Monday, March 27, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಪಂಜಾಬ್​ ಚುನಾವಣೆ ಮುಂದೂಡಿಕೆ ಆಗುತ್ತಾ..? ಟಾಪ್ 10 ಸುದ್ದಿಗಳ ಕ್ವಿಕ್​​ರೌಂಡಪ್

Share on Facebook Share on Twitter Send Share
January 17, 2022

ಸಂಜೆ ಸಿಎಂ‌ ನೇತೃತ್ವದಲ್ಲಿ ಕೋವಿಡ್ ಮೀಟಿಂಗ್
ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಕೋವಿಡ್ ನಿಯಂತ್ರಣದ ಕುರಿತು ಇಂದು ಸಂಜೆ 4 ಗಂಟೆಗೆ ಮಹತ್ವದ ಸಭೆ ನಡೆಸಲಿದ್ದಾರೆ. ತಜ್ಞರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಹಿರಿಯ ಸಚಿವರ ಜೊತೆ ಸಿಎಂ, ವರ್ಚುವಲ್ ಮೀಟಿಂಗ್ ನಡೆಸಿ ಕೋವಿಡ್​ನ ಸದ್ಯದ ಸ್ಥಿತಿ ಬಗ್ಗೆ ಚರ್ಚಿಸಲಿದ್ದಾರೆ. ಸಭೆಯಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಕೋವಿಡ್ ರೂಲ್ಸ್ ಪಾಲನೆ ಬಗ್ಗೆ ಚರ್ಚಿಸಿ ಸಿಎಂ ಮತ್ತಷ್ಟು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಜೊತೆಗೆ, ಮುಂದೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ತಜ್ಞರ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದಾರೆ.

‘ನಮೋ’ಗಾಗಿ ಧರ್ಮಸ್ಥಳದಲ್ಲಿ ಮೃತ್ಯುಂಜಯ ಯಾಗ
ಪ್ರಧಾನಿ ನರೇಂದ್ರ ಮೋದಿ ಆಯುಷ್ಯ ಮತ್ತು ಆರೋಗ್ಯ ವೃದ್ಧಿಗಾಗಿ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಸಲಾಗ್ತಿದೆ. ಬೆಳ್ತಗಂಡಿ ಶಾಸಕ ಹರೀಶ್​ ಪೂಂಜಾ ನೇತೃತ್ವದಲ್ಲಿ ಯಾಗ ಕಾರ್ಯ ನಡೆಯುತ್ತಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಪ್ರಧಾನಿ ಮೋದಿ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ, ಮಂಜುನಾಥನ ಸನ್ನಿಧಿಯ ಅಮೃತವರ್ಷಿಣಿ ಸಭಾಂಗಣದಲ್ಲಿ ಯಾಗ ನಡೆಸಲಾಗುತ್ತಿದೆ.

‘ಕೈ’ ಪಾದಯಾತ್ರೆ ಕೇಸ್​ ವರದಿ ಸಲ್ಲಿಕೆಗೆ ಸಮಿತಿ
ಮೇಕೆದಾಟು ಪಾದಯಾತ್ರೆ ಹಿನ್ನಲೆ ಕಾಂಗ್ರೆಸ್ ನಾಯಕರ ಮೇಲೆ‌‌ ದಾಖಲಾಗಿರೋ‌ ಪ್ರಕರಣಗಳ ಬಗ್ಗೆ ವರದಿ ತಯಾರಿಸಲು ಸರ್ಕಾರ ಸಮಿತಿ ರಚಿಸಲಾಗಿದೆ. ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ಎ.ಎಸ್​. ಪೊನ್ನಣ್ಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಮೇಕೆದಾಟು ಪಾದಯಾತ್ರೆ ವೇಳೆ ದಾಖಲಾಗಿದ್ದ ಕೇಸ್​ಗಳ ಬಗ್ಗೆ ಈ ಸಮಿತಿ ವರದಿ ಸಿದ್ಧಪಡಿಸಲಿದ್ದು, ವರದಿ ಬಳಿಕ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಲಾಗಿದೆ.

