ಬೆಂಗಳೂರು: ಪ್ರಧಾನಿ ಮೋದಿ ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಉತ್ತರ ಹೇಳಿ ಮೋದಿ ಎಂದು ಸರಣಿ ಟ್ವೀಟ್ ಮಾಡಿ ಪ್ರಶ್ನಿಸಿದ್ದರು. ಇದಕ್ಕೀಗ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಸತ್ಯ ಮತ್ತು ಸಿದ್ದರಾಮಯ್ಯ ಎಣ್ಣೆ-ಸಿಗೇಕಾಯಿ ಇದ್ದಂತೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಸಹ ಕಿಡಿಕಾರಿದ್ದು ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಆಗೋದಿಕ್ಕೆ ಕಾಂಗ್ರೆಸ್ ಕಾರಣ. ಅವರು ಅಧಿಕಾರದಲ್ಲಿದ್ದಾಗ ಆಕ್ಸಿಜನ್ ಪ್ಲಾಂಟ್ ಮಾಡ್ಲಿಲ್ಲ. ವೆಂಟಿಲೇಟರ್ಗಳು, ವೈದ್ಯರು, ದಾದಿಯರು ಇರಲಿಲ್ಲ. 60 ವರ್ಷದಲ್ಲಿ ಇದೆಲ್ಲವನ್ನು ಕೊಡಕ್ಕಾಗದ ಕಾಂಗ್ರೆಸ್ನ ಹೇಡಿ ನಾಯಕ ಸಿದ್ದರಾಮಯ್ಯ. ಹೀಗೆ ಮಾತಾಡಿದ್ರೆ ಅವರಿಗೆ ಜನ ಮೂರ್ಖ ಅಂತಾರೆ ಎಂದು ಕಟೀಲ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post