Saturday, April 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ನಂದಮೂರಿ ಫ್ಯಾಮಿಲಿಯಿಂದ ದೂರ ಆಗಿದ್ದೇಕೆ ತಾರಕ ರತ್ನ..? ಎನ್​ಟಿಆರ್​​ಗೆ ಹೇಗೆ ಸಂಬಂಧ..?

Share on Facebook Share on Twitter Send Share
January 31, 2023

ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರ ಸುತ್ತ ಆತಂಕ ಹಾಗೆ ಇದೆ. ಟ್ರೀಟ್​ಮೆಂಟ್​​ ಕೊಡ್ತಿದ್ದೇವೆ, ರೆಸ್ಪಾನ್ಸ್ ಮಾಡ್ತಿದ್ದಾರೆ. ಆದರೆ ಚೇತರಿಕೆ ಇಲ್ಲ. ಸ್ಟೇಬಲ್ ಆಗಿದ್ದಾರೆ. ತಾರಕರತ್ನ ನಂದಮೂರಿ ಫ್ಯಾಮಿಲಿ ಜೊತೆ ಇಲ್ಲ. ತಂದೆ ಜೊತೆಯೂ ಸಂಬಂಧ ಅಷ್ಟಕ್ಕಷ್ಟೇ. ಹನ್ನೊಂದು ವರ್ಷದ ಹಿಂದೆ ನಡೆದ ಆ ಒಂದು ಘಟನೆ ತಾರಕರತ್ನ ಲೈಫ್​ಲ್ಲಿ ಏನೇನೋ ಮಾಡಿಬಿಡ್ತು. ನಂದಮೂರಿ ತಾರಕರತ್ನ. ಕಳೆದ ಶುಕ್ರವಾರ ಸಂಜೆ ಆಂಧ್ರಪ್ರದೇಶದ ಕುಪ್ಪಂನಲ್ಲಿ ಟಿಡಿಪಿ ನಾಯಕ ನರಾ ಲೋಕೇಶ್​ ಸಾರಥ್ಯದಲ್ಲಿ ಯುವಗಲಂ ಪಾದೆಯಾತ್ರೆ ಆರಂಭವಾಗಿತ್ತು.

ಈ ಪಾದೆಯಾತ್ರೆಯಲ್ಲಿ ಪಾಲ್ಗೊಂಡಿದ್ದ ತಾರಕರತ್ನ ಜನರ ನಡುವೆ ಹೆಜ್ಜೆ ಹಾಕುತ್ತಿರುವಾಗಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಕೂಡಲೇ ಗಾಬರಿಗೊಂಡ ಜನ ತಾರಕರತ್ನ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಸ್ಥಳಿಯ ಆಸ್ಪತ್ರೆಗೆ ಸೇರಿಸಿದ್ರು. ನಂತರ ಅಲ್ಲಿಂದ ಪಿಇಎಸ್​​ ಆಸ್ಪತ್ರೆಗೆ ದಾಖಲಿಸಲಾಯಿತು. ಆಗಲೇ ಗೊತ್ತಾಗಿದ್ದು ತಾರಕರತ್ನಗೆ ಹೃದಯಾಘಾತ ಆಗಿದ್ದು, ಹೃದಯದ ಎಡಭಾಗದಲ್ಲಿ ಶೇಕಡಾ 90 ರಷ್ಟು ಬ್ಲಾಕ್​ ಆಗಿದೆ ಅಂತೆ.

