ವಿಜಯಪುರ: ಒಂದೇ ಕುಟುಂಬದ ಒಂಬತ್ತು ಜನ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಪ್ರಭಾವಿ ಸಚಿವರ ವಿರುದ್ಧ ಈ ಕುಟುಂಬ ಕಿರುಕುಳ ಆರೋಪ ಮಾಡಿದೆ. ಇಂದು ಹೊಸಪೇಟೆಯ ಎಸ್ಪಿ ಕಚೇರಿ ಮುಂದೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೊಸಪೇಟೆಯ ವಾರ್ಡ್ ನಂಬರ್ 6ರ ನಿವಾಸಿಗಳಾದ ದನಸೂರಿ ಪೋಲಪ್ಪ ಕುಟುಂಬಸ್ಥರು ನ್ಯಾಯಕ್ಕಾಗಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಜಾಗ ಒತ್ತುವರಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ದನಸೂರಿ ಪೋಲಪ್ಪ ಕುಟುಂಬಸ್ಥರಿಗೆ ಸ್ಥಳೀಯ ಸಚಿವರೊಬ್ಬರು ಧಮ್ಕಿ ಹಾಕಿದ್ದರಂತೆ. ಈ ಹಿನ್ನೆಲೆಯಲ್ಲಿ ನೊಂದ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post