Saturday, April 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

Share on Facebook Share on Twitter Send Share
February 2, 2023

ರೋಹಿತ್​ ಶರ್ಮಾ ಇರಲಿಲ್ಲ, ವಿರಾಟ್​​ ಕೊಹ್ಲಿ ಇರಲಿಲ್ಲ. ಹಾಗಿದ್ರೂ ನಿನ್ನೆಯ ಪಂದ್ಯಕ್ಕೆ ಅಭಿಮಾನಿಗಳ ಕ್ರೇಜ್​ ಕಿಂಚಿತ್ತೂ ಕಡೆಮೆಯಾಗಿರಲಿಲ್ಲ. ಯಂಗ್​ ಇಂಡಿಯಾವನ್ನ ಬೆಂಬಲಿಸಲು ಲಕ್ಷಕ್ಕೂ ಹೆಚ್ಚು ಮೈದಾನಕ್ಕೆ ಬಂದಿದ್ರು. ಕೋಟ್ಯಾಂತರ ಜನ ಟಿವಿ ಮುಂದೆ ಕೂತಿದ್ರು. ಹಾಗೇ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆಯಾಗಲಿಲ್ಲ. ಯಾಕಂದ್ರೆ ಪ್ಯೂಚರ್​ಸ್ಟಾರ್​​ ಶುಭ್​ಮನ್​ ಆಟ ಹಾಗಿತ್ತು.

ನ್ಯೂಜಿಲೆಂಡ್​​ ವಿರುದ್ಧದ ನಿನ್ನೆಯ ಪಂದ್ಯಕ್ಕೂ ಮುನ್ನ ಬಿಗ್​ ಡಿಬೇಟ್​​ ನಡೆದಿತ್ತು. ಓಪನರ್​​ ಶುಭ್​ಮನ್​ ಗಿಲ್​ ಟಿ20 ಫಾರ್ಮೆಟ್​ಗೆ ಸೂಟ್​ ಆಗಲ್ಲಾ ಅಂತಾ ದೊಡ್ಡ ದೊಡ್ಡ ಎಕ್ಸ್​​ಪರ್ಟ್ಸ್​ಗಳೇ ಭವಿಷ್ಯ ನುಡಿದಿದ್ರು. ಮೊದಲ 2 ಪಂದ್ಯದಲ್ಲಿ ಗಿಲ್​ ವೈಫಲ್ಯ ಅನುಭವಿಸಿದ್ದನ್ನ ಮುಂದಿಟ್ಟು, ಬೆಂಚ್​ನಲ್ಲಿರೋ ಮುಂಬೈಕರ್​ ಪೃಥ್ವಿ ಶಾಗೆ ಚಾನ್ಸ್​ ನೀಡಿ ಅಂತಾ ಲಾಬಿ ನಡೆಸಿದ್ರು. ಆದ್ರೆ ಪಂದ್ಯದಲ್ಲಿ ಫಸ್ಟ್​​ ಇನ್ನಿಂಗ್ಸ್​ ಮುಗಿದಿದ್ದೇ ಮುಗಿದಿದ್ದು ಎಲ್ಲೆಡೆ ಶುಭ್​ಮನ್​​ಗೆ ಸಲಾಂ ಅಂತಿದ್ದಾರೆ.

