Saturday, March 25, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಮಾವನ ಪಕ್ಷ ಎಸ್​ಪಿಗೆ ಶಾಕ್​​ ಕೊಟ್ಟ ಅಪರ್ಣಾ ಯಾದವ್.. ಬಿಜೆಪಿ ಸೇರ್ಪಡೆ

Share on Facebook Share on Twitter Send Share
January 19, 2022

ರಾಜಕೀಯ ಅನ್ನೋದು ಎಂತಹ ಮಿತೃತ್ವವನ್ನೇ ಸೈಡಿಗಾಕಿಬಿಡುತ್ತೆ. ಇಲ್ಲಿ ಕೆಲವೊಮ್ಮೆ ಕುಟುಂಬ, ಸಂಬಂಧ, ಭಾವನೆಗಳು ಯಾವುದೂ ಲೆಕ್ಕಕ್ಕೆ ಬರಲ್ಲ. ಒಂದೇ ಮನೆಯಲ್ಲಿದ್ದುಕೊಂಡೇ ಬೇರೆ ಬೇರೆ ಪಕ್ಷಗಳನ್ನ ಆರಾಧಿಸೋರನ್ನ ನಾವ್ ನೋಡಿದ್ದೀವಿ. ಆದ್ರೆ, ಚುನಾವಣೆ ಹತ್ತಿರ ಬರ್ತಿದ್ದಂತೆ ಒಬ್ಬ ಧುರೀಣನ ಮನೆಯವರೇ ಶಾಕ್ ಕೊಡೋದು ಇದ್ಯಲ್ಲ ಅದು ನಿಜಕ್ಕೂ ನಂಬಲಾಗದ ಬೆಳವಣಿಗೆ. ಅಂತಹುದ್ದೇ ಒಂದು ದೊಡ್ಡ ಬೆಳವಣಿಗೆಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಮೊದಲೇ ಎಲೆಕ್ಷನ್ ಬಿಸಿಗೆ ಕಾದಿರುವ ಅಖಾಡ ಮತ್ತಷ್ಟು ಶಾಖ ಉಗುಳಿದೆ. ಬಿಜೆಪಿ ಬಾಯಿಗೆ ಲಡ್ಡು ಬಿದ್ರೆ ಪ್ರಮುಖ ಎದುರಾಳಿ ಪಾರ್ಟಿಗೆ ಆಘಾತವಾಗಿದೆ..

ಬಹುಶಃ ಇದು ಯಾರೂ ನಿರೀಕ್ಷಿಸದ ಬೆಳವಣಿಗೆ ಅಂದ್ರೆ ತಪ್ಪಾಗೋದಿಲ್ಲ. ಎಲೆಕ್ಷನ್ ಹತ್ತಿರವಾದಾಗ ಒಂದು ಪಕ್ಷದಲ್ಲಿರುವ ಅಸಮಾಧಾನಿತರು ಸಮಯ ನೋಡಿ ಪಕ್ಷದಿಂದ ಪಕ್ಷಕ್ಕೆ ಹಾರೋದು ಕಾಮನ್.. ಆ ರೀತಿಯ ಅದೆಷ್ಟೋ ಘಟನೆಗಳನ್ನ ಈ ರಾಷ್ಟ್ರದ ಜನರು ನೋಡಿದ್ದಾರೆ.. ನೋಡ್ತಾನೆ ಇದ್ದಾರೆ. ಆದ್ರೆ, ಉತ್ತರ ಪ್ರದೇಶದ ಚುನಾವಣಾ ಕಣದಲ್ಲಿ ಈ ಬಾರಿ ಮಾತ್ರ ಅಕ್ಷರಶಃ ಪಕ್ಷಾಂತರದ ಬಿರುಗಾಳಿ ಭುಗಿಲೆದ್ದಿದೆ. ಅದ್ರಲ್ಲೂ ವಿಶೇಷವಾಗಿ ಜಿದ್ದಿಗೆ ಬಿದ್ದು ಮತಬೇಟೆಯಾಡ್ತಿರೋ ಎಸ್​ಪಿ, ಬಿಜೆಪಿ ಮಧ್ಯ ಅಕ್ಷರಶಃ ಸಮರವೇ ನಡೆದುಹೋಗ್ತಿದೆ. ಬಿಜೆಪಿಯ ಘಟಾನುಘಟಿ ಸಚಿವರನ್ನು ಇತ್ತೀಚೆಗಷ್ಟೇ ಆಪರೇಷನ್ ಮಾಡಿದ್ದ ಅಖಿಲೇಶ್ ಯಾದವ್ ಪಾಳಯ, ಸಿಎಂ ಯೋಗಿಗೆ ಠಕ್ಕರ್ ಮೇಲೆ ಠಕ್ಕರ್ ಕೊಡ್ತಾನೆ ಬಂದಿತ್ತು. ಆದ್ರೆ, ಇವೆಲ್ಲಾ ಖುಷಿಯಲ್ಲಿ ಮುಲಾಯಂ ಕಟ್ಟಿದ್ದ ಪಕ್ಷ ಮಿಂದೇಳುವ ಮುನ್ನ ಬಿಜೆಪಿ ಮುಟ್ಟಿ ನೋಡಿಕೊಳ್ಳುವ ಹೊಡೆತ ಕೊಟ್ಟಿದೆ.