39 ವರ್ಷದ ತಾರಕರತ್ನಗೆ ಮೊದಲ ಸಲ ಹೃದಯಾಘಾತ ಆಗಿತ್ತು. ಹೃದಯಕ್ಕೆ ರಕ್ತ ಸಂಚಲನ ಸರಿಯಾಗಿ ಆಗ್ತಿರಲಿಲ್ಲ. ಪರಿಸ್ಥಿತಿ ಹದೆಗೆಡುತ್ತಿತ್ತು. ತೀವ್ರ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಟ್ಟರು ತಾರಕರತ್ನ ಸ್ಪಂದಿಸಿಲ್ಲ. ಇದು ವೈದ್ಯರನ್ನ ಇನ್ನಷ್ಟು ಆತಂಕಕ್ಕೀಡು ಮಾಡ್ತು. ಕೂಡಲೇ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಬೆಂಗಳೂರಿಗೆ ಶಿಫ್ಟ್ ಮಾಡಬೇಕು ಅಂತ ಅಲ್ಲಿನ ವೈದ್ಯರು ನಿರ್ಧರಿಸಿ ಬೆಂಗಳೂರಿನ ನಾರಾಯಣ ಹೃದಯಾಲಯದ ವೈದ್ಯರನ್ನ ಸಂಪರ್ಕಿಸಿದ್ರು. ಎನ್​ಎಚ್ ಆಸ್ಪತ್ರೆಯಿಂದ ಎಕ್ಸ್​ಪರ್ಟ್ಸ್ ತಂಡ​ ತಾರಕರತ್ನ ಅವರಲ್ಲಿಗೆ ಪ್ರಯಾಣ ಮಾಡಿ ಅವರ ಸ್ಥಿತಿಗತಿ ಪರಿಶೀಲಿಸಿ ಬೆಂಗಳೂರಿಗೆ ಶಿಫ್ಟ್ ಮಾಡೋಣ ಅಂತ ನಿರ್ಧರಿಸಿದ್ರು. ಶುಕ್ರವಾರ ಮಧ್ಯರಾತ್ರಿಯೇ ಅಲ್ಲಿಂದ ಶಿಫ್ಟ್ ಮಾಡಿದ ಟಾಕ್ಟರ್ಸ್ ರಾತ್ರಿ 1 ಗಂಟೆಗೆ ನಾರಾಯಣ ಹೃದಯಾಲಯ ತಲುಪಿದ್ರು.

ಆ ಕ್ಷಣದಿಂದ ಇಲ್ಲಿಯವರೆಗೂ ತಾರಕರತ್ನ ಅವ್ರಿಗೆ ಐಸಿಯುನಲ್ಲಿ ಟ್ರೀಟ್​ ಮೆಂಟ್​ ಕೊಡಲಾಗ್ತಿದೆ. ಹೃದಯ ಸಂಬಂಧಿ ಟಾಪ್ ಎಕ್ಸ್​ಪರ್ಟ್ಸ್​ ಕರೆಸಿ ಚೆಕ್ ಮಾಡಲಾಗ್ತಿದೆ. ಮೂರು ದಿನ ಕಳೆದರೂ ತಾರಕರತ್ನ ಚೇತರಿಸಿಕೊಂಡಿಲ್ಲ. ಇನ್ನು ಅವರ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಸದ್ಯಕ್ಕೆ ಸ್ಟೇಬಲ್ ಅಂತ ಹೇಳುವ ವೈದ್ಯರು ಔಟ್​ ಆಫ್ ಡಂಜರ್ ಅಂತ ಘೋಷಿಸೋಕೆ ರೆಡಿ ಇಲ್ಲ. ತಾರಕರತ್ನ ಬೇಗ ಗುಣಮುಖರಾಗಲಿ, ಮೊದಲಿನಂತಾಗಲಿ ಅಂತ ನಂದಮೂರಿ ಕುಟುಂಬದವರು ಅಭಿಮಾನಿಗಳು ಪ್ರಾರ್ಥಿಸ್ತಿದ್ದಾರೆ. ಪತ್ನಿ ಅಲೇಖ್ಯಾ ರೆಡ್ಡಿ, ಪುತ್ರಿ, ಬಾಲಯ್ಯ ಕಳೆದ ಮೂರು ದಿನದಿಂದ ಆಸ್ಪತ್ರೆಯಲ್ಲೇ ವೈದ್ಯರಿಂದ ಏನಾದರೂ ಸಿಹಿ ಸುದ್ದಿ ಸಿಗಬಹುದಾ ಅಂತ ಎದುರು ನೋಡ್ತಾ ಇದ್ದಾರೆ. ಜ್ಯೂನಿಯರ್ ಎನ್​ಟಿಆರ್​, ಚಂದ್ರಬಾಬು ನಾಯ್ಡು, ಶಿವರಾಜ್ ಕುಮಾರ್ ಸೇರಿ ಬಹಳಷ್ಟು ಗಣ್ಯರು ಆಸ್ಪತ್ರೆಗೆ ಬಂದು ತಾರಕರತ್ನ ಆರೋಗ್ಯ ವಿಚಾರಿಸ್ತಿದ್ದಾರೆ. ತೆಲುಗು ಇಂಡಸ್ಟ್ರಿಯ ಸ್ಟಾರ್ ನಟರು ತಾರಕರತ್ನ ಚೇತರಿಕೆಗೆ ಪ್ರಾರ್ಥಿಸ್ತಿದ್ದಾರೆ.

