ರೈಲ್ವೆ ಇಲಾಖೆಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
ದೀಪಾವಳಿ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುತ್ತಿರೋ ಜನ
ರೈಲು ಬರ್ತಿದ್ದಂತೆ ನಿಲ್ದಾಣದಲ್ಲಿ ಕಾಲ್ತುಳಿತ, ಓರ್ವ ಸಾವು
ಗಾಂಧಿನಗರ: ಟ್ರೈನ್ ಹತ್ತಲು ಹೋಗಿ ಕಾಲ್ತುಳಿತ ಉಂಟಾಗಿ ಓರ್ವ ಸಾವನ್ನಪ್ಪಿ, ಹಲವಾರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ನ ಸೂರತ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ತಮ್ಮ ತಮ್ಮ ಊರಿಗೆ ತೆರಳುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ.
Dear Shri @AshwiniVaishnaw please do visit surat railway station next year without pre intimation to administration of @WesternRly @Gmwrly @drmbct @srdombct @ACMBCT2
You will get actual ground reality feel. pic.twitter.com/xPKIW81Rby— Rajesh Modi (@rajeshhmodi) November 11, 2023
ಸೂರತ್ ರೈಲ್ವೆ ನಿಲ್ದಾಣದಲ್ಲಿ ರೈಲು ಬರುತ್ತಿದ್ದಂತೆ ನಾ ಮುಂದು, ನೀ ಮುಂದು ಎಂದು ಹತ್ತಲು ಹೋಗಿ ಪ್ರಯಾಣಿಕರ ನಡುವೆ ನೂಕು ನುಗ್ಗಲಾಗಿದೆ. ಇದರಿಂದ ಮಹಿಳೆ, ಮಕ್ಕಳು ಕೆಳಗೆ ಬಿದ್ದಿದ್ದರಿಂದ ಜನ ದಟ್ಟಣೆಯಲ್ಲಿ ಮೇಲೆ ಏಳಲು ಆಗಿಲ್ಲ. ಹೀಗಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಹಲವಾರು ಪ್ರಯಾಣಿಕರು ಗಾಯಾಗೊಂಡಿದ್ದಾರೆ. ಗಾಯಾಳುಗಳನ್ನು ರೈಲ್ವೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಲಾಗಿದೆ.
Diwali Rush: Overcrowding at Surat Railway Station leaves 1 dead and 2 hospitalizedhttps://t.co/p5OHfyFlXC pic.twitter.com/MrXu8ntXaV
— DeshGujarat (@DeshGujarat) November 11, 2023
ದೀಪಾವಳಿ ಹಬ್ಬ ಇರುವುದರಿಂದ ಸುಮಾರು 7 ಲಕ್ಷಕ್ಕೂ ಅಧಿಕ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಜನರನ್ನು ನಿಯಂತ್ರಣ ಮಾಡಲು ಸ್ಟೇಷನ್ನಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿಯೇ ಇಲಾಖೆಯು ಗುಜರಾತ್, ಮುಂಬೈ, ಮಧ್ಯಪ್ರದೇಶದ ನಡುವೆ ಸುಮಾರು 46 ಜೋಡಿ ಟ್ರೈನ್ಗಳನ್ನು ಹೆಚ್ಚುವರಿಯಾಗಿ ಓಡಾಡುತ್ತಿವೆ. ಇವು ಒಟ್ಟು 400 ಟ್ರಿಪ್ಗಳನ್ನು ಹಾಕಲಿವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೈಲ್ವೆ ಇಲಾಖೆಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
ದೀಪಾವಳಿ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುತ್ತಿರೋ ಜನ
ರೈಲು ಬರ್ತಿದ್ದಂತೆ ನಿಲ್ದಾಣದಲ್ಲಿ ಕಾಲ್ತುಳಿತ, ಓರ್ವ ಸಾವು
ಗಾಂಧಿನಗರ: ಟ್ರೈನ್ ಹತ್ತಲು ಹೋಗಿ ಕಾಲ್ತುಳಿತ ಉಂಟಾಗಿ ಓರ್ವ ಸಾವನ್ನಪ್ಪಿ, ಹಲವಾರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ನ ಸೂರತ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ತಮ್ಮ ತಮ್ಮ ಊರಿಗೆ ತೆರಳುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ.
Dear Shri @AshwiniVaishnaw please do visit surat railway station next year without pre intimation to administration of @WesternRly @Gmwrly @drmbct @srdombct @ACMBCT2
You will get actual ground reality feel. pic.twitter.com/xPKIW81Rby— Rajesh Modi (@rajeshhmodi) November 11, 2023
ಸೂರತ್ ರೈಲ್ವೆ ನಿಲ್ದಾಣದಲ್ಲಿ ರೈಲು ಬರುತ್ತಿದ್ದಂತೆ ನಾ ಮುಂದು, ನೀ ಮುಂದು ಎಂದು ಹತ್ತಲು ಹೋಗಿ ಪ್ರಯಾಣಿಕರ ನಡುವೆ ನೂಕು ನುಗ್ಗಲಾಗಿದೆ. ಇದರಿಂದ ಮಹಿಳೆ, ಮಕ್ಕಳು ಕೆಳಗೆ ಬಿದ್ದಿದ್ದರಿಂದ ಜನ ದಟ್ಟಣೆಯಲ್ಲಿ ಮೇಲೆ ಏಳಲು ಆಗಿಲ್ಲ. ಹೀಗಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಹಲವಾರು ಪ್ರಯಾಣಿಕರು ಗಾಯಾಗೊಂಡಿದ್ದಾರೆ. ಗಾಯಾಳುಗಳನ್ನು ರೈಲ್ವೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಲಾಗಿದೆ.
Diwali Rush: Overcrowding at Surat Railway Station leaves 1 dead and 2 hospitalizedhttps://t.co/p5OHfyFlXC pic.twitter.com/MrXu8ntXaV
— DeshGujarat (@DeshGujarat) November 11, 2023
ದೀಪಾವಳಿ ಹಬ್ಬ ಇರುವುದರಿಂದ ಸುಮಾರು 7 ಲಕ್ಷಕ್ಕೂ ಅಧಿಕ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಜನರನ್ನು ನಿಯಂತ್ರಣ ಮಾಡಲು ಸ್ಟೇಷನ್ನಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿಯೇ ಇಲಾಖೆಯು ಗುಜರಾತ್, ಮುಂಬೈ, ಮಧ್ಯಪ್ರದೇಶದ ನಡುವೆ ಸುಮಾರು 46 ಜೋಡಿ ಟ್ರೈನ್ಗಳನ್ನು ಹೆಚ್ಚುವರಿಯಾಗಿ ಓಡಾಡುತ್ತಿವೆ. ಇವು ಒಟ್ಟು 400 ಟ್ರಿಪ್ಗಳನ್ನು ಹಾಕಲಿವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