ಚುನಾವಣೆ ಹೊಸ್ತಿಲಲ್ಲಿ ಮಾವನ ಪಕ್ಷಕ್ಕೆ ಭರ್ಜರಿ ಠಕ್ಕರ್
ಬಿಜೆಪಿ ಸೇರಿ ಎಸ್​ಪಿಗೆ ಶಾಕ್​ ಕೊಟ್ಟ ಅಪರ್ಣಾ ಯಾದವ್

ಹೌದು..ಉತ್ತರ ಮಾಜಿ ಮುಖ್ಯಮಂತ್ರಿ, ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ ಹಾಗೂ ಅಖಿಲೇಶ್​ ಯಾದವ್ ಪಾಳಯಕ್ಕೆ ದೊಡ್ಡ ಆಘಾತವಾಗಿದೆ. ಮುಲಾಯಂ ಸಿಂಗ್​ರ ಕಿರಿಯ ಸೊಸೆ ಅಪರ್ಣಾ ಯಾದವ್‌ ಚುನಾವಣೆ ಹೊಸ್ತಿಲಲ್ಲಿ ಮಾವನ ಪಕ್ಷಕ್ಕೆ ಶಾಕ್ ಕೊಟ್ಟಿದ್ದಾರೆ. ಸಮಾಜವಾದಿ ಪಕ್ಷದ ಕಟ್ಟಾ ಎದುರಾಳಿ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಎಲೆಕ್ಷನ್ ಹತ್ತಿರವಾಗ್ತಿದ್ದಂತೆ ಬಿಜೆಪಿ ಕೆಡವಲು ರಣತಂತ್ರ ರೂಪಿಸುತ್ತಿದ್ದ ಎಸ್​ಪಿಗೆ ಈ ಬೆಳವಣಿಗೆಯಿಂದ ಭಾರೀ ಹೊಡೆತವೇ ಬಿದ್ದಂತಾಗಿದ್ದ, ಎಸ್​ಪಿಯ ಚುನಾವಣಾ ಲೆಕ್ಕಾಚಾರಗಳೇ ಉಲ್ಟಾ ಆಗುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ

