ಬೆಳಗಾವಿ: ರಾಯಣ್ಣ ಮೂರ್ತಿಗೆ ಕಲ್ಲು ತೂರಾಟ ಪ್ರಕರಣ ಸಂಬಂಧ, ಆರೋಪಿಗಳ ಬೆನ್ನುಬಿದ್ದ ಬೆಳಗಾವಿ ಪೊಲೀಸರಿಗೆ ಶಾಕ್ ಆಗಿದೆ. ದೂರು ಕೊಟ್ಟಿರುವವನೇ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಕಲ್ಲು ಹೊಡೆದಿರುವುದು ಬೆಳಕಿಗೆ ಬಂದಿದೆ.
ಬೆಳಗಾವಿ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ಮೇ 21ರಂದು ರಾಯಣ್ಣ ಮೂರ್ತಿಗೆ ಕಲ್ಲೆಸೆದು ವಿರೂಪ ಗೊಳಿಸಲಾಗಿತ್ತು. ಈ ಬಗ್ಗೆ ಚಂದ್ರಪ್ಪ ಕಣಬರಗಿ ಎಂಬಾತ ದೂರು ದಾಖಲು ಮಾಡಿದ್ರು. ಆದರೆ ತನಿಖೆ ವೇಳೆ ಆತನೇ ಈ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಸದ್ಯ, ಬೆಳಗಾವಿ ಪೊಲೀಸರು ಚಂದ್ರಪ್ಪ ಕಣಬರಗಿ ಸೇರಿದಂತೆ ನಾಲ್ವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ರಾಯಣ್ಣನ ಮೂರ್ತಿಯ ಕಾಲಿನ ಭಾಗದಲ್ಲಿ ಹಾನಿಯಾಗಿತ್ತು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post