Friday, August 19, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಡಿ.13 ರಿಂದ ವಿಧಾನಸಭೆ ಚಳಿಗಾಲದ ಅಧಿವೇಶನ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

Share on Facebook Share on Twitter Send Share
November 30, 2021

ಡಿ.13 ರಿಂದ ವಿಧಾನಸಭೆ ಚಳಿಗಾಲದ ಅಧಿವೇಶನ
ಒಮಿಕ್ರಾನ್​ ಭೀತಿಯ ನಡುವೆ ಬೆಳಗಾವಿ ಚಳಿಗಾಲದ ಅಧಿವೇಶನದ ಬಗೆಗಿನ ಗೊಂದಲಗಳಿಗೆ ಸ್ಪೀಕರ್​​​ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್​ 13 ರಿಂದ 24 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ಬಗ್ಗೆ ಈಗಾಗಲೇ ನಿಗದಿತ ಕಾರ್ಯ ಕಲಾಪಗಳ ಪಟ್ಟಿ ಸಿದ್ದವಾಗಿದೆ ಎಂದಿದ್ದಾರೆ.. ಡಿಸೆಂಬರ್ 2ಕ್ಕೆ ಸುವರ್ಣಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ ಅಂತಾ ಕಾಗೇರಿ ತಿಳಿಸಿದ್ರು. ಬೆಳಗಾವಿ ಭೇಟಿ ಬಳಿಕ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದಿರುವ ಕಾಗೇರಿ, ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಲಾಪ ನಡೆಸಲಾಗುತ್ತೆ ಅಂತ ಮಾಹಿತಿ ನೀಡಿದ್ದಾರೆ.

ಕೇವಲ 30 ಜನರಿಗೆ ಕೆ.ಎಸ್ ಈಶ್ವರಪ್ಪ ಭಾಷಣ!
ಕಾರ್ಯಕರ್ತರಿಲ್ಲದೇ ಖಾಲಿ ಹೊಡೆಯುತ್ತಿದ್ದ ಸಭೆಯಲ್ಲಿ ಕೆ.ಎಸ್​ ಈಶ್ವರಪ್ಪ ಭಾಷಣ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದಿದೆ. ವಿಧಾನ ಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ಕಾರಟಗಿಯ ಪದ್ಮಶ್ರೀ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕೇವಲ 30 ಜನರಿಗೆ ಈಶ್ವರಪ್ಪ ಭಾಷಣ ಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಹಾಲಿ ಶಾಸಕರು ಇರುವ ಕ್ಷೇತ್ರದಲ್ಲೇ ಜನರು ಸೇರದ ಕಾರಣ ಶಾಸಕ ದಡೇಸೂಗೂರು ಹಾಗೂ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್​ಗೆ ಇರುಸು ಮುರುಸು ಉಂಟಾಗಿದೆ.

ಉಡುಪಿಯಲ್ಲಿ ಕಟ್ಟುನಿಟ್ಟಿನ ನಿಯಮ
ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೋವಿಡ್ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.. ಇತ್ತೀಚಿಗೆ ಸಿಎಂ ಬೊಮ್ಮಾಯಿ ಕೂಡಾ ಉಡುಪಿ ಜಿಲ್ಲಾಧಿಕಾರಿ ಜೊತೆ ವರ್ಚುವಲ್​ ಸಭೆ ನಡೆಸಿದ್ರು.. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗ್ತಿದ್ದು, ಟೆಸ್ಟಿಂಗ್​ ಪ್ರಮಾಣ ಹೆಚ್ಚಿಸುವ ಜೊತೆಗೆ ಶೇಕಡಾ ನೂರರಷ್ಟು ಲಸಿಕೆಗೆ ಆದ್ಯತೆ ನೀಡುತ್ತೇವೆ ಅಂತಾ ಜಿಲ್ಲಾ ಪಂಚಾಯತಿ ಸಿಇಒ ಡಾ.ನವೀನ್​ಭಟ್​ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ವಾರಕ್ಕೆ ಒಂದು ದಿನ ಮಾಸ್ಕ್​ಡ್ರೈವ್​ ನಡೆಸಲು ನಿರ್ಧರಿಸಲಾಗಿದೆ ಅಂತ ಮಾಹಿತಿ ನೀಡಿದ್ದಾರೆ.

