ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮರಾಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಾಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶುಭಕೃತು ನಾಮಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷ, ಚತುರ್ದಶಿ, ಕೃತ್ತಿಕಾ ನಕ್ಷತ್ರ , ಸಿದ್ಧನಾಮಯೋಗ , ವಣಿಜಕರಣ. ರಾಹುಕಾಲ – ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ
- ನಿಂತು ಹೋಗಿದ್ದ ಕೆಲಸಗಳು ಪುನರಾರಂಭವಾಗಲಿದೆ
- ಸ್ನೇಹಿತರ ಸಹಾಯದಿಂದ ಹಿಂದೆ ಸರಿಯಬಾರದು
- ಚಿತ್ರರಂಗದವರಿಗೆ ಉತ್ತಮವಾದ ದಿವಸ
- ಗುತ್ತಿಗೆದಾರರಿಗೆ ಹಿನ್ನಡೆ ಉಂಟಾಗಲಿದೆ
- ಅನುಭವಿಗಳ ಮಾತು ವಿರುದ್ಧವಾಗಿ ಪರಿಣಮಿಸಬಹುದು
- ಹಣದ ವಿಚಾರದಲ್ಲಿ ಕೋಪ ಬರಬಹುದು
- ದತ್ತಾತ್ರೇಯರನ್ನು ಪೂಜಿಸಿ
ವೃಷಭ
- ನಿಮ್ಮ ಸ್ವಭಾವವು ಜನರಿಗೆ ಸ್ಫೂರ್ತಿದಾಯಕವಾಗಿರುತ್ತದೆ
- ವ್ಯವಹಾರದಲ್ಲಿ ದೊಡ್ಡ ಅಪಾಯವಾಗಬಹುದು
- ಆರ್ಥಿಕವಾದ ನಷ್ಟ ಸ್ವಲ್ಪದರಲ್ಲಿ ತಪ್ಪುತ್ತದೆ
- ಉದ್ಯೋಗವು ನಷ್ಟವನ್ನುಂಟು ಮಾಡುತ್ತದೆ
- ಹೊಸ ಕೆಲಸಕ್ಕೆ ಉತ್ತಮವಾದ ದಿನವಲ್ಲ
- ಧಾರ್ಮಿಕ ಚಟುವಟಿಕೆ ಆತ್ಮಸ್ಥೈರ್ಯ ತುಂಬಬಹುದು
- ಉಮಾ ಮಹೇಶ್ವರರ ಆರಾಧನೆ ಮಾಡಿ
- ಮಿಥುನ
- ಸಹೋದ್ಯೋಗಿಗಳ ಸಹಕಾರವಿರುವುದಿಲ್ಲ ಇದರಿಂದ ಮಾನಸಿಕ ಬೇಸರ
- ಮಧುಮೇಹಿಗಳಿಗೆ ತುಂಬಾ ತೊಂದರೆಯ ಸೂಚನೆ ಇದೆ ಜಾಗ್ರತೆಯಾಗಿರಿ
- ಮನೆಯವರಿಗೆ ಬಹಳ ಆತಂಕದ ದಿನ ಸಾಯಂಕಾಲಕ್ಕೆ ಸರಿಯಾಗುವ ಸಾಧ್ಯತೆ ಇದೆ
- ಯಾರನ್ನು ಅತಿಯಾಗಿ ನಂಬಬಾರದು
- ಹಳೆಯ ವಿಚಾರಗಳು ನಿಮಗೆ ಒತ್ತಡವನ್ನ ತರಬಹುದು
- ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಿ
- ವಿಷ್ಣುತ್ರಯೀ ಮಂತ್ರ ಜಪಿಸಿ
- ಕಟಕ
- ಮನೆಗೆ ಗಣ್ಯ ವ್ಯಕ್ತಿಗಳ ಆಗಮನ ಆಗಬಹುದು
- ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ
- ವ್ಯವಹಾರದಲ್ಲಿ ದೊಡ್ಡ ಸಾಧನೆಗೆ ಅವಕಾಶ
- ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಯೋಗವಿದೆ
- ಖಾಸಗಿ ಉದ್ಯೋಗಿಗಳಿಗೆ ಕಾರ್ಯಕ್ಷೇತ್ರವನ್ನ ವಿಸ್ತರಣೆ ಮಾಡಿಕೊಳ್ಳಲು ಕೆಲವು ಬದಲಾವಣೆ
- ತರೋದಕ್ಕೆ ಇದೊಂದು ಅವಕಾಶ
- ಗೋಮಾತೆಯನ್ನು ಪ್ರಾರ್ಥಿಸಿ
- ಸಿಂಹ
- ಸಾಮಾಜಿಕವಾಗಿ ನಿಮ್ಮ ಹೆಸರು ಪರಿಗಣಿಸಲ್ಪಡುತ್ತದೆ
