Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಲಡಾಖ್​ನಲ್ಲಿ ಕೇವಲ ಒಂದಲ್ಲ, ಇದು ಚೀನಿ ಸೇನೆಯ 7 ಸೋಲುಗಳು

Share on Facebook Share on Twitter Send Share
June 17, 2021

ಕೆಲವು ಗೋಪುರಗಳು ಗಾಳಿ ಬೀಸೋವರೆಗೂ ಉಕ್ಕಿನ ಗೋಪುರ ಅಂತಲೇ ಅನಿಸುತ್ತೆ. ಹೊಳೆಯುವುದೆಲ್ಲ ಬೆಂಕಿಗೆ ಬೀಳೋವರೆಗೂ ಚಿನ್ನವೇ ಅನಿಸುತ್ತೆ. ಆದ್ರೆ ಜೋರಾಗಿ ಗಾಳಿ ಬೀಸಿದಾಗ ಗೋಪುರಗಳು ಉರಳಿ ಹೋದಾಗ, ಬೆಂಕಿಗೆ ಬಿದ್ದು ಹೊಳಪು ಮಾಸಿದಾಗಲೇ ಅವುಗಳ ನಿಜಬಣ್ಣದ ಅರಿವಾಗುತ್ತೆ. ಅಂಥದ್ದೇ ಪರಿಸ್ಥಿತಿಗೆ ಇಂದು ಚೀನಾ ಸಿಲುಕಿದೆ. ಅಷ್ಟೇ ಅಲ್ಲ ಭಾರತದ ಜೊತೆ ಕಿರಿಕ್ ಮಾಡಿಕೊಂಡು ಸಾಕಷ್ಟು ಕಳೆದುಕೊಳ್ಳುವಂತಾಗಿದೆ.

ನಿಮಗೆ ನಮ್ಮ ಸ್ನೇಹಿತರ ಬಗ್ಗೆ ಹೆಚ್ಚೇನೂ ಗೊತ್ತಿರದೇ ಇದ್ರೂ ತೊಂದರೆಯಿಲ್ಲ. ಆದ್ರೆ ವೈರಿಯ ಬಗ್ಗೆ ಸಂಪೂರ್ಣ ಅರಿವಿರಬೇಕು. ನೀವು ಎಷ್ಟೇ ಬಲಶಾಲಿಯಾಗಿದ್ರೂ ನಿಮ್ಮ ವೈರಿಗಳ ಸಾಮರ್ಥ್ಯವನ್ನು ಚೆನ್ನಾಗಿ ಅರಿತಿರಬೇಕು. ಯಾಕಂದ್ರೆ ಯುದ್ಧಭೂಮಿಯಲ್ಲಿ ಒಂಚೂರು ಎಚ್ಚರ ತಪ್ಪಿದ್ರೂ ಇಂದು ಚೀನಾಕ್ಕೆ ಬಂದ ಸ್ಥಿತಿಯೇ ಬರೋದ್ರಲ್ಲಿ ಅಚ್ಚರಿಯೇನಿಲ್ಲ.

ನಿಜಕ್ಕೂ ಇಂದು ಚೀನಾ ಸ್ಥಿತಿ ಅಯೋಮಯವಾಗಿದೆ. ಶಿ ಜಿನ್​ಪಿಂಗ್ ಅನ್ನೋ ಸರ್ವಾಧಿಕಾರಿ ಅಧ್ಯಕ್ಷನ ಹಪಾಹಪಿ, ತನ್ನ ವಿರುದ್ಧ ತನ್ನದೇ ದೇಶದಲ್ಲಿ ಉಂಟಾಗುತ್ತಿರೋ ಅಸಮಾಧಾನ, ಹಲವು ಪ್ರದೇಶಗಳಲ್ಲಿ ಊಟಕ್ಕೂ ಬಂದೊದಗಿರೋ ತಾತ್ವಾರ, ಜಗತ್ತಿನ ಕಣ್ಣಿನಲ್ಲಿ ವಿಲನ್​ ಆಗಲು ಕಾರಣವಾಗಿರೋ ಚೀನಿ ಕೊರೊನಾ ವೈರಸ್, ಸೈನ್ಯ ಸೇರಲು ಹಿಂಜರಿಯುತ್ತಿರೋ ಯುವ ಸಮುದಾಯವನ್ನು ಮತ್ತೆ ಮರಳಿ ಸೇನೆಗೆ ತರಬೇಕಾದ ಸವಾಲು, ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಬದ್ಧವೈರಿ ಪಾಕಿಸ್ತಾನದ ಜೊತೆ ತಾನು ಕೈಜೋಡಿಸಿರೋದ್ರಿಂದ ಬಲವಾಗುತ್ತಿರೋ ಭಾರತ ತನ್ನ ವಿರುದ್ಧ ಎದೆ ಸೆಟಿಸಿ ನಿಲ್ಲದಂತೆ ಮಾಡಬೇಕು ಅನ್ನೋ ಗುರಿ, ಜೊತೆಗೆ ಅಮೆರಿಕಾದ ಆಪ್ತರಾಷ್ಟ್ರವಾಗುವತ್ತ ಸಾಗುತ್ತಿರೋ ಭಾರತವನ್ನು ಕಟ್ಟಿಹಾಕಬೇಕು ಅನ್ನೋ ಲೆಕ್ಕಾಚಾರ.. ಈ ಎಲ್ಲ ಚಾಲೆಂಜ್​ಗಳಿಗೂ ಚೀನಾಕ್ಕೆ ಪರಿಹಾರವಾಗಿ ಕಂಡಿದ್ದು ಲಡಾಖ್​ಗೆ ಹೊಂದಿಕೊಂಡಿರೋ ​ ಗಡಿ.