ಮತ್ತೆ ಮತ್ತೆ ಕೊರೊನಾ ವೈರಸ್ ಆರ್ಭಟ
ಕರ್ನಾಟಕದಲ್ಲಿ ಕಳೆದ 24ಗಂಟೆಗಳಲ್ಲಿ ಬರೋಬ್ಬರಿ 34 ಸಾವಿರದ 47 ಕೊರೊನಾ ಕೇಸ್​ಗಳು ದಾಖಲಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 24 ಗಂಟೆಗಳಲ್ಲಿ 21 ಸಾವಿರದ 17 ಕೊರೊನಾ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಌಕ್ಟಿವ್ ಕೇಸ್​ಗಳ ಸಂಖ್ಯೆ 1 ಲಕ್ಷದ 97 ಸಾವಿರದ 982ಕ್ಕೆ ಏರಿಕೆಯಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 41 ಸಾವಿರದ 327 ಕೊರೊನಾ ಕೇಸ್​​ಗಳು ದಾಖಲಾಗಿವೆ.

‘ಸೈಕಲ್’ ಇಳಿದು ‘ಕಮಲ’ ಹಿಡಿದ ಎಂಎಲ್​ಸಿಗಳು
ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕರು ಹಾಗೂ ಸಚಿವರನ್ನ ಸಮಾಜವಾದಿ ಪಕ್ಷಕ್ಕೆ ಸೇರಿಸಕೊಂಡು ಠಕ್ಕರ್ ನೀಡಿದ್ದ ಅಖಿಲೇಶ್ ಯಾದವ್​ಗೆ ಹಿನ್ನಡೆಯಾಗಿದೆ. ಸದ್ಯ ಸಮಾಜವಾದಿ ಪಕ್ಷದ ಎಂಎಲ್​ಸಿಗಳಾಗಿದ್ದ ಜ್ಞಾನ್​ಶ್ಯಾಮ್​ ಲೋಧಿ ಹಾಗೂ ಶೈಲೇಂದ್ರ ಪ್ರತಾಪ್​ಸಿಂಗ್ ಬಿಜೆಪಿ ಸೇರಿದ್ದಾರೆ. ಇವರ ಜೊತೆಗೆ ಮಾಜಿ ಪೊಲೀಸ್​ ವರಿಷ್ಠಾಧಿಕಾರಿ ಓಂ ಪ್ರಕಾಶ್, ನಿವೃತ್ತ ಐಎಎಸ್ ಅಧಿಕಾರಿ ರಾಮ್ ಬಹದ್ದೂರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಂಜಾಬ್​ ಚುನಾವಣೆ ಮುಂದೂಡುವಂತೆ ಮನವಿ ಪತ್ರ
ಫೆಬ್ರವರಿ 14ಕ್ಕೆ ನಿಗದಿಯಾಗಿರುವ ವಿಧಾನಸಭಾ ಚುನಾವಣೆಯನ್ನು ಮುಂದೂಡುವಂತೆ ಪಂಜಾಬ್​ನಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿವೆ. ಫೆಬ್ರವರಿ 16ರಂದು ಗುರು ರವಿದಾಸ್​ಜೀಯ ಜನ್ಮಜಯಂತಿ ಇದೆ. ಈ ಹಿನ್ನೆಲೆ ಸುಮಾರು 20 ಲಕ್ಷ ಜನ ಫೆಬ್ರವರಿ 10ರಿಂದ 16ರ ತನಕ ಉತ್ತರಪ್ರದೇಶದ ಪುಣ್ಯಸ್ಥಳ ಬನಾರಸ್​ಗೆ​ ಯಾತ್ರೆ ಮಾಡಲಿದ್ದಾರೆ. ಹೀಗಾಗಿ ಆ 20 ಲಕ್ಷ ಜನ ಮತದಾನದಿಂದ ವಂಚಿತರಾಗಬಾರದು ಅನ್ನೋ ಕಾರಣಕ್ಕೆ ಚುನಾವಣೆಯನ್ನ ಫೆಬ್ರವರಿ 20ಕ್ಕೆ ನಡೆಸಬೇಕು ಅಂತಾ ಬಿಜೆಪಿ, ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಹಾಗೂ ಬಿಎಸ್​ಪಿ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿವೆ.

