ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮರಾಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಾಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶುಭಕೃತು ನಾಮಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷ, ದ್ವಿತೀಯ (ಬಿದಿಗೆ) ಜ್ಯೇಷ್ಠ ನಕ್ಷತ್ರ -ಸುಕುರ್ಮನಾಮಯೋಗ ಬಾಲವಕರಣ. ರಾಹುಕಾಲ – ಶುಕ್ರವಾರ 10-30 ರಿಂದ 12 ರವರೆಗೆ ಇರಲಿದೆ.
ಮೇಷ
ನಿಮ್ಮ ನಿಮ್ಮ ಕಾರ್ಯಕ್ಷೇತ್ರಕ್ಕೆ ನಿಮ್ಮ ಕೆಲಸಕ್ಕೆ ಮಾತ್ರ ಮನಸ್ಸನ್ನು ಕೊಡಿ
- ಬೇರೆಯವರ ಕಾರ್ಯಕ್ಷೇತ್ರದಲ್ಲಿ, ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳೊಕೆ ಹೋಗಿ ಹಿನ್ನಡೆ, ಅವಮಾನವನ್ನು ಹೊಂದುವುದು ಬೇಡ
- ನಿಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು
- ತಾಯಿಯ ಸಲಹೆಗಳನ್ನು ಪಡೆದುಕೊಳ್ಳಬೇಕು
- ತಕ್ಷಣಕ್ಕೆ ಬಂದ ಖರ್ಚುಗಳಿಂದ ನಮ್ಮ ಯೋಜನೆಗಳು ಬದಲಾಗುವ ಸಾಧ್ಯತೆ
- ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಹಳೆಯ ಭಿನ್ನಾಭಿಪ್ರಾಯ ಮತ್ತೆ ಕಾಣಬಹುದು
- ಮಾನಸಿಕ ತೊಳಲಾಟಕ್ಕೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ
- ಕುಲದೇವತಾ ಆರಾಧನೆ ಮಾಡಿ
ವೃಷಭ
- ನೌಕರಿ ಹುಡುಕುತ್ತಿರುವವರಿಗೆ ಯಾವುದೇ ಪ್ರಯೋಜನ ಇಲ್ಲ
- ವಿವಾಹಿತರಿಗೆ ಆರ್ಥಿಕ ಸಮಸ್ಯೆ ಮತ್ತು ಉದ್ಯೋಗ ಸಮಸ್ಯೆ ಕಾಣಬಹುದು
- ಹಿಂದೆ ಮಾಡಿದ ಸಾಲವನ್ನು ಇಂದು ಕೊಡಬೇಕಾಗುತ್ತದೆ
- ನಿಮಗಿರುವ ಧೈರ್ಯ ಮತ್ತು ಪ್ರಾಮಾಣಿಕತೆ ನಿಮ್ಮನ್ನು ಕಾಪಾಡುತ್ತದೆ
- ನೀವು ಮಾನಸಿಕವಾಗಿ ಬಹಳ ಧೈರ್ಯವಂತರು
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಾಮಾಣಿಕತೆ ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ
- ನಿಮ್ಮ ಪ್ರಯತ್ನ ನಿರಂತರವಾಗಿರಲಿ ಹತಾಶರಾಗಬಾರದು