ಚುನಾವಣೆ ಘೋಷಣೆಗೂ ಮುನ್ನ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದು ಪಕ್ಕಾ, ಯೋಗಿ ಮತ್ತೆ ಸಿಎಂ ಸ್ಥಾನ ಏರ್ತಾರೆ ಅನ್ನೋ ಸಮೀಕ್ಷೆಗಳ ಮಾಹಿತಿ ಎಲ್ಲಾ ಕಡೆಯಿಂದಲೂ ಅಪ್ಪಳಿಸುತಿತ್ತು. ಆದ್ರೆ, ಎಲೆಕ್ಷನ್ ಘೋಷಣೆಯಾಗುತ್ತಿದ್ದಂತೆ, ಉತ್ತರಪ್ರದೇಶದ ಪೊಲಿಟಿಕಲ್ ವಾತಾವರಣ ನಿಧಾನಕ್ಕೆ ಬದಲಾಯಿತು. ದಿನಕಳೆದಂತೆ ಎಸ್‌ಪಿ ಪ್ರಬಲವಾಯ್ತಾ ಸಾಗುತ್ತಿತ್ತು. ಯಾದವ್‌, ಮುಸ್ಲಿಂ ಸೇರಿದಂತೆ ಬಹುತೇಕ ಹಿಂದುಳಿತ ಮತಗಳು ಈ ಬಾರಿ ಸಮಾಜವಾದಿ ಬಿಟ್ಟು ಕದಲ್ವೇನ ಅನ್ನುವಷ್ಟರಮಟ್ಟಿಗೆ ಅಖಿಲೇಶ್ ಪಾಳಯ ತಂತ್ರ ರಣತಂತ್ರಗಳನ್ನ ಹೆಣೆಯುವಲ್ಲಿ ಯಶಸ್ವಿಯಾಗ್ತಿತ್ತು. ಗೆಲುವಿಗೆ ಇವು ಸಾಕಾಗಲ್ಲ ಅನ್ನೋದನ್ನು ಅರಿತ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಚಿಕ್ಕಪುಟ್ಟ ಪಕ್ಷಗಳ ಜೊತೆ ಮೈತ್ರಿಯನ್ನೂ ಮಾಡಿಕೊಂಡಿದ್ರು. ಇನ್ನು, ಒಬಿಸಿ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಸಚಿವ ಪ್ರಭಾವಿ ಸಚಿವರಾದ ಸ್ವಾಮಿ ಪ್ರಸಾದ್‌ ಮೌರ್ಯ, ದಾರಾ ಸಿಂಗ್‌, ಧರ್ಮ್‌ಸಿಂಗ್‌ ಅವರನ್ನೂ ಪಕ್ಷಕ್ಕೆ ಸೆಳೆದುಕೊಂಡಿದ್ರು. ಸಾಲು ಸಾಲು ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿ ತಮ್ಮ ಪಕ್ಷಕ್ಕೇ ಬಹುಪರಾಕ್ ಎನ್ನುವಂತೆ ಮಾಡಿದ್ದರು. ಇದು ಸಹಜವಾಗಿ ಬಿಜೆಪಿಗೆ ಹೊಡೆತ ನೀಡುತ್ತೆ ಅಂತಲೇ ಅಂದಾಜಿಸಲಿತ್ತಾದ್ರೂ ಈ ಬಾರಿ ಬಿಜೆಪಿ ಎಸ್​ಪಿ ಮಧ್ಯೆ ರಣಕಾಳಗವೇ ನಡೆಯುವ ಮುನ್ಸೂಚನೆ ನೀಡಿತ್ತು. ಹೀಗೆ, ಕಮಲ ಸೈಕಲ್ ನಡುವೆ ಸಮರ ನಿರಂತರವಾಗಿ ಸಾಗ್ತಿರೋ ಮಧ್ಯೆಯೇ, ಮುಲಾಯಂ ಸಿಂಗ್ ಸೊಸೆಯ ಮೂಲಕವೇ ಬಿಜೆಪಿ ಎಸ್​ಪಿಗೆ ಮಾಸ್ಟರ್​ ಸ್ಟ್ರೋಕ್ ಕೊಟ್ಟಿದೆ.