ಚಂದ್ರನ ಮೇಲೆ ಪ್ರಪ್ರಥಮ ಬಾರಿಗೆ ನೀರು ಪತ್ತೆ
ಚಂದ್ರನ ಮೇಲ್ಮೈನಲ್ಲಿ ಪ್ರಪ್ರಥಮ ಬಾರಿಗೆ ನೀರಿರೋದನ್ನ ಚೀನಾದ ಚಾಂಗ್ ಫೈವ್ ಚಂದ್ರ ನೌಕೆ ಪತ್ತೆ ಹಚ್ಚಿದೆ. ಈ ಹೊಸ ಶೋಧನೆಯಿಂದ ಚಂದ್ರ ಉಪಗ್ರಹ ಎನ್ನುವುದಕ್ಕೆ ನೂತನ ಸಾಕ್ಷ್ಯ ದೊರೆತಂತಾಗಿದೆ. ಚಂದ್ರ ನೌಕೆಯು ಇಳಿದಿದ್ದ ಚಂದ್ರನ ಮೇಲ್ಮೈನಲ್ಲಿ 120 ಪಿಪಿಎಂಗಿಂತಲೂ ಕಡಿಮೆ ಪ್ರಮಾಣದಲ್ಲಿನ ನೀರು ಪತ್ತೆಯಾಗಿದೆ. ಕಲ್ಲಿನ ಸುತ್ತ ಚಂದ್ರನ ಮೇಲ್ಮೈನಲ್ಲಿ ನೀರಿರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದೆ.

ಪಿಜ್ಜಾ ಆರ್ಡರ್​​ ಮಡಿದ್ದ ವೃದ್ಧೆಗೆ ₹11ಲಕ್ಷ ಪಂಗನಾಮ
ಪಿಜ್ಜಾ ವಿಷಯದಲ್ಲಿ ಅಜ್ಜಿಯೋರ್ವರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದ ವೃದ್ಧೆ ಅದಕ್ಕಾಗಿ ಹಣ ಕೂಡ ಕಳುಹಿಸಿದ್ದರು. ಆದರೆ, ಅವರು ತಪ್ಪಾಗಿ ಬಿಲ್‌ಗಿಂತ ಹೆಚ್ಚು ಅಮೌಂಟ್ ಕಳುಹಿಸಿದ್ದರು. ಅದನ್ನು ಹೇಗೆ ಮರಳಿ ಪಡೆಯೋದು ಅಂತಾ ಗೂಗಲ್‌ ಸರ್ಚ್​ ಮಾಡಿದ್ದಾರೆ. ಆ ವೇಳೆ ಗೂಗಲ್ ಮಾಹಿತಿಯಂತೆ ಯಾರಿಗೋ ಕರೆ ಮಾಡಿದ್ದಾರೆ. ಆಗ ಆ ಮೋಸಗಾರರು ಅಪ್ಲಿಕೇಶನ್ ಒಂದನ್ನ ಡೌನ್​ಲೋಡ್ ಮಾಡಲು ಹೇಳಿ, ವೃದ್ಧೆಯ ಬ್ಯಾಂಕ್ ವಿವರಗಳು ಮತ್ತು ಪಾಸ್‌ವರ್ಡ್‌ಗಳನ್ನು ಪಡೆದುಕೊಂಡು 11 ಲಕ್ಷಕ್ಕೂ ಹೆಚ್ಚು ಹಣವನ್ನು ಅವರ ಬ್ಯಾಂಕ್ ಖಾತೆಯಿಂದ ಎಗರಿಸಿದ್ದಾರೆ.

