ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರೋ ದುರ್ಘಟನೆ ಸದ್ದುಗುಂಟೆ ಪಾಳ್ಯದ ಗುರುಪನ್ನಪಾಳ್ಯದಲ್ಲಿ ನಡೆದಿದೆ.
ಕತೀಜಾ ಕೂಬ್ರ (29) ಮೃತ ಮಹಿಳೆ. ಕತೀಜಾ ಕೂಬ್ರ ಪತಿ ಮಹೆಬೂಬ್ ಪರೀಷ್ನೇ ಪತ್ನಿಯನ್ನು ಹೊಡೆದು ಕೊಲೆ ಮಾಡಿದ ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಹಾಕಿದ್ದಾರೆ ಎಂದು ಕತೀಜಾ ಕೂಬ್ರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮದುವೆ ಆದಗಿನಿಂದ ಮಗಳ ಜೊತೆ ಯಾವಾಗಲೂ ಮಹೆಬೂಬ್ ಪರೀಷ್ ಜಗಳ ಆಡುತ್ತಿದ್ರು. ನನ್ನ ಅಳಿಯನಿಗೆ ಇನ್ನೊಬ್ಬ ಮಹಿಳೆ ಜೊತೆ ಸಂಬಂಧವಿತ್ತು. ಹೀಗಾಗಿ ಮಗಳನ್ನ ಅಳಿಯನೇ ಸಾಯಿಸಿದ್ದಾನೆ ಎಂದು ಮೃತ ಕತೀಜಾ ಕೂಬ್ರ ತಂದೆ ಜಾವೀದ್ ವುಲ್ಲಾ ಖಾನ್ ಆರೋಪಿಸಿದ್ದಾರೆ.
ಗಂಡನ ಮನೆಯವರೇ ಕೊಲೆ ಮಾಡಿ ನೇಣಿಗೆ ಹಾಕಿದ್ದಾರೆ. ಮದುವೆಯಾದ ಮೇಲೆ ಪ್ರತಿನಿತ್ಯ ಜಗಳ ಆಡುತ್ತಿದ್ರು. ಮಗಳಿಗೆ ಅಳಿಯನೇ ಹೊಡೆದು ಕೊಂದಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಅವರಿಗೆ ಶಿಕ್ಷೆಯಾಗಲೇ ಬೇಕು ಎಂದು ಜಾವೀದ್ ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post