Download the Newsfirstlive app

ಲಡಾಖ್​ನಲ್ಲಿ ಕೇವಲ 2 ಬ್ಯಾಟಲಿಯನ್​ ಹೊಂದಿದ್ದ ಭಾರತೀಯ ಸೇನೆಯ ಕಣ್ತಪ್ಪಿಸಿ ತನ್ನ ಸೇನೆಯನ್ನ ನುಗ್ಗಿಸಿ ಭಾರತದ ನೆಲವನ್ನು ಲಪಟಾಯಿಸಿ ತನ್ನ ದೇಶದಲ್ಲಿ ಹೀರೋ ಆಗಬೇಕು, ಜೊತೆಗೆ ಚೀನಾದ ಕಮ್ಯುನಿಸ್ಟ್​ ಪಾರ್ಟಿಯಲ್ಲಿ ತನ್ನ ವಿರೋಧಿಗಳನ್ನೂ ಮಟ್ಟ ಹಾಕಬೇಕು ಅನ್ನೋ ಲೆಕ್ಕಾಚಾರದಲ್ಲಿ 2020ರ ಏಪ್ರಿಲ್ ಮೇ ವೇಳೆಗೆ ಪ್ಯಾಂಗಾಂಗ್​ ಸೋ ಸರೋವರದ ಉತ್ತರ ಭಾಗದಲ್ಲಿನ ಮನುಷ್ಯನ ಬೆರಳಿನ ಆಕಾರದ ಪರ್ವತ ಶ್ರೇಣಿಯ ಫಿಂಗರ್​ 4 ಬಳಿ ಚೀನಾದ ಸೇನೆ ಬಂದು ಕುಳಿತಿತ್ತು. ಸಾಮಾನ್ಯವಾಗಿ ಪ್ರತಿ ಬಾರಿ ಫಿಂಗರ್​ 4 ತನಕ ಬಂದು ಪಹರೆ ನಡೆಸಿ ಮರಳಿ ಫಿಂಗರ್​ 8ರ ಹಿಂದೆ ಹೋಗುತ್ತಿದ್ದ ಚೀನಿ ಸೇನೆ ಈ ಬಾರಿ ಮಾತ್ರ ಭಾರತಕ್ಕೇ ಸರ್​ಪ್ರೈಸ್ ನೀಡಿತ್ತು.

ಭಾರತ ಪ್ರಾರಂಭದಲ್ಲಿ ಚೀನಿ ಮೋಸದಿಂದಾಗಿ ಕೊಂಚ ಹಿನ್ನೆಡೆ ಅನುಭವಿಸಿದ್ದರೂ ನಂತರ ಒಂದೋದೇ ಪೆಟ್ಟು ನೀಡಲು ಆರಂಭಿಸಿತ್ತು. ಮಿಟಿಲಿಟರಿ ಕ್ರಮ, ಆರ್ಥಿಕ ಕ್ರಮ, ರಾಜತಾಂತ್ರಿಕ ಕ್ರಮದ ಜೊತೆಗೆ ಭಾರತವನ್ನು ಒಳಗಿನಿಂದಲೇ ಮತ್ತಷ್ಟು ಬಲಗೊಳಿಸುವಂಥ ಕ್ರಮಗಳನ್ನು ಕೇಂದ್ರ ಸರ್ಕಾರ ನಿರಂತರವಾಗಿ ತೆಗೆದುಕೊಳ್ಳಲು ಆರಂಭಿಸಿತು. ಭಾರತ ತೆಗೆದುಕೊಂಡ ಒಂದೊಂದು ಕ್ರಮಗಳೂ ಚೀನಾಕ್ಕೆ ಅಕ್ಷರಶಃ ಒಂದೊಂದು ಮರ್ಮಾಘಾತವನ್ನೇ ನೀಡುತ್ತಾ ಹೋದವು. ಅದರ ಪರಿಣಾಮವಾಗಿ ಇಂದು ಚೀನಾ ಮರಳಿ ಫಿಂಗರ್ 8ರ ಹಿಂದೆ ಹೋಗಿದೆ. ಜೊತೆಗೆ ಬೆಲೆ ಕಟ್ಟಲಾಗದಷ್ಟು ಸರಣಿ ಸೋಲನ್ನೂ ಅನುಭವಿಸಿದೆ.

ಗಲ್ವಾನ್​ ವ್ಯಾಲಿಯಲ್ಲಿ ರಾಕ್ಷಸರಂತೆ ಮುಗಿಬಿದ್ದ ಚೀನಾ ಸೇನೆ
ಮಹಾ ರುದ್ರನಾಗಿ ಅಘೋರ ರೂಪ ತೋರಿದ ಯೋಧರು

