Monday, March 27, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಕಮಲಾ ಹ್ಯಾರಿಸ್​​ಗೆ ಸಿಹಿ ಸುದ್ದಿಕೊಟ್ಟ ಜೋ ಬೈಡನ್ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

Share on Facebook Share on Twitter Send Share
January 21, 2022

ಸಿಎಂ ಸಭೆಯತ್ತ ರಾಜ್ಯದ ಜನರ ಚಿತ್ತ
ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ. ಈ ಆದೇಶಕ್ಕೆ ಬಿಜೆಪಿಯ ಅನೇಕ ಶಾಸಕರು, ಸಚಿವರು, ಕೇಂದ್ರ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಮಹತ್ವದ ಕೋವಿಡ್ ನಿಯಂತ್ರಣ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ವೀಕೆಂಡ್ ಕರ್ಪ್ಯೂ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಉದ್ಯಮ ಮತ್ತು ಕಾರ್ಮಿಕ ವಲಯ ಸೇರಿದಂತೆ ವಿವಿಧ ವಲಯಗಳಿಂದ ವೀಕೆಂಡ್ ಕರ್ಪ್ಯೂಗೆ ವಿರೋಧ ವ್ಯಕ್ತವಾಗಿದೆ.

ಗಾಂಜಾ ಡೀಲ್ ಕೇಸ್ ಸಿಸಿಬಿಗೆ ವರ್ಗಾವಣೆ
ಆರ್​.ಟಿ. ನಗರ ಪೊಲೀಸರಿಂದ ಗಾಂಜಾ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಅನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸಿಎಂ ಖಾಸಗಿ ನಿವಾಸದ ಬಳಿ ಭದ್ರತೆಗೆಂದು ನಿಯೋಜಿಸಲಾಗಿದ್ದ ಇಬ್ಬರು ಕಾನ್ಸ್‌ಟೇಬಲ್​ಗಳು ಗಾಂಜಾ ಡೀಲ್ ಮಾಡುತ್ತಿದ್ದರು. ಕೋರಮಂಗಲ ಠಾಣೆಯ ಶಿವಕುಮಾರ್ ಮತ್ತು ಸಂತೋಷ್ ಅವರಿಂದ ಕೃತ್ಯ ಎಸಗಲಾಗಿದ್ದು ಇಬ್ಬರನ್ನು ಆರ್​ಟಿ ನಗರ ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಕೇಸ್ ಅನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.

ಆ್ಯಂಬುಲೆನ್ಸ್​ಗೆ ದಾರಿ ಬಿಡದ ಚಾಲಕ ಅರೆಸ್ಟ್
ಆಂಬ್ಯುಲೆನ್ಸ್​ಗೆ ದಾರಿ ಬಿಡದ ಪ್ರಕರಣ ಸಂಬಂಧ, ಕಾರು ಸಹಿತ ಚಾಲಕ ಮೊನಿಶ್ ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. IPC ಸೆಕ್ಷನ್ 279, ಇಂಡಿಯನ್ ಮೋಟಾರು ವೆಹಿಕಲ್ ಌಕ್ಟ್​ನ ಸೆಕ್ಷನ್ 184ರಡಿ ಪ್ರಕರಣ ದಾಖಲಾಗಿದೆ. ಮಂಗಳೂರಿನಿಂದ ಭಟ್ಕಳಕ್ಕೆ ರೋಗಿ ಕರೆದುಕೊಂಡು ಹೊರಟಿದ್ದ ಆಂಬುಲೆನ್ಸ್ ಗೆ ಮುಲ್ಕಿಯಿಂದ ಉಡುಪಿವರೆಗೆ ದಾರಿ ನೀಡದೆ ಕಾರು ಚಾಲಕ ಮೋನಿಶ್ ಸತಾಯಿಸಿದ್ದ. ಇನ್ನು ಮಣಿಪಾಲದಿಂದ ಮಂಗಳೂರಿಗೆ ಹೊರಟಿದ್ದ ಮತ್ತೊಂದು ಆಂಬುಲೆನ್ಸ್​ಗೂ ಮೋನಿಶ್ ದಾರಿ ಬಿಡಲಿಲ್ಲ. ಹೀಗಾಗಿ ಕಾರು ಚಾಲಕ ಮೊನಿಶ್​ನನ್ನು ಅರೆಸ್ಟ್ ಮಾಡಲಾಗಿದೆ.