- ಹಿರಿಯರಿಗೆ ಆರೋಗ್ಯದಲ್ಲಿ ಚೇತರಿಕೆ ಕಾಣತ್ತೆ ಇದರಿಂದ ಮನಸ್ಸಿಗೆ ಸಮಾಧಾನ
- ಪರಮೇಶ್ವರನನ್ನು ಆರಾಧಿಸಿ
ಮಿಥುನ
- ಆರ್ಥಿಕವಾಗಿ ಈ ದಿನ ಸ್ವಲ್ಪ ಮನಸ್ಸಿಗೆ ನಿರಾಳ ಎಂದು ಹೇಳಬಹುದು
- ಬೇರೆ ಬೇರೆ ಉದ್ಯೋಗಗಳು, ಆದಾಯದ ಮೂಲಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು
- ಪತ್ರಿಕಾ ರಂಗದಲ್ಲಿರುವವರಿಗೆ ಸ್ವಲ್ಪ ಹಿನ್ನಡೆ ಕಾಣಬಹುದು
- ಸರ್ಕಾರಿ ಉದ್ಯೋಗಿಗಳಿಗೆ ಇದ್ದ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆ
- ಮಹಿಳೆಯರು ಆರೋಗ್ಯದ ಬಗ್ಗೆ ಗಮನ ಕೊಡಬೇಕು
- ಸಹೋದ್ಯೋಗಿಗಳು ನಿಮಗೆ ಸಹಕಾರ ನೀಡುತ್ತಾರೆ
- ಒಟ್ಟಾರೆ ಸುಖಾಂತ್ಯವಾಗುವ ದಿನ
- ಇಷ್ಟ ದೇವತೆಯನ್ನು ಸ್ಮರಣೆ ಮಾಡಿ
ಕಟಕ
- ಎಷ್ಟೇ ಪ್ರಯತ್ನಪಟ್ಟರೂ ಮನೆಯಲ್ಲಿನ ಖರ್ಚುಗಳನ್ನು ನಿಯಂತ್ರಿಸಲಾಗುವುದಿಲ್ಲ
- ಆತ್ಮವಿಶ್ವಾಸವಿದ್ದರೂ ಕೆಲವೊಂದು ಸಲ ಧೈರ್ಯ ಕಳೆದುಕೊಳ್ಳುವ ಸಾಧ್ಯತೆ
- ಲೇಖಕರಿಗೆ ಸ್ಥಾನ ಮಾನ ಸಿಗುವ ಸಾಧ್ಯತೆಗಳಿದೆ
- ರಾಜಕಾರಣಿಗಳಿಂದ ಅವಮಾನ ಅಥವಾ ಭಯ ಕಾಡಬಹುದು
- ರಾಜಕಾರಣಿಯವರು ನಿಮ್ಮ ಮೇಲೆ ಕೋಪ,ಸಿಟ್ಟನ್ನು ಹೇರಬಹುದು
- ಸಹೋದರರ ಸಲಹೆ ಪಡೆಯಬೇಕಾಗಬಹುದು
ಸಿಂಹ
- ಈ ದಿನ ಪೂರ್ತಿ ಕಲ್ಪನಾ ಲೋಕದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಿ
- ಕಾರ್ಯದ ಗುಣಮಟ್ಟ ಸ್ವಲ್ಪ ಹೆಚ್ಚು ಮಾಡಿಕೊಳ್ಳುವುದರ ಬಗ್ಗೆ ಆಲೋಚನೆ ಇರಬೇಕು
- ವ್ಯಾವಹಾರಿಕವಾಗಿ ನಷ್ಟವಾಗುವ ಸಾಧ್ಯತೆ
- ಆತುರದ ನಿರ್ಧಾರದಿಂದ ಗುರಿ ಮುಟ್ಟೋಕೆ ಆಗುವುದಿಲ್ಲ
- ಮಾನಸಿಕವಾದ ಚಡಪಡಿಕೆ
- ಒಟ್ಟಾರೆ ನಷ್ಟವೊ ಅಥವಾ ಮಾನಸಿಕ ಒತ್ತಡವೊ ಕಾಡುವಂತಹದು
- ಕುಟುಂಬದ ಒತ್ತಡದಿಂದ ಆಗಬೇಕಾದ ಕೆಲಸವನ್ನು ಮುಂದೂಡುವ ಸಾಧ್ಯತೆ
- ದುರ್ಗಾ ಪರಮೇಶ್ವರಿಯನ್ನು ಆರಾಧಿಸಿ
ಕನ್ಯಾ
- ಬಹಳ ದಿನಗಳಿಂದ ಆರಂಭ ಮಾಡಬೇಕಾದ ಉತ್ತಮ ಕೆಲಸಕ್ಕೆ ಇಂದು ಶುಭದಿನ
- ನಿಮ್ಮ ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ಹೊರಗಿನವರು ಪ್ರಶಂಸಿಸಲಾಗುತ್ತದೆ