ಯಾರು ಈ ತಾರಕರತ್ನ? ಎನ್​ಟಿಆರ್​ಗೆ ಹೇಗೆ ಸಂಬಂಧ?

ತಾರಕರತ್ನ ನಂದಮೂರಿ ತಾರಕ್ ರಾಮಾರಾವ್ ಅವರ ಮೊಮ್ಮಗ. ಎನ್​ಟಿಆರ್​ ಅವರ ಹನ್ನೆರಡು ಜನ ಮಕ್ಕಳಲ್ಲಿ ಐದನೇಯವರು ಮೋಹನಕೃಷ್ಣ. ಈ ಮೋಹನಕೃಷ್ಣ ಅವರ ಮಗ ತಾರಕರತ್ನ. ಬಾಲಯ್ಯ ಅಣ್ಣನ ಮಗ ಆಗಬೇಕು. ಜ್ಯೂನಿಯರ್​ ಎನ್​ಟಿಆರ್​ಗೆ ಚಿಕ್ಕಪ್ಪನ ಮಗ ಅಂದ್ರೆ ಸಹೋದರ ಆಗ್ಬೇಕು. ಎನ್​ಟಿಆರ್​ ಫ್ಯಾಮಿಲಿಯ ಸದಸ್ಯರಂತೆ ತಾರಕರತ್ನ ಕೂಡ ಸಿನಿಮಾದಲ್ಲೇ ಭವಿಷ್ಯ ರೂಪಿಸಿಕೊಳ್ಳೋಕೆ ನಿರ್ಧರಿಸಿದ್ರು. 2002ರಲ್ಲಿ ‘ಒಕಟೋ ನಂ ಕುರ್ರೋಡು’ ಚಿತ್ರದಲ್ಲಿ ಫಸ್ಟ್ ಟೈಂ ತಾರಕರತ್ನ ನಾಯಕನಾಗಿ ಕಾಣಿಸಿಕೊಂಡ್ರು. ಅಲ್ಲಿಂದ ನಿರಂತರವಾಗಿ ಸಿನಿಮಾಗಳನ್ನ ಮಾಡೋಕೆ ಶುರು ಮಾಡಿದ್ರು. ಯುವರತ್ನ, ತಾರಕ್, ಭದ್ರಾದಿ ರಾಮುಡು, ಅಮರಾವತಿ ಸೇರಿ 21ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹೀರೋ, ವಿಲನ್, ಪೋಷಕ ನಟ ಹೀಗೆ ಹತ್ತು ಹಲವು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಮರಾವತಿ ಚಿತ್ರದ ನಟನೆಗಾಗಿ ಅತ್ಯುತ್ತಮ ವಿಲನ್ ಅಂತ ನಂದಿ ಅವಾರ್ಡ್​ ಕೂಡ ಪಡೆದುಕೊಂಡಿದ್ರು.

ನಂದಮೂರಿ ಫ್ಯಾಮಿಲಿಯಿಂದ ದೂರವಿದ್ದಿದ್ದೇಕೆ ತಾರಕರತ್ನ?
ಆ ಒಂದು ಘಟನೆಯಿಂದ ತಾರಕರತ್ನ ಕುಟುಂಬದಿಂದ ದೂರಾದ್ರು!