ಕೆಲವು ದೇಶಗಳಲ್ಲಿ ಒಮಿಕ್ರಾನ್​​ ಹೆಚ್ಚು ಅಪಾಯಕಾರಿ
ಒಮಿಕ್ರಾನ್ ರೂಪಾಂತರಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅತೀ ವೇಗವಾಗಿ ರೂಪಾಂತರಗೊಂಡ ಒಮಿಕ್ರಾನ್ ಕೊರೊನಾ ವೈರಸ್ ರೂಪಾಂತರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಲಿದೆ.. ಕೆಲವು ದೇಶಗಳಿಗೆ ಇದು ಹೆಚ್ಚು ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.. ಒಮಿಕ್ರಾನ್ ಸೋಂಕಿನಿಂದ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಆದ್ರೆ ಲಸಿಕೆ ಇದರ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆಯೇ, ಇದು ನಮಗೆ ರಕ್ಷಣೆ ನೀಡುತ್ತದೆಯೇ ಎಂಬುದನ್ನು ಅರಿಯಲು ಸಂಶೋಧನೆಯ ಅಗತ್ಯವಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ..

‘ಒಮಿಕ್ರಾನ್​ ಬಹುಶಃ ಈಗಾಗಲೇ ಭಾರತಕ್ಕೆ ಕಾಲಿಟ್ಟಿದೆ’
ಒಮಿಕ್ರಾನ್​ ವೈರಸ್​ ಬಹುಶಃ ಭಾರತದಲ್ಲಿ ಈಗಾಗಲೇ ಕಾಲಿಟ್ಟಿದ್ದು, ಅಧಿಕೃತವಾಗಿ ಕಂಡುಬಂದರೆ ಅದು ಕೇವಲ ಸಮಯದ ವಿಷಯವಾಗಿರಲಿದೆ ಎಂದು ಐಸಿಎಂಆರ್​​ ಮುಖ್ಯಸ್ಥ ಸಮಿರನ್​ ಪಾಂಡೆ ಹೇಳಿದ್ದಾರೆ. ನವೆಂಬರ್​ 9ರಂದು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೋವಿಡ್​ ರೂಪಾಂತರ ಕಂಡುಬಂದಿದ್ದು, ಅಂದಿನಿಂದ ಸಾಕಷ್ಟು ಜನ ಆಫ್ರಿಕಾದಿಂದ ಹಲವು ದೇಶಗಳಿಗೆ ಪ್ರಯಾಣ ಮಾಡಿದ್ದಾರೆ. ಹೀಗಾಗಿ ವೈರಸ್​ ಹರಡಿರುವ ಕುರಿತು ತಳ್ಳಿ ಹಾಕುವಂತಿಲ್ಲ ಎಂದು ಸಮಿರನ್​ ಹೇಳಿದ್ದಾರೆ. ಭಾರತದಲ್ಲಿ ಒಮಿಕ್ರಾನ್​ ಪತ್ತೆಯಾದರೆ ಆಶ್ಚರ್ಯ ಪಡುವಂತಹದ್ದು ಏನೂ ಇಲ್ಲ, ಇದು ಕೇವಲ ಸಮಯದ ವಿಷಯವಾಗಿದೆ ಎಂದಿದ್ದಾರೆ.