ಚೀನಿ ಸೋಲು 1: ಅದು ಜೂನ್ 14ರ ರಾತ್ರಿ.. ಗಲ್ವಾನ್ ವ್ಯಾಲಿಯ ನದಿ ತಿರುವಿನಲ್ಲಿ ಚೀನಾದ ಟೆಂಟ್ ಮತ್ತೆ ತಲೆ ಎತ್ತಿತ್ತು. ಹಿಂದಿನ ದಿನದ ಮಾತುಕತೆ ವೇಳೆ ತಾನೆ ಒಪ್ಪಿಕೊಂಡು ಭಾರತದ ಭಾಗದಲ್ಲಿದ್ದ ಟೆಂಟ್​ ಅನ್ನು ಚೀನಿ ಸೇನೆ ತೆಗೆದು ಹಾಕಿತ್ತು. ಆದ್ರೆ ಮರುದಿನವೇ ಅಲ್ಲಿ ಮತ್ತೆ ಅದು ತಲೆ ಎತ್ತಿದ್ದನ್ನು ಬಿಹಾರ ರೆಜಿಮೆಂಟ್​​ನ ಕರ್ನಲ್ ಸಂತೋಷ್ ಬಾಬು ಮತ್ತು ತಂಡ ಗಮನಿಸಿತ್ತು. ಸಹಜವಾಗಿ ಮಾತನಾಡಿ ಅವರಿಗೆ ತಿಳಿ ಹೇಳಬೇಕು ಅಂತಾ ಸೌಮ್ಯ ಸ್ವಭಾವದ ಸಂತೋಷ್ ಬಾಬು ಆ ಟೆಂಟ್ ಬಳಿ ತೆರಳಿದಾಗ ಸಮ್​ಥಿಂಗ್ ಈಸ್ ರಾಂಗ್ ಅನ್ನೋದು ಅವರ ಗಮನಕ್ಕೆ ಬಂದಿತ್ತು. ಬಳಿಕ ಅಂದು ರಾತ್ರಿ ಮಲ್ಲಯುದ್ಧವೇ ನಡೆದು ಹೋಯ್ತು. ಅನಾಗರಿಕರಂತೆ ಚೀನಿ ಸೈನಿಕರು ಮೊದಲೇ ತಯಾರಾಗಿ ಬಂದಿದ್ದು, ಮೊಳೆ ಇರುವ ರಾಡ್​ನೊಂದಿಗೆ ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ರು. ಈ ದಾಳಿಯಲ್ಲಿ ಭಾರತ, ಕರ್ನಲ್ ಸಂತೋಷ್ ಬಾಬು ಅವರೂ ಸೇರಿದಂತೆ 20 ಯೋಧರನ್ನು ಕಳೆದುಕೊಂಡಿತ್ತು. ಆದ್ರೆ.. ಭಾರತೀಯ ಯೋಧರು ಬರೋಬ್ಬರಿ 45ಕ್ಕೂ ಹೆಚ್ಚು ಚೀನಿ ಸೈನಿಕರನ್ನು ಹತ್ಯೆ ಮಾಡಿದ್ದಲ್ಲದೇ 100ಕ್ಕೂ ಹೆಚ್ಚು ಚೀನಿಯರನ್ನು ತೀವ್ರವಾಗಿ ಗಾಯಗೊಳಿಸಿದ್ದರು. ಈ ಸೋಲು ಹಾಗೂ ಅಂದು ಉಂಟಾದ ಭಯ ಇಂದಿಗೂ ಚೀನಿ ಸೈನಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತಿರೋದು ಸುಳ್ಳಲ್ಲ.

ಮೊದಲ ಬಾರಿ ಚೀನಾದ 59 ಆ್ಯಪ್​ಗಳು ಬ್ಯಾನ್​​
ಒಟ್ಟು 267 ಚೀನಿ ಆ್ಯಪ್ ಬ್ಯಾನ್ ಮಾಡಿದ ಭಾರತ
ಚೀನಾಕ್ಕೆ ವ್ಯಾಪಾರದಲ್ಲೂ ಪೆಟ್ಟುಕೊಟ್ಟ ಸರ್ಕಾರ

ಚೀನಿ ಸೋಲು 2: ಗಲ್ವಾನ್​​ನಲ್ಲಿ ಹಿಂಸಾಚಾರ ಭುಗಿಲೇಳುವ ತನಕ ಕೇವಲ ಮಾತುಕತೆ ಮೂಲಕ ಚೀನಿಯರ ಮನವನ್ನು ಒಲಿಸುವ ಯತ್ನವನ್ನು ಭಾರತ ಮಾಡುತ್ತಿತ್ತು. ಆದ್ರೆ ಬಳಿಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿತು. ಅದರ ಭಾಗವಾಗಿಯೇ ಪ್ರಾರಂಭದಲ್ಲಿ ಜೂನ್ 29, 2020ರಂದು ಮೊದಲ ಬಾರಿಗೆ ಟಿಕ್​ಟಾಕ್ ಸೇರಿ 59 ಆ್ಯಪ್​ಗಳನ್ನು ಬ್ಯಾನ್​ ಮಾಡಲಾಯಿತು. ಚೀನಾದ ಮೇಲೆ ಒತ್ತಡ ಕಾಯ್ದುಕೊಳ್ಳಲು ಡ್ರಾಗನ್ ರಾಷ್ಟ್ರದ ಒಟ್ಟು 267 ಆ್ಯಪ್​ಗಳನ್ನು ಭಾರತ ಬ್ಯಾನ್​ ಮಾಡಿತು. ಇದರಿಂದಾಗಿ ಆ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವುಂಟಾಗಲು ಶುರುವಾಗಿತ್ತು.

ಅಷ್ಟೇ ಅಲ್ಲ, ಚೀನಾದ ಸಂಸ್ಥೆಗಳು ಭಾರತದಲ್ಲಿ ನೇರವಾಗಿ ಹೂಡಿಕೆ ಮಾಡದಂತೆ ಸಹ ಕಾನೂನಿನಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಿತು. ಜೊತೆಗೆ ಆ ದೇಶದ ಕಂಪನಿಗಳಿಗೆ ಸಿಕ್ಕಿದ್ದ ಹಲವು ಟೆಂಡರ್​ಗಳನ್ನು ರದ್ದು ಮಾಡಲಾಯಿತು. ಚೀನಾದಿಂದ ಆಮದಾಗುವ ಹಲವು ವಸ್ತುಗಳಿಗೆ ತಡೆ ಕೊಡಲಾಯಿತು. ಆಮದು ಶುಲ್ಕವನ್ನು ಕೂಡ ಕೇಂದ್ರ ಸರ್ಕಾರ ಹೆಚ್ಚಿಸಿತು.

