newsfirstkannada.com

ವರ್ತೂರು ಸಂತೋಷ್​​ ಮದ್ವೆಗೆ 12 ಸಾವಿರ ಜನ ಬಂದಿದ್ರು ಎಂದ ಸೋಮನಾಥ್​​.. ಮುಂದೆ ಹೇಳಿದ್ದೇನು..

Share :

14-11-2023

    ಈಗ ಬಿಗ್ ಬಾಸ್ ಎಂದರೆ ವರ್ತೂರು ಸಂತೋಷ್ ಎಂದಾಗಿದೆ.!

    ಮದುವೆನೇ ಆಗಿಲ್ಲವೆಂದು ವರ್ತೂರು ಸಂತೋಷ್ ಹೇಳ್ತಿದ್ದರಾ.?

    ‘1 ಲಾರಿ ಲೋಡ್ ಆಗುವಷ್ಟು ₹7 ಲಕ್ಷದ ಸಾಮಾನು ಕೊಟ್ಟಿದ್ದೇನೆ’

ರಾಜ್ಯದ್ಯಾಂತ ಎಲ್ಲಿ ನೋಡಿದರೂ ಈಗ ಹಳ್ಳಿಕಾರ್​ ಖ್ಯಾತಿಯ ವರ್ತೂರು ಸಂತೋಷ್ ಅವರ ಬಗ್ಗೆಯೇ ಮಾತು. ಯಾವಾಗ ಅವರು ಬಿಗ್ ಮನೆಯ ಒಳಗೆ ಹೋದರೋ ಅವಾಗಿಂದ ಒಂದೊಂದೇ ವಿಷಯಗಳು ಹೊರ ಬೀಳುತ್ತಿವೆ. ಹುಲಿ ಉಗುರು ಧರಿಸಿ ಜೈಲು ಸೇರಿ ಬಳಿಕ ಜಾಮೀನು ಮೇಲೆ ಹೊರ ಬಂದರು. ನಂತರ ನನಗೆ ಬಿಗ್ ಬಾಸ್ ಬೇಡ ಹೊರ ಬರುತ್ತೇನೆಂದು ಹೇಳಿದ್ದರು. ಇದೀಗ ಅವರಿಗೆ ಮದುವೆಯಾಗಿ ಒಂದು ಮಗು ಕೂಡ ಇದ್ದರೂ ನನಗೆ ಮದುವೆಯೇನೆ ಆಗಿಲ್ಲವೆಂದು ವರ್ತೂರು ಸಂತೋಷ್​ ಸುಳ್ಳು ಹೇಳಿ ಓಡಾಡುತ್ತಿದ್ದಾನೆ ಎಂದು ಹೆಣ್ಣು ಕೊಟ್ಟ ಮಾವ ಸೋಮನಾಥ್ ಅವರು ಆರೋಪ ಮಾಡಿದ್ದಾರೆ.

ವರ್ತೂರು ಸಂತೋಷ್

ಬಿಗ್ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್ ಅವರ ಮಾವ ಸೋಮನಾಥ್ ನ್ಯೂಸ್ ಫಸ್ಟ್​ ಜೊತೆ ಮಾತನಾಡಿ, ವರ್ತೂರು ಸಂತೋಷ್​ಗೆ ನನ್ನ ಮಗಳನ್ನು ಕೊಟ್ಟಿದ್ದೇನೆ. ಈಗ ಸಂತೋಷ್​​ಗೆ ಒಬ್ಬ ಮಗಳಿದ್ದಾಳೆ. ಆದ್ರೆ ಇನ್ನು ವರೆಗೂ ಮಗಳನ್ನು ನೋಡಲು ಅವನು ಬಂದಿಲ್ಲ. ಅವರ ಮನೆಯವರು ಕೂಡ ಬಂದು ನೋಡಿಲ್ಲ. 2020 ಮಾರ್ಚ್ 05 ರಂದು ಹೊಸಕೋಟೆ ಬಳಿ ಇರುವ ಕಾಟಂನಲ್ಲೂರು ಗೇಟ್ ಬಳಿ ಬರುವ KMM ರಾಯಲ್​ ಚೌಟ್ರಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದೇನೆ ಎಂದು ಮಾವ ಸೋಮನಾಥ್ ಹೇಳಿದ್ದಾರೆ.

