ಬಳ್ಳಾರಿ: ಅಕಾಲಿಕ ಮಳೆಗೆ ಗಣಿನಾಡಿನ ಅನ್ನದಾತರು ಮೆಣಸಿನಕಾಯಿ ಬೆಳೆಯನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ. ಅತಿಯಾದ ಮಳೆಯಿಂದಾಗಿ ಗಿಡದಲ್ಲೇ ಮೆಣಸಿನಕಾಯಿ ಬೆಳೆ ಕೊಳೆ ಬಂದು ಹಾಳಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇದನ್ನ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕೆಲವು ರೈತರು ಮೆಣಸಿನಕಾಯಿ ಬೆಳೆ ಮತ್ತೆ ಚಿಗುರೊಡೆಯಲು ಗ್ಲುಕೋಸ್ ಸಿಂಪಡಣೆ ಮಾಡುತ್ತಿದ್ದಾರೆ. ಅದರಲ್ಲೂ ಬಳ್ಳಾರಿ ತಾಲೂಕಿನ ಕೊಳಗಲ್ಲ ಗ್ರಾಮಸ್ಥರು ಬೆಳೆಗೆ ಗ್ಲೂಕೋಸ್ ಸಿಂಪಡಣೆ ಮಾಡುತ್ತಿದ್ದು, ಈ ಪದ್ದತಿಗೆ ಇದೀಗ ಬೇಡಿಕೆ ಹೆಚ್ಚಾಗಿದೆ.
ಗ್ಲುಕೋಸ್ ಪೌಡರ್, ಸಕ್ಕರೆ ಹಾಗೂ ಯೂರಿಯಾ ಮಿಶ್ರಣ ಮಾಡಿ ಬೆಳೆಗೆ ಸಿಂಪಡನೆ ಮಾಡಲಾಗುತ್ತಿದೆ. ಒಬ್ಬರ ಪ್ರಯೋಗ ನೋಡಿ ಇನ್ನೊಬ್ಬರು ಗ್ಲೂಕೋಸ್ ಸಿಂಪಡಣೆಗೆ ರೈತರು ಮುಂದಾಗಿದ್ದಾರೆ. ಅಕಾಲಿಕ ಮಳೆಯಿಂದಾದ ನಷ್ಟವನ್ನು ಭರಿಸಲು ಅನ್ನದಾತರು ಹರಸಾಹಸ ಪಡುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post