ಪರಾಗ್​ ಅಗರ್​ವಾಲ್​ಗೆ ಟ್ಟಿಟ್ಟರ್​ ಸಿಇಓ ಸ್ಥಾನ
ಟ್ವಿಟ್ಟರ್​ ಸಹ ಸಂಸ್ಥಾಪಕ, ಮುಖ್ಯ ಕಾರ್ಯ ನಿರ್ವಾಹಕ ಜಾಕ್​ ಡೋರ್ಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.. ಪ್ರಸ್ತುತ ಟ್ವೀಟ್ಟರ್​ ತಂತ್ರಜ್ಞಾನ ಅಧಿಕಾರಿಯಾಗಿರುವ ಪರಾಗ್​ ಅಗರ್​ವಾಲ್​ ಮುಂದಿನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡೋರ್ಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡುತ್ತಿದ್ದಂತೆ ಟ್ವಿಟ್ಟರ್​ ಷೇರುಗಳ ಬೆಲೆಗಳಲ್ಲಿ ಶೇ. 11ರಷ್ಟು ಏರಿಕೆಯಾಗಿದೆ. ಸ್ಕೈರ್​ ಐಎನ್​ಸಿ ಕಡೆಗೆ ಹೆಚ್ಚು ಗಮನ ನೀಡುತ್ತಿರುವ ಡೋರ್ಸಿ, ಟ್ವಿಟ್ಟರ್​ ಕಡೆಗೆ ಹೆಚ್ಚು ಗಮನ ನೀಡುತ್ತಿಲ್ಲವೆಂದು ಟ್ವಿಟ್ಟರ್​ ಪಾಲುದಾರ ಎಲಿಯಟ್​ ಮ್ಯಾನೆಜ್​ಮೆಂಟ್​ ಕಾರ್ಪ್​ ಸಂಸ್ಥೆ ಆರೋಪಿಸಿತ್ತು..

ಟೆಸ್ಟ್​ ಕ್ರಿಕೆಟ್​ನಲ್ಲಿ ಆರ್​.ಅಶ್ವಿನ್ ಹೊಸ ದಾಖಲೆ
ಟೆಸ್ಟ್ ಕ್ರಿಕೆಟ್​ನಲ್ಲಿ ರವಿಚಂದ್ರನ್ ಅಶ್ವಿನ್​ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಟೀಮ್ ಇಂಡಿಯಾದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್​ನಲ್ಲಿ 5 ವಿಕೆಟ್ ಪಡೆಯುವ ಮೂಲಕ ಟೆಸ್ಟ್​ನಲ್ಲಿ 418 ವಿಕೆಟ್​ ಸಾಧನೆ ಮಾಡಿದ್ದಾರೆ.. ಮೂರನೇ ಸ್ಥಾನದಲ್ಲಿದ್ದ ಹರ್ಭಜನ್ ಸಿಂಗ್ ದಾಖಲೆ ಸರಿಗಟ್ಟಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದು, ಕುಂಬ್ಳೆ ಟೆಸ್ಟ್​ ಕ್ರಿಕೆಟ್​ನಲ್ಲಿ 619 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 434 ವಿಕೆಟ್ ಪಡೆದಿರುವ ಕಪಿಲ್ ದೇವ್ 2ನೇ ಸ್ಥಾನದಲ್ಲಿದ್ದಾರೆ.

ಇಂದು ಐಪಿಎಲ್​ ಆಟಗಾರರ ರಿಟೈನ್​ ಪ್ರಕ್ರಿಯೆ
ಐಪಿಎಲ್​ ಮೆಗಾ ಹರಾಜಿಗೆ ಸಿದ್ದತೆಗಳು ಆರಂಭಗೊಂಡಿದ್ದು, ಹರಾಜಿಗೂ ಮುನ್ನ 8 ಫ್ರಾಂಚೈಸಿಗಳಿಗೆ 4 ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆ ನೀಡಲಾಗಿತ್ತು. ಅದರಂತೆ ಹಳೆಯ 8 ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದ್ದು, ಐಪಿಎಲ್​ ಪ್ರೇಮಿಗಳ ಕುತೂಹಲ ಇಮ್ಮಡಿಯಾಗಿದೆ. ರಿಟೈನ್​ ಪ್ರಕ್ರಿಯೆ ಇಂದು ಸಂಜೆ 5 ಗಂಟೆಯಿಂದ ಆರಂಭವಾಗಲಿದೆ. ಇನ್ನು ರಿಟೈನ್​ ಪ್ರಕ್ರಿಯೆ ನಂತರ ಈ ಬಾರಿ ಲಕ್ನೋ ಹಾಗೂ ಅಹಮದಾಬಾದ್​ ಎರಡು ಹೊಸ ತಂಡಗಳು ಸೇರ್ಪಡೆ ಆಗಲಿದ್ದು, ರಿಟೈನ್​ ನಂತರ 2 ತಂಡಗಳಿಗೆ ತಲಾ ಮೂವರನ್ನು ಆಯ್ಕೆಯ ಅವಕಾಶ ಇರಲಿದೆ.

