ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮರಾಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಾಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶುಭಕೃತು ನಾಮಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ, ಕೃಷ್ಣಪಕ್ಷ, ದಶಮಿ ತಿಥಿ, ಉತ್ತರಾ ನಕ್ಷತ್ರ, ವಿಷ್ಕಂಭನಾಮಯೋಗ, ಭದ್ರಾಕರಣ ರಾಹುಕಾಲ- ಶನಿವಾರ ಬೆಳಗ್ಗೆ 9 ರಿಂದ 10.30 ರವರೆಗೆ ಇರಲಿದೆ.
ಮೇಷ :
- ನೌಕರಿಯ ದೃಷ್ಟಿಯಿಂದ ದೂರ ಪ್ರಯಾಣದ ಸೂಚನೆಗಳಿವೆ
- ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಸಾಲದ ಅವಶ್ಯಕತೆ ಕಾಣಬಹುದು
- ಉನ್ನತವಾದ ಅಧಿಕಾರಿಗಳ ಸಂಬಂಧ ಈ ಸಂದರ್ಭದಲ್ಲಿ ಏರ್ಪಾಟಾಗುತ್ತದೆ
- ಮಾನಸಿಕವಾಗಿ ತುಂಬಾ ಒತ್ತಡ ಹಾಗೂ ಕಿರಿಕಿರಿ ಇರುವ ದಿನ
- ಮನಸ್ಸು ತುಂಬಾ ಗಾಸಿಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ
- ತುಂಬಾ ಆಲೋಚನೆಗಳನ್ನು ಮಾಡುವ ದಿನವಾಗಿರುತ್ತದೆ
- ಸಾಲಿಗ್ರಾಮ ಮಹಾವಿಷ್ಣುವನ್ನು ಧ್ಯಾನಿಸಿ
ವೃಷಭ :
- ಮನೆಯಲ್ಲಿ ಉತ್ತಮವಾದ ವಾತಾವರಣ
- ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ
- ಇದರಿಂದ ಮನಸ್ಸಿಗೆ ಬೇಸರ ಹಾಗೂ ನೋವಾಗುವ ಸಾಧ್ಯತೆ ಹೆಚ್ಚು
- ಮನೆಯ ಹೊರಗೆ ಹಾಗೂ ನೌಕರಿಯ ಸ್ಥಳದಲ್ಲಿ ಉಹಾಪೋಹಗಳಿರಬಹುದು
- ಮನೆಯಲ್ಲಿ ಎಲ್ಲರ ವಿಶ್ವಾಸ, ಪ್ರೀತಿ, ನಂಬಿಕೆಗಳಿಗೆ ಬದ್ಧರಾಗಿರುತ್ತೀರಿ
- ಕೆಲವೇ ಕೆಲವರು ಮಾತ್ರ ನಿಮ್ಮಿಂದ ಸ್ಫೂರ್ತಿ ಪಡೆಯಬಹುದು
- ವಿದ್ಯಾರ್ಥಿಗಳು ದುಂದುವೆಚ್ಚ,ಕಾಲಾಹರಣವನ್ನು ಮಾಡಬಹುದು
- ಕುಲದೇವರನ್ನು ಪ್ರಾರ್ಥಿಸಿ
ಮಿಥುನ :
- ಹೊಸದಾಗಿ ಯಾವುದೇ ರೀತಿಯ ವ್ಯವಹಾರ ಮಾಡಲು ಇಂದು ಶುಭದಿನವಲ್ಲ
- ವ್ಯಾಪಾರ-ವ್ಯವಹಾರದಲ್ಲಿ ಜಾಗ್ರತೆಯಿಂದ ಹಣವನ್ನು ಹೂಡಿಕೆ ಮಾಡಿ
- ನಿಮ್ಮ ವ್ಯವಹಾರ,ವ್ಯಾಪಾರ,ವೃತ್ತಿಯಲ್ಲಿ ಸಭ್ಯರಾಗಿರಬೇಕು
- ಅಸಭ್ಯವಾಗಿ ವರ್ತನೆ ಮಾಡಿದರೆ ಅವಮಾನ ಅಥವಾ ಶಿಕ್ಷೆಗೆ ಒಳಗಾಗುತ್ತೀರಿ