Download the Newsfirstlive app

ಆಸ್ಟ್ರೇಲಿಯಾ ತೊರೆದ ನೊವಾಕ್ ಜೊಕೊವಿಕ್
ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಸಮರ ಸಾರಿದ್ದ ವಿಶ್ವ ನಂ.1 ಟೆನಿಸ್​ ಆಟಗಾರ ನೊವಾಕ್ ಜೋಕೊವಿಕ್‌ಗೆ ಸೋಲುಂಟಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಹಿನ್ನೆಲೆ ಸೆರ್ಬಿಯಾದ ಜೊಕೊವಿಕ್​ರ ವೀಸಾ ರದ್ದುಗೊಳಿಸಿ ಆಸ್ಟ್ರೇಲಿಯಾ ಸರ್ಕಾರ ಆದೇಶ ಮಾಡಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ಕೋರಿ ಜೊಕೊವಿಕ್ ಸಲ್ಲಿಸಿದ್ದ ಮನವಿಯನ್ನು ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ 21ನೇ ಗ್ರಾಂಡ್ ಸ್ಲಾಮ್ ಗೆದ್ದು ದಾಖಲೆ ನಿರ್ಮಿಸುವ ಜೊಕೊವಿಕ್ ಕನಸು ನುಚ್ಚುನೂರಾಗಿದೆ. ಇನ್ನು ಕೋರ್ಟ್​ನಲ್ಲಿ ತಮಗೆ ಸೋಲಾಗ್ತಿದ್ದಂತೆ ಸರ್ಬಿಯಾದ ಆಟಗಾರ ಜೊಕೊವಿಕ್ ಆಸ್ಟ್ರೇಲಿಯಾ ಬಿಟ್ಟು ತೊರಳಿದ್ದಾರೆ.

ಟೆಸ್ಟ್ ತಂಡಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಸಾರಥ್ಯ?
ಭಾರತದ ಟೆಸ್ಟ್ ಕ್ರಿಕೆಟ್​ ತಂಡಕ್ಕೆ ಕನ್ನಡಿಗ ಕೆ.ಎಲ್​.ರಾಹುಲ್ ನಾಯಕರಾಗಿ ಆಯ್ಕೆಯಾಗಬೇಕು ಎಂಬ ಮಾತು ಕ್ರಿಕೆಟ್ ವಲಯದಿಂದ ಕೇಳಿಬರುತ್ತಿದೆ. ರೋಹಿತ್ ಶರ್ಮಾ ಪದೇ ಪದೇ ಫಿಟ್​ನೆಸ್​ ಹಾಗೂ ಇಂಜುರಿ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಜೊತೆಗೆ ರೋಹಿತ್ ಶರ್ಮಾಗೆ ನಾಯಕನಾಗಿ ಏಕದಿನ ಹಾಗೂ ಟಿ-20 ವಿಶ್ವಕಪ್​ ಗೆಲ್ಲುವ ಸವಾಲು ಕಣ್ಣೆದುರಿಗಿದೆ. ಹೀಗಾಗಿ ರಾಹುಲ್​​ಗೆ ಕ್ಯಾಪ್ಟನ್ಸಿ ಕೊಡಬೇಕು ಎನ್ನೋ ಮಾತುಗಳು ಕೇಳಿಬರ್ತಿವೆ. ಇನ್ನೊಂದೆಡೆ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್, ರಿಷಭ್​ ಪಂತ್​ಗೆ ಟೆಸ್ಟ್ ನಾಯಕತ್ವ ನೀಡಬೇಕು ಎಂದಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

‘ಯಲಾ ಕುನ್ನಿ, ಮೇರಾ ನಾಮ್​​ ವಜ್ರಮುನಿ’ ಎನ್ನುತ್ತಿದ್ದಾರೆ ನಟ ಕೋಮಲ್​​​​!

by veena
March 27, 2023
0

ಸ್ಯಾಂಡಲ್​ವುಡ್​​ ಹಾಸ್ಯ ನಟ ಕೋಮಲ್ ಅವರು ಯಲಾ ಕುನ್ನಿ, ಮೇರ ನಾಮ್ ವಜ್ರಮುನಿ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನ ಗೋವಿಂದರಾಜ ನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ...

