಬಳಿಕವಂತೂ ಸಿಕ್ಕಾ ಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಕಾಂತಾರ-2ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿದ್ದರೂ ಮತ್ತೊಂದು ಸಿಹಿ ಸಂಗತಿಯನ್ನ ಹೊತ್ತು ತಂದಿದ್ದಾರೆ. ಅದೇನು ಗೊತ್ತಾ?

ರಿಷಬ್​ ಶೆಟ್ಟಿ ಸದ್ಯ ಕಾಂತಾರಾ -2 ಮಾಡೋದರಲ್ಲಿ ಬ್ಯುಸಿಯಾಗಿರೋದೇನೋ ನಿಜ ಅದರೊಂದಿಗೆ ಹುಟ್ಟೂರಿನಲ್ಲಿ ‘ಕೆರಾಡಿ ಸ್ಟುಡಿಯೋಸ್​’ ನಿರ್ಮಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹುಟ್ಟೂರಾದ ಕುಂದಾಪುರದ ಕೆರಾಡಿಯಲ್ಲಿ ಸ್ಟುಡಿಯೋ ನಿರ್ಮಿಸಿದ್ದಾರೆ. ಆ ಮೂಲಕ ಹುಟ್ಟೂರಿನ ಪ್ರತಿಭೆಗಳಿಗೆ ಅವಕಾಶದ ಜೊತೆಗೆ ಕೆಲಸವನ್ನು ನೀಡಲು ಈ ಸಂಸ್ಥೆ ಸ್ಥಾಪಿಸಿದ್ದಾರೆ.

ಅಂದಹಾಗೆಯೇ ಶೆಟ್ರು ಕೆರಾಡಿ ಸ್ಟುಡಿಯೋಸ್​ ಸಂಸ್ಥೆ ಅಡಿಯಲ್ಲಿ ಚಿತ್ರಗಳ ಪ್ರಚಾರ, ಮಾರ್ಕೆಂಟಿಗ್ ಕ್ಷೇತ್ರಕ್ಕೆ ಚಿತ್ತ ಹರಿಸಿದ್ದಾರಂತೆ. ಇನ್ಮುಂದೆ ನಟನೆ, ನಿರ್ದೇಶನದ ಜೊತೆಗೆ ಪ್ರಚಾರ ಕಾರ್ಯ, ಮಾರ್ಕೆಟಿಂಗ್​ ಜವಾಬ್ದಾರಿಯೂ ನಿರ್ವಹಣೆ ಮಾಡಲು ಯೋಚಿಸಿದ್ದಾರೆ. ಹಾಗಾಗಿ ಸಿನಿಮಾ, ನಟನೆ ಎಂದು ಬೆಂಗಳೂರು ಅರಸಿ ಬರುವವರಿಗೆ ಹುಟ್ಟೂರಲ್ಲಿ ರಿಷಬ್​ ಶೆಟ್ಟಿ ಸಂಸ್ಥೆ ಶುರು ಮಾಡಿದ್ದಾರೆ.

ರಿಷಬ್​ ಶೆಟ್ಟಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಬರೆದು ಹಾಕಿದ್ದಾರೆ. ಹೊಸ ಕನಸು ಮತ್ತು ಹೊಸ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳುವ ಮೂಲಕ ಬರೆದುಕೊಂಡಿದ್ದಾರೆ. ಅಂದಹಾಗೆಯೇ ಇವರ ಹೊಸ ಕಾರ್ಯಕ್ಕೆ ಅನೇಕರು ಶುಭಾವಾಗಲಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹೊಸ ಕನಸು, ಹೊಸ ಹೆಜ್ಜೆ ಇಟ್ಟ ರಿಷಬ್​ ಶೆಟ್ಟಿ! ಕಾಂತಾರ-2 ​ಬ್ಯುಸಿಯಲ್ಲೂ ಕೊಟ್ರು ಸಿಹಿ ಸುದ್ದಿ

https://newsfirstlive.com/wp-content/uploads/2023/05/Rishabh-Shetty.jpg

    ಹೊಸ ಕನಸು, ಹೊಸ ಹೆಜ್ಜೆ ಇಟ್ಟ ರಿಷಬ್​ ಶೆಟ್ಟಿ

    ಮತ್ತೊಂದು ಸಿಹಿ ಸಂಗತಿಯನ್ನ ಹೊತ್ತು ತಂದ ಶೆಟ್ರು

    ಹುಟ್ಟೂರಲ್ಲಿ ಶೆಟ್ರು ಏನು ಮಾಡಿದ್ದಾರೆ ಗೊತ್ತಾ?