ಸಾಬರಮತಿ ಆಶ್ರಮಕ್ಕೆ ಸಲ್ಮಾನ್​ ಖಾನ್​ ಭೇಟಿ
ಗುಜರಾತಿನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಚರಕದಿಂದ ನೂಲು ನೇಯದಿದ್ದಾರೆ. ಇತ್ತೀಚಿಗೆ ಬಿಡುಗಡೆಯಾಗಿರುವ ಅಂತಿಮ್​ ದಿ ಫೈನಲ್ ಟ್ರುತ್ ಚಿತ್ರದ ಪ್ರಚಾರಕ್ಕಾಗಿ ಸಲ್ಮಾನ್ ಖಾನ್ ಅಹಮದಾಬಾದ್​ಗೆ ಭೇಟಿ ನೀಡಿದ್ದರು.. ಈ ವೇಳೆ ಸಾಬರಮತಿ ಆಶ್ರಮಕ್ಕೆ ಆಗಮಿಸಿ ಗಾಂಧಿಯನ್ನು ಸ್ಮರಿಸಿದ್ದಾರೆ. ಇದು ಅವರ ಸಿನಿಮಾ ಪ್ರಚಾರದ ಭಾಗವಾಗಿರಲಿಲ್ಲ. ಸಂಪೂರ್ಣವಾದ ವೈಯಕ್ತಿಕ ಭೇಟಿಯಾಗಿತ್ತು ಅಂತ ಆಶ್ರಮದ ಅಧಿಕಾರಿಗಳು ಹೇಳಿದ್ದಾರೆ.. ಆಶ್ರಮದ ಶಿಷ್ಟಾಚಾರ ಪಾಲಿಸಿದರು. ಆಶ್ರಮದ ಮಹತ್ವವನ್ನು ಅವರಿಗೆ ವಿವರಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ರು..

Download the Newsfirstlive app

ಎರಡು ತಲೆ ಹಲ್ಲಿಯ ವಿಡಿಯೋ ವೈರಲ್


ಸಾಮಾಜಿಕ ಜಾಲತಾಣದಲ್ಲಿ ಎರಡು ತಲೆಯ ಹಲ್ಲಿಯ ವಿಡಿಯೋ ಒಂದು ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 5.7 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಝೂಕೀಪರ್, ಜೇ ಬ್ರೂವರ್ ತನ್ನ ಇನ್‌ಸ್ಟಾ ಪುಟ ಪ್ರಿಹಿಸ್ಟಾರಿಕ್ ಪೆಟ್ಸ್​ನಲ್ಲಿ ಈ ಅಸಾಮಾನ್ಯ ಹಲ್ಲಿಯ ನೋಟವನ್ನು ಹಂಚಿಕೊಂಡಿದ್ದಾರೆ.. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಒಂದು ತಲೆಯ ಹಲ್ಲಿ ನೋಡಿಯೇ ಓಡಿ ಹೋಗುವ ಜನ, ಈ ಎರಡು ತಲೆಯ ಹಲ್ಲಿ ನೋಡಿ ಹೆಂಡತಿ ಹೇಗೆ ಕಿರಚಾಡಬಹುದು ಎಂದು ನೆಟ್ಟಿಗರು ಕಮೆಂಟ್​ಗಳ ಸುರಿಮಳೆ ಮಾಡುತ್ತಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಪ್ರೀತಿಸುವವರು ಇದ್ದರೂ, ಒಂಟಿತನ ಕಾಡಿತ್ತು -ಅಚ್ಚರಿಯ ಹೇಳಿಕೆ ಕೊಟ್ಟ ಕೊಹ್ಲಿ

by NewsFirst Kannada
August 18, 2022
0

ಇತ್ತೀಚಿನ ದಿನಗಳಲ್ಲಿ ತಾವು ಅನುಭವಿಸುತ್ತಿರುವ ಮಾನಸಿಕ ಒತ್ತಡದ ಬಗ್ಗೆ ಮಾಜಿ ಕ್ಯಾಪ್ಟನ್​​​ ವಿರಾಟ್​ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಒಬ್ಬ ಕ್ರೀಡಾಪಟುವಿಗೆ ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ....