- ಹಣದ ಚಿಂತೆ ಕಾಡಬಹುದು ಆದರೆ ತೊಂದರೆಯಾಗದೆ ಹಣ ಸಿಗುವ ಅವಕಾಶ
- ಹಳೆಯ ಕಹಿ ನೆನಪುಗಳು ನಿಮ್ಮನ್ನು ಕಾಡಬಹುದು
- ತಾವು ಜೀವನದಲ್ಲಿ ನಡೆದು ಬಂದ ಹಾದಿ ನೆನಪಿಗೆ ಬರುತ್ತದೆ
- ಇಷ್ಟ ದೇವತಾ ಧ್ಯಾನ ಮಾಡಿ
ಕಟಕ :
- ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬಹುದು
- ಕಾನೂನು ವಿದ್ಯಾರ್ಥಿಗಳು ತಮ್ಮ ಹಿರಿಯ ವಿದ್ಯಾರ್ಥಿಗಳಿಂದ ಅನುಕೂಲವಾಗುವಂತಹ
- ವಿಚಾರಗಳನ್ನು ಚರ್ಚಿಸಿ ವಿಷಯ ಸಂಪಾದಿಸಲು ಅವಕಾಶವಿದೆ
- ಹಿರಿಯರು ಕೂಡ ಮಾರ್ಗದರ್ಶನ ಮಾಡುವ ಸಾಧ್ಯತೆ
- ವಕೀಲರಿಗೆ ಶುಭದಿನ, ಲಾಭವೂ ದೊರೆಯುವಂತ ದಿನ
- ಕಬ್ಬಿಣ ವ್ಯಾಪಾರ ಮಾಡುವವರಿಗೆ ಲಾಭವಿದ್ರೂ ಕೂಡ ದಂಡ ಕಟ್ಟಬೇಕಾಗಬಹುದು
- ಹಣ ಹೂಡಿಕೆ ಮತ್ತು ಹೆಚ್ಚು ಹಣ ಖರ್ಚು ಮಾಡುವ ಕೆಲಸವನ್ನು ಆರಂಭಿಸಲು ಶುಭದಿನವಲ್ಲ
- ಶನೇಶ್ವರನನ್ನು ದರ್ಶನ ಮಾಡಿ, ಎಳ್ಳೆಣ್ಣೆ ದಾನ ಮಾಡಿ
ಸಿಂಹ :
- ಮನೆಯಲ್ಲಿ ಏನೋ ಸಂತಸದ ವಾತಾವರಣವಿರುತ್ತದೆ
- ಮನೆಯಲ್ಲಿ ಎಲ್ಲರೂ ಉತ್ಸಾಹ ಭರಿತರಾಗಿರುತ್ತಾರೆ
- ಕಮಿಷನ್ ಏಜೆಂಟ್ಸ್ಗಳಿಗೆ ಶುಭ ಮತ್ತು ಲಾಭದಾಯಕವಾಗುವ ದಿನ
- ಕುಟುಂಬ ಮತ್ತು ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು
- ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರಗಳಿಗೊ ಅಥವಾ ವಿದೇಶಗಳಿಗೊ ಹೋಗುವವರಿಗೆ ಅನುಕೂಲದ ದಿನ
- ನಿವೃತ್ತರಾದ ಸರ್ಕಾರಿ ನೌಕರರಿಗೆ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ
- ಬೆನ್ನು ನೋವಿನ ಸಮಸ್ಯೆಯಿಂದ ನೀವು ಬಳಲಬಹುದು
- ವಿಘ್ನೇಶ್ವರನನ್ನು ಪ್ರಾರ್ಥಿಸಿ
ಕನ್ಯಾ :
- ಕಲಾಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಉತ್ತಮ ಸ್ಥಾನಮಾನಗಳು ದೊರೆಯಲಿದೆ
- ಹಿಂದೆ ಹೂಡಿಕೆ ಮಾಡಿದ್ದ ಹಣ ಈ ದಿನ ಲಾಭವನ್ನು ನೀಡುವ ಸೂಚನೆಯಿದೆ
- ವಾಹನ ಖರೀದಿಯ ಆಲೋಚನೆ ಬರಬಹುದು, ವಾಹನವನ್ನು ಖರೀದಿಸಬಹುದು
- ಸಣ್ಣ ಪುಟ್ಟ ಆಸ್ತಿಯ ವಿಚಾರಕ್ಕೆ ಮನಸ್ತಾಪ ಉಂಟಾಗುವ ಸಾಧ್ಯತೆ