ಶೆಟ್ರು ಸಮ್ನೆ ಕುಳಿತುಕೊಳ್ಳುವ ವ್ಯಕ್ತಿಯೇ ಅಲ್ಲ. ಏನಾದರೊಂದು ಮಾಡುತ್ತಿರುತ್ತಾರೆ. ಅದರಲ್ಲೂ ಕಾಂತಾರ ಪಾರ್ಟ್​-1 ಹಿಟ್​ ಕೊಟ್ಟ ಬಳಿಕವಂತೂ ಸಿಕ್ಕಾ ಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಕಾಂತಾರ-2ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿದ್ದರೂ ಮತ್ತೊಂದು ಸಿಹಿ ಸಂಗತಿಯನ್ನ ಹೊತ್ತು ತಂದಿದ್ದಾರೆ. ಅದೇನು ಗೊತ್ತಾ?

ರಿಷಬ್​ ಶೆಟ್ಟಿ ಸದ್ಯ ಕಾಂತಾರಾ -2 ಮಾಡೋದರಲ್ಲಿ ಬ್ಯುಸಿಯಾಗಿರೋದೇನೋ ನಿಜ ಅದರೊಂದಿಗೆ ಹುಟ್ಟೂರಿನಲ್ಲಿ ‘ಕೆರಾಡಿ ಸ್ಟುಡಿಯೋಸ್​’ ನಿರ್ಮಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹುಟ್ಟೂರಾದ ಕುಂದಾಪುರದ ಕೆರಾಡಿಯಲ್ಲಿ ಸ್ಟುಡಿಯೋ ನಿರ್ಮಿಸಿದ್ದಾರೆ. ಆ ಮೂಲಕ ಹುಟ್ಟೂರಿನ ಪ್ರತಿಭೆಗಳಿಗೆ ಅವಕಾಶದ ಜೊತೆಗೆ ಕೆಲಸವನ್ನು ನೀಡಲು ಈ ಸಂಸ್ಥೆ ಸ್ಥಾಪಿಸಿದ್ದಾರೆ.

ಅಂದಹಾಗೆಯೇ ಶೆಟ್ರು ಕೆರಾಡಿ ಸ್ಟುಡಿಯೋಸ್​ ಸಂಸ್ಥೆ ಅಡಿಯಲ್ಲಿ ಚಿತ್ರಗಳ ಪ್ರಚಾರ, ಮಾರ್ಕೆಂಟಿಗ್ ಕ್ಷೇತ್ರಕ್ಕೆ ಚಿತ್ತ ಹರಿಸಿದ್ದಾರಂತೆ. ಇನ್ಮುಂದೆ ನಟನೆ, ನಿರ್ದೇಶನದ ಜೊತೆಗೆ ಪ್ರಚಾರ ಕಾರ್ಯ, ಮಾರ್ಕೆಟಿಂಗ್​ ಜವಾಬ್ದಾರಿಯೂ ನಿರ್ವಹಣೆ ಮಾಡಲು ಯೋಚಿಸಿದ್ದಾರೆ. ಹಾಗಾಗಿ ಸಿನಿಮಾ, ನಟನೆ ಎಂದು ಬೆಂಗಳೂರು ಅರಸಿ ಬರುವವರಿಗೆ ಹುಟ್ಟೂರಲ್ಲಿ ರಿಷಬ್​ ಶೆಟ್ಟಿ ಸಂಸ್ಥೆ ಶುರು ಮಾಡಿದ್ದಾರೆ.

ರಿಷಬ್​ ಶೆಟ್ಟಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಬರೆದು ಹಾಕಿದ್ದಾರೆ. ಹೊಸ ಕನಸು ಮತ್ತು ಹೊಸ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳುವ ಮೂಲಕ ಬರೆದುಕೊಂಡಿದ್ದಾರೆ. ಅಂದಹಾಗೆಯೇ ಇವರ ಹೊಸ ಕಾರ್ಯಕ್ಕೆ ಅನೇಕರು ಶುಭಾವಾಗಲಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More