ಆತ್ಮನಿರ್ಭರ ಭಾರತ ಯೋಜನೆ ಉದ್ಘಾಟನೆ
ಚೀನಾದ ಮೇಲೆ ಅವಲಂಬನೆ ಕಡಿಮೆ ಮಾಡಿದ ಘೋಷಣೆ

ಚೀನಿ ಸೋಲು 3: ಚೀನಾ ವೈರಸ್ ಕೊರೊನಾ ಸೋಂಕು ಭಾರತದಲ್ಲಿ ಪ್ರಾರಂಭವಾದಾಗ ಭಾರತದಲ್ಲಿ ಒಂದೇ ಒಂದು ಪಿಪಿಇ ಕಿಟ್ ತಯಾರಾಗ್ತಿರಲಿಲ್ಲ. ಎನ್​​-95 ಮಾಸ್ಕ್​ಗಳೂ ಚೀನಾದಿಂದಲೇ ಬರಬೇಕಿತ್ತು. ಅಷ್ಟು ಮಾತ್ರವಲ್ಲ ಪ್ರತಿ ಭಾರತೀಯರೂ ಪ್ರತಿನಿತ್ಯ ಬಳಸುವ ಹಲವು ವಸ್ತುಗಳನ್ನೂ ಚೀನಾದಿಂದಲೇ ಆಮದು ಮಾಡಿಕೊಳ್ಳಬೇಕಿತ್ತು. ದೊಡ್ಡ ದೊಡ್ಡ ವಸ್ತುಗಳೂ ಸೇರಿ ಹೀಗೆ ಪ್ರತಿ ವರ್ಷ ಚೀನಾದಿಂದ ಭಾರತ ಸುಮಾರು 60 ಸಾವಿರ ಕೋಟಿ ರೂಪಾಯಿ ವಸ್ತುಗಳನ್ನು ತರಿಸಿಕೊಳ್ಳುತ್ತಿತ್ತು. ಅದೇ ಭಾರತದಿಂದ ಕೇವಲ ಸುಮಾರು 25 ಸಾವಿರ ಕೋಟಿ ರೂಪಾಯಿಯ ವಸ್ತುಗಳು ಚೀನಾಕ್ಕೆ ರಫ್ತು ಆಗುತ್ತಿದ್ದವು. ಹೀಗಾಗಿ ಒಂದೆಡೆ ಕೊರೊನಾ, ಇನ್ನೊಂದೆಡೆ ಲಡಾಖ್​ ಗಡಿಯಲ್ಲಿ ಚೀನಾ ಕಿತಾಪತಿ.. ಈ ಎಲ್ಲ ಕಾರಣದಿಂದಾಗಿ ಭಾರತ ಸ್ವವಾಲಂಬಿಯಾಗಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಅಂಥ ವೇಳೆಯಲ್ಲೇ ಭಾರತ ಸರ್ಕಾರ ಆತ್ಮನಿರ್ಭರ್ ಭಾರತ್ ಯೋಜನೆ ಘೋಷಿಸೋದರ ಮೂಲಕ ಚೀನಾಕ್ಕೆ ದೊಡ್ಡ ಪೆಟ್ಟು ಕೊಟ್ಟಿತ್ತು. ಲಡಾಖ್​​​ ಗಡಿಯಲ್ಲಿ ಚೀನಿ ಸೇನೆ ಜಮಾವಣೆಯಾಗುವ ತನಕ ಭಾರತ ಮತ್ತು ಚೀನಾದ ವ್ಯಾಪಾರ-ವಹಿವಾಟು ಏರುಗತಿಯಲ್ಲಿ ಸಾಗುತ್ತಿತ್ತು. ಆದ್ರೆ ಚೀನಾ ಮಾಡಿದ ಯಡವಟ್ಟು ಸ್ವಾವಲಂಬಿ ಭಾರತಕ್ಕೆ ಎಡೆ ಮಾಡಿ ಕೊಟ್ಟಿತು.

ಕೈಲಾಶ್ ರೇಂಜ್ ಆಕ್ರಮಿಸಿಕೊಂಡ ಭಾರತೀಯ ಸೇನೆ

ಚೀನಿ ಸೋಲು 4 : ಅದು ಆಗಸ್ಟ್ 30ರ ರಾತ್ರಿ.. ಭಾರತದ ಸೈನಿಕರು ಅದ್ರಲ್ಲೂ ಟಿಬೇಟ್ ಸೈನಿಕರನ್ನು ಒಳಗೊಂಡ ಸ್ಪೆಷಲ್ ಫ್ರಂಟಿಯರ್ ಫೋರ್ಸ್​ ಯೋಧರು ಚೀನಿ ಸೇನೆಗೆ ಆ ಜನ್ಮ ಆಘಾತ ನೀಡಿದ್ದರು. ಅಂದು ಭಾರತೀಯ ಯೋಧರು ಪ್ಯಾಂಗಾಂಗ್​ ಸೋ ಸರೋವರದ ದಕ್ಷಣ ಭಾಗದಲ್ಲಿನ ಅತ್ಯಂತ ಆಯಕಟ್ಟಿನ ಮತ್ತು ಉನ್ನ ಕೈಲಾಶ್ ರೇಂಜ್ ಪರ್ವ ಶ್ರೇಣಿಗಳನ್ನು ವಶಕ್ಕೆ ಪಡೆದವು. ಚೀನಿ ಸೈನಿಕರನ್ನು ಓಡಿಸಿ ಆ ಪರ್ವತ ಶ್ರೇಣಿ ಆಕ್ರಮಿಸಿಕೊಂಡವು. ಇದು ಚೀನಿ ಸೈನಿಕರಿಗೆ ದೊಡ್ಡ ಸರ್​ಪ್ರೈಸ್ ನೀಡಿದ್ದು ಮಾತ್ರವಲ್ಲ ಬದಲಿಗೆ ಇಡೀ ಜಗತ್ತಿಗೆ ಭಾರತೀಯ ಸೇನೆಯ ಶೌರ್ಯವನ್ನು ಪ್ರದರ್ಶಿಸಿತು. ಜೊತೆಗೆ ಮಾತುಕತೆ ವೇಳೆ ಭಾರತಕ್ಕೆ ಬಲವನ್ನೂ ತಂಡುಕೊಟ್ಟಿತು.

