ಇಂದು ಆರ್ಥಿಕವಾಗಿ ಬಲವಾಗಿರುತ್ತೀರಿ, ಮನೆ, ಕಾರ್ಯಕ್ಷೇತ್ರದಲ್ಲಿ ಜಯ
ತತ್ವಗಳೊಂದಿಗೆ ರಾಜಿ ಬೇಡ, ಬೇರೆಯವರು ನಿಮ್ಮ ಮಾತನ್ನು ಗಮನಿಸಲ್ಲ
ಅಪರಿಚಿತರಿಗೆ ಸಹಾಯ ಮಾಡುತ್ತೀರಿ, ಉದ್ಯೋಗದಲ್ಲಿ ಬದಲಾವಣೆ ಬೇಡ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶುಕ್ರವಾರ ಮಧ್ಯಾಹ್ನ 10:30 ರಿಂದ 12:00 ರವರೆಗೆ ಇರಲಿದೆ.
ಮೇಷ ರಾಶಿ

- ಕೆಲಸದ ಸ್ಥಳದಲ್ಲಿ ಆನಂದದಿಂದ ಇರುತ್ತೀರಿ
- ಮನೆಯಲ್ಲಿ ಎಲ್ಲರ ಬೆಂಬಲ ಸಿಗುವಂತಹ ವಾತಾವರಣ
- ಆತ್ಮೀಯರ ಜೊತೆಗೆ ಅಗತ್ಯವಾದ ವಿಚಾರಗಳನ್ನು ಚರ್ಚಿಸಿ
- ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಲಿ
- ಮನಸ್ಸು ವಿಚಲಿತವಾಗದಂತೆ ಕಾಪಾಡಿಕೊಳ್ಳಬೇಕು
- ಬೇರೆಯವರ ಸಲಹೆ ಇರಲಿ ಆದರೆ ನಿರ್ಧಾರ ಮಾತ್ರ ನಿಮ್ಮದಾಗಿರಲಿ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಹೊಸತನ್ನು ಕಲಿಯಲು ಹೆಚ್ಚಿನ ಅವಕಾಶ ಇರಲಿದೆ
- ದಿನದ ಆರಂಭ ಅಷ್ಟೊಂದು ಸಮಾಧಾನಕೊಡುವುದಿಲ್ಲ
- ನಿಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಿ
- ಬೇರೆಯವರಿಂದ ಏನನ್ನು ಕೂಡ ನಿರೀಕ್ಷಿಸಬೇಡಿ
- ಹೊಟ್ಟೆ ನೋವು ನಿಮಗೆ ಸ್ವಲ್ಪ ತೊಂದರೆಯನ್ನು ಮಾಡಬಹುದು
- ಮನಸ್ಸು ಚಂಚಲವಾಗಿ ಸಮಯ ವ್ಯರ್ಥವಾಗಬಹುದು
- ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿ
ಮಿಥುನ

- ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಫಲವನ್ನು ಪಡೆಯಬಹುದು
- ಸಂಗೀತ ಕ್ಷೇತ್ರದವರಿಗೆ ಅನುಕೂಲವಿದೆ
- ಅನಿರೀಕ್ಷಿತವಾಗಿ ಸಹೋದರ ವರ್ಗಕ್ಕೆ ಸಮಸ್ಯೆಯಾಗಬಹುದು
- ದೂರದ ಪ್ರಯಾಣ ಇಷ್ಟ, ಆದರೆ ಕಷ್ಟ ಆಗಲಿದೆ
- ನಿಮ್ಮ ಆದಾಯ ಚೆನ್ನಾಗಿರುತ್ತದೆ
- ಅನಗತ್ಯ ಖರ್ಚು ನಿಮ್ಮನ್ನು ಕಾಡದೆ ಬಿಡುವುದಿಲ್ಲ್ಲ
- ಈಶ್ವರನ ಆರಾಧನೆ ಮಾಡಿ
ಕಟಕ

- ಹಣಕಾಸು ವ್ಯವಹಾರಸ್ಥರಿಗೆ ಅನುಕೂಲವಿದೆ
- ಹಿರಿಯರ ವೃತ್ತಿ ಅಥವಾ ಮಾರ್ಗದರ್ಶನ ಕೈಹಿಡಿಯಲಿದೆ
- ರಾಜಕೀಯ ಸಂಘರ್ಷಕ್ಕೆ ಅವಕಾಶಗಳಿವೆ
- ಮಕ್ಕಳ ಬದಲಾದ ವರ್ತನೆಯಿಂದ ಸಂತಸ ಆಗಲಿದೆ
- ಹಲವು ಹೊಸ ಯೋಜನೆಗಳಿಗೆ ಮಾತುಕತೆಯನ್ನು ನಡೆಸುತ್ತೀರಿ
- ಸ್ಥಿರಾಸ್ತಿ ಖರೀದಿಯ ಬಗ್ಗೆ ಒಲವನ್ನು ತೋರಿಸುತ್ತೀರಿ
- ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ಸಿಂಹ

