ಚಿತ್ರದುರ್ಗ: ಹಳ್ಳದಲ್ಲಿ ಮೀನು ಹಿಡಿಯುವಾಗ ಜಾರಿ ಬಿದ್ದು ಇಬ್ಬರು ನೀರುಪಾಲಾದ ಘಟನೆ ಚಿತ್ರದುರ್ಗದ ಸುಗೂರು ಗ್ರಾಮದ ಬಳಿ ನಡೆದಿದೆ. ಕುರಿದಾಸನಹಟ್ಟಿ ಮೂಲದ ಲೋಕೇಶ್ (38), ತಿರುಮಲ (25) ಎಂಬುವರು ನೀರುಪಾಲಾದ ಯುವಕರು.
ಭಾರೀ ಮಳೆಯಿಂದಾಗಿ ಧರ್ಮಪುರ ಕೆರೆ ಕೋಡಿ ಬಿದ್ದು ಹರಿಯುತ್ತಿದೆ. ಹೀಗಾಗಿ ಸುಗೂರು ಸಮೀಪದ ಹಳ್ಳದಲ್ಲಿ ಮೀನು ಹಿಡಿಯಲು ಹೋದಾಗ ಇಬ್ಬರು ಯುವಕರು ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದಾರೆ.
ಮೊದಲು ಲೋಕೇಶ್ ನೀರುಪಾಲು ಆಗಿದ್ದ. ಲೋಕೇಶ್ನನ್ನು ರಕ್ಷಿಸಲು ತಿರುಮಲ ನೀರಿಗೆ ಹಾರಿದ್ದ. ಇಬ್ಬರು ಕೊನೆಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ಯುವಕರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post