ಭಾರತೀಯ ಸೇನೆಯ ಆಧುನೀಕರಣಕ್ಕೆ ವೇಗ
ಥಿಯೇಟರ್ ಕಮಾಂಡ್​​ ನಿರ್ಮಾಣಕ್ಕೂ ಪ್ರೋತ್ಸಾಹ

ಚೀನಿ ಸೋಲು 5: ಸೈಜಿನಲ್ಲಿ ಭಾರತಕ್ಕೆ ಮೂರರಿಂದ ನಾಲ್ಕು ಪಟ್ಟು ದೊಡ್ಡದಾಗಿರೋ ಚೀನಾದ ಗಡಿಗೆ ಹೊಂದಿಕೊಂಡಂತೆ ಬರೋಬ್ಬರಿ 27 ರಾಷ್ಟ್ರಗಳಿವೆ. ರಷ್ಯಾ, ಜಪಾನ್, ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳೊಂದಿಗೆ ಅದರ ಕಿರಿಕ್ ಇದೆ. ಆದ್ರೆ, ಭಾರತ ಗಡಿ ವಿವಾದವನ್ನು ವೈರತ್ವಕ್ಕೆ ಕಾರಣವಾಗೋದನ್ನು ಬಯಸಿರಲಿಲ್ಲ. ಆದ್ರೆ ಚೀನಾ ಮಾಡಿದ ಯಡವಟ್ಟು ತನ್ನಷ್ಟೇ ಬಲಶಾಲಿಯಾದ. ಅದ್ರಲ್ಲೂ ಪರ್ವತ ಶ್ರೇಣಿಯ ಯುದ್ಧದಲ್ಲಿ ತನಗಿಂತಲೂ ಬಲವಾಗಿರೋ ಭಾರತವನ್ನು ಎದುರು ಹಾಕಿಕೊಳ್ಳಲು ಕಾರಣವಾಗಿದೆ. ಜೊತೆಗೆ ಮಲಗಿದ ಸಿಂಹವಾಗಿದ್ದ ಭಾರತವನ್ನು ಎಚ್ಚರಿಸಿ ಅದರ ಸೇನೆ ಆಧುನೀಕರಣಕ್ಕೆ ವೇಗ ನೀಡುವಂತೆ ಮಾಡಿದೆ. ಚೀನಿ ಸೇನೆ ಲಡಾಖ್ ಗಡಿಯಲ್ಲಿ ಬಂದು ಕುಳಿತಾಗಿನಿಂದ ಭಾರತೀಯ ಸೇನೆ ತ್ವರಿತವಾಗಿ ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿ ಶಸ್ತ್ರಾಸ್ತ್ರ ಖರೀದಿಸಿದೆ. ಜೊತೆಗೆ ಭೂ ಸೇನೆ, ವಾಯುಸೇನೆ ಮತ್ತು ಜಲಸೇನೆಯನ್ನು ಮತ್ತಷ್ಟು ಆಧುನೀಕರಣ ಗೊಳಿಸುವ ಪ್ರಕ್ರಿಯೆಗೆ ವೇಗ ನೀಡಿದೆ. ಜೊತೆಗೆ ಎಲ್ಲ ಸೇನೆಗಳ ನಡುವಿನ ಕೊಂಡಿ ಬಲವಾಗಿರೋದಕ್ಕಾಗಿ ವಿವಿಧ ಥಿಯೇಟರ್ ಕಮಾಂಡ್ ರಚಿಸೋ ಯೋಜನೆ ತ್ವರಿತವಾಗಿ ಕಾರ್ಯರೂಪಕ್ಕೆ ಬರಲೂ ಇದು ಕಾರಣವಾದಂತಾಗಿದೆ. ಈ ಮೂಲಕ ಸ್ನೇಹಿತನಾಗಲು ಬಯಸಿದ್ದ ಭಾರತವನ್ನು ವೈರಿಯನ್ನಾಗಿಸಿಕೊಂಡಿರೋ ಚೀನಾ ಲಾಂಗ್​ ರನ್​ನಲ್ಲಿ ದೊಡ್ಡ ಸೋಲನ್ನೇ ಅನುಭವಿಸಿದಂತಾಗಿದೆ.