ಸರಳತೆ ಮೆರೆದ ಶಾಸಕ ಮಹೇಶ್ ಕುಮಟಳ್ಳಿ
ಬೆಳಗಾವಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಗ್ರಾಮಸ್ಥರ ಬೈಕ್ ಏರಿ ತೋಟದ ವಸತಿ ಪ್ರದೇಶ ಜನರ ಕುಂದು ಕೊರತೆಗಳ ಆಲಿಸಿ ಸರಳತೆ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪ್ರಶಂಸೆ ವ್ಯಕ್ತವಾಗಿದೆ. ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮಕ್ಕೆ ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ, ಗ್ರಾಮದ ಯುವಕನನ್ನು ಕರೆದುಕೊಂಡು ಸಮಸ್ಯೆ ಇದ್ದ ಸ್ಥಳಕ್ಕೆ ಹೋಗಿ, ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದ್ದಾರೆ.

Download the Newsfirstlive app

ನಕಲಿ‌ ರಿಪೋರ್ಟ್ ತೋರಿಸಿದ್ದವರ ಮೇಲೆ ಎಫ್​ಐಆರ್
ಕೇರಳ ಗಡಿಯಲ್ಲಿ ನಕಲಿ‌ ಕೋವಿಡ್ ರಿಪೋರ್ಟ್ ಪತ್ತೆಯಾಗಿ ಕೇರಳ ಮೂಲದ ನಾಲ್ವರ ಮೇಲೆ ಎಫ್​ಐಆರ್ ದಾಖಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಕಲಿ ಕೋವಿಡ್ ರಿಪೋರ್ಟ್ ತೋರಿಸಿ ಪ್ರಯಾಣ ಬೆಳೆಸಿದ್ದರು. ಒಂದೇ ಎಸ್ಆರ್ ಎಫ್ ಐಡಿ ಬಳಸಿ ಮೂರು ನಕಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಪ್ರಿಂಟ್ ಮಾಡಿ ಪ್ರಯಾಣ ಬೆಳೆಸಿದ್ದರು. ಹೀಗಾಗಿ ಕೇರಳದ ಕೋಝಿಕೋಡ್ ನಿವಾಸಿಗಳಾದ ವಿಜಯ್, ಜಯಪ್ರಕಾಶ್,ಸಂತೋಷ್,ವಿಜಯನ್ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಂದು ಶ್ರೀ ಶಿವಕುಮಾರ ಸ್ವಾಮೀಜಿಯ ಪುಣ್ಯ ಸ್ಮರಣೆ
ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ 3ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ದಾಸೋಹ ದಿನ ಆಚರಣೆ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಕೊರೊನಾ 3ನೇ ಅಲೆ ಆತಂಕದ ಹಿನ್ನಲೆಯಲ್ಲಿ ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ಸರಳವಾಗಿ ನಡೆಯಲಿದೆ. ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಪ್ರಚಾರಕ್ಕೆ ಬಂದ ಶಾಸಕನನ್ನ ಬೆನ್ನಟ್ಟಿದ ಗ್ರಾಮಸ್ಥರು
ವಿಧಾನಸಭಾ ಚುನಾವಣೆಗೆ ಸಜ್ಜಾದ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು ಬೆನ್ನಟ್ಟಿದ್ದಾರೆ. ಹೀಗಾಗಿ ಪ್ರಚಾರ ನಡೆಸದೆ ಶಾಸಕ ವಾಪಸ್ಸಾಗಿದ್ದಾರೆ.ಪ್ರಚಾರಕ್ಕಾಗಿ ಬಿಜೆಪಿ ಶಾಸಕ ವಿಕ್ರಮ್ ಸೈನಿ ಮುನ್ವಾರ್‌ಪುರ್ ಗ್ರಾಮಕ್ಕೆ ತೆರಳಿದ್ದರು. ಸೈನಿ ಅವರು ಗ್ರಾಮ ಪ್ರವೇಶಿಸುವುದನ್ನು ಗ್ರಾಮಸ್ಥರು ತಡೆದಿದ್ದಾರೆ. ವಾಪಸ್ ತೆರಳುವಂತೆ ಸೈನಿ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಗ್ರಾಮಸ್ಥರ ಪ್ರತಿರೋಧ ಎದುರಿಸಿದ ಶಾಸಕರು, ಬೇರೆ ಆಯ್ಕೆಯಿಲ್ಲದೇ ಕಾರು ಹತ್ತಿ ವಾಪಸ್ ತೆರಳಿದ್ದಾರೆ.