ಹೀರೋ ಆಗಿ ಅದಾಗಲೇ ಅಭಿಮಾನಿಗಳನ್ನ ಸಂಪಾದಿಸಿದ್ದ ತಾರಕರತ್ನ 2012ರ ನಂತರ ತನ್ನ ಫ್ಯಾಮಿಲಿಯಿಂದ ದೂರ ಆಗಬೇಕಾಯಿತು. ಮನೆಯವರ ವಿರೋಧದ ನಡುವೆ ಪ್ರೀತಿಸಿದ ಹುಡುಗಿಯನ್ನ ಮದುವೆಯಾದ ಕಾರಣ ನಂದಮೂರಿ ಕುಟುಂಬದಿಂದ ತಾರಕರತ್ನ ದೂರ ಉಳಿದರು. ಕಾಮನ್ ಫ್ರೆಂಡ್​ ಮೂಲಕ ಪರಿಚಯ ಆದ ಅಲೇಖ್ಯಾ ರೆಡ್ಡಿ ಅವರನ್ನು ಪ್ರೀತಿಸಿದ ತಾರಕರತ್ನ ಎರಡು ಮನೆಗಳ ವಿರೋಧದ ನಡುವೆ ದೇವಸ್ಥಾನದಲ್ಲಿ ಮದುವೆ ಆಗ್ಬೇಕಾಯಿತು. ಅಲೇಖ್ಯಾ ರೆಡ್ಡಿಗೆ ಅದಾಗಲೇ ಮದುವೆಯಾಗಿ ಡಿವೋರ್ಸ್ ಆಗಿತ್ತು. ಆ ಕಾರಣದಿಂದ ನಂದಮೂರಿ ಫ್ಯಾಮಿಲಿ ಈ ಮದುವೆಗೆ ಒಪ್ಪಿರಲಿಲ್ಲ. ಇನ್ನು ಸಿನಿಮಾ ಕುಟುಂಬವಾಗಿದ್ದರಿಂದ ಅಲೇಖ್ಯಾ ರೆಡ್ಡಿ ಮನೆಯವರಿಗೂ ತಾರಕರತ್ನ ಸಂಬಂಧ ಇಷ್ಟ ಇರಲಿಲ್ಲ. ಹೀಗೆ ಎರಡು ಕುಟುಂಬಗಳ ವಿರೋಧದಲ್ಲಿ ಮದುವೆಯಾದ ಕಾರಣ ವರ್ಷಗಳ ಕಾಲ ತಾರಕರತ್ನ ತನ್ನ ತಂದೆ-ತಾಯಿಯಿಂದ ದೂರ ಉಳಿಯಬೇಕಾಯಿತು.

ತಾರಕರತ್ನ ಮತ್ತು ಅಲೇಖ್ಯಾ ರೆಡ್ಡಿ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಈ ಮಗು ಆದ್ಮೇಲೆ ಅಲೇಖ್ಯಾ ರೆಡ್ಡಿ ಫ್ಯಾಮಿಲಿಯವರು ತಾರಕರತ್ನ ಜೊತೆ ಹೊಂದಿಕೊಂಡ್ರು. ಅಲೇಖ್ಯಾ ಕೂಡ ಅವರು ಮನೆಯವರನ್ನ ಸೇರಿದ್ರು. ಆದರೆ, ತಾರಕ್ ತಂದೆ ಮೋಹನಕೃಷ್ಣ ಈ ದ್ವೇಷವನ್ನ ಬಹಳ ವರ್ಷಗಳ ಕಾಲ ಮುಂದುವರಿಸಿ ಬಿಟ್ಟರು. ಈಗಲೂ ತಾರಕರತ್ನ ಮತ್ತು ಅವರ ತಂದೆ ಸಂಬಂಧ ಅಷ್ಟಕ್ಕಷ್ಟೇ ಎನ್ನಲಾಗಿದೆ. ಯಾವುದಾದರೂ ಕಾರ್ಯಕ್ರಮ, ಸಮಾರಂಭಗಳಿದ್ದರೆ ಮಾತ್ರ ಮನೆಯವರನ್ನ ಭೇಟಿ ಮಾಡ್ತಿದ್ರಂತೆ ತಾರಕ್. ತಾರಕರತ್ನಗೆ ಬಾಲಯ್ಯ ತುಂಬಾ ಕ್ಲೋಸ್​. ಈಗಲೂ ತಾರಕರತ್ನ ಆಸ್ಪತ್ರೆ ಸೇರಿದಾಗಿಂದಲೂ ಬಾಲಕೃಷ್ಣ ರಾತ್ರಿ-ಹಗಲು ಆಸ್ಪತ್ರೆಯಲ್ಲಿದ್ದುಕೊಂಡ ಪರಿಸ್ಥಿತಿ ನಿಭಾಯಿಸ್ತಾ ಇದ್ದಾರೆ.

