Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ತೋಳ್ ತಟ್ಟಿ ನಿಂತ ಸಂತನ ಸಾಧನೆ ಎಂಥದ್ದು ನಿಮಗೆ ಗೊತ್ತಾ..?

Share on Facebook Share on Twitter Send Share
December 7, 2022

ಮನೆ ಮೇಲಿರೋ ಸಿಂಟೆಕ್ಸ್ ಟ್ಯಾಂಕ್​ನ ಕ್ಲೀನ್ ಮಾಡೋಕೆ ಅಮ್ಮನೋ, ಅಪ್ಪನೋ ಹೇಳಿದ್ರೆ ನಾವು ಸರ್ಕಸ್ ಮಾಡ್ತಿರ್ತೀವಿ. ಇವತ್ತು, ನಾಳೆ ಅಂತ ನೆಪ ಹೇಳ್ಕೋಂಡು ಓಡಾಡುತ್ತೇವೆ. ಆದರೆ ಇಡೀ ಒಂದು ನದಿಯನ್ನ ಕ್ಲೀನ್ ಮಾಡೋದು ಅಂದ್ರೆ ಸುಮ್ನೇನಾ? ಆದ್ರೆ ಗಂಗೆಯನ್ನ ಸ್ವಚ್ಛಗೊಳಿಸೋಕೆ ಸರ್ಕಾರದ ಬಳಿ ಬಜೆಟ್ ಇತ್ತು. ಸಾವಿರಾರು ಕೋಟಿ ರೂಪಾಯಿಯನ್ನ ಈ ಪ್ರಾಜೆಕ್ಟ್​ಗೆ ಅಂತಲೇ ಮೀಸಲೂ ಇಡ್ತು. ಆದ್ರೆ ಯಕಶ್ಚಿತ್ ಒಬ್ಬ ಸಾಧು ಏಕಾಂಗಿಯಾಗಿ ಶುರು ಮಾಡಿ ಇಡೀ ನದಿಯೊಂದನ್ನ ಸ್ವಚ್ಛಗೊಳಿಸಿದ್ದಾರೆ. ಅವರ ಈ ಸಾಧನೆಗಾಗಿ ಭಾರತ ಸರ್ಕಾರವು ಪದ್ಮಶ್ರೀ ನೀಡಿ ಗೌರವವನ್ನೂ ಕೊಟ್ಟಿದೆ.

ಪಂಜಾಬ್​ನ ಸಂತ, ಬಲ್ಬೀರ್ ಸಿಂಗ್ ಸೀಚೆವಾಲ್. ಪಂಜಾಬ್​ನಲ್ಲಿ ಇಕೋ ಬಾಬಾ ಅಂತಲೇ ಫೇಮಸ್. ಪಂಜಾಬ್ ಅಷ್ಟೇ ಅಲ್ಲ, ಭಾರತ ಸರ್ಕಾರ, ವಿದೇಶಗಳಲ್ಲೂ ಇವರ ಸಾಧನೆಗೆ ಬಹುಪರಾಕ್ ಹೇಳ್ತಿದ್ದಾರೆ. ಜಲಂಧರ್ ಜಿಲ್ಲೆಯ ಸೀಚೇವಾಲ್​ನಲ್ಲಿ 1962ರಲ್ಲಿ ಜನಸಿದ ಬಲ್ಬೀರ್ ಸಿಂಗ್, ಕಾಲೇಜು ತೊರೆದು ಸನ್ಯಾಸತ್ವ ಸ್ವೀಕರಿಸಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಇಕೋ ಬಾಬಾಗೆ, 2000ದ ಇಸವಿಯಲ್ಲಿ ಗುರು ನಾನಕ್​ ಕಾಳಿ ಬೇನ್ ನದಿಯನ್ನ ಸ್ವಚ್ಛಗೊಳಿಸುವ ಆಲೋಚನೆ ಬರುತ್ತೆ.