ನಿಜವಾಗಲೂ ಆಧಾರ್​​, ಪ್ಯಾನ್​​ ಲಿಂಕ್​ ಕಡ್ಡಾಯವೇ..? ಯಾರಿಗೆ ಕಡ್ಡಾಯ..? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​!

by NewsFirst Kannada
March 27, 2023
0

ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್‌ ಲಿಂಕ್ ಆಗಿದ್ಯಾ? ಅಥವಾ ಆಗಿಲ್ವಾ? ಮಾರ್ಚ್ 31ರೊಳಗೆ ಲಿಂಕ್ ಆಗದಿದ್ರೆ 10 ಸಾವಿರ ರೂಪಾಯಿ ಫೈನ್ ಕಟ್ಟಬೇಕಾ? ಆಧಾರ್, ಪ್ಯಾನ್...

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

by veena
March 27, 2023
0

ಕನ್ನಡದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕವನ್ನು ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ಹಲವು...

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

by veena
March 27, 2023
0

ಸತತ 22 ಗಂಟೆ, 45 ಪೊಲೀಸರ ತಂಡ, 1,300 ಕಿಲೋ ಮೀಟರ್​ನಷ್ಟು ಪ್ರಯಾಣ. ಇದು ಯಾವ ಸಿನಿಮಾದ ಶೂಟಿಂಗ್ ಕಥೆ​​ ಅಲ್ಲ. ಬದಲಿಗೆ ಗ್ಯಾಂಗ್​ಸ್ಟರ್, ರಾಜಕಾರಣಿಯಾಗಿದ್ದ ಅತೀಕ್...

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

by NewsFirst Kannada
March 27, 2023
0

ಟೀಂ ಇಂಡಿಯಾದ ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ. ಇವರ ಸ್ಥಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಮುಂಜಾಗ್ರತಾ ಕ್ರಮವಾಗಿ ಬಿಸಿಸಿಐ ಸಂಜು...

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

by veena
March 27, 2023
0

ಬಾಗಲಕೋಟೆ: ಪ್ರೀತಿಸಿದ ಹುಡುಗಿಗೆ ಮದುವೆ ನಿಶ್ಚಯ ಆಗಿದ್ದಕ್ಕೆ ಮನನೊಂದ ಪ್ರಿಯಕರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಗುಡೂರು ಗ್ರಾಮದಲ್ಲಿ ನಡೆದಿದೆ. ಅಫ್ಜಲ್ ಸೊಲ್ಲಾಪುರ (27), ನೇತ್ರಾವತಿ...

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

by veena
March 27, 2023
0

ಗಿಳಿ ಎಂದ ಕೂಡಲೇ ಥಟ್​​ ಅಂತ ನೆನಪಾಗೋದು ಅದರ ಮೇಲೆ ಇರುವ ಹಸಿರು ಬಣ್ಣ ಹಾಗೂ ಕೆಂಪು ಮೂಗು. ಗಿಳಿಯನ್ನು ನೋಡುವುದೇ ಚಂದ. ಅದೇ ಗಿಳಿಯು ಮನುಷ್ಯರ...

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

by NewsFirst Kannada
March 27, 2023
0

ಬೆಂಗಳೂರು: ತುಮಕೂರು ಕ್ಯಾತಸಂದ್ರದ ಟೋಲ್​ ಬಳಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಅರೆಸ್ಟ್​ ಮಾಡಲಾಗಿದೆ. ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿಗೆ ಬರುತ್ತಿದ್ದಾಗ ಮಾಡಾಳ್‌ ಅವರನ್ನು ಬಂಧಿಸಿದ್ದಾರೆ....

