ರಾಯಚೂರು: ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಸಿರವಾರ ನಗರದ ಠಾಣಾ ಪಿಎಸ್ಐ ಗೀತಾಂಜಲಿ ಶಿಂಧೆ ಅವರನ್ನು ಅಮಾನತು ಮಾಡಲಾಗಿದೆ. ರಾಯಚೂರಿನ ಸಿರವಾರ ಪಟ್ಟಣದ ಪಿಎಸ್ಐ ಗೀತಾಂಜಲಿ ಶಿಂಧೆರನ್ನ ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಓರ್ವ ಯುವಕ ಡೆತ್ ನೋಟ್ನಲ್ಲಿ ಪಿಎಸ್ಐ ಹೆಸರು ಬರೆದಿಟ್ಟು ನಾಪತ್ತೆಯಾಗಿದ್ದ. ಇದಲ್ಲದೇ ಪಿಎಸ್ಐ ಗೀತಾಂಜಲಿ ವಿರುದ್ಧ ಸಾರ್ವಜನಿಕರು ನಾನಾ ಕಿರುಕುಳ ಆರೋಪ ಮಾಡಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಸಾಕಾಷ್ಟು ವಿವಾದಕ್ಕೆ ಸಿಲುಕಿದ್ದ ಪಿಎಸ್ಐ ಗೀತಾಂಜಲಿಯನ್ನ, ಇಂದು ಕರ್ತವ್ಯ ಲೋಪ ಆರೋಪದ ಅಡಿಯಲ್ಲಿ ಅಮಾನತು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post