ಇದನ್ನು ಓದಿ: ಭೋವಿ ಜನಾಂಗದ ಬಗ್ಗೆ ನಿಂದನೆ.. ಬಿಗ್​​ಬಾಸ್​ ಸ್ಪರ್ಧಿ ತನಿಶಾ ವಿರುದ್ಧ ಅಟ್ರಾಸಿಟಿ ಕೇಸ್!

ನನ್ನ ಮಗಳ ಮತ್ತು ಸಂತೋಷ್ ರಿಸೆಪ್ಷನ್​ಗೆ ಸಾವಿರ, ಐದು ಸಾವಿರವಲ್ಲ, ಬರೋಬ್ಬರಿ 12 ಸಾವಿರ ಜನ ರಿಸೆಪ್ಷನ್​ಗೆ ಬಂದಿದ್ದರು. ಒಂದು ಲಾರಿಯಲ್ಲಿ ಲೋಡ್ ಆಗುವಷ್ಟು 7 ಲಕ್ಷ ರೂಪಾಯಿ ಮೊತ್ತದ ಮದುವೆಯಲ್ಲಿ ಕೊಡುವಂತ ಸಾಮಾನುಗಳನ್ನು ಕೊಟ್ಟಿದ್ದೇನೆ. ಅವನ ಮನೆಯವರಿಂದ ಸಿಂಗಲ್ ಪೈಸಾ ಪಡೆಯದೇ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದೀನಿ ಎಂದಿದ್ದಾರೆ.

ಅವನು ವರ್ತೂರು ಸಂತೋಷ್ ದೊಡ್ಡ ಸುಳ್ಳುಗಾರ. ಎಲ್ಲಿ ಹೋದರು ನನಗೆ ಮದುವೆ ಆಗಿಲ್ಲವೆಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾನೆ ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ತೂರು ಸಂತೋಷ್​​ ಮದ್ವೆಗೆ 12 ಸಾವಿರ ಜನ ಬಂದಿದ್ರು ಎಂದ ಸೋಮನಾಥ್​​.. ಮುಂದೆ ಹೇಳಿದ್ದೇನು..

https://newsfirstlive.com/wp-content/uploads/2023/11/BIGG_BOSS_VARTURU_SANTHOSH_2.jpg

    ಈಗ ಬಿಗ್ ಬಾಸ್ ಎಂದರೆ ವರ್ತೂರು ಸಂತೋಷ್ ಎಂದಾಗಿದೆ.!

    ಮದುವೆನೇ ಆಗಿಲ್ಲವೆಂದು ವರ್ತೂರು ಸಂತೋಷ್ ಹೇಳ್ತಿದ್ದರಾ.?

    ‘1 ಲಾರಿ ಲೋಡ್ ಆಗುವಷ್ಟು ₹7 ಲಕ್ಷದ ಸಾಮಾನು ಕೊಟ್ಟಿದ್ದೇನೆ’

ರಾಜ್ಯದ್ಯಾಂತ ಎಲ್ಲಿ ನೋಡಿದರೂ ಈಗ ಹಳ್ಳಿಕಾರ್​ ಖ್ಯಾತಿಯ ವರ್ತೂರು ಸಂತೋಷ್ ಅವರ ಬಗ್ಗೆಯೇ ಮಾತು. ಯಾವಾಗ ಅವರು ಬಿಗ್ ಮನೆಯ ಒಳಗೆ ಹೋದರೋ ಅವಾಗಿಂದ ಒಂದೊಂದೇ ವಿಷಯಗಳು ಹೊರ ಬೀಳುತ್ತಿವೆ. ಹುಲಿ ಉಗುರು ಧರಿಸಿ ಜೈಲು ಸೇರಿ ಬಳಿಕ ಜಾಮೀನು ಮೇಲೆ ಹೊರ ಬಂದರು. ನಂತರ ನನಗೆ ಬಿಗ್ ಬಾಸ್ ಬೇಡ ಹೊರ ಬರುತ್ತೇನೆಂದು ಹೇಳಿದ್ದರು. ಇದೀಗ ಅವರಿಗೆ ಮದುವೆಯಾಗಿ ಒಂದು ಮಗು ಕೂಡ ಇದ್ದರೂ ನನಗೆ ಮದುವೆಯೇನೆ ಆಗಿಲ್ಲವೆಂದು ವರ್ತೂರು ಸಂತೋಷ್​ ಸುಳ್ಳು ಹೇಳಿ ಓಡಾಡುತ್ತಿದ್ದಾನೆ ಎಂದು ಹೆಣ್ಣು ಕೊಟ್ಟ ಮಾವ ಸೋಮನಾಥ್ ಅವರು ಆರೋಪ ಮಾಡಿದ್ದಾರೆ.

