ಬೆಂಗಳೂರು: ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆ ಕೇಸ್ನ ಆರೋಪಿ ಕುಳ್ಳ ದೇವರಾಜ್ನನ್ನು ರಾಜಾನುಕುಂಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧನ ಕುರಿತು ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಪ್ರಕರಣ ಕುರಿತು ಇವತ್ತು ದೂರುದಾರರಿಗೆ ನೋಟಿಸ್ ನೀಡಿದ್ವಿ ಆ ಪ್ರಕಾರ ಅವರು ಠಾಣೆಗೆ ಬಂದು ಸಾಕ್ಷಿಗಳನ್ನು ಹಾಜರು ಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿವೈಎಸ್ಪಿ ಅವರ ನೇತೃತ್ವದಲ್ಲಿ ಒಂದು ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಸದ್ಯ ಸಾಕ್ಷ್ಯಗಳ ಪರಿಶೀಲನೆ ನಡೆಸಲಾಗ್ತಿದ್ದು ಕುಳ್ಳ ದೇವರಾಜ್ನ್ನು ಬಂಧನ ಮಾಡಿದ್ದೇವೆ. ಈ ಕೇಸ್ನಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನ ಹೊರಗೆಳೆಯಲಿದ್ದೇವೆ ಎಂದಿದ್ದಾರೆ.
ಇನ್ನು ಅರೆಸ್ಟ್ ಬಳಿಕ ರಾಜನಕುಂಟೆ ಪೊಲೀಸ್ ಕುಳ್ಳ ದೇವರಾಜ್ ನನ್ನ ಸ್ಪಾಟ್ ಮಹಜರಿಗೆ ಕರೆದೊಯ್ದಿದ್ದಾರೆ ಆರ್. ಟಿ ನಗರ , ಗೋಪಾಲಕೃಷ್ಣ ಮನೆ ಹೀಗೆ ವೀಡಿಯೊ ಮಾಡಿದ್ದ ಸ್ಥಳಗಳಿಗೆ ಕರೆದೊಯ್ದ ಪೊಲೀಸ್ರು ಮಹಜರ್ ನಂತರ ಸ್ಟೇಷನ್ ಬೇಲ್ ಮೇಲೆ ಕುಳ್ಳ ದೇವರಾಜ್ ನನ್ನ ಬಿಡುಗಡೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post