ಅಮೆರಿಕಾದೊಂದಿಗೆ ಭಾರತ ಮತ್ತಷ್ಟು ಹತ್ತಿರ
ದಕ್ಷಿಣ ಚೀನಾ ಕಡಲಿನಲ್ಲಿ ಸ್ವಾಯತ್ತತೆ ಕಾಯಲು ಕ್ವಾಡ್

ಚೀನಿ ಸೋಲು 6: ಚೀನಾಕ್ಕೆ ಇದ್ದ ಅತಿ ದೊಡ್ಡ ಭಯವೆಂದರೆ.. ಸದ್ಯಕ್ಕೆ ಬದ್ಧವೈರಿಯಾಗಿ ಬದಲಾಗ್ತಿರೋ ಅಮೆರಿಕಾದೊಂದಿಗೆ ಭಾರತ ಹತ್ತಿರವಾಗುತ್ತೆ ಅನ್ನೋದು. ಇದೇ ಕಾರಣದಿಂದಾಗಿ ಭಾರತಕ್ಕೆ ಎಚ್ಚರಿಸಲು ಅದು ಪಟ್ಟ ಪರಿಪಾಟಲು ಅಸ್ಟಿಷ್ಟಲ್ಲ. ಲಡಾಖ್​ನಲ್ಲಿ ಬಂದು ಕುಳಿತುಕೊಳ್ಳುವ ಮೂಲಕ ಭಾರತಕ್ಕೆ ಎಚ್ಚರಿಕೆಯನ್ನೂ ಈ ಬಗ್ಗೆ ಚೀನಾ ಬಹಿರಂಗವಾಗಿಯೇ ಕೊಟ್ಟಿತ್ತು. ಆದ್ರೆ, ಸ್ನೇಹಕ್ಕೆ ಪ್ರಾಣವನ್ನೂ ಕೊಡೋ ಭಾರತೀಯರು ಬೆದರಿಕೆಗೆ ಬಗ್ಗೋರಲ್ಲ ಅನ್ನೋದು ಡ್ರಾಗನ್ ರಾಷ್ಟ್ರಕ್ಕೆ ಗೊತ್ತಿರಲಿಲ್ಲ ಅನಿಸುತ್ತೆ.

ಯಾವಾಗ ಚೀನಾ ಭಾರತದ ಗಡಿಯಲ್ಲಿ ಬಂದು ಕುಳಿತಿತೋ ಅದು ಭಾರತ ಮತ್ತು ಅಮೆರಿಕಾ ಮತ್ತಷ್ಟು ಹತ್ತರಿವಾಗಲು ಕಾರಣವಾಯಿತು. ಹಿಮಾಲಯದಲ್ಲಿ ಭಾರತವನ್ನು ಚೀನಾ ಎದುರು ಹಾಕಿಕೊಂಡಿದ್ದು ಹಿಂದೂ ಮಹಾಸಾಗರದಲ್ಲಿ ಅದಕ್ಕೆ ಎಲ್ಲಿಲ್ಲದ ಸೋಲು ಕಾಣೋಕೆ ಕಾರಣವಾಯಿತು. ಹೌದು, ಚೀನಾ ಕಿರಿಕ್ ಬಳಿಕ ಅಮೆರಿಕಾ ಮತ್ತು ಭಾರತ ಮತ್ತಷ್ಟು ಹತ್ತಿರವಾದವು. ಅಮೆರಿಕಾದ ಸ್ಟ್ರಾಟೆಜಿಕ್ ಪಾರ್ಟ್ನರ್ ಆಗಿ ಭಾರತ ರೂಪಗೊಂಡಿತು. ಇನ್ನೊಂದೆಡೆ ಭಾರತ-ಅಮೆರಿಕಾ-ಆಸ್ಟ್ರೇಲಿಯಾ ಮತ್ತು ಜಪಾನ್ ರಾಷ್ಟ್ರಗಳು ಸೇರಿ ಕ್ವಾಡ್​​ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಲು ನಿರ್ಧರಿಸಿದವು. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವನ್ನು ಕಟ್ಟಿಹಾಕಬೇಕು. ಸರಾಗ ಮತ್ತು ಸ್ವತಂತ್ರ ಕಡಲು ಮಾರ್ಗ ರಕ್ಷಣೆ ಮಾಡಬೇಕು ಅನ್ನೋ ಉದ್ದೇಶದಿಂದ ಈ ಸಂಘಟನೆ ಬಲಗೊಂಡಿತು. ಇದು ನಿಜಕ್ಕೂ ಚೀನಾಕ್ಕೆ ಗಂಟಲ ಮುಳ್ಳೇ ಸರಿ.

ಫಿಂಗರ್ 4ನಿಂದ ಕಾಲ್ಕಿತ್ತ ಚೀನಿ ಸೇನೆ
ಜಗತ್ತಿನಲ್ಲಿ ಕುಂದಿದ ಚೀನಿ ಸೇನೆ ಇಮೇಜ್
ಭಾರತದ ಪ್ರಾಮುಖ್ಯತೆ ಗಣನೀಯ ಹೆಚ್ಚಳ

ಚೀನಿ ಸೋಲು 7: ಹೀಗೆ ಭಾರತೀಯ ಸೇನೆ ಸಾಲು ಸಾಲಾಗಿ ಕೊಟ್ಟ ಪೆಟ್ಟುಗಳು ಚೀನಿ ಸೇನೆಗೆ ಸೋಲಿನ ರುಚಿಯನ್ನು ಉಣಿಸಿದಿವು. ಇದು 1962 ಭಾರತ ಎಂದು ತಿಳಿದುಕೊಂಡಿದ್ದ ಚೀನಾ, 1967ರಲ್ಲಿ ಸೋಲನ್ನು ಉಂಡಿದ್ದನ್ನು ಮರೆತು ಬಿಟ್ಟಿತ್ತು. 2020 ರ ಭಾರತೀಯ ಶೌರ್ಯವನ್ನು ಈಗ ಕಾಣುವಂತಾಗಿತ್ತು.