ಈ ಸಂದರ್ಭದಲ್ಲಿ ಪಂಜಾಬ್​ನಲ್ಲಿ ಅದರಲ್ಲೂ ಕಾಳಿ ಬೇನ್ ನದಿಗೆ ಸ್ಥಳೀಯ ಹಾಗೂ ಕೈಗಾರಿಕಾ ತ್ಯಾಜ್ಯದಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿರುತ್ತೆ. ಹಲವೆಡೆ ಕಾಳಿ ಬೇನ್​ನ ನೀರಿನ ಸೆಲೆಯೇ ಬತ್ತಿ ಹೋಗಿರುತ್ತದೆ. ಇದರಿಂದ ನದಿಯನ್ನ ಸ್ವಚ್ಛಗೊಳಿಸಬೇಕು ಮತ್ತೆ ಜೀವ ಜಲ ಉಕ್ಕಿಸಬೇಕು ಎಂಬ ಆಲೋಚನೆಯಿಂದ ಸಂತ ಬಲ್ಬೀರ್ ಸಿಂಗ್ ಸೀಚೇವಾಲ್ ಏಕಾಂಗಿಯಾಗಿ ಈ ಕಾರ್ಯಕ್ಕೆ ಮುಂದಾಗ್ತಾರೆ. ಇವರ ಕಾರ್ಯವನ್ನ ಗಮನಿಸುವ ಒಂದಷ್ಟು ಜನ ಸ್ವಯಂ ಪ್ರೇರಿತರಾಗಿ ಇವರ ಜೊತೆ ಕೈ ಜೋಡಿಸ್ತಾರೆ.

ದಿನೇ ದಿನೆ ಈ ಸಂಖ್ಯೆ ಹೆಚ್ಚಳವಾಗಿ ಸಾವಿರಾರು ಕಾರ್ಯಕರ್ತರು ಒಂದಾಗ್ತಾರೆ. ನದಿ ಪಾತ್ರದ ಹಳ್ಳಿಗಳಲ್ಲಿನ ನಿವಾಸಿಗಳಿಂದಲೇ ನದಿ ಸ್ವಚ್ಛತೆಗೆ ಅಗತ್ಯ ಇರುವ ವಸ್ತುಗಳನ್ನ ಖರೀದಿಸಲು ದೇಣಿಗೆ ಸಂಗ್ರಹಿಸಲಾಗುತ್ತೆ. ನದಿಯಲ್ಲಿ ಬೆಳೆದ ಅನವಶ್ಯಕ ಗಿಡ ಗಂಟಿಗಳು, ಹೂಳನ್ನ ಎತ್ತಿ ಸ್ವಚ್ಛಗೊಳಿಸಲಾಗುತ್ತೆ. ನದಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತೆ. ನದಿ ದಂಡೆ ಸುತ್ತ ಹೂ, ಹಣ್ಣುಗಳ ಗಿಡಗಳನ್ನ ಬೆಳೆಸಿ, ಸ್ನಾನ ಘಟ್ಟಗಳನ್ನ ನಿರ್ಮಿಸಲಾಗುತ್ತೆ. ಇಟ್ಟಿಗೆಯಿಂದ ರಸ್ತೆ ನಿರ್ಮಾಣ ಮಾಡ್ತಾರೆ. ಇಕೋ ಬಾಬಾರ ಈ ಆಲೋಚನೆ ಕಾರ್ಯಗತಗೊಳ್ತಿದ್ದಂತೆ ಪಂಜಾಬ್​ನ ದವೋಬಾ ಪ್ರಾಂತ್ಯದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತೆ.