ಎಲ್ಲರೂ ನೋಡಿರುವ ಹಾಗೇ ನಾನು ಸದಾ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದ ಪ್ರಭಾವಿತಳಾಗಿದ್ದೆ. ನನ್ನ ಎಲ್ಲಾ ಚಿಂತನೆಗಳಲ್ಲಿ ರಾಷ್ಟ್ರಕ್ಕೆ ಮೊದಲ ಸ್ಥಾನವವಿದೆ. ರಾಷ್ಟ್ರ ಧರ್ಮ ಎನ್ನವುದು ನನಗೆ ಎಲ್ಲಕ್ಕಿಂತ ಮುಖ್ಯ. ನಾನು ಹೇಳೋಕೆ ಇಷ್ಟಪಡುವುದು ಇಷ್ಟೇ. ಈಗ ನಾನು ರಾಷ್ಟ್ರ ಸೇವೆ ಮಾಡಲು ಬಂದಿದ್ದೇನೆ. ಹಾಗಾಗಿ, ನನಗೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ. ಬಿಜೆಪಿಯ ಸ್ವಚ್ಛಭಾರತ ಮಿಷನ್​ನಂತಹ ಯೋಜನೆಗಳು ನನಗೆ ತುಂಬಾ ಹಿಡಿಸಿವೆ. ಬಿಜೆಪಿ ಮಹಿಳೆಯರಿಗಾಗಿ ಶ್ರಮಿಸುತ್ತಿರುವ ರೀತಿ ಹಾಗೂ ಪಕ್ಷ ಕಾರ್ಯರೂಪಕ್ಕೆ ತಂದಿರುವ ಇನ್ನೂ ಹಲವು ಯೋಜನೆಗಳಿಂದ ಪ್ರಭಾವಿತಳಾಗಿದ್ದೇನೆ. ಎಂದ ಅಪರ್ಣಾ ಯಾದವ್‌, ಮುಲಾಯಂ ಸೊಸೆ

2017ರಲ್ಲಿ ಎಸ್‌ಪಿಯಿಂದ ಸ್ಪರ್ಧಿಸಿದ್ದ ಅಪರ್ಣಾ ಯಾದವ್‌
ಬಿಜೆಪಿ ವಿರುದ್ಧ ಸೋಲುಂಡಿದ್ದ ಮುಲಾಯಂ ಸಿಂಗ್‌ ಸೊಸೆ

ಮುಲಾಯಂ ಸಿಂಗ್‌ ಇಡೀ ಕುಟುಂಬವೇ ರಾಜಕೀಯದಲ್ಲಿ ತೊಡಗಿದೆ. ಒಂದೇ ಕುಟುಂಬದ 22 ಜನ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಅಪರ್ಣಾ ಕೂಡ ರಾಜಕೀಯ ಪ್ರಭಾವಕ್ಕೆ ಒಳಗಾಗಿರೋದು ಸಹಜ. ಹಾಗೇ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲಖನೌದ ಕ್ಯಾಂಟ್‌ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿಯಾಗಿ ಅಪರ್ಣಾ ಸ್ಪರ್ಧಿ ಮಾಡಿದ್ದರು. ಆದ್ರೆ, ಆ ಚುನಾವಣೆ ಸಮಯದಲ್ಲಿ ಮೋದಿ ಅಲೆ ಸುನಾಮಿ ರೀತಿಯಲ್ಲಿ ಅಪ್ಪಳಿಸಿತ್ತು. ವಿರೋಧ ಪಕ್ಷಗಳ ಘಟಾನುಘಟಿ ನಾಯಕರೆಲ್ಲಾ ಸೋತು ಸುಣ್ಣವಾಗಿದ್ರು. ಹಾಗೇ ಅಪರ್ಣಾ ಕೂಡ ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ವಿರುದ್ಧ ಬರೋಬ್ಬರಿ 33,796 ಮತಗಳಿಂದ ಸೋಲುಂಡಿoದ್ಲು. ಅಷ್ಟಕ್ಕೂ ಯಾರೀ ಅಪರ್ಣ ಅನ್ನೋದನ್ನ ನೋಡೋದಾದ್ರೆ

ಅಪರ್ಣಾ ಯಾದವ್ ಹಿನ್ನೆಲೆ

ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ಗೆ ಇಬ್ಬರು ಪತ್ನಿಯರು
ಮೊದಲನೇ ಪತ್ನಿ ಮಗ ಅಖಿಲೇಶ್‌, 2ನೇ ಪತ್ನಿ ಮಗ ಪ್ರತೀಕ್‌
ಮುಲಾಯಂ ಸಿಂಗ್ ಕಿರಿಯ ಮಗ ಪ್ರತೀಕ್‌ ಪತ್ನಿಯೇ ಅಪರ್ಣಾ
ಠಾಕೂರ್‌ ಬಿಶ್ಟ್​ ಸಮುದಾಯದಲ್ಲಿ ಜನನ, 2011ರಲ್ಲಿ ವಿವಾಹ
ಶಾಸ್ತ್ರೀಯ ಸಂಗೀತವನ್ನೂ ಕಲಿತಿರುವ ಅಪರ್ಣಾ ಯಾದವ್
ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್‌ ಆಗಿರುವ ಅಪರ್ಣಾ
ಅಂತಾರಾಷ್ಟ್ರೀಯ ಸಂಬಂಧ ಮತ್ತು ರಾಜಕೀಯದಲ್ಲಿ ಪದವಿ
ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ ವಿವಿಯಿಂದ ಪದವಿ ಸ್ವೀಕಾರ