- ಮಾನಸಿಕ ಕಿರಿಕಿರಿ,ಹಣದ ತೊಂದರೆ,ಬೇಸರ,ಸಂಬಂಧದಲ್ಲಿ ಒಡಕು ಉಂಟಾಗಬಹುದು
- ಆದ್ದರಿಂದ ಈ ಸಮಸ್ಯೆಯನ್ನು ಮಾತಿನಲ್ಲಿ ಬಗೆಹರಿಸಿದರೆ ಒಳ್ಳೆಯದು
- ಮನೆಯಲ್ಲಿ ಶಾಂತಿಯ ವಾತಾವರಣ ಕದಡಿ ಹೋಗಿ ಆತಂಕ ಉಂಟಾಗುತ್ತದೆ
- ಸುಖವಿದ್ದರೂ ಅನುಭವಿಸಲು ಯೋಗವಿಲ್ಲ ಎಂದು ಹೇಳಬೇಕಾದ ದಿನ
- ಅಶಕ್ತರಿಗೆ-ರೋಗಿಗಳಿಗೆ ಹಣ್ಣುಗಳನ್ನು ಕೊಡಿ
ತುಲಾ :
- ಭಾವನಾತ್ಮಕ ಸಂಬಂಧ ಹೊಂದಿರುವವರಿಗೆ ಆಘಾತವಾಗಬಹುದು
- ಪ್ರಯಾಣವು ತುಂಬಾ ಆಯಾಸವನ್ನುಂಟು ಮಾಡುತ್ತದೆ
- ಶತ್ರುಗಳ ಆಕ್ರಮಣದ ಸೂಚನೆಯಿದೆ ತಾಳ್ಮೆಯಿರಲಿ
- ನೀವು ಆಡುವ ಮಾತು ನಿಮಗೆ ತೊಂದರೆಯನ್ನು ಮಾಡಬಹುದು
- ಹಿರಿಯರ ಮತ್ತು ಸಂಗಾತಿಯ ಮಾತಿಗೆ ಬೆಲೆ ಕೊಡಬೇಕಾಗುತ್ತದೆ
- ಉದ್ಧಟತನದಿಂದ ಮಾತನ್ನು ತಿರಸ್ಕಾರ ಮಾಡಿದರೆ ತೊಂದರೆಯಾಗಬಹುದು
- ಇದೇ ಮಾತು ನಿಮಗೆ ಪರಿಹಾರ ಮಾರ್ಗ ಕೂಡ ಆಗಬಹುದು
- ದೂರದಿಂದ ಅಶುಭ ವಾರ್ತೆಯಿಂದ ಮನಸ್ಸಿಗೆ ನೋವುಂಟಾಗಬಹುದು
- ದೇವರನ್ನು ದೂಷಿಸುವ ಸ್ಥಿತಿಗೆ ನಿಮ್ಮ ನೋವು ಕಾಡಬಹುದು
ವೃಶ್ಚಿಕ :
- ಕುಟುಂಬದಲ್ಲಿ ಹಲವಾರು ದಿನಗಳಿಂದ ನೆರವೇರದ ಕೆಲಸ ಇಂದು ಪೂರ್ಣವಾಗುತ್ತದೆ
- ಪ್ರೇಮಿಗಳಿಗೆ ಸುದಿನ ಆದರೆ ದುರುಪಯೋಗ ಮಾಡಿಕೊಳ್ಳಬಾರದು
- ಹಣ, ವಸ್ತ್ರ ಮನಸ್ಸಿಗೆ ಸಮಾಧಾನ ಕೊಡುವ ಸಂದರ್ಭ
- ಸ್ನೇಹಿತರ ಕೆಲಸವನ್ನು ನೀವು ಮಾಡಿಕೊಟ್ಟು ಅವರಿಗೆ ಬೇಸರ ಉಂಟಾಗಬಹುದು
- ನಿಮ್ಮ ಒತ್ತಡಗಳು ಇದ್ದರೂ ಕೂಡ ಮುಖ್ಯವಾಗಿ ಆಗಬೇಕಾದ ಕೆಲಸಕ್ಕೆ ಗಮನಹರಿಸಿ
- ಅಮೂಲ್ಯವಾದ ಗ್ರಂಥ ಸಂಪಾದನೆ ಅಥವಾ ಓದಿನ ಕಡೆಗೆ ಹೆಚ್ಚು ಗಮನಕೊಡಿ
- ಸಮುದ್ರ ತೀರದಲ್ಲಿ ಈಶ್ವರ ಆರಾಧನೆ ಮಾಡಿ
- ಗೋಕರ್ಣ,ಮುರುಡೇಶ್ವರ,ರಾಮೇಶ್ವರನ ಆರಾಧನೆ ಮಾಡಿ
ಧನುಸ್ :
- ಫಲ ನೀಡದ ಕೆಲಸಗಳನ್ನು ಸದ್ಯಕ್ಕೆ ಮುಂದೂಡುವುದು ಒಳಿತು
- ವೈಯಕ್ತಿಕ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಬಹುದು
- ಮುಧುಮೇಹಿಗಳು ಸ್ವಲ್ಪ ಎಚ್ಚರಿಕೆ ವಹಿಸಿ
- ರೋಗ ಉಲ್ಬಣವಾಗಬಹುದು