ಫಿಂಗರ್​ 4 ರ ತನಕ ಪ್ರದೇಶ ತನ್ನದೆಂದು ಹೇಳಿಕೊಳ್ಳುತ್ತಿದ್ದ ಚೀನಾ ಈಗ ತನ್ನೆಲ್ಲ ಸೇನೆ ಮತ್ತು ಸರಂಜಾಮುಗಳನ್ನು ಫಿಂಗರ್ 8ರ ಆಚೆ ತೆಗೆದುಕೊಂಡು ಹೋಗಿದೆ. ಅಂದರೆ ಭಾರತ ಫಿಂಗರ್​ 8ರ ತನಕದ ಪ್ರದೇಶವನ್ನು ಭಾರತ ತನ್ನದೆಂದು ಹೇಳಿಕೊಳ್ಳುತ್ತೆ. ಭಾರತ ಹೇಳುವಂತೆಯೇ ಇಂದು ಆಗಿದ್ದು ಫಿಂಗರ್ 8 ರ ಆಚೆಗೆ ಚೀನಿ ಸೇನೆ ಹೋಗಿದೆ. ಈ ಬೆಳವಣಿಗೆ ಖಂಡಿತ ಚೀನಾ ಸೇನೆ ಹೊಂದಿದ್ದ ಅತ್ಯಂತ ಪವರ್​ ಫುಲ್, ಅತ್ಯಂತ ಮಾಡರ್ನ್. ಸೋಲಿಸಲು ಸಾಧ್ಯವೇ ಇಲ್ಲದ ಬಲ ಅನ್ನೋ ಇಮೇಜ್ ಅನ್ನು ತೊಡೆದು ಹಾಕಿದೆ. ಹೀಗಾಗಿ ವಿಯೆಟ್ನಾಂ, ಮಂಗೋಲಿಯಾದಂಥ ದೇಶಗಳೂ ಈಗ ಚೀನಾ ವಿರುದ್ಧ ಮಾತನಾಡುವ ಬಲ ಪಡೆದುಕೊಳ್ಳುವಂತಾಗಿದೆ. ಇನ್ನೊಂದೆಡೆ ಭಾರತೀಯ ಸೇನೆಯ ಹಾಗೂ ಭಾರತದ ನಾಯಕತ್ವದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಇಮೇಜ್​ ಅನ್ನು ನೂರ್ಮಡಿಗೊಳಿಸಿದೆ. ಜೊತೆಗೆ ವ್ಯಾಕ್ಸಿನ್​ ಡಿಪ್ಲೊಮಸಿ ಕಾರಣದಿಂದಾಗಿ ಚೀನಾ ವೈರಸ್​ಗೆ ಭಾರತದ ಮದ್ದು ಅನ್ನೋ ಗುಡ್​ವಿಲ್​ ಅನ್ನು ಕೂಡ ಗಳಿಸಿದೆ.

ಒಟ್ಟಿನಲ್ಲಿ ಭಾರತವನ್ನು ಎದುರು ಹಾಕಿಕೊಂಡರೆ ಏನಾಗುತ್ತೆ ಅನ್ನೋ ಪಾಠವನ್ನು ಈ ಘಟನೆ ಚೀನಾಸೇರಿದಂತೆ ಹಲವು ರಾಷ್ಟ್ರಗಳಿಗೆ ಈ ಬೆಳವಣಿಗೆ ತೋರಿಸಿಕೊಟ್ಟಂತಾಗಿದೆ. ಇನ್ನೊಂದೆಡೆ ಏನೋ ಮಾಡಲು ಹೋಗಿ.. ಏನೋ ಮಾಡಿಕೊಂಡಂತೆ ಚೀನಿ ಸ್ಥಿತಿಯಾಗಿದ್ದು ಶತಮಾನದ ಸೋಲನ್ನು ಉಣ್ಣುವಂತಾಗಿದೆ.

ವಿಶೇಷ ವರದಿ- ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

by veena
January 28, 2023
0

ಸ್ಯಾಂಡಲ್​ವುಡ್​ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಇಬ್ಬರು ಎರಡು ದಿನಗಳ ಹಿಂದೆಯಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೀಗ...

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

by veena
January 28, 2023
0

ವಿಜಯನಗರ: ನಾಲ್ಕಕ್ಕೂ ಹೆಚ್ಚು ಜನರ ಮೇಲೆ ಕಲ್ಲು ತೂರಾಟವಾಗಿರೋ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ.   ತರಳುಬಾಳು ಸಿರಿಗೇರಿ ಶ್ರೀಗಳಿಗೆ ಉಜ್ಜೈನಿ ಮಠಕ್ಕೆ ದಶಕಗಳ...

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

by veena
January 28, 2023
0

ಚಿಕ್ಕೋಡಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ನಡೆದಿದೆ. ಎರಡು ಬೈಕ್‌ಗಳ ಮೇಲೆ ಒಟ್ಟು...

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

by NewsFirst Kannada
January 28, 2023
0

ಸ್ಲ್ಯಾಪ್​ ಫೈಟಿಂಗ್​​ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್​ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು...

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

by NewsFirst Kannada
January 28, 2023
0

ಇಂಜುರಿಯಿಂದ ಕಾರಣದಿಂದ ಟೀಮ್​ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್​ ಚಹಾರ್​​​, ಜಿಮ್​​​​ನಲ್ಲಿ ಪತ್ನಿ ಜೊತೆ ಸಖತ್​ ವರ್ಕೌಟ್​ ಮಾಡ್ತಿದ್ದಾರೆ. ಪತ್ನಿ ಜಯಾ ಭಾರಧ್ವಾಜ್​​​​​ ಜೊತೆ ಜಿಮ್​​​​​ನಲ್ಲಿ ಕಸರತ್ತು...