ವರ್ತೂರು ಸಂತೋಷ್

ಬಿಗ್ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್ ಅವರ ಮಾವ ಸೋಮನಾಥ್ ನ್ಯೂಸ್ ಫಸ್ಟ್​ ಜೊತೆ ಮಾತನಾಡಿ, ವರ್ತೂರು ಸಂತೋಷ್​ಗೆ ನನ್ನ ಮಗಳನ್ನು ಕೊಟ್ಟಿದ್ದೇನೆ. ಈಗ ಸಂತೋಷ್​​ಗೆ ಒಬ್ಬ ಮಗಳಿದ್ದಾಳೆ. ಆದ್ರೆ ಇನ್ನು ವರೆಗೂ ಮಗಳನ್ನು ನೋಡಲು ಅವನು ಬಂದಿಲ್ಲ. ಅವರ ಮನೆಯವರು ಕೂಡ ಬಂದು ನೋಡಿಲ್ಲ. 2020 ಮಾರ್ಚ್ 05 ರಂದು ಹೊಸಕೋಟೆ ಬಳಿ ಇರುವ ಕಾಟಂನಲ್ಲೂರು ಗೇಟ್ ಬಳಿ ಬರುವ KMM ರಾಯಲ್​ ಚೌಟ್ರಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದೇನೆ ಎಂದು ಮಾವ ಸೋಮನಾಥ್ ಹೇಳಿದ್ದಾರೆ.

ಇದನ್ನು ಓದಿ: ಭೋವಿ ಜನಾಂಗದ ಬಗ್ಗೆ ನಿಂದನೆ.. ಬಿಗ್​​ಬಾಸ್​ ಸ್ಪರ್ಧಿ ತನಿಶಾ ವಿರುದ್ಧ ಅಟ್ರಾಸಿಟಿ ಕೇಸ್!

ನನ್ನ ಮಗಳ ಮತ್ತು ಸಂತೋಷ್ ರಿಸೆಪ್ಷನ್​ಗೆ ಸಾವಿರ, ಐದು ಸಾವಿರವಲ್ಲ, ಬರೋಬ್ಬರಿ 12 ಸಾವಿರ ಜನ ರಿಸೆಪ್ಷನ್​ಗೆ ಬಂದಿದ್ದರು. ಒಂದು ಲಾರಿಯಲ್ಲಿ ಲೋಡ್ ಆಗುವಷ್ಟು 7 ಲಕ್ಷ ರೂಪಾಯಿ ಮೊತ್ತದ ಮದುವೆಯಲ್ಲಿ ಕೊಡುವಂತ ಸಾಮಾನುಗಳನ್ನು ಕೊಟ್ಟಿದ್ದೇನೆ. ಅವನ ಮನೆಯವರಿಂದ ಸಿಂಗಲ್ ಪೈಸಾ ಪಡೆಯದೇ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದೀನಿ ಎಂದಿದ್ದಾರೆ.

ಅವನು ವರ್ತೂರು ಸಂತೋಷ್ ದೊಡ್ಡ ಸುಳ್ಳುಗಾರ. ಎಲ್ಲಿ ಹೋದರು ನನಗೆ ಮದುವೆ ಆಗಿಲ್ಲವೆಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾನೆ ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More