Download the Newsfirstlive app

ಇಕೋ ಬಾಬಾ ಸ್ವಚ್ಛಗೊಳಿಸಿದ ನದಿಯ ಉದ್ದ ಬರೋಬ್ಬರಿ 160 ಕಿಲೋಮೀಟರ್. ಇದಕ್ಕಾಗಿ ಅವ್ರು ತೆಗೆದುಕೊಂಡಿದ್ದು ಬರೋಬ್ಬರಿ 16 ವರ್ಷಗಳ ಸಮಯ. 2000 ದಿಂದ 2016ರವರೆಗೆ ಕಾಳಿ ಬೇನ್ ನದಿ ಸ್ವಚ್ಛಗೊಳಿಸುವ ಇಕೋ ಬಾಬಾ ಒಂದೇ ಒಂದು ರೂಪಾಯಿಯನ್ನೂ ಸರ್ಕಾರದಿಂದ ತಗೊಂಡಿಲ್ಲ. ವೈಟ್ ಕಾಲರ್​ಗಳಂತೆ ಸುಮ್ಮನೆ ಆದೇಶ ಕೊಟ್ಟು ಕೂರಲಿಲ್ಲ. ಬದಲಿಗೆ ತಾವೇ ಖುದ್ದು ನದಿಗಿಳಿದು ಎಲ್ಲರೊಳೊಂದಾಗಿ ಅದರ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿದ್ರು. ಅಷ್ಟೇ ಅಲ್ಲ, ನದಿ ಸ್ವಚ್ಛತೆಯ ಕಾರ್ಯದ ಬಳಿಕ ಪಂಜಾಬ್ ಸರ್ಕಾರದ ಜೊತೆಗೂಡಿ ಅಂಡರ್​ಗ್ರೌಂಡ್ ಸೆವರೇಜ್ ವ್ಯವಸ್ಥೆಯನ್ನೂ ಮಾಡಿದ್ರು. ಇದರಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಕೊಳಚೆ ನೀರು ಅಥವಾ ಚರಂಡಿ ನೀರನ್ನ ಕೊಳಗಳಲ್ಲಿ ಸಂಗ್ರಹಿಸಿ ಅದನ್ನ ಸ್ವಚ್ಛಗೊಳಿಸಿ ಕೃಷಿ ಮತ್ತು ತೋಟಗಾರಿಕೆಗೆ ಬಳಸಲಾಗುತ್ತಿದೆ. ಈ ಮಾಡೆಲ್​ನಿಂದಾಗಿ ಸುಮಾರು 50 ಗ್ರಾಮಗಳಿಗೆ ಅನುಕೂಲವಾಗಿದೆ.

ಅಷ್ಟೇ ಅಲ್ಲ, ಗಂಗೆಯನ್ನ ಸ್ವಚ್ಛಗೊಳಿಸಲು ಮುಂದಾದಾಗ ಖುದ್ದು ಕೇಂದ್ರ ಸರ್ಕಾರವೂ ಸಂತ ಬಲ್ಬೀರ್ ಸಿಂಗ್ ಸೀಚೇವಾಲ್​ರ ಸಹಾಯವನ್ನ ಕೋರಿತ್ತು. ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಇಕೋ ಬಾಬಾರ ಕಾರ್ಯದ ಬಗ್ಗೆ, ಇಡೀ ದೇಶಕ್ಕೆ ಮಾದರಿ ಅಂತ ಕೊಂಡಾಡಿದ್ದರು. ಕೇವಲ ನದಿ ಸ್ವಚ್ಛತೆಯಷ್ಟೇ ಅಲ್ಲದೆ ಇಕೋ ಬಾಬಾ ಬಡತನ ನಿರ್ಮೂಲನೆ, ಮೂಢ ನಂಬಿಕೆ ಹೋಗಲಾಡಿಸುವುದು, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಶ್ರಮಿಸುತ್ತಿದ್ದಾರೆ.

ಶಾಲೆ, ಕಾಲೇಜು, ತಾಂತ್ರಿಕ ಕೇಂದ್ರಗಳನ್ನ ಸ್ಥಾಪಿಸಿ ಅಕ್ಷರ ದಾಸೋಹ ಮಾಡುತ್ತಿದ್ದಾರೆ. ಸಮಾಜಕ್ಕೆ ಅದ್ರಲ್ಲೂ ವಿಶೇಷವಾಗಿ ನದಿ ಸ್ವಚ್ಛತೆ ಇವ್ರ ಕೊಡುಗೆಗಾಗಿ ಭಾರತ ಸರ್ಕಾರ 2017ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಇದೀಗ ಪಂಜಾಬ್​ನಲ್ಲಿ ಆಪ್ ಸರ್ಕಾರ ಬಂದ ಮೇಲೆ ಇಕೋ ಬಾಬಾರನ್ನ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿತ್ತು. ಸದ್ಯ ಸಂಸತ್​ನ ಮೇಲ್ಮನೆ ಸದಸ್ಯರಾಗಿ ಅಲ್ಲೂ ಸಹ ಸಾಮಾಜಿಕ, ಭೌಗೋಳಿಕ ವಿಚಾರವಾಗಿ ಸಂತ ಬಲ್ಬೀರ್ ಸಿಂಗ್ ಸೀಚೇವಾಲ್ ಧ್ವನಿ ಎತ್ತುತ್ತಿದ್ದಾರೆ.

