ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧದ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್, ಮಂಡ್ಯ ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತಂತೆ ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ ನಲಪಾಡ್, ನನ್ನ ವಿರುದ್ಧ ವಿದ್ವತ್ ಪ್ರಕರಣ ಪ್ರಸ್ತಾಪ ಏನ್ ಹೊಸದಾ? ಪ್ರತಿ ಬಾರಿ ನನ್ನ ವಿರುದ್ಧ ಇದನ್ನ ಬಳಕೆ ಮಾಡ್ತಾರೆ. ಯಾರು ಏನೇ ಮಾಡಿದ್ರೂ ನಮ್ಮ ನಾಯಕರ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲ್ಲ. ನಟಿ ರಮ್ಯಾ ಮೊದಲು ಟ್ವಿಟರ್, ಫೇಸ್ಬುಕ್ ಬಿಟ್ಟು ಸುಮ್ಮನಿರಲಿ. ಸೋಷಿಯಲ್ ಮೀಡಿಯಾದಿಂದ ಹೊರ ಬನ್ನಿ. ರಮ್ಯಾರನ್ನ ರಾಜಕಾರಣಕ್ಕೆ ತಂದಿದ್ದು ಯಾರು ಅಂತ ಎಲ್ಲರಿಗೂ ಗೊತ್ತು..
ರಮ್ಯಾ ನನ್ಗೆ ಹೊಡಿತಾರ ಹೊಡಿಲಿ ಬೈತಾರ ಬೈಲಿ..
ರಮ್ಯಾ ಅವರು ಸಾಮಾಜಿಕ ಜಾಲತಾಣ ಬಿಡಬೇಕು. ಸಾಮಾಜಿಕ ಜಾಲತಾಣದಲ್ಲಿ ನಮ್ಮ ನಾಯಕರ ಬಗ್ಗೆ ಮಾತನಾಡಬಾರದು. ನಮ್ಮಿಂದ ತಪ್ಪಾಗಿದ್ದರೇ ನನ್ನ ನಂಬರ್ ತೆಗೆದುಕೊಂಡು ಕರೆ ಮಾಡಿ ಬೈರೀ.. ಹೊಡೆಯುತ್ತೀರಿ ಅಂದರೇ ಹೊಡೆಯಿರಿ.. ನಾವು ಹೊಡೆಸಿಕೊಳ್ಳುತ್ತೇವೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ನಮ್ ನಾಯಕರ ಬಗ್ಗೆ ಮಾತನಾಡಬೇಡಿ ಎಂದು ನಲಪಾಡ್ ಎಚ್ಚರಿಕೆ ನೀಡಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post