ಕೊಪ್ಪಳ: ಜಿಲ್ಲೆಯ ಕುಕನೂರಿನ ಮಾಳೆಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಗಂಧದ ಕಟ್ಟಿಗೆ ಹಾಗೂ ನಾಡಬಂದೂಕು ಹೊಂದಿದ್ದ ಮೂವರನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಶಿವಪ್ಪ ಹರಿಣಿಶಿಕಾರಿ, ಫಕೀರಪ್ಪ ಹಾಗೂ ಶೇಖಪ್ಪ ಬಂಧಿತ ಆರೋಪಿಗಳು.
ಆರೋಪಿಗಳನ್ನು ಬಂಧಿಸಿದ ಬಳಿಕ ಸಿಪಿಐ ನಾಗಿರೆಡ್ಡಿ ನೇತೃತ್ವದಲ್ಲಿ ಕುಕನೂರು ಠಾಣೆಯ ಪಿಎಸ್ಐ ವೆಂಕಟೇಶ್ ಹಾಗೂ ತಂಡ ಬಂಧಿತರ ಮನೆ ಮೇಲೆ ದಾಳಿ ಮಾಡಿದೆ. ಆರೋಪಿಗಳಿಂದ ಒಂದು ನಾಡಬಂದೂಕು, 9 ಕೆಜಿ ಗಂಧದ ಕಟ್ಟಿಗೆ, ಜಿಂಕೆಯ ಚರ್ಮ, ಕೋಡು ಹಾಗೂ ಜಿಂಕೆಯ ಬಲೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post