ಅಪರ್ಣಾ ಯಾದವ್​ರ ಹಿಸ್ಟರಿ ಸಖತ್ ಇಂಟರೆಸ್ಟಿಂಗ್.. ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ ಯಾದವ್​ಗೆ ಇಬ್ಬರು ಪತ್ನಿಯರಿದ್ದಾರೆ. ಅದರಲ್ಲಿ ಮೊದಲನೇ ಪತ್ನಿ ಮಗ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಆಗಿದ್ದಾರೆ, 2ನೇ ಪತ್ನಿ ಸಾಧನಾ ಗುಪ್ತ ಮಗ ಪ್ರತೀಕ್‌ ಯಾದವ್‌ ಆಗಿದ್ದಾರೆ. ಇನ್ನು ಪ್ರತಿಕ್‌ ಯಾದವ್‌ ಮುಲಾಯಂ ಸಿಂಗ್‌ ಕಿರಿಯ ಮಗನಾಗಿದ್ದು, ಪ್ರತೀಕ್‌ ಪತ್ನಿಯೇ ಅಪರ್ಣಾ ಯಾದವ್‌ ಆಗಿದ್ದಾಳೆ. ಅಪರ್ಣಾ ಠಾಕೂರ್‌ ಬಿಶ್ಟ್​ ಸಮುದಾಯದ ಕುರ್ಮಿ ಎಂಬ ಒಳಜಾತಿಗೆ ಸೇರಿದವರಾಗಿದ್ದಾರೆ. ಇನ್ನು, 2011ರಲ್ಲಿ ಅಪರ್ಣಾ, ಪ್ರತೀಕ್‌ ವಿವಾಹವಾಗಿದೆ. ಶಾಸ್ತ್ರೀಯ ಸಂಗೀತವನ್ನೂ ಕಲಿತಿರುವ ಅಪರ್ಣಾ ಪ್ರಾಣಿ ಪ್ರಿಯೆಯಾಗಿ ಸಮಾಜ ಸೇವಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇನ್ನು, ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್‌ ಸ್ಟಾರ್​ ಆಗಿರೋ ಈಕೆ ಅಂತಾರಾಷ್ಟ್ರೀಯ ಸಂಬಂಧ ಮತ್ತು ರಾಜಕೀಯ ವಿಷಯದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದು, ಪದವಿ ಸ್ವೀಕಾರ ಮಾಡಿದ್ದಾರೆ.

ಅಪರ್ಣಾ ಕೇವಲ ಮುಲಾಯಂ ಸಿಂಗ್‌ ಸೊಸೆಯಾಗಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಆಕೆ, ಒಬ್ಬ ಬಹುಮಖ ಪ್ರತಿಭೆ ಹೊಂದಿರೋ ಹಣ್ಣು ಮಗಳು ಅನ್ನೋದು ಸತ್ಯ. ಸಂಗೀತದಲ್ಲಿ, ನೃತ್ಯದಲ್ಲಿಯೂ ಅಪರ್ಣಾ ಎತ್ತಿದ ಕೈಯಾಗಿದ್ದು ಸಮಾಜ ಸೇವೆಯಲ್ಲಿಯೂ ತೊಡಗಿರೋ ಮಹಿಳೆಯಾಗಿದ್ದಾಳೆ.