Download the Newsfirstlive app

ಆರೋಗ್ಯವಾಗಿ, ಆ್ಯಕ್ಟಿವ್ ಆಗಿದ್ದ ತಾರಕರತ್ನ!

ಒಂದು ಕಡೆ ಸಿನಿಮಾಗಳು, ಇನ್ನೊಂದ್ಕಡೆ ಫ್ಯಾಮಿಲಿ ಹೀಗೆ ಎರಡನ್ನೂ ಬ್ಯಾಲೆನ್ಸ್ ಮಾಡ್ತಿದ್ದ ತಾರಕರತ್ನ ಈಗ ರಾಜಕೀಯವಾಗಿಯೂ ಸಕ್ರಿಯರಾಗಿದ್ದರು. ಮುಂದಿನ ಚುನಾವಣೆಯಲ್ಲಿ ಟಿಡಿಪಿ ಪಕ್ಷದಿಂದ ಸ್ಪರ್ಧಿಸಲು ತಯಾರಾಗ್ತಿದ್ರು. ಈ ತಯಾರಿಯ ಒಂದು ಭಾಗವೇ ಶುಕ್ರವಾರ ಆರಂಭವಾಗಿದ್ದ ಪಾದಾಯಾತ್ರೆ. ಅದಕ್ಕೂ ಮುಂಚೆ 24ನೇ ತಾರೀಖು ಪರಟಾಲ ರವಿ ಹುಟ್ಟುಹಬ್ಬದ ಹಿನ್ನೆಲೆ ಅವರ ಮನೆಗೆ ಭೇಟಿ ಕೊಟ್ಟಿದ್ದ ತಾರಕರತ್ನ ನಂದಮೂರಿ ಫ್ಯಾಮಿಲಿ ಜೊತೆ ರವಿ ಸಂಬಂಧದ ಬಗ್ಗೆ ಮಾತಾಡಿದ್ರು. ತಾರಕರತ್ನ ವಯಸ್ಸು ಕೇವಲ 39 ವರ್ಷ. ಜ್ಯೂನಿಯರ್​ ಎನ್​ಟಿಆರ್​ಗಿಂತ ಆರು ತಿಂಗಳು ಚಿಕ್ಕವರು. ತಾರಕರತ್ನ ತುಂಬಾ ಆರೋಗ್ಯವಾಗಿ ಆ್ಯಕ್ಟಿವ್​ ಆಗಿದ್ದ ವ್ಯಕ್ತಿ. ಆದರೆ ಇದೀಗ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿರುವುದು ಇಡೀ ನಂದಮೂರಿ ಫ್ಯಾಮಿಲಿಗೆ ಆಘಾತ ತಂದಿದೆ. ಸದ್ಯಕ್ಕೆ ತಾರಕರತ್ನ ಆರೋಗ್ಯ ಸ್ಟೇಬಲ್ ಆಗಿದ್ರೂ ವೈದ್ಯರು ಯಾವುದೇ ಕಾನ್ಫಿಡೆನ್ಸ್ ಕೊಡ್ತಿಲ್ಲ. ಅಗತ್ಯವೆನಿಸೋ ಎಲ್ಲಾ ಪ್ರಯತ್ನಗಳನ್ನ ಮಾಡ್ತಿದ್ರು ಚೇತರಿಕೆಯ ಲಕ್ಷಣ ಕಾಣ್ತಿಲ್ಲ. ತಾರಕರತ್ನ ಕೋಮಾ ತಲುಪಿದ್ದಾರೆ ಎನ್ನಲಾಗುತ್ತಿದೆ. ಇದು ಇನ್ನಷ್ಟು ಆತಂಕ ಹೆಚ್ಚಿಸಿದ್ದು, ತಾರಕರತ್ನ ಬದುಕಿ ಬರಲಿ ಅನ್ನೋ ಪ್ರಾರ್ಥನೆ ಎಲ್ಲರದ್ದು ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Tags: Kannada news channelNandamuri TarakanathNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

by NewsFirst Kannada
April 1, 2023
0

ಅರ್ಥಿಕ ಸಂಕಷ್ಟಕ್ಕೆ ತುತ್ತಾಗಿರೋ ಪಾಕಿಸ್ತಾನದ ಜನ ನರಕಯಾತನೆ ಪಡ್ತಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಪಾಕ್​ನ ತಾಯಂದಿರು ಮಕ್ಕಳ ಹೊಟ್ಟೆ ತುಂಬಿಸಲು ಹೆಣಗಾಡುತ್ತಿದ್ದಾರೆ. ಫ್ರೀ ಫುಡ್​...