ವಿಶೇಷ ವರದಿ-ನವೀನ್ ಕುಮಾರ್ .ಕೆ


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: Kannada NewsNewsFirst KannadaSanth Balbir Singh Seechewal

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಮೊದಲ ಪಂದ್ಯದಲ್ಲೇ ಮುಖಭಂಗ.. ಹೇಗಿತ್ತು ಸುಂದರ್ ಏಕಾಂಗಿ ಹೋರಾಟ..?

by Bhimappa
January 28, 2023
0

ಬ್ಯಾಟಿಂಗ್​ ಡ್ಯಾರಿಲ್ ಮಿಚೆಲ್ ಅಬ್ಬರ, ಬೌಲಿಂಗ್​ನಲ್ಲಿ ಕ್ಯಾಪ್ಟನ್ ಮಿಚೆಲ್ ಸ್ಯಾಂಟ್ನರ್ ಸ್ಪಿನ್ ಮ್ಯಾಜಿಕ್​. ಪರಿಣಾಮ ಟೀಮ್ ಇಂಡಿಯಾ ವಿರುದ್ಧದ ಮೊದಲ T20 ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದು ಬೀಗಿದೆ....

Photos: ಕೆ.ಎಲ್​.ರಾಹಲ್​-ಅಥಿಯಾ ಶೆಟ್ಟಿ ಅರಿಶಿಣ ಶಾಸ್ತ್ರ ಹೇಗಿತ್ತು?

by Bhimappa
January 28, 2023
0

ಟೀಮ್​ ಇಂಡಿಯಾದ ಕ್ರಿಕೆಟರ್​ ಕನ್ನಡಿಗ ಕೆ.ಎಲ್.ರಾಹುಲ್​ ಮತ್ತು ಅಥಿಯಾ ಶೆಟ್ಟಿ ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಬಾಲಿವುಡ್​ ನಟ ಸುನಿಲ್​ ಶೆಟ್ಟಿಯವರ ಪುತ್ರಿಯನ್ನ ವರಿಸಿರುವ ರಾಹುಲ್ ಫೇಸ್​ಬುಕ್​ ಪೇಜ್​ನಲ್ಲಿ...

BMTC ಚಾಲಕನಿಂದ ಅಡ್ಡಾದಿಡ್ಡಿ ಚಾಲನೆ.. ಭೀಕರ ಸರಣಿ ಅಪಘಾತ.. ಓರ್ವ ಸಾವು, ಮೂವರು ಗಂಭೀರ

by Bhimappa
January 28, 2023
0

ಬೆಂಗಳೂರು: ಬಿಎಂಟಿಸಿ ಬಸ್​ನ ಅಡ್ಡಾದಿಡ್ಡಿ ಚಾಲನೆಯಿಂದ ಸರಣಿ ಅಪಘಾತ ಸಂಭವಿಸಿದ್ದು ದುರ್ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ನಿನ್ನೆ ಸಂಜೆ 7:30 ರ...

ವಿಶೇಷ ಸಂಭ್ರಮದಲ್ಲಿ ಶ್ವೇತಾ ಚಂಗಪ್ಪ; ಫ್ಯಾನ್ಸ್​ ಜೊತೆ ಮನದಾಳ ಹಂಚಿಕೊಂಡ ನಟಿ..!

by veena
January 28, 2023
0

ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ದೂರದರ್ಶನ ಮತ್ತು ಸಿನಿಮಾ ರಂಗದಲ್ಲಿ 20 ವರ್ಷ ಪೂರೈಸಿದ್ದ ಸಂಭ್ರದಲ್ಲಿದ್ದಾರೆ. ಈ ಸಂತೋಷದ ಕ್ಷಣಗಳನ್ನು ಶ್ವೇತಾ ಅವರು ತಮ್ಮ ಇನ್​ಸ್ಟಾಗ್ರಾಮ್​​​ನಲ್ಲಿ...

‘ಕಾಫಿ ಡೇ ಎಂಟರ್​ಪ್ರೈಸಸ್’​ಗೆ ₹26 ಕೋಟಿ ದಂಡ.. ಮರುಪಾವತಿಗೆ 45 ದಿನ ಡೆಡ್​ಲೈನ್.. ಮತ್ತೆ ಏನಾಯ್ತು..? 

by veena
January 28, 2023
0

ಕರ್ನಾಟಕದ ಕಾಫಿ ಡೇ ಎಂಟರ್ ರ್ಪ್ರೈಸಸ್​ಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI: Securities and Exchange Board of India)  ಬರೋಬ್ಬರಿ 26 ಕೋಟಿ ರೂಪಾಯಿ...

