ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಸಿನಿಮಾ ಎದುರಿಗೆ ನಟ ಆಮೀರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’ ತೆರೆಗೆ ಬರುತ್ತಿದೆ. ಒಂದೇ ದಿನ ಏಪ್ರಿಲ್ 14ರಂದು ಎರಡು ದೊಡ್ಡ ಬಜೆಟ್ ಸಿನಿಮಾಗಳು ತೆರೆಗೆ ಬರುತ್ತಿರುವ ಕಾರಣ ಬಾಕ್ಸಾಫೀಸ್ ಕ್ಲಾಶ್ ಆಗಲಿದೆ. ಈ ಬೆನ್ನಲ್ಲೀಗ ಈ ಎಲ್ಲಾ ಚರ್ಚೆಗೆ ಬಾಲಿವುಡ್ ನಟ ಆಮೀರ್ ಖಾನ್ ತೆರೆ ಎಳೆದಿದ್ದಾರೆ. ಈ ಸಂಬಂಧ ಯಶ್ ಬಳಿ ಕ್ಷಮೆ ಕೇಳಿರುವ ಆಮೀರ್ ಖಾನ್ ಸ್ಪಷ್ಟನೆಯೂ ನೀಡಿದ್ದಾರೆ.
ನಾನು ಎಂದು ತರಾತುರಿಯಲ್ಲಿ ಕೆಲಸ ಮುಗಿಸೋದಿಲ್ಲ. ನಿಧಾನವಾಗಿಯೇ ಎಲ್ಲಾ ಕೆಲಸವನ್ನು ಮಾಡುತ್ತೇನೆ. ಹೀಗಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಡಿಲೇ ಆಯ್ತು. ಇದಕ್ಕೆ ನಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ ಎಂದರು ಆಮೀರ್ ಖಾನ್.
ನಾನು ಮೊದಲ ಬಾರಿಗೆ ಸಿಖ್ ಅವತಾರ ತಾಳಿದ್ದೇನೆ. ಏಪ್ರಿಲ್ 14 ಬೈಸಾಖಿ ದಿನ. ನಾನು ಅಂದೇ ಸಿನಿಮಾ ರಿಲೀಸ್ ಮಾಡಬೇಕಿದೆ. ಈ ಸಿನಿಮಾ ರಿಲೀಸ್ ಡೇಟ್ ಫೈನಲ್ ಮಾಡುವ ಮುನ್ನ ಯಶ್ ಜೊತೆ ಮಾತಾಡಿದ್ದೇನೆ. ಇದಕ್ಕಾಗಿ ಡೈರೆಕ್ಟರ್ ಪ್ರಶಾಂತ್ ನೀಲ್, ಯಶ್ ಬಳಿ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಕೆಜಿಎಫ್-2 ಎದುರು ಲಾಲ್ ಸಿಂಗ್ ಚಡ್ಡಾ; ಅಮೀರ್ ಖಾನ್ರನ್ನು ಮಕಾಡೆ ಮಲಗಿಸುತ್ತಾರಾ ಯಶ್?
ನಮ್ಮ ಸಿನಿಮಾ ಏಪ್ರಿಲ್ 14ರಂದು ಏಕೆ ತೆರೆಮೇಲೆ ತರುತ್ತಿದ್ದೇವೆ ಎಂದು ವಿವರಿಸಿದ್ದೇನೆ. ನನ್ನನ್ನು ಅರ್ಥ ಮಾಡಿಕೊಂಡು ಸಿನಿಮಾ ರಿಲೀಸ್ ಮಾಡಿ ಎಂದರು. ಯಶ್ ಜತೆ ನಾನು ಕಾಲ್ ಮಾತಾಡಿದೆ, ಅವರು ನಡೆದುಕೊಂಡ ರೀತಿ ಇಷ್ಟವಾಯ್ತು ಎಂದು ಹೇಳಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post