ಕೊಪ್ಪಳ: ಸೇತುವೆ ಮೇಲೆ ಸೈಕಲ್ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಾಲಕನೋರ್ವ ಹಳ್ಳಕ್ಕೆ ಬಿದ್ದು ಮೃತಪಟ್ಟಿರೋ ಘಟನೆ ಕಾರಟಗಿಯ ಈಳಿಗನೂರು ಗ್ರಾಮದಲ್ಲಿ ನಡೆದಿದೆ. ನಂದ ಬಡಿಗೇರ್ (13) ಮೃತ ಬಾಲಕ.
ಮೃತಬಾಲಕ ನಂದ ಬಡಿಗೇರ್ ಈಳಿಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಜೊತೆಗೆ ವಾಲಿಬಾಲ್ ಚಾಂಪಿಯನ್, ಕರಾಟೆ ಪಟು ಹಾಗೂ ಓದಿನಲ್ಲೂ ನಿಪುಣನಾಗಿದ್ದ. ಅದೇ ಗ್ರಾಮದ ಎಸ್ಡಿಎಂ ಅಧ್ಯಕ್ಷ ಬಸವರಾಜ ಎಂಬುವವರ ಪುತ್ರನಾಗಿದ್ದ ಎಂದು ತಿಳಿದುಬಂದಿದೆ.
ನಿನ್ನೆ ತನ್ನ ದೊಡ್ಡಪ್ಪನ ಸೈಕಲ್ ಅನ್ನು ತೆಗೆದುಕೊಂಡು ಈಳಿಗನೂರು ಹಾಗೂ ಯರಡೋಣ ಗ್ರಾಮಗಳ ಹಳ್ಳದ ಸಂಪರ್ಕ ಸೇತುವೆ ಮೇಲೆ ಹೋಗುವಾಗ ಸೈಕಲ್ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ನೀರಿನ ರಭಸಕ್ಕೆ ಸೇತುವೆ ಕೆಳಗಡೆ ಇರುವ ಪೈಪ್ನಲ್ಲಿ ಬಾಲಕ ಸಿಲುಕಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post