ಸಿದ್ದರಾಮಯ್ಯ ಎಂಟ್ರಿಗೆ ದಂಗಾದ ಕೇಸರಿ ಪಾಳಯ; ಟಿಕೆಟ್ ಆಕಾಂಕ್ಷಿಗಳಿಗೆ ಆಣೆ ಮಾಡಿಸಿದ ಸಚಿವ ಮುನಿರತ್ನ

by NewsFirst Kannada
January 28, 2023
0

ಚಿನ್ನದ ನಾಡು ಈ ಬಾರಿಯ ಚುನಾವಣೆಯಲ್ಲಿ ಹೈ-ವೋಲ್ಟೇಜ್ ಕದನದ ಭೂಮಿಯಾಗಿ ಮಾರ್ಪಟ್ಟಿದೆ.. ಕೋಲಾರದಿಂದ ಸಿದ್ದರಾಮಯ್ಯ ಅಖಾಡಕ್ಕಿಳಿಯುತ್ತಾರೆ ಅನ್ನೋ ಘೋಷಣೆ ಬೆನ್ನಲ್ಲೇ ಮತ್ತೊಂದು ಘಟನೆ ಸಿಕ್ಕಾಪಟ್ಟೆ ಸದ್ದು ಮಾಡಿದೆ....

ರಮ್ಯಾಗೆ ಸಚಿವ ಮುನಿರತ್ನ ಗಾಳ..!? ಸ್ಯಾಂಡಲ್​​ವುಡ್​ ಕ್ವೀನ್ ಬಗ್ಗೆ ಕುತೂಹಲಕಾರಿ ಹೇಳಿಕೆ

by veena
January 28, 2023
0

ಸ್ಯಾಂಡಲ್​​ವುಡ್​​ ಕ್ವೀನ್​​ ಮೋಹಕ ತಾರೆ ರಮ್ಯಾ ಇಷ್ಟೊತ್ತಿಗೆ ಸಿನಿಮಾ ಶೂಟಿಂಗ್ ಸ್ಟಾರ್ಟ್ ಮಾಡಬೇಕಿತ್ತು. ಆದರೆ ಅದ್ಯಾಕೋ ನಟಿ ರಮ್ಯಾ ಇನ್ನು ಕ್ಯಾಮೆರಾ ಫೇಸ್ ಮಾಡೋಕೆ ರೆಡಿಯಾದಂತೆ ಕಾಣಿಸ್ತಿಲ್ಲ....

ಕಡ್ಡಿ ಮುರಿದಂತೆ ನಿರ್ಧಾರ ತಿಳಿಸಿದ HDK.. ಭವಾನಿ ರೇವಣ್ಣ ಟಿಕೆಟ್​ ಗುದ್ದಾಟ ಶಮನಕ್ಕೆ ದೇವೇಗೌಡರ ಎಂಟ್ರಿ..!​  

by NewsFirst Kannada
January 28, 2023
0

ಹಾಸನ ತಮ್ಮ ಭದ್ರಕೋಟೆಯಿಂದ ತಮ್ಮ ಸೇನಾನಿಗಳನ್ನು ದಳಪತಿಗಳು ಇನ್ನೂ ರಣಕಣಕ್ಕೆ ಇಳಿಸಿಲ್ಲ. ಈ ನಡುವೆಯೇ ಕುಟುಂಬದ ಸದಸ್ಯರಾದ ಭವಾನಿ ರೇವಣ್ಣ ಖುದ್ದು ತಾನೇ ಸೇನಾನಿಯೆಂದು ಘೋಷಿಸಿಕೊಂಡು ಯುದ್ಧ...

ಕೂಡಿ ಬರಲಿದೆ ಕಂಕಣ ಭಾಗ್ಯ; ಪ್ರೇಮಿಗಳಿಗೆ ಕಾಡಲಿದೆ ಆತಂಕ- ಇಲ್ಲಿದೆ ಇಂದಿನ ಭವಿಷ್ಯ

by veena
January 28, 2023
0

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ...

ವಾಶಿಂಗ್ಟನ್​ ಸುಂದರ್​​ ಏಕಾಂಗಿ ಹೋರಾಟ ವ್ಯರ್ಥ; ಟೀಂ ಇಂಡಿಯಾಗೆ ಹೀನಾಯ ಸೋಲು

by NewsFirst Kannada
January 27, 2023
0

ಇಂದು ರಾಂಚಿ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್​​​ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಕಿವೀಸ್​​ ನೀಡಿದ್ದ 177 ರನ್​ಗಳ ಬೃಹತ್​...