ಪ್ರೀತಿಸಿ ಓಡಿ ಹೋಗಿ ಮದುವೆ.. ಯುವಕನ ಹೆತ್ತವರ ಮೇಲೆ ದಾಳಿ

by NewsFirst Kannada
August 18, 2022
0

ಪ್ರೀತಿಗೆ ವಿರೋಧವಿದ್ರೂ ಮದುವೆಯಾಗಿದ್ದಕ್ಕೆ ಯುವತಿ ಮನೆಯವರು ಯುವಕನ ಮನೆಯೊಳಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರದ ದೇವನಹಳ್ಳಿ ತಾಲೂಕಿನ ಯಂಬ್ರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಮಾರು...

ಭಾರತ ತಂಡ ಆತಂಕಕ್ಕೆ ಸಿಲುಕಿದೆ -ಸಂಚಲನ ಮೂಡಿಸಿದ ಪಂತ್ ಹೇಳಿಕೆ

by NewsFirst Kannada
August 18, 2022
0

ಕಳೆದ ಟಿ-20 ವಿಶ್ವಕಪ್​​​​ನಲ್ಲಿ ಸೆಮಿಫೈನಲ್​​​ ತಲುಪುವಲ್ಲಿ ಟೀಮ್​ ಇಂಡಿಯಾ ವಿಫಲವಾಗಿತ್ತು. ಇದೀಗ ಇನ್ನೆರಡು ತಿಂಗಳಲ್ಲಿ ನಡೆಯಲಿರುವ T20ಗೆ ಟೀಮ್​ ಇಂಡಿಯಾ, ಭರ್ಜರಿ ಸಿದ್ಧತೆ ನಡೆಸ್ತಿದೆ. ಈ ವೇಳೆ...

‘ಆ ಸ್ಟಾರ್ ಜೊತೆ ಆ್ಯಕ್ಟ್ ಮಾಡಬಾರದು’ ಎಂದು ಮಗಳಿಗೆ ಎಚ್ಚರಿಕೆ ಕೊಟ್ರಂತೆ ಸ್ಟಾರ್ ನಿರ್ದೇಶಕ ಶಂಕರ್..!

by NewsFirst Kannada
August 18, 2022
0

ತಮಿಳು ಸ್ಟಾರ್ ಡೈರೆಕ್ಟರ್ ಶಂಕರ್ ಪುತ್ರಿ ಚಿತ್ರರಂಗ ಪ್ರವೇಶಿಸಿದ್ದು ಸಖತ್ ಬೇಡಿಕೆ ಬರ್ತಿದೆ. ಆದರೆ ಆ ಒಬ್ಬ ಸ್ಟಾರ್ ಜೊತೆ ಆ್ಯಕ್ಟ್ ಮಾಡ್ಬೇಡ ಅಂತ ಮಗಳಿಗೆ ಶಂಕರ್...

ವ್ಹಾ..! ಸೂಪರ್​ ಕ್ಯಾಚ್​​.. ಚಿರತೆಯಂತೆ ಹಾರಿದ ರೆನ್​​​ಶಾ.. Video

by NewsFirst Kannada
August 18, 2022
0

ಕ್ರಿಕೆಟ್​ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಅಂತಹದೊಂದು ಅದ್ಭುತ ಕ್ಯಾಚ್​ಗೆ ಇಂಗ್ಲೆಂಡ್​ನ ರಾಯಲ್ ಲಂಡನ್​ ಕಪ್ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಸರ್ರೆ ಹಾಗೋ ಸಾಮರ್​ಸೆಟ್​ ತಂಡಗಳು...

ಸಿದ್ದರಾಮಯ್ಯರತ್ತ ಮೊಟ್ಟೆ ಎಸೆದಿದ್ದು ಸರಿಯಲ್ಲ, ಗೌರವದಿಂದ ಕಾಣಬೇಕು -ಬಿಎಸ್​ವೈ, ಹೆಚ್​ಡಿಕೆ ಖಂಡನೆ

by NewsFirst Kannada
August 18, 2022
0

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಮಡಿಕೇರಿ ಪ್ರವಾಸ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಿದ್ದರಾಮಯ್ಯರ ಕಾರಿನತ್ತ ಮೊಟ್ಟೆಯನ್ನ ಬೀಸಾಡಿದ್ದು ಹಾಗೂ ಕಪ್ಪು...

