ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಹೆಸರಿನಲ್ಲಿ ಭಾರೀ ವಂಚನೆ ಮಾಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾನು ಬಿಜೆಪಿ ಮುಖಂಡ ಎಂದು ಹೇಳಿಕೊಂಡು ಭವಾನಿ ರಾವ್ ಮೋರೆ ಎಂಬಾತ ಗೃಹ ಸಚಿವರ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿ ಎನ್ನಲಾಗಿದೆ.
ಭವಾನಿ ರಾವ್ ಮೋರೆ ಶಿವಮೊಗ್ಗದಲ್ಲಿ ಬಿಜೆಪಿ ನಾಯಕರ ಹಿಂದೆ ತಿರುಗಾಡಿಕೊಂಡಿದ್ದ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿಸ್ತಾರಕ ಕೂಡ ಆಗಿದ್ದ. ಎಷ್ಟೋ ಮಂದಿಗೆ ಡ್ಯಾನ್ಸ್ ಬಾರ್ಗಳಿಗೆ ಪರ್ಮೀಶನ್ ಕೊಡಿಸುತ್ತೇನೆ ಎಂದು ವಂಚಿಸಿದ್ದ ಎಂಬ ಆರೋಪ ಕೇಳಿ ಬಂದಿದೆ.
ಶಿವಮೊಗ್ಗ ಮೂಲದ ಉದ್ಯಮಿ ಸುರೇಶ್ ಎಂಬುವರಿಗೆ ಬಾರ್ ಡ್ಯಾನ್ಸ್ಗೆ ಪರ್ಮೀಶನ್ ಕೊಡಿಸುತ್ತೇನೆ. ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿ ಮಾತಾಡುತ್ತೇನೆ ಎಂದು ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದಾನೆ. ಗೃಹ ಸಚಿವರಿಗೆ ಹಣ ನೀಡಿದ್ರೆ ಅನುಮತಿ ಕೊಡುತ್ತಾರೆ ಎಂದು ವಂಚಿಸಿ ಪರಾರಿಯಾಗಿದ್ದ ಎನ್ನಲಾಗಿದೆ.
ಇನ್ನು, ಆರೋಪಿ ಭವಾನಿ ರಾವ್ ಮೋರೆ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿ ಪತ್ತೆಗಾಗಿ ವಿಶೇಷ ಟೀಂ ಮಾಡಿದ್ದ ಪೊಲೀಸರು ಶಿವಮೊಗ್ಗದಲ್ಲಿ ಕೊನೆಗೂ ಬಲೆ ಬೀಸಿದ್ದಾರೆ. ಈಗ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಿಸ್ಡ್ ಕಾಲ್ ದೋಖಾ; ಮಾಯಾಂಗನೆ ಮುದ್ದಾದ ಮಾತು ಕೇಳಿದವ ಕಳೆದುಕೊಂಡ ಹಣ ಎಷ್ಟು ಗೊತ್ತಾ?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post