Next Post

ಭಾರತಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ.. ಪ್ಲೇಯಿಂಗ್-11ರಲ್ಲಿ ಬದಲಾವಣೆ ಆಗುತ್ತಾ..?

ಬಾಂಗ್ಲಾ ವಿರುದ್ಧ ಕೊಹ್ಲಿ ಆಟ ನಡೀತಿಲ್ಲ.. ಇಂದಾದ್ರೂ ಹಳೇ ಖದರ್​ಗೆ ಮರಳುತ್ತಾರಾ..?

veena

veena

LATEST NEWS

ಮೊದಲ ಪಂದ್ಯದಲ್ಲೇ ಮುಖಭಂಗ.. ಹೇಗಿತ್ತು ಸುಂದರ್ ಏಕಾಂಗಿ ಹೋರಾಟ..?

January 28, 2023

Photos: ಕೆ.ಎಲ್​.ರಾಹಲ್​-ಅಥಿಯಾ ಶೆಟ್ಟಿ ಅರಿಶಿಣ ಶಾಸ್ತ್ರ ಹೇಗಿತ್ತು?

January 28, 2023

BMTC ಚಾಲಕನಿಂದ ಅಡ್ಡಾದಿಡ್ಡಿ ಚಾಲನೆ.. ಭೀಕರ ಸರಣಿ ಅಪಘಾತ.. ಓರ್ವ ಸಾವು, ಮೂವರು ಗಂಭೀರ

January 28, 2023

ವಿಶೇಷ ಸಂಭ್ರಮದಲ್ಲಿ ಶ್ವೇತಾ ಚಂಗಪ್ಪ; ಫ್ಯಾನ್ಸ್​ ಜೊತೆ ಮನದಾಳ ಹಂಚಿಕೊಂಡ ನಟಿ..!

January 28, 2023

‘ಕಾಫಿ ಡೇ ಎಂಟರ್​ಪ್ರೈಸಸ್’​ಗೆ ₹26 ಕೋಟಿ ದಂಡ.. ಮರುಪಾವತಿಗೆ 45 ದಿನ ಡೆಡ್​ಲೈನ್.. ಮತ್ತೆ ಏನಾಯ್ತು..? 

January 28, 2023

ಸಿದ್ದರಾಮಯ್ಯ ಎಂಟ್ರಿಗೆ ದಂಗಾದ ಕೇಸರಿ ಪಾಳಯ; ಟಿಕೆಟ್ ಆಕಾಂಕ್ಷಿಗಳಿಗೆ ಆಣೆ ಮಾಡಿಸಿದ ಸಚಿವ ಮುನಿರತ್ನ

January 28, 2023

ರಮ್ಯಾಗೆ ಸಚಿವ ಮುನಿರತ್ನ ಗಾಳ..!? ಸ್ಯಾಂಡಲ್​​ವುಡ್​ ಕ್ವೀನ್ ಬಗ್ಗೆ ಕುತೂಹಲಕಾರಿ ಹೇಳಿಕೆ

January 28, 2023

ಕಡ್ಡಿ ಮುರಿದಂತೆ ನಿರ್ಧಾರ ತಿಳಿಸಿದ HDK.. ಭವಾನಿ ರೇವಣ್ಣ ಟಿಕೆಟ್​ ಗುದ್ದಾಟ ಶಮನಕ್ಕೆ ದೇವೇಗೌಡರ ಎಂಟ್ರಿ..!​  

January 28, 2023

ಕೂಡಿ ಬರಲಿದೆ ಕಂಕಣ ಭಾಗ್ಯ; ಪ್ರೇಮಿಗಳಿಗೆ ಕಾಡಲಿದೆ ಆತಂಕ- ಇಲ್ಲಿದೆ ಇಂದಿನ ಭವಿಷ್ಯ

January 28, 2023

ವಾಶಿಂಗ್ಟನ್​ ಸುಂದರ್​​ ಏಕಾಂಗಿ ಹೋರಾಟ ವ್ಯರ್ಥ; ಟೀಂ ಇಂಡಿಯಾಗೆ ಹೀನಾಯ ಸೋಲು

January 27, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