Download the Newsfirstlive app

ಯೋಗಿ ಸಮುದಾಯಕ್ಕೆ ಸೇರಿದ ಅಪರ್ಣಾ ಯಾದವ್‌
ಯಾದವ ಮತ ಬೇಟೆಗೆ ಬಿಜೆಪಿಯ ಭರ್ಜರಿ ಪ್ಲಾನ್‌

ಮುಲಾಯಂ ಸಿಂಗ್‌ ಯಾದವ್‌ ಕಿರಿಯ ಸೊಸೆ ಬಿಜೆಪಿ ಸೇರ್ಪಡೆಯ ಹಿಂದೆ ಮತ್ತೊಂದು ಬಹುಮುಖ್ಯ ಅಂಶ ಕಂಡು ಬರ್ತಾ ಇದೆ. ಅದೇನಂದ್ರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಯಾವ ಸಮುದಾಯಕ್ಕೆ ಸೇರಿದ್ದಾರೋ ಅಪರ್ಣಾ ಕೂಡ ಅದೇ ಠಾಕೂರ್​ ಬಿಶ್ಟ್​​ ಸಮುದಾಯಕ್ಕೆ ಸೇರಿದ ಕುಟುಂಬದಿಂದ ಬೆಳೆದು ಬಂದವರು.. ಇಲ್ಲೇ ಇರೋದು ನೋಡಿ ರೋಚಕ ಟ್ವಿಸ್ಟ್‌. ಇಲ್ಲಿಯವರೆಗೆ ಬಿಜೆಪಿ ವೋಟ್‌ ಬ್ಯಾಂಕ್‌ಗೆ ಗಾಳಹಾಕುತ್ತಿದ್ದ ಎಸ್‌ಪಿಗೆ ಇದು ಮುಟ್ಟಿನೋಡಿಕೊಳ್ಳುವ ಏಟು ಅಂದಿದ್ದು ಇದಕ್ಕೆ. ಎಸ್‌ಪಿಗೆ ಪ್ರಮುಖ ವೋಟ್‌ ಬ್ಯಾಂಕ್‌ ಅಂದ್ರೆ ಯಾದವ ಮತಗಳು. ಇಲ್ಲಿಯವರೆಗೂ ಯಾದವ ಮತಗಳು ಎಸ್‌ಪಿಯಿಂದ ಚದುರಿ ಹೋಗಿದ್ದ ನಿದರ್ಶನವೇ ಇಲ್ಲ. ಆದ್ರೆ, ಇದೀಗ ಯಾದವ ಮನೆತನದ ಸೊಸೆಯನ್ನ ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ, ಬಿಜೆಪಿ ಭರ್ಜರಿ ಪ್ಲಾನ್​ ಮಾಡಿದ್ದು, ಠಾಕೂರ್ ಬಿಶ್ಟ್ ಸಮುದಾಯದ ಮತ್ತಷ್ಟು ಮತಬೇಟೆಗೂ ಅಪರ್ಣಾರಿಂದ ನೆರವಾಗಲಿದೆ.

ಅಪರ್ಣಾ ಬಿಜೆಪಿ ಸೇರ್ಪಡೆಯಾಗಿದ್ದು ಯಾಕೆ?
ಮುಲಾಯಂಗೆ ವಯಸ್ಸಾಯ್ತು, ಅಖಿಲೇಶ್‌ ಬೆಳೆಯಲು ಬಿಡಲ್ಲ!