- ದಾಂಪತ್ಯ ಜೀವನ ಚೆನ್ನಾಗಿರುತ್ತದೆ
- ವ್ಯಾವಹಾರಿಕವಾಗಿ ತುಂಬಾ ಜಾಣ್ಮೆ ತೋರಿಸುತ್ತೀರಿ
- ಜನರಿಗೆ ನಿಮ್ಮಿಂದ ಹಲವಾರು ರೀತಿಯ ಸಹಾಯ ಆಗಲಿದೆ
- ನಿಮ್ಮ ಖ್ಯಾತಿ, ಜನಪ್ರಿಯತೆ ಹೆಚ್ಚಾಗುವ ಸಾಧ್ಯತೆ ಇದೆ
- ಕೆಲಸದ ಸ್ಥಳದಲ್ಲಿ ಹಕ್ಕನ್ನು ಚಲಾಹಿಸುತ್ತೀರಿ
- ಎಲ್ಲಾ ಕೆಲಸಗಳು ಸರಳ ಸುಲಭವಾಗಿ ಆಗಲಿದೆ
- ಶಿವಾರಾಧನೆ ಮಾಡಿ
ಕನ್ಯಾ

- ಮನೆಯಲ್ಲಿ ಹೊಂದಾಣಿಕೆಯ ಅವಶ್ಯಕತೆ ಇದೆ
- ಅತಿಥಿಗಳ ಆಗಮನದಿಂದ ಬೇಸರ ತರಬಹುದು
- ಸರ್ಕಾರಿ ಕೆಲಸದಲ್ಲಿ ಅಡಚಣೆಯಾಗಬಹುದು
- ವಿರೋಧಿಗಳು ನಿಮ್ಮನ್ನು ಟೀಕಿಸಬಹುದು
- ಹಣವನ್ನು ಸಾಲವಾಗಿ ನೀಡುವುದರಿಂದ ನಷ್ಟವಿದೆ
- ನಿಮ್ಮನ್ನು ಸುಲಭವಾಗಿ ವಂಚಿಸುವ ಜನರಿದ್ದಾರೆ
- ಇಷ್ಟದೇವತಾ ಆರಾಧನೆ ಮಾಡಿ
ತುಲಾ

- ಇಂದು ಆರ್ಥಿಕವಾಗಿ ಬಲವಾಗಿರುತ್ತೀರಿ
- ಮನೆ, ಕಾರ್ಯಕ್ಷೇತ್ರದಲ್ಲಿ ಜಯ ನಿಮ್ಮದಾಗಲಿದೆ
- ಹೊಸತನವನ್ನು ಅಪೇಕ್ಷಿಸುತ್ತಿದ್ದರೆ ಅವಕಾಶವಿದೆ
- ಶಿಸ್ತು ಬದ್ಧವಾದ ದಿನಚರಿ ನಿಮಗೆ ಯಶಸ್ಸನ್ನು ಕೊಡಲಿದೆ
- ಹೊಸ ಶರತ್ತುಗಳು ನಿಮಗೆ ಅನ್ವಯ ಆಗುವುದಿಲ್ಲ
- ಗಹನವಾದ ವಿಚಾರಗಳಿಂದ ಕೀರ್ತಿ ಬರಲಿದೆ
- ಚಾಮುಂಡೇಶ್ವರಿಯನ್ನು ಆರಾಧನೆ ಮಾಡಿ
ವೃಶ್ಚಿಕ

- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಪಯಶಸ್ಸು ಹೊಂದುತ್ತೀರಿ
- ವಿದ್ಯಾಭ್ಯಾಸ ಮುಗಿದಿದ್ದರೂ ಪ್ರಯೋಜನವಾಗದೆ ಇರುವ ಸಮಯ
- ಅಧಿಕಾರಿಗಳ ಅಥವಾ ಹಿರಿಯರ ನಿಂದನೆಗೆ ಒಳಗಾಗುತ್ತೀರಿ
- ನಿಮ್ಮ ವೈಯಕ್ತಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲ
- ಏಕಾಂತತೆ ಬಯಸುತ್ತೀರಿ ಆದರೆ ಅವಕಾಶವಿಲ್ಲ
- ಮನೆಯಲ್ಲಿ ಪೋಷಕರನ್ನು ನಿರಾಕರಿಸುವ ಮನಸ್ಥಿತಿ ಬರಲಿದೆ
- ದುರ್ಗಾರಾಧನೆ ಮಾಡಿ
ಧನುಸ್ಸು