ಲಾಹೋರ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ
ಪಾಕಿಸ್ತಾನದ ಲಾಹೋರ್‌ನಲ್ಲಿನ ಅನಾರ್ಕಲಿ ಮಾರುಕಟ್ಟೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಮೋಟಾರ್ ಸೈಕಲ್ ಒಂದರಲ್ಲಿ ಬಾಂಬ್ ಅಳವಡಿಸಿ ಸ್ಫೋಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇನ್ನು ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ. ಮೋಟಾರ್ ಬೈಕ್‌ನಲ್ಲಿ ಇರಿಸಿದ್ದ ಬಾಂಬ್ ಉಪಕರಣವು ಸ್ಫೋಟಕ್ಕೆ ಕಾರಣವಾಗಿದೆ ಎನ್ನುವುದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ ಎಂದು ಲಾಹೋರ್ ಪೊಲೀಸ್ ವಕ್ತಾರ ರಾಣಾ ಆರಿಫ್ ತಿಳಿಸಿದ್ದಾರೆ.

‘ಕಮಲಾ ಹ್ಯಾರಿಸ್ ನನ್ನ ಉತ್ತರಾಧಿಕಾರಿ’
2024ನೇ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಕಮಲಾ ಹ್ಯಾರಿಸ್ ತಮ್ಮ ಉತ್ತರಾಧಿಕಾರಿ ಎಂದು ಜೋ ಬೈಡನ್ ಘೋಷಿಸಿದ್ದಾರೆ. ಯುಎಸ್ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣವಾಗಿದೆ. ಅಧಿಕಾರದ ಮೊದಲ ವರ್ಷವನ್ನು ಸ್ಮರಿಸುತ್ತಾ, ಬೈಡನ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ 2024 ರಲ್ಲಿ ತಮ್ಮ ಉತ್ತರಾಧಿಕಾರಿಗಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ 2024 ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.

ರಾಹುಲ್ ನಾಯಕತ್ವದ ಎರಡನೇ ಪರೀಕ್ಷೆ
ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡಬೇಕಾದ ಒತ್ತಡದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿತ್ತು. ಇದೀಗ ಮೂರು ಪಂದ್ಯಗಳ ಸರಣಿ ಗೆಲುವಿನ ಕನಸು ಜೀವಂತವಾಗುಳಿಯಬೇಕಾದರೆ ಇಂದು ನಡೆಯುವ ಎರಡನೇ ಪಂದ್ಯದಲ್ಲಿ ತಂಡವು ಜಯಿಸಲೇಬೇಕಾದ ಒತ್ತಡದಲ್ಲಿದೆ. ರಾಹುಲ್ ನಾಯಕತ್ವದ ಮೊದಲ ಸರಣಿ ಇದಾಗಿದೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

by veena
March 27, 2023
0

ಕನ್ನಡದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕವನ್ನು ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ಹಲವು...

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

by veena
March 27, 2023
0

ಸತತ 22 ಗಂಟೆ, 45 ಪೊಲೀಸರ ತಂಡ, 1,300 ಕಿಲೋ ಮೀಟರ್​ನಷ್ಟು ಪ್ರಯಾಣ. ಇದು ಯಾವ ಸಿನಿಮಾದ ಶೂಟಿಂಗ್ ಕಥೆ​​ ಅಲ್ಲ. ಬದಲಿಗೆ ಗ್ಯಾಂಗ್​ಸ್ಟರ್, ರಾಜಕಾರಣಿಯಾಗಿದ್ದ ಅತೀಕ್...