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

by NewsFirst Kannada
January 28, 2023
0

ವುಮೆನ್ಸ್​ ಪ್ರೀಮಿಯರ್​​ ಲೀಗ್​​​​​​ ಆರಂಭಕ್ಕೂ ಮುನ್ನವೇ ಭರ್ಜರಿ ಆದಾಯ ಗಳಿಸಿರುವ ಬಿಸಿಸಿಐ, ಇದೀಗ ಹರಾಜು ಪ್ರಕ್ರಿಯೆಗೆ ಸಿದ್ಧವಾಗ್ತಿದೆ. ಆಟಗಾರರ ನೋಂದಣಿಗೆ ಅವಕಾಶ ನಿನ್ನೆಗೆ ಮುಗಿದಿದ್ದು, ಫೆಬ್ರವರಿ 10...

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

by NewsFirst Kannada
January 28, 2023
0

ಬಾಲಿವುಡ್​ ನಟಿ, ಪಂಜಾಬ್​​ ಕಿಂಗ್ಸ್​​​ ಫ್ರಾಂಚೈಸಿ ಒಡತಿ ಪ್ರೀತಿ ಜಿಂಟಾ, ಇಂಟರ್​ನ್ಯಾಷನಲ್​ ಟಿ20 ಲೀಗ್​​​​ ಟೂರ್ನಿಯ ಪಂದ್ಯವನ್ನ ವೀಕ್ಷಿಸಿದ್ದಾರೆ. ಸ್ನೇಹಿತ ಮತ್ತು ಲೀಗ್​​​ನಲ್ಲಿ ಶಾರ್ಜಾ ವಾರಿಯರ್ಸ್​​​ ಫ್ರಾಂಚೈಸಿಯ...

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

by veena
January 28, 2023
0

ಮಂಗಳೂರು: ಅನುಮಾನಸ್ಪದವಾಗಿ ಹಿರಿಯ ದಂಪತಿ ಮೃತದೇಹ ಪತ್ತೆಯಾಗಿರೋ ಘಟನೆ ಖಾಸಗಿ ಫ್ಲಾಟ್​ವೊಂದರ ಕೊಠಡಿಯಲ್ಲಿ ನಡೆದಿದೆ. ದಿನೇಶ್(67) ಪತ್ನಿ ಶೈಲಜಾ(64) ಮೃತದೇಹ ಪತ್ತೆಯಾಗಿದೆ.   ಮೃತ ದಿನೇಶ್​​ ನಿವೃತ್ತ...

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

by veena
January 28, 2023
0

ಉಡುಪಿ: ಕಾರ್ಕಳ ಗಾಂಧಿ ಮೈದಾನದಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದೆ. ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸುಳಿಗಾಳಿ...

ಆಸ್ಟ್ರೇಲಿಯಾ ಟೆಸ್ಟ್​ ಸೀರೀಸ್ ಗೆಲ್ಲಲು ಮಾಸ್ಟರ್​ ಪ್ಲಾನ್​ ಮಾಡಿದೆ ಟೀಂ ಇಂಡಿಯಾ! ಅದೇನು ಗೊತ್ತಾ?

by NewsFirst Kannada
January 28, 2023
0

ಇಂಡೋ-ಆಸಿಸ್​ ಹೈವೋಲ್ಟೇಜ್​ ಟೆಸ್ಟ್​​​​​​​ ಸಿರೀಸ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಈ ಸರಣಿಗೂ ಮುನ್ನ ಬಿಸಿಸಿಐ, ಮುಂಬೈನಲ್ಲಿ ಸ್ಪೆಷಲ್​ ಕ್ಯಾಂಪ್​ ಆಯೋಜನೆಗೆ ಪ್ಲಾನ್​ ರೂಪಿಸಿತ್ತು. ಇದೀಗ ಸ್ಥಳವನ್ನ ಬದಲಿಸಿರುವ...

Next Post

ಮತ್ತೆ ಉದ್ಧವ್​ ಠಾಕ್ರೆ ಉದ್ಧಟತನ: ಗಡಿಭಾಗದ ಕನ್ನಡ ಪ್ರಾಬಲ್ಯವಿರೋ ಹಳ್ಳಿಗಳಲ್ಲಿ ಮರಾಠಿ ಪ್ರಚಾರಕ್ಕೆ ಸೂಚನೆ

ಚಿತ್ರದುರ್ಗದಲ್ಲಿ ದಾಖಲೆಯ ಮಳೆ ಎಫೆಕ್ಟ್: ಕೇವಲ 100 ಅಡಿ ಬೋರ್ ಕೊರೆಸಿದ್ರೆ ಸಿಗ್ತಿದೆ ನೀರು

NewsFirst Kannada

NewsFirst Kannada

LATEST NEWS

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

January 28, 2023

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

January 28, 2023

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

January 28, 2023

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

January 28, 2023

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

January 28, 2023

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

January 28, 2023

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

January 28, 2023

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

January 28, 2023

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

January 28, 2023

ಆಸ್ಟ್ರೇಲಿಯಾ ಟೆಸ್ಟ್​ ಸೀರೀಸ್ ಗೆಲ್ಲಲು ಮಾಸ್ಟರ್​ ಪ್ಲಾನ್​ ಮಾಡಿದೆ ಟೀಂ ಇಂಡಿಯಾ! ಅದೇನು ಗೊತ್ತಾ?

January 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