- ಮನೆ ಮತ್ತು ಉದ್ಯೋಗ ಎರಡೂ ಕಡೆಗಳಲ್ಲಿ ಸಮಸ್ಯೆ ಕಾಡುತ್ತದೆ
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಹೊಟ್ಟೆಕಿಚ್ಚಿನ ಜನ ನಿಮ್ಮನ್ನು ದೂಷಿಸಬಹುದು
- ಅಲ್ಪ ತೃಪ್ತಿಯ ಕೆಲಸವನ್ನು ಮಾಡಬೇಡಿ
- ಮನೆಯ ಅಲಂಕಾರ, ಸಣ್ಣ ಪುಟ್ಟ ಬದಲಾವಣೆಗಳಿಗೆ ಹಣ ಖರ್ಚು ಮಾಡುವ ದಿನವಾಗಿರುತ್ತದೆ
- ಕುಲದೇವತಾ ಆರಾಧನೆ ಮಾಡಿ
- ಕನ್ಯಾ
- ಹಣ್ಣಿನ ವ್ಯಾಪಾರಿಗಳಿಗೆ ಸ್ವಲ್ಪ ಪ್ರಮಾಣ ಲಾಭ ಸಿಗಲಿದೆ
- ದೊಡ್ಡ ಉದ್ಯೋಗಸ್ಥರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆ ಉಂಟಾಗಬಹುದು
- ಒಳ್ಳೆಯ ಧನಾಗಮನ ಸೂಚನೆ ಇದೆ ಆದರೂ ಕೂಡ ನಿಮಗೆ ಹಿನ್ನಡೆಯುಂಟು ಮಾಡುವಂತಹದ್ದು
- ಶೈಕ್ಷಣಿಕವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾಗುತ್ತದೆ
- ಆತ್ಮೀಯರ ಭೇಟಿ ಮತ್ತು ಭೋಜನದಿಂದ ಸಂತೋಷ ಸಿಗುವ ದಿನ
- ಮಕ್ಕಳಿಗೆ ಸಮಸ್ಯೆ ಕಾಡಬಹುದು ಜಾಗ್ರತೆಯಲ್ಲಿರಬೇಕು
- ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ
- ತುಲಾ
- ಮನೆಯಲ್ಲಿ ಶುಭಕಾರ್ಯಗಳು ಸ್ಥಗಿತವಾಗುವ ಭಯ ಕಾಡುತ್ತದೆ
- ಮನೆಯವರಲ್ಲಿ ಪರಸ್ಪರ ಹೊಂದಾಣಿಕೆಯಿರುವುದಿಲ್ಲ
- ಸಾಲದ ವಿಚಾರದಲ್ಲಿ ತೊಂದರೆಯಾಗಬಹುದು
- ವ್ಯಾವಹಾರಿಕ ಬದಲಾವಣೆಯಾಗಬಹುದು
- ಲೆಕ್ಕ ಪರಿಶೋಧಕರಿಗೆ ಲಾಭದ ದಿನ
- ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
- ಇಂದ್ರಾಕ್ಷಿಯನ್ನು ಪ್ರಾರ್ಥಿಸಿ
- ವೃಶ್ಚಿಕ
- ಪುಣ್ಯಕ್ಷೇತ್ರಗಳಿಗೆ ದರ್ಶನಕ್ಕಾಗಿ ಹೋಗುವ ಯೋಗವಿದೆ
- ಈಶ್ವರನ ದೇವಸ್ಥಾನಕ್ಕೆ ಹೋದರೆ ಶುಭವಾಗಲಿದೆ ಕಷ್ಟಗಳೆಲ್ಲವೂ ದೂರವಾಗುವುದು
- ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು
- ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಇರುವುದಿಲ್ಲ
- ಪೋಷಕರಿಗೆ ದುಃಖದಾಯಕರಾಗುತ್ತೀರಿ
- ನಿರ್ಮಾಣದ ಹಂತದಲ್ಲಿರುವ ಕಟ್ಟಡದ ಖರೀದಿಯ ಬಗ್ಗೆ ಮಾತುಕತೆ ಆಡುತ್ತೀರಿ
- ಹಣವನ್ನು ಸಂಗ್ರಹಿಸಲು ಒದ್ದಾಡಬೇಕಾಗುತ್ತದೆ
- ಆಭರಣಗಳ ಬಗ್ಗೆ ಕಾಳಜಿವಹಿಸಿ
- ಧನಲಕ್ಷ್ಮಿಯನ್ನು ಮತ್ತು ಭೂವರಾಹಸ್ವಾಮಿಯನ್ನು ಪ್ರಾರ್ಥಿಸಿ
ಧನಸ್ಸು
- ಸಹೋದ್ಯೋಗಿಗಳ ಸ್ವಭಾವ ಅಥವಾ ವರ್ತನೆ ಮನಸ್ಸಿಗೆ ಬೇಸರ ಉಂಟುಮಾಡುತ್ತದೆ
- ಹಲ್ಲಿಗೆ ಸಂಬಂಧಿಸಿದ ತೊಂದರೆ ಉಂಟಾಗಬಹುದು ದಂತ ವೈದ್ಯರನ್ನ ಭೇಟಿ ಮಾಡಿ