ಅಮೀರ್ ಖಾನ್ ಪಾಲಿಗೆ ದೊಡ್ಡ ಹಿನ್ನಡೆ.. ಬಾಕ್ಸ್ ಆಫೀಸ್ ಕಿಂಗ್​ ಸಿನಿ ಬದುಕು ಅಲ್ಲೋಲ ಕಲ್ಲೋಲ..!

by NewsFirst Kannada
August 18, 2022
0

ಅಮೀರ್ ಖಾನ್ ಅಂದ್ರೆ ಬಾಕ್ಸ್ ಆಫೀಸ್​ ಕಿಂಗ್. 2000 ಕೋಟಿಗೆ ಈತನೇ ಒಡೆಯ. ಆದ್ರೆ, ಇವತ್ತು 50 ಕೋಟಿ ಗಳಿಸೋಕು ಪರದಾಡ್ತಾ ಇರೋದು ದುರಂತದ ಪರಿಸ್ಥಿತಿ. ಮಿಸ್ಟರ್...

35 ವರ್ಷಗಳ ಹಿಂದೆ ಕಣ್ಣೀರಿಟ್ಟಿದ್ದ ಘಟನೆ ಸ್ಮರಿಸಿ ಸಚಿನ್ ಭಾವುಕ

by NewsFirst Kannada
August 18, 2022
0

ದಿಗ್ಗಜ ಸಚಿನ್ ತೆಂಡೂಲ್ಕರ್ 35 ವರ್ಷಗಳ ಹಿಂದೆ ನಡೆದ ಘಟನೆ ಒಂದನ್ನ ಸ್ಮರಿಸಿ ತಮಗಾದ ಅತೀವ ಬೇಸರದ ಬಗ್ಗೆ ಮಾತನಾಡಿದ್ದಾರೆ. ಪುಣೆಯಲ್ಲಿ ಪ್ರಸಿದ್ಧ ಪಿವೈಸಿ ಜಿಮ್ಖಾನಾ ಕ್ಲಬ್...

‘ಹಿಂದೂ ಏರಿಯಾದಲ್ಲಿ ಮುಸ್ಲಿಮರ ಫೋಟೋ ಹಾಕಿದ್ರೆ ಕೋಪ ಬರಲ್ವಾ?’ -ಅಪ್ಪನ ಪರ ಯತೀಂದ್ರ ಸಿದ್ದರಾಮಯ್ಯ ಬ್ಯಾಟ್

by NewsFirst Kannada
August 18, 2022
0

ಮೈಸೂರು: ‘ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು’ ಎಂಬ ಸಿದ್ದರಾಮಯ್ಯರ ಹೇಳಿಕೆಯನ್ನ ಪುತ್ರ ಡಾ.ಯತೀಂದ್ರ ಸಮರ್ಥಿಸಿಕೊಂಡಿದ್ದಾರೆ. ಅಪ್ಪನ ಪರ ಬ್ಯಾಟ್ ಬೀಸಿರುವ ಶಾಸಕ ಡಾ.ಯತೀಂದ್ರ.. ಮುಸ್ಲಿಂ ಏರಿಯಾಗಳಲ್ಲಿ...

ಕೆಲ್ಸಕ್ಕಾಗಿ ಅಲೆದಾಟ.. ಮಗನ ಓದಿಸಲು ದುಡ್ಡಿಲ್ಲ.. ಬೀದಿಗೆ ಬಿದ್ದ ಸ್ಟಾರ್​ ಕ್ರಿಕೆಟಿಗನ ಕಣ್ಣೀರ ಕಥೆ..!

by NewsFirst Kannada
August 18, 2022
0

ಅವರು ಭಾರತೀಯ ಕ್ರಿಕೆಟ್​​​ನಲ್ಲಿ ತಮ್ಮದೆಯಾದ ಛಾಪು ಮೂಡಿಸಿದವರು. ವಿಶ್ವ ಕ್ರಿಕೆಟ್​​​ ದಿಗ್ಗಜನೊಂದಿಗೆ ಗೆಳತನ ಹೊಂದಿದವರು. ಆದ್ರೆ ಅವರ ಬದುಕೀಗ, ಬೀದಿಗೆ ಬಂದಿದೆ. ಒಪ್ಪೊತ್ತಿನ ಊಟಕ್ಕೂ ಪರದಾಡ್ತಿದ್ದಾರೆ. ಕೆಲಸಕ್ಕಾಗಿ...