ಎಸ್‌ಪಿ ಮೇಲೆ ಅಖಿಲೇಶ್‌ ಸಂಪೂರ್ಣ ಹಿಡಿತ ತೆಗೆದುಕೊಂಡಿದ್ದಾರೆ. ಅಲ್ಲಿ ಮುಲಾಯಂ ಮಾತು ಏನೂ ನಡೆಯೊಲ್ಲ ಎಂಬ ಆರೋಪಗಳು ಅಖಿಲೇಶ್ ಮೇಲೇ ಆಗಾಗ್ಗೇ ಕೇಳಿ ಬರ್ತಿರುತ್ತವೆ. ಟಿಕೆಟ್‌ ಹಂಚಿಕೆಯಿಂದ ಹಿಡಿದು ಪಕ್ಷದ ಪ್ರತಿಯೊಂದು ನಿರ್ಧಾರದಲ್ಲಿಯೂ ಅಖಿಲೇಶ್‌ ಮಾತೇ ಶಾಸನ. ಅದು ಕಳೆದ ಚುನಾವಣೆಯಲ್ಲಿಯೇ ಸಾಬೀತಾಗಿದೆ. ಇದು ಸಹಜವಾಗಿ ಮುಲಾಯಂ ಕುಟುಂಬದಲ್ಲಿ ಬಿರುಕು ಮೂಡಿಸಿದೆ. ಅದನ್ನು ಯೋಚಿಸಿಯೇ ಅಪರ್ಣಾ ಕೇಸರಿ ಪಾಳಯಕ್ಕೆ ಜಂಪ್‌ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿದೆಯಾದರೂ ಅಪರ್ಣಾ ಹೇಳೋದೇ ಬೇರೆ.. ಇನ್ನು, ಇಲ್ಲೇ ಇದ್ದರೆ ಅಖಿಲೇಶ್‌ ತನ್ನನ್ನು ಬೆಳೆಯಲು ಬಿಡಲ್ಲ ಅನ್ನೋದು ಅಪರ್ಣಾರ ಪ್ರಬಲ ನಂಬಿಕೆ. ಹಾಗಂತ, ಅಖಿಲೇಶ್‌ ಕುಟುಂಬ ಒಡೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ 2017ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಖಿಲೇಶ್‌ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಎಸ್‌ಪಿಯಿಂದ ಸಿಡಿದು ಹೋಗಿ ಹೊಸ ಪಕ್ಷ ಸ್ಥಾಪನೆ ಮಾಡಿಕೊಂಡಿದ್ರು. ಹೀಗಾಗಿ ಇದು ಎಸ್‌ಪಿಗೆ ಎರಡನೇ ಆಘಾತ ಅನ್ನೋದ್ರಲ್ಲಿ ಡೌಟೇ ಬೇಡ

ಮುಲಾಯಂ ಸೊಸೆ ಬಿಜೆಪಿ ಸೇರುವ ಮೂಲಕ ಮಾವ ಮುಲಾಯಂ ಸಿಂಗ್‌ಗೆ, ಬಾವಾ ಅಖಿಲೇಶ್‌ ಯಾದವ್‌ಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಆಪರೇಷನ್ ಅಪರ್ಣಾ ಆಗಿದ್ದಾದರೂ ಹೇಗೆ. ಅಪರ್ಣಾ ಬಿಜೆಪಿ ಸೇರ್ಪಡೆಯಿಂದ ಉತ್ತರ ಪ್ರದೇಶದ ಚುನಾವಣೆ ಮೇಲೆ ಆಗೋ ಪರಿಣಾಮವೇನು? ಆ ಎಲ್ಲಾ ಕಂಪ್ಲೀಟ್‌ ವರದಿ ಕೊಡ್ತೀವಿ ಮುಂದಿನ ಸ್ಟೋರಿನಲ್ಲಿ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

by NewsFirst Kannada
March 25, 2023
0

ಅಮೆರಿಕಾದ ಮಿಸಿಸಿಪ್ಪಿ ರಾಜ್ಯ ಅಕ್ಷರಶಃ ತರಗೆಲೆಯಂತೆ ತೂರಿ ಹೋಗಿದೆ. ಭೀಕರ ಸುಂಟರಗಾಳಿಗೆ ಮನೆಗಳು ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಮಿಸಿಸಿಪ್ಪಿ ರಾಜ್ಯದ 160...

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

by veena
March 25, 2023
0

ಜ್ಯೂನಿಯರ್​ ಎನ್​ಟಿಆರ್ 30ನೇ ಚಿತ್ರಕ್ಕಾಗಿ​ ಬ್ಲಡ್​ ಟ್ಯಾಂಕರ್​! ಜ್ಯೂನಿಯರ್​ ಎನ್​ಟಿಆರ್​ ನಟನೆಯ 30ನೇ ಸಿನಿಮಾ ಇತ್ತೀಚೆಗಷ್ಟೇ ಲಾಂಚ್ ಆಗಿತ್ತು. ಸಿನಿಮಾ ಸೆಟ್ಟೇರಿದ ಬೆನ್ನಲ್ಲೇ ಈಗ ಎನ್​ಟಿಆರ್​30ಗೆ ಸಂಬಂಧಿಸಿದ...