- ವೈವಾಹಿಕ ಜೀವನ ಸಾಮರಸ್ಯದಿಂದ ಕೂಡಿರುವುದಿಲ್ಲ
- ನೀವು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂಬುದನ್ನ ಸಾಬೀತು ಪಡಿಸಬೇಕಾಗುತ್ತದೆ
- ಅನಿರೀಕ್ಷಿತವಾಗಿ ಯಾವುದಾದರು ಸಮಾರಂಭದಲ್ಲ್ಲಿ ಪಾಲ್ಗೊಳ್ಳುವ ಸಾಧ್ಯತೆ
- ಮನಸಿಗ್ಗೆ ಏನೋ ಒಂದು ರೀತಿ ಆತಂಕ ಕೊನೆವರೆಗೂ ಅದಕ್ಕೆ ಉತ್ತರ ಸಿಕ್ಕುವುದಿಲ್ಲ
- ಆಂಜನೇಯ ಸ್ವಾಮಿಯನ್ನು ಆರಾಧಿಸಿ
ತುಲಾ
- ನಿಮ್ಮ ಅಭಿಪ್ರಾಯ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವಿದೆ
- ನಿಮ್ಮ ಬೇಕು ಬೇಡಗಳನ್ನು ಕೇಳುವವರು ಯಾರು ಇರುವುದಿಲ್ಲ
- ನಿಮಗಿಷ್ಟ ಇಲ್ಲದಿದ್ದರು ಕೆಲವು ವಿಚಾರಗಳಿಗೆ ಹೌದು ಎಂದು ಒಪ್ಪಿಕೊಳ್ಳಬೇಕಾಗುತ್ತದೆ
- ಪ್ರೇಮಿಗಳಿಗೆ ಹಿನ್ನಡೆಯಾಗುವ ದಿನ
- ನಿಮ್ಮ ತಪ್ಪಿನಿಂದ ತೊಂದರೆಯು ಆಗಬಹುದು
- ನಿಮಗಿಂತ ದೊಡ್ಡವರೆದುರು ವಾದ-ವಿವಾದಗಳನ್ನು ಮಾಡಬೇಡಿ
- ಶ್ರೀರಾಮನನ್ನು ಆರಾಧನೆ ಮಾಡಿ
ವೃಶ್ಚಿಕ
- ನಿಮ್ಮ ಕಾರ್ಯದ ಮೇಲಿನ ಒತ್ತಡವನ್ನು, ಶಿಸ್ತನ್ನು ಕಡಿಮೆ ಮಾಡಿಕೊಳ್ಳಬಾರದು
- ವಿದ್ಯಾರ್ಥಿಗಳಿಗೆ ಅನಾನುಕೂಲ ಕಾಡಬಹುದು
- ಯಾರಿಂದಲೊ ಸಹಾಯವಾಗುವ ಸೂಚನೆಗಳಿವೆ
- ಆದರೆ ಅವರು ಮಾತನ್ನು ಕೊಡುತ್ತಾರೆ ಅದು ಪ್ರಯೋಜನವಾಗುವುದಿಲ್ಲ
- ರೇಷ್ಮೆ ವ್ಯಾಪಾರಿಗಳಿಗೆ ಅನುಕೂಲ ಮತ್ತು ಲಾಭವಿದೆ
- ವಾಹನ ಚಾಲಕರು ತುಂಬಾ ಎಚ್ಚರಿಕೆಯಿಂದ ಇರಬೇಕು
- ದಿನದ ಕೊನೆಯ ಹೊತ್ತಿಗೆ ಕೋಪ, ಬೇಸರ ಹೆಚ್ಚಾಗಬಹುದು
- ಮಹಾಗಣಪತಿಯನ್ನು ಪ್ರಾರ್ಥಿಸಿ
ಧನುಸ್ಸು
- ನಿಮ್ಮ ಅಪೇಕ್ಷೆಗಳಿಗೆ ಅಡ್ಡಿಯಾಗುವ ದಿನ
- ಯಾವುದೇ ಕೆಲಸಕ್ಕೆ ಮುಂದಾದರೂ ನಿಮಗೆ ತೊಂದರೆಯಾಗಲು ನಿಗಧಿಯಾಗಿರುತ್ತದೆ
- ಹೃದಯ ಸಂಬಂಧೀ ರೋಗಿಗಳು ಒತ್ತಡದಿಂದ ದೂರವಿರಬೇಕು
- ಸಾಲ ಪಡೆಯಲು ಪ್ರಯತ್ನಿಸಬಹುದು ಆದರೆ ಕೆಲಸ ಆಗುವುದಿಲ್ಲ
- ಶಾಂತವಾಗಿರುವುದು ಎಲ್ಲಾ ರೀತಿಯಲ್ಲಿ ಒಳಿತು
- ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಿ
