ಬೆಳಗಾವಿ: ಮತಾಂತರ ನಿಷೇಧ ಕಾಯ್ದೆಯ ಕುರಿತಾಗಿ ಮಾಜಿ ಸಿಎಂ ಯಡಿಯೂರಪ್ಪನವರು ಇಂದು ಬೆಳಗಾವಿ ಸುವರ್ಣಸೌಧದಲ್ಲಿ ಮಾತಾಡಿದರು. ಈ ಸಂಬಂಧ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ನಿನ್ನೆ ಡಿ.ಕೆ ಶಿವಕುಮಾರ್ ಮತಾಂತರ ನಿಷೇಧ ಕಾಯ್ದೆ ಮಸೂದೆ ಪ್ರತಿ ಹರಿದು ಹಾಕಿದ್ದರು. ಈ ಮೂಲಕ ರೋಷಾವೇಶ ಪ್ರದರ್ಶಿಸಿದ್ದ ಡಿ.ಕೆ ಶಿವಕುಮಾರ್ ಇಂದು ನಾಪತ್ತೆಯಾಗಿದ್ದರು ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಹುತೇಕ ಈ ಬಿಲ್ ತರೋಕೆ ಹೊರಟಿದ್ದರು. ಹಾಗೇ ನೋಡೋದಾದ್ರೆ ಎಲ್ಲರೂ ಈ ಬಿಲ್ ಒಪ್ಪಿದ್ದಾರೆ. ನಾವು ಮಾತ್ರ ಅದರಲ್ಲಿ ಸ್ವಲ್ಪ ಮಾರ್ಪಾಡು ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಒಣ ಪ್ರತಿಷ್ಠೆಗೆ ಬಿದ್ದು ವಿರೋಧ ಮಾಡುತ್ತಿದೆ. ಸಿದ್ದರಾಮಯ್ಯ ಗಂಟೆಗಟ್ಟಲೇ ಮಾತಾಡೋದು ಬಿಟ್ಟು ಬಿಲ್ ಪಾಸ್ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post