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

by Bhimappa
March 25, 2023
0

ಚೆನ್ನೈ ಸೂಪರ್​ ಕಿಂಗ್ಸ್​ ವೇಗಿ ಮುಕೇಶ್ ಚೌಧರಿ ಹಾಗೂ ಲಕ್ನೋ ಸೂಪರ್​ ಜೈಂಟ್ಸ್​ ಆಟಗಾರ ಮೊಯ್ಸಿನ್ ಖಾನ್ ಅವರು ಈ ಬಾರಿಯ IPL ಸೀಸನ್​ನಲ್ಲಿ ಆಡುವುದು ಅನುಮಾನ...

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

by veena
March 25, 2023
0

ಚೆನ್ನೈ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದರು ಎನ್ನಲಾದ ಮಾನನಷ್ಟ ಮೊಕದ್ದಮೆ ಕೇಸ್​​ನಲ್ಲಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​...

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

by veena
March 25, 2023
0

ಲೇಡಿ ಸೂಪರ್​ಸ್ಟಾರ್​ ನಯನತಾರ ಜೊತೆ ಸಿನಿಮಾ ಮಾಡೋದೇ ದೊಡ್ಡ ಚಾಲೆಂಜ್. ಸಿನಿಮಾ ಅಂತ ಹೋದ್ರೆನೇ ಒಂದಿಷ್ಟು ಕಂಡಿಷನ್​ಗಳು ಅಪ್ಲೈ ಆಗುತ್ತಂತೆ. ಇನ್ನು ಈಗ ಮದುವೆ ಬೇರೆ ಆಗಿದ್ದಾರೆ....

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

by NewsFirst Kannada
March 25, 2023
0

ಮುಂದಿನ ವಾರದಿಂದಲೇ 2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲಿದೆ. ಹೀಗಿರುವಾಗ ಈ ಬಾರಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು...

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

by veena
March 25, 2023
0

14 ವರ್ಷ ವನವಾಸ ಮಾಡಿದ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡಿ ಚರಿತ್ರೆಯಲ್ಲಿ ಉಳಿದುಬಿಟ್ಟರು. ಇದೀಗ, ನಮ್ಮ ಸ್ಯಾಂಡಲ್​​ವುಡ್​ ರಾಕಿ ಭಾಯ್​​ ಕೂಡ ಆಲ್​ಮೋಸ್ಟ್​ ಒಂದು ವರ್ಷ...

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

by NewsFirst Kannada
March 25, 2023
0

ದಾವಣಗೆರೆ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ಮಭೂಮಿ ಕಲಬುರಗಿಯಲ್ಲೇ ಇಂದು ಕಮಲ ಅರಳಿದೆ. ಇದು ಬರೀ ವಿಜಯ ಸಂಕಲ್ಪವಲ್ಲ. ವಿಜಯ ಮಹೋತ್ಸವ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ...

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

by NewsFirst Kannada
March 25, 2023
0

ದಾವಣಗೆರೆ: ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಕ್ಸಮರ...

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

by NewsFirst Kannada
March 25, 2023
0

2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲು ಕೆಲವು ದಿನಗಳು ಬಾಕಿಯಿವೆ. ಈ ಬಾರಿ ಹೇಗಾದ್ರೂ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ...

Next Post

'ನಾನು ಸಂಜಯ್​​ ಒಟ್ಟಾಗಿ ಕಾಣಿಸಿಕೊಳ್ಳೋಕೆ ಏನಾದ್ರೂ ಮಾಡಿ ಅಂದ್ರೂ..'- ನೀಲ್​​​ ವಿರುದ್ಧ ರವೀನಾ ಬೇಸರ

ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಸ್ನೇಹಿತರೊಂದಿಗೆ ಫುಲ್​ ಮಸ್ತಿ

Lakshmishree C

Lakshmishree C

LATEST NEWS

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

March 25, 2023

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

March 25, 2023

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

March 25, 2023

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

March 25, 2023

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

March 25, 2023

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

March 25, 2023

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

March 25, 2023

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

March 25, 2023

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

March 25, 2023

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

March 25, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