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

by NewsFirst Kannada
March 27, 2023
0

ಟೀಂ ಇಂಡಿಯಾದ ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ. ಇವರ ಸ್ಥಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಮುಂಜಾಗ್ರತಾ ಕ್ರಮವಾಗಿ ಬಿಸಿಸಿಐ ಸಂಜು...

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

by veena
March 27, 2023
0

ಬಾಗಲಕೋಟೆ: ಪ್ರೀತಿಸಿದ ಹುಡುಗಿಗೆ ಮದುವೆ ನಿಶ್ಚಯ ಆಗಿದ್ದಕ್ಕೆ ಮನನೊಂದ ಪ್ರಿಯಕರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಗುಡೂರು ಗ್ರಾಮದಲ್ಲಿ ನಡೆದಿದೆ. ಅಫ್ಜಲ್ ಸೊಲ್ಲಾಪುರ (27), ನೇತ್ರಾವತಿ...

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

by veena
March 27, 2023
0

ಗಿಳಿ ಎಂದ ಕೂಡಲೇ ಥಟ್​​ ಅಂತ ನೆನಪಾಗೋದು ಅದರ ಮೇಲೆ ಇರುವ ಹಸಿರು ಬಣ್ಣ ಹಾಗೂ ಕೆಂಪು ಮೂಗು. ಗಿಳಿಯನ್ನು ನೋಡುವುದೇ ಚಂದ. ಅದೇ ಗಿಳಿಯು ಮನುಷ್ಯರ...

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

by NewsFirst Kannada
March 27, 2023
0

ಬೆಂಗಳೂರು: ತುಮಕೂರು ಕ್ಯಾತಸಂದ್ರದ ಟೋಲ್​ ಬಳಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಅರೆಸ್ಟ್​ ಮಾಡಲಾಗಿದೆ. ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿಗೆ ಬರುತ್ತಿದ್ದಾಗ ಮಾಡಾಳ್‌ ಅವರನ್ನು ಬಂಧಿಸಿದ್ದಾರೆ....

ತಿರುಪತಿಗೆ ಬಂದ 26 ಕೋಟಿ ದೇಣಿಗೆ ತಡೆದ ಮೋದಿ ಸರ್ಕಾರ; ತಿಮ್ಮಪ್ಪನಿಗಾದ ಅವಮಾನ ಎಂದ ಕಾಂಗ್ರೆಸ್

by NewsFirst Kannada
March 27, 2023
0

ತಿರುಮಲ ತಿರುಪತಿ ದೇವಸ್ಥಾನ ಸದಾ ಭಕ್ತರಿಂದ ತುಂಬಿ ತುಳುಕುತ್ತಾ ಇರುತ್ತೆ. ಭಕ್ತಸಾಗರದ ಜೊತೆಗೆ ತಿಮ್ಮಪ್ಪನ ಹುಂಡಿಯೂ ಅಷ್ಟೇ ತುಂಬುತ್ತಲೇ ಇರುತ್ತದೆ. ಕೋಟ್ಯಾಂತರ ಭಕ್ತರ ಆರಾಧ್ಯದೈವ ಬಾಲಾಜಿಗೆ ದೇಶ,...

ಕೈಕೊಟ್ಟ ಶ್ರೇಯಸ್​ ಅಯ್ಯರ್​; ನರೈನ್​​ ಅಲ್ಲ, ಭಾರತದ ಈ ಯಂಗ್ ಬ್ಯಾಟ್ಸ್​ಮನ್​​ ​KKR ತಂಡದ ಕ್ಯಾಪ್ಟನ್​​

by NewsFirst Kannada
March 27, 2023
0

ಇತ್ತೀಚೆಗೆ ನಡೆದ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೇ ಟೆಸ್ಟ್​ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್​​ ಗಾಯಗೊಂಡಿದ್ದರು. ಹೀಗಾಗಿ ನಂತರ ನಡೆದ ಏಕದಿನ ಸರಣಿಯಿಂದಲೂ ಶ್ರೇಯಸ್​...

