ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರ ತವರು ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ರೋಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆನೆಡೆದಿದ್ದು, ಅನಿಲ್ ದೊಡ್ಮನಿ (40) ಮೃತಪಟ್ಟಿದ್ದಾರೆ. ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ನಿವಾಸಿ ಅನಿಲ್ ಮೃತ ದುರ್ದೈವಿ. ಮೃತ ಅನಿಲ್ ಹಳದಿ ಕಾಮಣಿಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲಾಸ್ಪತ್ರಗೆ ಚಿಕಿತ್ಸೆಗಾಗಿ ಬಂದಿದ್ರು. ಜಿಲ್ಲಾ ಸರ್ಜನ್ ಮಾದರಕಟ್ಟಿ ನಿರ್ಲಕ್ಷ್ಯದಿದಂದಲೇ ಅನಿಲ್ ಸಾವನ್ನಪ್ಪಿದ್ದಾರೆ ಎಂದು ಕುಟುಂಸ್ಥರು ಆರೋಪಿಸಿದ್ದಾರೆ. ಅಲ್ಲದೇ, ಆಕ್ಸಿಜನ್ ಇದ್ದಿದ್ದರೆ, ಅನಿಲ್ ಇನ್ನೂ ಬದುಕುತ್ತಿದ್ದ ಎಂದು ಕುಟುಂಬಸ್ಥರು ಗೋಳಿಡುತ್ತಿದ್ದಾರೆ. ಇದೆಲ್ಲದರ ಜೊತೆಗೆ, ಅನಿಲ್ ಸಾವನ್ನಪ್ಪಿ ಗಂಟೆ ಕಳೆದರೂ ಮೃತ ದೇಹ ಶಿಫ್ಟ್ ಮಾಡದೇ, ಆಸ್ಪತ್ರೆ ವೈದ್ಯರು ನೌಕರರ ಸಂಘದ ಚುನಾವಣೆಯಲ್ಲಿ ಬ್ಯಸಿಯಾಗಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಕುರಿತಂತೆ ಜಿಲ್ಲಾ ಸರ್ಜನ್ ಮಾದರಕಟ್ಟಿ ಸ್ಪಷ್ಟೀಕರಣ ನೀಡಿದ್ದು, ಮೃತ ಅನಿಲ್ ದೊಡ್ಮನಿ ಲಿವರ್ ಹಾಗು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಹಾಸ್ಪಿಟಲ್ಗೆ ಹೋಗುವಂತೆ ಹೇಳಿದ್ದೆ. ಆದ್ರೆ, ಅನಿಲ್ನ ಕುಟುಂಬಸ್ಥರು ಬಡವರಾಗಿದ್ರಿಂದ ಇಲ್ಲೇ ಚಿಕಿತ್ಸೆ ನೀಡುವಂತೆ ಹೇಳಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅನಿಲ್ಗೆ ಆಕ್ಸಿಜನ್ನ ಅವಶ್ಯಕತೆ ಇರಲಿಲ್ಲ. ಅಲ್ಲದೇ, ನಮಗೆ ಬೇಕಾಗುವಷ್ಟು ಆಕ್ಸಿಜನ್ ನಮ್ಮ ಬಳಿ ಇದೆ ಅಂತಾ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]

















Discussion about this post