Next Post

ರಾಜ್ಯಸಭೆಯಲ್ಲಿ 12 ಸಂಸದರು ಅಮಾನತು; ಮಹತ್ವದ ಸಭೆ ಕರೆದ ವಿರೋಧ ಪಕ್ಷಗಳು

ಎರಡು ತಲೆ ಹಲ್ಲಿ..! ನಿಬ್ಬೆರಗಾದ ನೆಟ್ಟಿಗರು -ವಿಡಿಯೋ

NewsFirst Kannada

NewsFirst Kannada

LATEST NEWS

ಪ್ರೀತಿಸುವವರು ಇದ್ದರೂ, ಒಂಟಿತನ ಕಾಡಿತ್ತು -ಅಚ್ಚರಿಯ ಹೇಳಿಕೆ ಕೊಟ್ಟ ಕೊಹ್ಲಿ

August 18, 2022

ಪ್ರೀತಿಸಿ ಓಡಿ ಹೋಗಿ ಮದುವೆ.. ಯುವಕನ ಹೆತ್ತವರ ಮೇಲೆ ದಾಳಿ

August 18, 2022

ಭಾರತ ತಂಡ ಆತಂಕಕ್ಕೆ ಸಿಲುಕಿದೆ -ಸಂಚಲನ ಮೂಡಿಸಿದ ಪಂತ್ ಹೇಳಿಕೆ

August 18, 2022

‘ಆ ಸ್ಟಾರ್ ಜೊತೆ ಆ್ಯಕ್ಟ್ ಮಾಡಬಾರದು’ ಎಂದು ಮಗಳಿಗೆ ಎಚ್ಚರಿಕೆ ಕೊಟ್ರಂತೆ ಸ್ಟಾರ್ ನಿರ್ದೇಶಕ ಶಂಕರ್..!

August 18, 2022

ವ್ಹಾ..! ಸೂಪರ್​ ಕ್ಯಾಚ್​​.. ಚಿರತೆಯಂತೆ ಹಾರಿದ ರೆನ್​​​ಶಾ.. Video

August 18, 2022

ಸಿದ್ದರಾಮಯ್ಯರತ್ತ ಮೊಟ್ಟೆ ಎಸೆದಿದ್ದು ಸರಿಯಲ್ಲ, ಗೌರವದಿಂದ ಕಾಣಬೇಕು -ಬಿಎಸ್​ವೈ, ಹೆಚ್​ಡಿಕೆ ಖಂಡನೆ

August 18, 2022

ಅಮೀರ್ ಖಾನ್ ಪಾಲಿಗೆ ದೊಡ್ಡ ಹಿನ್ನಡೆ.. ಬಾಕ್ಸ್ ಆಫೀಸ್ ಕಿಂಗ್​ ಸಿನಿ ಬದುಕು ಅಲ್ಲೋಲ ಕಲ್ಲೋಲ..!

August 18, 2022

35 ವರ್ಷಗಳ ಹಿಂದೆ ಕಣ್ಣೀರಿಟ್ಟಿದ್ದ ಘಟನೆ ಸ್ಮರಿಸಿ ಸಚಿನ್ ಭಾವುಕ

August 18, 2022

‘ಹಿಂದೂ ಏರಿಯಾದಲ್ಲಿ ಮುಸ್ಲಿಮರ ಫೋಟೋ ಹಾಕಿದ್ರೆ ಕೋಪ ಬರಲ್ವಾ?’ -ಅಪ್ಪನ ಪರ ಯತೀಂದ್ರ ಸಿದ್ದರಾಮಯ್ಯ ಬ್ಯಾಟ್

August 18, 2022

ಕೆಲ್ಸಕ್ಕಾಗಿ ಅಲೆದಾಟ.. ಮಗನ ಓದಿಸಲು ದುಡ್ಡಿಲ್ಲ.. ಬೀದಿಗೆ ಬಿದ್ದ ಸ್ಟಾರ್​ ಕ್ರಿಕೆಟಿಗನ ಕಣ್ಣೀರ ಕಥೆ..!

August 18, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