ತಿರುಪತಿಗೆ ಬಂದ 26 ಕೋಟಿ ದೇಣಿಗೆ ತಡೆದ ಮೋದಿ ಸರ್ಕಾರ; ತಿಮ್ಮಪ್ಪನಿಗಾದ ಅವಮಾನ ಎಂದ ಕಾಂಗ್ರೆಸ್

by NewsFirst Kannada
March 27, 2023
0

ತಿರುಮಲ ತಿರುಪತಿ ದೇವಸ್ಥಾನ ಸದಾ ಭಕ್ತರಿಂದ ತುಂಬಿ ತುಳುಕುತ್ತಾ ಇರುತ್ತೆ. ಭಕ್ತಸಾಗರದ ಜೊತೆಗೆ ತಿಮ್ಮಪ್ಪನ ಹುಂಡಿಯೂ ಅಷ್ಟೇ ತುಂಬುತ್ತಲೇ ಇರುತ್ತದೆ. ಕೋಟ್ಯಾಂತರ ಭಕ್ತರ ಆರಾಧ್ಯದೈವ ಬಾಲಾಜಿಗೆ ದೇಶ,...

ಕೈಕೊಟ್ಟ ಶ್ರೇಯಸ್​ ಅಯ್ಯರ್​; ನರೈನ್​​ ಅಲ್ಲ, ಭಾರತದ ಈ ಯಂಗ್ ಬ್ಯಾಟ್ಸ್​ಮನ್​​ ​KKR ತಂಡದ ಕ್ಯಾಪ್ಟನ್​​

by NewsFirst Kannada
March 27, 2023
0

ಇತ್ತೀಚೆಗೆ ನಡೆದ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೇ ಟೆಸ್ಟ್​ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್​​ ಗಾಯಗೊಂಡಿದ್ದರು. ಹೀಗಾಗಿ ನಂತರ ನಡೆದ ಏಕದಿನ ಸರಣಿಯಿಂದಲೂ ಶ್ರೇಯಸ್​...

Next Post

BREAKING ರೌಡಿಶೀಟರ್ ಸ್ಟಾರ್​ ರಾಹುಲ್​ ಮೇಲೆ ಫೈರಿಂಗ್

ಟೆಸ್ಟ್ ತಂಡಕ್ಕೆ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯ..?

NewsFirst Kannada

NewsFirst Kannada

LATEST NEWS

‘ಯಲಾ ಕುನ್ನಿ, ಮೇರಾ ನಾಮ್​​ ವಜ್ರಮುನಿ’ ಎನ್ನುತ್ತಿದ್ದಾರೆ ನಟ ಕೋಮಲ್​​​​!

March 27, 2023

ನಿಜವಾಗಲೂ ಆಧಾರ್​​, ಪ್ಯಾನ್​​ ಲಿಂಕ್​ ಕಡ್ಡಾಯವೇ..? ಯಾರಿಗೆ ಕಡ್ಡಾಯ..? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​!

March 27, 2023

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

March 27, 2023

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

March 27, 2023

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

March 27, 2023

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

March 27, 2023

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

March 27, 2023

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

March 27, 2023

ತಿರುಪತಿಗೆ ಬಂದ 26 ಕೋಟಿ ದೇಣಿಗೆ ತಡೆದ ಮೋದಿ ಸರ್ಕಾರ; ತಿಮ್ಮಪ್ಪನಿಗಾದ ಅವಮಾನ ಎಂದ ಕಾಂಗ್ರೆಸ್

March 27, 2023

ಕೈಕೊಟ್ಟ ಶ್ರೇಯಸ್​ ಅಯ್ಯರ್​; ನರೈನ್​​ ಅಲ್ಲ, ಭಾರತದ ಈ ಯಂಗ್ ಬ್ಯಾಟ್ಸ್​ಮನ್​​ ​KKR ತಂಡದ ಕ್ಯಾಪ್ಟನ್​​

March 27, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