- ಬನಶಂಕರಿ ದೇವಿಯನ್ನು ಆರಾಧಿಸಿ
ಮಕರ
- ನಿಮ್ಮ ಕೈಯಲ್ಲಿ ಅತಿಯಾದ ಹಣವಿದೆ ಇವತ್ತು ಯಾರೂ ನಿಮ್ಮನ್ನು ಮಾತನಾಡಿಸಲು ಕಷ್ಟಸಾದ್ಯ
- ಮಕ್ಕಳು ಮತ್ತು ಕುಟುಂಬದಲ್ಲಿರುವ ಸಮಸ್ಯೆ ಬಗ್ಗೆ ನಿಮಗೆ ಕಾಳಜಿ ಇರುವುದಿಲ್ಲ
- ನಿಮ್ಮ ಕಾರ್ಯದ ಸ್ವಭಾವಗಳಲ್ಲಿ ಗಣನೀಯ ಬದಲಾವಣೆ ಕಂಡು ಆಶ್ಚರ್ಯವಾಗುವಂತಹದ್ದು
- ಈ ದಿನ ಹೆಚ್ಚಾಗಿ ಹಣವನ್ನು ಖರ್ಚು ಮಾಡುವಂತಹದ್ದು
- ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
- ಹಲವಾರು ಜನ ನಿಮ್ಮಿಂದ ಉಪಯೋಗ ಪಡೆಯುತ್ತಾರೆ
- ನಿಮ್ಮ ಖರ್ಚಿನ ದುರುಪಯೋಗವಾಗುವ ಸಾಧ್ಯತೆ ಇದೆ
- ನಿಮ್ಮ ವರ್ತನೆಗೆ ಬಂಧುಗಳು, ಸ್ನೇಹಿತರು ವಿಷಾದ ವ್ಯಕ್ತಪಡಿಸುತ್ತಾರೆ
ಕುಂಭ
- ವೈದ್ಯಕೀಯ ಕಾರ್ಯಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ದಿನ
- ವೃತ್ತಿ ಧರ್ಮದಿಂದ ಕರ್ತವ್ಯದ ದೃಷ್ಟಿಯಿಂದ ಬಿಡುವಿಲ್ಲದ ಕೆಲಸ
- ಆದಾಯ ಚೆನ್ನಾಗಿರುತ್ತದೆ ಆದರೆ ಸಂತೋಷದಿಂದ ಕಾಲ ಕಳೆಯಲು ಸಮಯದ ಅಭಾವ
- ಬೇರೆಯವರ ಸಹಾಯಕ್ಕೆ ಮುಂದಾಗುತ್ತೀರಿ
- ನಿಮ್ಮ ಉದಾರತೆ ಕಂಡ ಜನರು ಶ್ಲಾಘಿಸುತ್ತಾರೆ
- ನಿಮಗೆ ಕುಟುಂಬಕ್ಕೂ ಹೆಚ್ಚು ಗೌರವ ಸಿಗುವ ದಿನವಾಗಿರುತ್ತದೆ
ಮೀನ
- ತುಂಬಾ ದೊಡ್ಡದಾಗಿ ತತ್ವ ಚಿಂತನೆ ನಡೆಸಬಹುದು
- ರಾಜ್ಯ ರಾಷ್ಟ್ರ ಮಟ್ಟದ ರಾಜಕಾರಣದ ವಿಷಯ ಪ್ರಸ್ತಾಪ ಮಾಡುತ್ತೀರಿ
- ನಿಮಗೆ ಸಂಬಂಧವಿಲ್ಲದ ವಿಚಾರದಿಂದ ಮನಸ್ಸು ಕೆಡೆಸಿಕೊಳ್ಳುತ್ತೀರಿ
- ಷೇರು ಮಾರುಕಟ್ಟೆಯಿಂದ ಲಾಭ ನಿಮ್ಮದಾಗಿರುತ್ತದೆ
- ನಿಮ್ಮ ಸ್ವಭಾವ ನಿಮಗೆ ಸಮಸ್ಯೆಯಾಗಬಹುದು ಎಚ್ಚರಿಕೆ
- ಬೌದ್ಧಿಕವಾಗಿ ಹಲವಾರು ದೃಷ್ಟಿಕೋನಗಳಿಂದ ವಿಷಯ ಚರ್ಚಿಸಿ
- ನಿಮ್ಮದೆ ಆದ ನಿಲುವು ಎಲ್ಲಾ ಕಡೆನು ಕೆಲಸಕ್ಕೆ ಬರುತ್ತೆ ಅಂದುಕೊಳ್ಳಬೇಡಿ
- ಬೇರೆಯವರ ಸಲಹೆ ಸೂಚನೆಗಳು ಉಪಯೋಗವಾಗುತ್ತದೆ
- ಬೇರೆಯವರ ಮಾತುಗಳಿಗೂ ಬೆಲೆಯನ್ನು ಕೊಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post