- ರಾಜಕೀಯ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ಸಹಾಯ ಮಾಡುವ ಯೋಗವಿದೆ
- ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಸ್ಯೆಗಳು ಕಾಣಲಿದೆ
- ಹಣಕ್ಕಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ಬರಲಿದೆ
- ಅನಾವಶ್ಯಕ ವಿಚಾರಗಳಿಂದ ಮನಸ್ತಾಪ ಏರ್ಪಡುವುದು
- ಶತ್ರುಗಳ ವಿರುದ್ಧ ಹೋರಾಟ ಮಾಡಬೇಡಿ ಶಾಂತವಾಗಿರಿ
- ತಾಪಸಮನ್ಯುವನ್ನು ಪ್ರಾರ್ಥಿಸಿ
- ಮಕರ
- ಸ್ಥಳ ಬದಲಾವಣೆಯ ಯೋಗ ಇರುವುದರಿಂದ ಅನುಕೂಲವಾಗಲಿದೆ
- ವ್ಯಾಪಾರದಲ್ಲಿ ಹಿನ್ನಡೆಯಾಗಲಿದೆ
- ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಯವಾಗಲಿದೆ
- ಆದಾಯದ ಜಾಡು ಹಿಡಿದು ಹೋಗುವುದರಲ್ಲಿ ಯಶಸ್ಸನ್ನು ಕಾಣುತ್ತೀರಿ
- ಇಂದು ಮಾನಸಿಕ ಸಮಾಧಾನವಿರುವುದಿಲ್ಲ
- ಜನರನ್ನು ಮತ್ತು ಗ್ರಾಹಕರನ್ನು ಮೆಚ್ಚಿಸುವುದಕ್ಕೆ ಸಾಹಸ ಪಡಬೇಕಾಗುವ ದಿನ
- ಸಾಯಂಕಾಲದ ಹೊತ್ತಿಗೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಹದ್ದು
- ಐಶ್ಚರ್ಯ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ
- ಕುಂಭ
- ಬಂಧುಗಳಲ್ಲಿ ಪರಸ್ಪರ ವಿರೋಧ ಇರಲಿದೆ
- ಮನೆಯಲ್ಲಿ ಆಗಬೇಕಾದ ಮಂಗಳ ಕಾರ್ಯ ನಿಂತು ಹೋಗುವ ಭಯ ನಿಮ್ಮನ್ನು ಕಾಡುತ್ತದೆ
- ಹಣದ ಸಮಸ್ಯೆ ಇಲ್ಲದಿದ್ದರೂ ವಿನಾಕಾರಣ ವೆಚ್ಚ ಮಾಡಬೇಕಾಗತ್ತೆ
- ಮಾನಸಿಕವಾಗಿ ತುಂಬಾ ಕುಗ್ಗಿ ಹೋಗುತ್ತೀರಿ ಮಾನಸಿಕ ವೈರಾಗ್ಯ ಕಾಡಲಿದೆ
- ಸಮಾಜದಲ್ಲಿ ಅವಮಾನ, ಅಪಕೀರ್ತಿ ಆಗುತ್ತದೆ
- ಕುಟುಂಬದಲ್ಲಿ ಮಾತುಕತೆ ತುಂಬಾ ಪರಿಣಾಮಕಾರಿಯಾಗಿರುತ್ತದೆ
- ವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಮೀನ
- ಶಾಂತವಾಗಿರಬೇಕು ಅಥವಾ ಮೌನವಾಗಿದ್ದರೆ ಒಳ್ಳೆಯದು
- ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಈ ದಿನ ಶುಭ ಸುದ್ದಿ ಇದೆ
- ಲೇಖಕರಿಗೆ ಮತ್ತು ಪುಸ್ತಕ ವ್ಯಾಪಾರಿಗಳಿಗೆ ಈ ದಿನ ಒಳ್ಳೆಯದಿನ
- ಹಳೆಯ ಬಾಕಿ ನಿರೀಕ್ಷೆಯಲ್ಲಿದ್ದವರಿಗೆ ಆ ವಿಚಾರ ಮುನ್ನಲೆಗೆ ಬರಬಹುದು
- ಆರೋಗ್ಯದ ಕಡೆ ಗಮನವಿರಲಿ ತಾತ್ಸಾರ ಬೇಡ
- ಇಂದು ಹಳೆಯ ನೆನಪುಗಳು ನಿಮ್ಮನ್ನು ಕಾಡಬಹುದು
- ಚೌಡೇಶ್ವರಿಯನ್ನು ಕೆಂಪು ಹೂಗಳಿಂದ ಆರ್ಚಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post