ಬೆಂಗಳೂರು: ಗೋವಾದ ಬೀಚ್ನಲ್ಲಿ ಸೊಮರ್ ಸಾಲ್ಟ್ ಮಾಡಲು ಹೋಗಿ ಸ್ಟಾರ್ ನಟ ದಿಗಂತ್ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿ ಅವರನ್ನ ಗೋವಾದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿರ್ದೇಶಕ ಯೋಗರಾಜ್ ಭಟ್ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ದಿಗಂತ್ರ ಆರೋಗ್ಯವನ್ನ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆ ಯೋಗರಾಜ್ ಭಟ್.. ದಿಗಂತ್ ಹಾಗೂ ಐಂದ್ರಿತಾ ತಂದೆ ಜೊತೆ ಮಾತನಾಡಿದ್ದೇನೆ. ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ಅಭಿಮಾನಿಗಳಿಗೆ ಅಭಯ ನೀಡಿದ್ದಾರೆ.
ಮೂರು ಗಂಟೆಯಲ್ಲಿ ವ್ಯೆದ್ಯರು ಆಪರೇಷನ್ ಮಾಡಲಿದ್ದಾರೆ. ದೊಡ್ಡ ಆಘಾತಕಾರಿ ವಿಚಾರ ಏನೂ ಇಲ್ಲ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿದ್ದಾನೆ. ಆಗಿರೋದು ಸಣ್ಣ ಗಾಯ ಅಷ್ಟೇ ಎಂದು ಯೋಗರಾಜ್ ಭಟ್ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post