ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಪುಷ್ಪ’. ಈ ಸಿನಿಮಾದ ಟೀಸರ್, ಹಾಡುಗಳು, ಸಾಕಷ್ಟು ಸದ್ದು ಮಾಡುತ್ತಿವೆ. ಪುಷ್ಪ ಸಿನಿಮಾ ಇದೇ ತಿಂಗಳು 17 ನೇ ತಾರೀಖು ಕನ್ನಡ ಸೇರಿ 5 ಭಾಷೆಗಳಲ್ಲಿ ಏಕ ಕಾಲದಲ್ಲಿ ಒಟ್ಟಿಗೆ ರಿಲೀಸ್ ಆಗುತ್ತಿದೆ. ಈ ಮಧ್ಯೆ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಬಗ್ಗೆ ದೊಡ್ಡ ಯಾವೆಲ್ಲ ಸೆಲಿಬ್ರಿಟಿಗಳು ಬರ್ತಾರೆ ಅಂತ ದೊಡ್ಡ ಚರ್ಚೆಯೇ ಪ್ರಾರಂಭವಾಗಿದೆ.
‘ಪುಷ್ಪ’ ಸಿನಿಮಾದ ನಿರ್ಮಾಪಕರಾದ ಅಲ್ಲು ಅರವಿಂದ್ ನೀಡಿರೋ ಮಾಹಿತಿ ಪ್ರಕಾರ, ಸಿನಿಮಾದ ಪ್ರೀ ರಿಲೀಸ್ ಇವೆಂಟ್ಗೆ ‘ಬಾಹುಬಲಿ’ ಸ್ಟಾರ್ ಪ್ರಭಾಸ್ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ಗೆ ಸಾಥ್ ನೀಡಲು ಬಾಲಿವುಡ್ ‘ಕಬೀರ್ ಸಿಂಗ್’ ಖ್ಯಾತಿಯ ಶಾಹೀದ್ ಕಪೂರ್ ಕೂಡ ಆಗಮಿಸಲಿದ್ದಾರೆ. ಶಾಹಿದ್ ಕಪೂರ್ ಅಲ್ಲು ಅರವಿಂದ್ ನಿರ್ಮಾಣದ ಹಿಂದಿ ‘ಜೆರ್ಸಿ’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಬಾಲಿವುಡ್ನಿಂದ ಶಾಹಿದ್ ಪುಷ್ಪನಿಗೆ ಸಾಥ್ ನೀಡಲಿದ್ದಾರೆ.
ಇವರಿಬ್ಬರು ಮಾತ್ರ ಅಲ್ಲದೆ ಟಾಲಿವುಡ್ನ ಎವರ್ಗ್ರೀನ್ ಎನರ್ಜಿಟಿಕ್ ಹೀರೋ ನಂದ ಮೂರಿ ಬಾಲಕೃಷ್ಣ ಕೂಡ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಗೆ ಆಗಮಿಸಲಿದ್ದಾರೆ. ಹೀಗಾಗಿ ’ಪುಷ್ಪ’ನಿಗಾಗಿ ತ್ರಿವಳಿ ಸ್ಟಾರ್ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಪುಷ್ಪ ಸಿನಿಮಾಗೆ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ‘ಆರ್ಯ’, ‘ಆರ್ಯ-2’ ಸಿನಿಮಾಗಳ ನಂತರ ಮೂರನೇ ಬಾರಿ ಹ್ಯಾಟ್ರಿಕ್ ಹೊಡೆಯಲು ಸ್ಟಾರ್ ಜೋಡಿ ಸಿದ್ಧವಾಗಿದೆ.
ಇದನ್ನೂ ಓದಿ:ಮಧ್ಯರಾತ್ರಿ ಬೆವರು ಸುರಿಸಿ ಫೋಟೋ ಪೋಸ್ಟ್ ಮಾಡಿದ ಕರ್ನಾಟಕ ಕ್ರಶ್ ರಶ್ಮಿಕಾ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post