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

by NewsFirst Kannada
April 1, 2023
0

ಮತಯುದ್ಧದಲ್ಲಿ ಗೆದ್ದು ಬೀಗೋಕೆ ಕಾಂಗ್ರೆಸ್​​ ಸಮರಾಭ್ಯಾಸವನ್ನ ಬಿರುಸುಗೊಳಿಸಿದೆ. ಅಭ್ಯರ್ಥಿಗಳ 2ನೇ ಪಟ್ಟಿಗಾಗಿ ಸಕಲ ತಯಾರಿ ನಡೆಸಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಲ ಕ್ಷೇತ್ರಗಳ ಟಿಕೆಟ್ ಗೊಂದಲವನ್ನ ಬಗೆಹರಿಸಿದೆ....

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

by NewsFirst Kannada
April 1, 2023
0

IPL 2023ರ ಉದ್ಘಾಟನೆಗೆ ರಶ್ಮಿಕಾ ಮಂದಣ್ಣ ಬರುತ್ತಾರೆ. ಸೊಂಟ ಬಳುಕಿಸುತ್ತಾ ಡ್ಯಾನ್ಸ್​ ಮಾಡುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿತ್ತು. ಆದರೆ ನಿನ್ನೆ ನಡೆದ ಐಪಿಎಲ್​ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್​...

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

by NewsFirst Kannada
April 1, 2023
0

ಒಂದು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ ಮಹೇಂದ್ರ ಸಿಂಗ್ ಧೋನಿಯ ದರ್ಶನವಾಗಿದೆ. ನಿರೀಕ್ಷೆಯಂತೆ ಮೈದಾನದಲ್ಲಿ ತಲಾ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ...

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

by NewsFirst Kannada
April 1, 2023
0

ರಾಜ್ಯ ವಿಧಾನ ಸಭೆಯ ಮತಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ 10ಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗ್ತಿದ್ದಂತೆ ಚುನಾವಣಾ ಅಖಾಡದಲ್ಲಿ ಸಮರಾಭ್ಯಾಸ ಜೋರಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗೆಲ್ಲುವ...

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

by veena
April 1, 2023
0

2023ರ ರಾಜ್ಯ ಚುನಾವಣೆಯೂ ಘೋಷಣೆ ಆಗಿದೆ. ಕೈ-ತೆನೆ ಪಕ್ಷದ ಅಭ್ಯರ್ಥಿಗಳ ಫಸ್ಟ್ ಲಿಸ್ಟ್​​ ಅನೌನ್ಸ್​ ಕೂಡ ಆಗಿದೆ. ಆದ್ರೆ ಕೇಸರಿ ಪಡೆಯ ಸೇನಾನಿಗಳ ಹೆಸರು ಘೋಷಣೆಯಾಗೋದು ಯಾವಾಗ?...

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

by NewsFirst Kannada
April 1, 2023
0

ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಭಾರೀ ಮುಖಭಂಗ ಉಂಟಾಗಿದೆ. ಮೋದಿ ಅವರು ಡಿಗ್ರಿ ಸರ್ಟಿಫಿಕೇಟ್‍ಗಳನ್ನ ಪ್ರದರ್ಶಿಸುವ ಅಗತ್ಯವಿಲ್ಲ ಅಂತ...

ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ ಬಾಲಿವುಡ್​ ಖ್ಯಾತ ಸಿಂಗರ್! ಅರ್ಜಿತ್​ ಸಿಂಗ್ ನಡತೆಗೆ ಫ್ಯಾನ್ಸ್​ ಫಿದಾ

by NewsFirst Kannada
April 1, 2023
0

ಹಿರಿಯರನ್ನು ಕಂಡಾಗ ನಮಸ್ಕರಿಸುವುದು ಭಾರತೀಯರ ಸಂಸ್ಕೃತಿ. ಕೆಲವರಂತೂ ಹಿರಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆಯೇ ಬಾಲಿವುಡ್​​ ಖ್ಯಾತ ಸಿಂಗ್​ ಅರ್ಜಿತ್​ ಸಿಂಗ್​ ಕೂಡ ಚೆನ್ನೈ ಸೂಪರ್​...

ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ BSY ಫುಲ್​ಸ್ಟಾಪ್​; ಆದರೆ ಕುತೂಹಲ ಮೂಡಿಸಿದ ವಿಜಯೇಂದ್ರ ಹೇಳಿಕೆ

by veena
April 1, 2023
0

ವರುಣಾದಲ್ಲಿ ಸಿದ್ದರಾಮಯ್ಯ ಕಟ್ಟಿಹಾಕಲು ವಿಜಯೇಂದ್ರರೇ ಕಣಕ್ಕಿಳೀತಾರಾ? ಹೀಗೊಂದು ಪ್ರಶ್ನೆ ನಿನ್ನೆಯಿಂದಲೂ ಚರ್ಚೆಗೆ ಬಂದಿತ್ತು. ಆದ್ರೆ ಚರ್ಚೆ ಜೋರಾಗ್ತಾ ಇದ್ದಂತೆಯೇ ವಿಜಯೇಂದ್ರ ಸ್ಪರ್ಧೆಗೆ ಮಾಜಿ ಸಿಎಂ ಬಿಎಸ್​​ವೈ ರೆಡ್​​...

ರಾಜ್ಯಾದ್ಯಂತ ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ; 17 KG ಚಿನ್ನಭಾರಣ, ಗರಿಗರಿ ನೋಟು ಸೀಜ್​

by NewsFirst Kannada
April 1, 2023
0

ಅತ್ತ ಬಣ್ಣ ಬಣ್ಣದ ಗಿಫ್ಟ್​ಗಳನ್ನ ನೀಡಿ ಜನನಾಯಕರು ಮತಬೇಟೆಗೆ ಸಜ್ಜಾಗಿದ್ರೆ ಇತ್ತ ಪೊಲೀಸರು ಅವರನ್ನೇ ಬೇಟೆಯಾಡ್ತಿದ್ದಾರೆ. ರಾಜ್ಯದ ಎಂಟು ದಿಕ್ಕುಗಳ ಮೇಲೂ ಕಣ್ಣಿಟ್ಟಿರೋ ಚುನಾವಣಾ ಆಯೋಗ ಅಕ್ರಮಗಳಿಗೆ...

Next Post

ವಿಷ್ಣು ದಾದಾರನ್ನು ಹಾಡಿಹೊಗಳಿದ ಅಶ್ವಿನಿ ಪುನೀತ್​​​​ ರಾಜಕುಮಾರ್​​!

'ಹಾಸನದಲ್ಲಿ ಗೆಲ್ಲೋ ಅರ್ಹತೆ ಇರೋರಿಗೆ ಟಿಕೆಟ್‌’; ಡ್ಯಾಮೇಜ್ ಕಂಟ್ರೋಲ್‌ಗೆ ಇಬ್ರಾಹಿಂ ಸರ್ಕಸ್‌

veena

veena

LATEST NEWS

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

April 1, 2023

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

April 1, 2023

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

April 1, 2023

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

April 1, 2023

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

April 1, 2023

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

April 1, 2023

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

April 1, 2023

ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ ಬಾಲಿವುಡ್​ ಖ್ಯಾತ ಸಿಂಗರ್! ಅರ್ಜಿತ್​ ಸಿಂಗ್ ನಡತೆಗೆ ಫ್ಯಾನ್ಸ್​ ಫಿದಾ

April 1, 2023

ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ BSY ಫುಲ್​ಸ್ಟಾಪ್​; ಆದರೆ ಕುತೂಹಲ ಮೂಡಿಸಿದ ವಿಜಯೇಂದ್ರ ಹೇಳಿಕೆ

April 1, 2023

ರಾಜ್ಯಾದ್ಯಂತ ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ; 17 KG ಚಿನ್ನಭಾರಣ, ಗರಿಗರಿ ನೋಟು ಸೀಜ್​

April 1, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