ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆ ಸಂಚು ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಗೋಪಾಲಕೃಷ್ಣ ವಿರುದ್ಧ ಪ್ರತಿಭಟನೆಗೆ ನಿಂತಿದ್ದಾರೆ.
ಮಾದನಾಯಕನಹಳ್ಳಿಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ತುಮಕೂರು-ಬೆಂಗಳೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಗೋಪಾಲಕೃಷ್ಣ ಮತ್ತವರ ಸಹಚರರನ್ನ ಬಂಧಿಸುವಂತೆ ಆಗ್ರಹಿಹಿಸಿದ್ದಾರೆ. ಈ ವೇಳೆ ಸೀಮೆ ಎಣ್ಣೆ ಸುರಿದುಕೊಂಡು ಗೋಪಾಲ್ ಎಂಬ ಕಾರ್ಯಕರ್ತ ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದಾರೆ.
ಇನ್ನೂ ನೆಲಮಂಗಲದಲ್ಲಿ ಗೋಪಾಲಕೃಷ್ಣ ಭಾವಚಿತ್ರದ ಬ್ಯಾನರ್ ಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದ ಕಾರ್ಯಕರ್ತರು ಗೋಪಾಲಕೃಷ್ಣ ವಿಶ್ವನಾಥ್ ವಿರುದ್ಧ ಗೆದ್ದು ಬರಲಿ ,ಸ್ವಾಗತಿಸ್ತೇವೆ ಈ ರೀತಿ ಸುಪಾರಿ ಕೊಟ್ಟು ಹತ್ಯೆಗೆ ಸಂಚು ಹಾಕೋದು ಹೇಯ ಕೃತ್ಯ. ಆತನನ್ನ ಬಂಧಿಸಿ ಗಡಿಪಾರು ಮಾಡಬೇಕು ಎಂದು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:S.R.ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ; ಕುಳ್ಳ ದೇವರಾಜ್ ವಿರುದ್ಧ ಕೇಳಿಬಂದಿರುವ ಆರೋಪವೇನು..?
ಇದನ್ನೂ ಓದಿ;ವಿಶ್ವನಾಥ್ ವಿರುದ್ಧ ಸುಪಾರಿ ಸಂಚಿನ ಮಾತುಕತೆ ಹೇಗಿತ್ತು? ವೈರಲ್ ವಿಡಿಯೋ ಕಂಪ್ಲೀಟ್ ಸಂಭಾಷಣೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post