ಫ್ಯಾನ್ಸ್​ಗೆ ಸಡನ್​ ಸರ್ಪ್ರೈಸ್​; ಸಿನಿಮಾಗಾಗಿ ಮತ್ತೆ ಒಂದಾದ ಶಿವಣ್ಣ, ಮೋಹಕ ತಾರೆ ರಮ್ಯಾ!

by veena
March 27, 2023
0

ಮೋಹಕತಾರೆ, ಸ್ಯಾಂಡಲ್​ವುಡ್ ಕ್ವೀನ್​​ ರಮ್ಯಾ ಕಂಬ್ಯಾಕ್​ಗಾಗಿ ಕೋಟ್ಯಾಂತರ ಮನ ಕಾದು ಕುಂತಿದೆ. ಡಾಲಿ ಜೊತೆ ಉತ್ತರಾಕಾಂಡ ಅಂತ ಕಂಬ್ಯಾಕ್ ಸಿನಿಮಾನೂ ಅನೌನ್ಸ್ ಆಗಿದೆ. ಇದೀಗ, ಸರ್ಪ್ರೈಸ್​ ಏನಪ್ಪಾ...

ಒಳ ಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಉದ್ವಿಗ್ನ; BSY ಮನೆಗೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

by NewsFirst Kannada
March 27, 2023
0

ಶಿವಮೊಗ್ಗ: ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ವರ್ಗೀಕರಣ ರಾಜ್ಯದಲ್ಲಿ ಅತಿ ದೊಡ್ಡ ಕೋಲಾಹಲ ಸೃಷ್ಟಿಸಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ತೀವ್ರ ಆಕ್ರೋಶ...

Next Post

ಕೊರೊನಾ ಜೊತೆ ಸರಸ ಸಾವಿನೊಂದಿಗೆ ಅಂತ್ಯ.. ಉದ್ಧಟತನಕ್ಕೆ ಪ್ರಾಣವನ್ನೇ ತೆಗೆದುಕೊಂಡ ಗಾಯಕಿ!

IND vs SA: ಇಂದು ರಾಹುಲ್ ನಾಯಕತ್ವಕ್ಕೆ ಎರಡನೇ ‘ಅಗ್ನಿ ಪರೀಕ್ಷೆ’

NewsFirst Kannada

NewsFirst Kannada

LATEST NEWS

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

March 27, 2023

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

March 27, 2023

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

March 27, 2023

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

March 27, 2023

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

March 27, 2023

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

March 27, 2023

ತಿರುಪತಿಗೆ ಬಂದ 26 ಕೋಟಿ ದೇಣಿಗೆ ತಡೆದ ಮೋದಿ ಸರ್ಕಾರ; ತಿಮ್ಮಪ್ಪನಿಗಾದ ಅವಮಾನ ಎಂದ ಕಾಂಗ್ರೆಸ್

March 27, 2023

ಕೈಕೊಟ್ಟ ಶ್ರೇಯಸ್​ ಅಯ್ಯರ್​; ನರೈನ್​​ ಅಲ್ಲ, ಭಾರತದ ಈ ಯಂಗ್ ಬ್ಯಾಟ್ಸ್​ಮನ್​​ ​KKR ತಂಡದ ಕ್ಯಾಪ್ಟನ್​​

March 27, 2023

ಫ್ಯಾನ್ಸ್​ಗೆ ಸಡನ್​ ಸರ್ಪ್ರೈಸ್​; ಸಿನಿಮಾಗಾಗಿ ಮತ್ತೆ ಒಂದಾದ ಶಿವಣ್ಣ, ಮೋಹಕ ತಾರೆ ರಮ್ಯಾ!

March 27, 2023

ಒಳ ಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಉದ್ವಿಗ್ನ; BSY ಮನೆಗೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

March 27, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