- ರಾಜಕೀಯ ವ್ಯಕ್ತಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ
- ಕೃಷಿ ಕಾರ್ಮಿಕರಿಗೆ ಆದಾಯ ಹೆಚ್ಚಳವಾಗಬಹುದು
- ಹೊಸ ಯೋಜನೆಗಳು ಮಾಡಬೇಡಿ ಅಂತ ಹೇಳಬೇಕಾಗುತ್ತದೆ
- ಹರೇ ಶ್ರೀನಿವಾಸ ಎಂದು ಪ್ರಾರ್ಥಿಸಿ
ಮಕರ :
- ದಿನದ ಎಲ್ಲಾ ಕೆಲಸಗಳು ನೆರವೇರುವ ಆತ್ಮ ವಿಶ್ವಾಸ ನಿಮ್ಮದಾಗಿರುತ್ತದೆ
- ಪ್ರೇಮಿಗಳು ಮಾತ್ರ ಸುಳ್ಳು ಹೇಳಬಾರದು
- ತಪ್ಪುಗಳನ್ನು ಮುಚ್ಚಿಡಬೇಡಿ ಒಪ್ಪಿಕೊಳ್ಳಿ
- ಬೇರೆಯವರಿಂದ ನಿಮ್ಮ ತಪ್ಪು ತಿಳಿದಾಗ ನಿಮ್ಮ ಮೇಲಿರುವ ನಂಬಿಕೆ ಉಳಿಯುವುದಿಲ್ಲ
- ಆತ್ಮ ಪ್ರಶಂಸೆ ಹಲವರಿಗೆ ಆಶ್ಚರ್ಯ ಉಂಟುಮಾಡಬಹುದು
- ವೃತ್ತಿ ಜೀವನದ ಬಗ್ಗೆ ಸಮಾಧಾನವಿರುತ್ತದೆ
- ಮಕ್ಕಳ ಆರೋಗ್ಯ,ವಿದ್ಯಾಭ್ಯಾಸ ಮನಸ್ಸಿಗೆ ಬೇಸರ ಉಂಟುಮಾಡಬಹುದು
- ಇಷ್ಟದೇವತಾ ಪ್ರಾರ್ಥನೆ ಮಾಡಿ
ಕುಂಭ :
- ಅಪಘಾತ ಸಂಭವಿಸುವ ಸೂಚನೆ ಇದೆ ಎಚ್ಚರಿಕೆ ಇರಲಿ
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
- ಅಪರಾಧ ಭಾವ ನಿಮ್ಮನ್ನ ಹೆಚ್ಚಾಗಿ ಕಾಡಬಹುದು
- ಅಧಿಕಾರಿಗಳ ವಿಚಾರಣೆಗೆ ಒಳಪಡಬಹುದು
- ಧನಬಲ ನಿಮಗೆ ಕೆಲಸ ಮಾಡುವುದಿಲ್ಲವೆಂದು ಗೊತ್ತಾಗುತ್ತದೆ
- ಹಳೆಯ ವಿಚಾರಗಳು ಪ್ರಸ್ತಾಪವಾಗಿ ನಿಮಗೆ ತೊಂದರೆ ಉಂಟಾಗಬಹುದು
- ತಾಳ್ಮೆಯಿರಲಿ,ನಾಟಕೀಯ ಜೀವನ ಬೇಡವೆಂದೇ ಹೇಳಬೇಕಾಗುತ್ತದೆ
- ದುರ್ಗಾದೇವಿಯನ್ನು ಆರಾಧಿಸಿ ಅಥವಾ ದುರ್ಗಾಹೋಮ ಮಾಡಿಸಿ
ಮೀನ :
- ಮಾನಸಿಕ ಸ್ಥಿರತೆಯಿಂದ ನಿಮ್ಮ ಉದ್ಯೋಗ,ವೃತ್ತಿಯಲ್ಲಿ ಸಾಧನೆ ಮಾಡುತ್ತೀರಿ
- ನಿಮ್ಮ ವಿನಮ್ರ ಭಾವನೆ ನಿಮಗೆ ಯಶಸ್ಸು ಕೊಡುತ್ತದೆ
- ಸ್ನೇಹಿತರು,ಬಂಧುಗಳು ನಿಮಗೆ ಸಹಾಯ ಮಾಡುತ್ತಾರೆ
- ದುಡ್ಡಿನ ಬಗ್ಗೆ ಹೆಚ್ಚಿನ ಆಸಕ್ತಿಯಿರುವುದಿಲ್ಲ
- ಇಷ್ಟವಾದ ಮಿತ್ರರ ಮಾತು ಬಹಳ ಹಿತವೆನಿಸುತ್ತದೆ
- ವಿದ್ಯಾರ್ಥಿಗಳಿಗೆ ಹೊರಗಿನಿಂದ ಮೆಚ್ಚುಗೆಯ ಮಾತು ಬರುತ್ತದೆ
- ಈ ರಾಶಿಯ ಸ್ತ್ರೀಯರು ಸ್ವಉದ್ಯೋಗ ಪ್ರಾರಂಭಿಸಲು ಶುಭದಿನ
- ಲಲಿತಾ ಸಹಸ್ರನಾಮ ಶ್ರವಣ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post