- ಇಂದು ಸಾಲ ಮಾಡುವ ಸಂದರ್ಭ ಬರಬಹುದು
- ಮನಸ್ಸಿನಲ್ಲಿ ನಕರಾತ್ಮಕವಾದ ಯೋಚನೆಗಳು ಹೆಚ್ಚಾಗಿ ಬರಲಿದೆ
- ನಿಮ್ಮ ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಬೇಡಿ
- ಯಾವುದೇ ನಿರ್ಧಾರ ಮಾಡಲು ಅಸಹಾಯಕರಾಗಿರುತ್ತೀರಿ
- ಬೇರೆಯವರು ನಿಮ್ಮ ಮಾತನ್ನು ಗಮನಿಸುವುದಿಲ್ಲ
- ಯಾವುದೊ ಚಿಂತೆ ನಿಮ್ಮ ಆರೋಗ್ಯ, ನಿಮ್ಮ ಆಯುಷ್ಯವನ್ನು ತಿಂದು ಹಾಕಲಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮಕರ

- ಕೆಲಸದ ಒತ್ತಡ ಇದ್ದರೂ ಕೂಡ ಕುಟುಂಬಕ್ಕೆ ಸಮಯ ನೀಡಿ
- ಅಪರಿಚಿತರಿಗೆ ಸಹಾಯ ಮಾಡುತ್ತೀರಿ
- ಉದ್ಯೋಗದಲ್ಲಿ ಬದಲಾವಣೆಯ ಕಲ್ಪನೆ ಬೇಡ
- ವಿದ್ಯಾರ್ಥಿ ವರ್ಗಕ್ಕೆ ಅನುಕೂಲವಿದೆ
- ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು ಚಿಂತನೆ ಮಾಡಿ
- ಹಲವರನ್ನು ನಿಮ್ಮಂತೆ ನಿರೀಕ್ಷೆ ಮಾಡಿದರೆ ನಿರಾಸೆ ಹೊಂದುತ್ತೀರಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ವ್ಯಾವಹಾರಿಕವಾಗಿ ಉತ್ತಮ ಫಲಿತಾಂಶವಿದೆ
- ತಂದೆಯವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಬಹುದು
- ಮಾನಸಿಕವಾಗಿ ಆತಂಕ ಉಂಟಾಗಬಹುದು
- ಪ್ರೀತಿ ಪಾತ್ರರಿಂದ ಯಾವುದೇ ಸಹಕಾರವಿಲ್ಲ
- ರಾಜಕೀಯಕ್ಕೆ ಸಂಬಂಧಿಸಿದವರಿಗೆ ಮೋಸ ಆಗುವ ಸಾಧ್ಯತೆ
- ನಿಮ್ಮ ಅಧಿಕಾರ ಅಥವಾ ಹಕ್ಕಿನ ಚ್ಯುತಿಗೆ ಸಾಧ್ಯತೆಯಿದೆ
- ಕುಲದೇವತಾ ಆರಾಧನೆ ಮಾಡಿ
ಮೀನಾ

- ಮಹಿಳೆಯರಿಗೆ ಈ ದಿನ ದುರ್ಬಲವಾಗಲಿದೆ
- ಕಾಲಿಗೆ ತೊಂದರೆ ಅಥವಾ ನೋವಾಗುವ ಸಾಧ್ಯತೆಯಿದೆ
- ಉದ್ಯೋಗ ವಿಚಾರವಾಗಿ ಹಲವಾರು ಗೊಂದಲಗಳು ಕಾಡಲಿದೆ
- ಜವಾಬ್ದಾರಿಯುತ ಕೆಲಸಗಳಲ್ಲಿ ಹಿನ್ನಡೆಯಾಗಲಿದೆ
- ಮಕ್ಕಳ, ಮೊಮ್ಮಕ್ಕಳ ಪ್ರಗತಿ ನಿಮಗೆ ಯಶಸ್ಸನ್ನು ಕೊಡಲಿದೆ
- ಮನೆಯವರ ಸಹಕಾರದಿಂದ ಸಮಾಧಾನ ಇರಲಿದೆ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