ಬೆಂಗಳೂರು: ಷರತ್ತು ಬದ್ಧ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಸಿಸಿಬಿ ಕಚೇರಿಗೆ ಹಾಜರಾಗಿದ್ದರು.
ನಟಿ ರಾಗಿಣಿಗೆ ನೀಡಿರುವ ಜಾಮೀನಿನ ಮೇಲೆ ವಿಧಿಸಿರುವ ಷರತ್ತಿನಂತೆ ಪ್ರತಿ 15 ದಿನಗಳಿಗೊಮ್ಮೆ ಸಿಸಿಬಿ ತನಿಖಾಧಿಕಾರಿಯ ಮುಂದೆ ಹಾಜರಾಗಿ ಸಹಿ ಹಾಕಬೇಕು. ಆ ಮೂಲಕ ತಾವು ಸಾಕ್ಷಿನಾಶ ಮಾಡ್ತಿಲ್ಲ, ಯಾವುದೇ ಪ್ರಭಾವ ಬೀರುತ್ತಿಲ್ಲ. ಬೆಂಗಳೂರನ್ನ ಬಿಟ್ಟು ಹೊರಗೆ ಎಲ್ಲೂ ಹೋಗಿಲ್ಲ ಎಂದು ತೋರಿಸಬೇಕು ಎಂದು ಸೂಚಿಸಲಾಗಿದೆ.
ಸದ್ಯ ಅವರು ಪರಪ್ಪನ ಅಗ್ರಹಾರದಿಂದ ವಾಪಸ್ಸಾಗಿ 15 ದಿನಗಳು ಕಳೆದಿದ್ದು, ಇದೇ ಮೊದಲ ಬಾರಿಗೆ ಸಹಿ ಹಾಕುವ ಸಂಬಂಧ ಸಿಸಿಬಿ ಕಚೇರಿಗೆ ಹಾಜರಾಗಿದ್ದರು. ತನಿಖಾಧಿಕಾರಿ ಅಂಜುಮಾಲಾರ ಮುಂದೆ ಹಾಜರಾಗಿ ಷರತ್ತನ್ನು ಪೂರೈಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post