Download the Newsfirstlive app

ನಮೋ ಮೈದಾನದಲ್ಲಿ ಶುಭ್​ಮನ್​ ಗಿಲ್​ ಘರ್ಜನೆ

ಕಿವೀಸ್​ ಸರಣಿಯ ಮೊದಲ ಪಂದ್ಯದಲ್ಲಿ 7 ರನ್​ಗೆ ಔಟ್​. 2ನೇ ಪಂದ್ಯದಲ್ಲಿ 11 ರನ್​ಗಳಿಗೆ ಆಟ ಬಂದ್​​. ಈ ಎರಡು ವೈಫಲ್ಯಗಳು ಶುಭ್​ಮನ್​ ಗಿಲ್ ಟಿ20​ ಕರಿಯರ್​ ಅನ್ನೇ ಮುಗಿಸೋ ಸಿಚ್ಯುವೇಷನ್​ ಕ್ರಿಯೇಟ್​ ಮಾಡಿದ್ವು. ಎಗ್ಗಿಲ್ಲದೇ ಟೀಕಾ ಪ್ರಹಾರ ನಡೆದಿತ್ತು. ಆದ್ರೆ ಇದೆಲ್ಲವನ್ನ ಗಿಲ್​ ತಲೆಗೆ ಹಾಕ್ಕೊಳ್ಳಲಿಲ್ಲ. ಹಾಗಂತ ಉತ್ತರ ಕೊಡಲಿಲ್ಲ ಅನ್ಕೋಬೇಡಿ. ಟೀಕಿಸಿದವರಿಗೆ ನಮೋ ಮೈದಾನದಲ್ಲಿ ಘರ್ಜಸಿ ಬ್ಯಾಟ್​​ನಿಂದಲೇ ಉತ್ತರ ನೀಡಿದ್ರು.

ಬೌಂಡರಿ, ಸಿಕ್ಸರ್​ಗಳ ಆರ್ಭಟ, ಕಿವೀಸ್​ ಪಡೆ ಥಂಡಾ

ಅಕ್ಷರಶಃ ಶುಭ್​ಮನ್​ ಗಿಲ್​ ಬ್ಯಾಟಿಂಗ್​ ವೈಭವ ಹಾಗಿತ್ತು. ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ನೆರೆದಿದ್ದ ಮೈದಾನದಲ್ಲಿ ಬೌಂಡರಿ, ಸಿಕ್ಸರ್​ಗಳ ಮೇಳ ನಡೆಯಿತು. ಮೈದಾನದ ಉದ್ದಗಲಕ್ಕೂ ಚೆಂಡಿನ ದರ್ಶನ ಆಯ್ತು. ಕಿವೀಸ್​​ ಬೌಲರ್​ಗಳ ದಾಳಿಯನ್ನ ಉಡಾಯಿಸಿದ ಗಿಲ್​ ಬರೋಬ್ಬರಿ 12 ಬೌಂಡರಿ, 7 ಸಿಕ್ಸರ್​ ಸಿಡಿಸಿ ಅಭಿಮಾನಿಗಳನ್ನ ರಂಜಿಸಿದ್ರು.

ಶತಕ ಸಿಡಿಸಿ ಸಂಭ್ರಮಿಸಿದ ಪಂಜಾಬ್​ ಪುತ್ತರ್

ಅಬ್ಬರಿಸಲೇಬೇಕಾದ ಒತ್ತಡವಿದ್ರೂ ಪಂದ್ಯದಲ್ಲಿ ಶುಭ್​ಮನ್​ ಫುಲ್​ RELAXED ಆಗಿ ಬ್ಯಾಟ್​ ಬೀಸಿದ್ರು. ಆರಂಭದಲ್ಲಿ ಎಚ್ಚರಿಕೆಯ ಆಟದೊಂದಿಗೆ ವೇಗವಾಗಿ ರನ್​​ ಕಲೆ ಹಾಕಿದ ಪಂಜಾಬ್​ ಪುತ್ತರ್​, 35 ಎಸೆತಗಳಲ್ಲಿ ಹಾಫ್​ ಸೆಂಚುರಿ ಸಿಡಿಸಿದ್ರು. ಆದ್ರೆ, ಹಾಫ್​ ಸೆಂಚುರಿ ಸಿಡಿಸಿದ ಬಳಿಕ ಗಿಲ್​ ಆಟ ಕಂಪ್ಲೀಟ್​ ಚೇಂಜ್​ ಆಯ್ತು. ಕಿವೀಸ್​ ಬೌಲರ್​ಗಳ ದಾಳಿಯನ್ನ ಬೌಂಡರಿ, ಸಿಕ್ಸರ್​​ಗಳಿಂದಲೇ ಡೀಲ್​ ಮಾಡಿದ ಯಂಗ್​ ಟೈಗರ್​​, ಮುಂದಿನ 19 ಎಸೆತಗಳಲ್ಲೇ ನೆಕ್ಸ್ಟ್​​ ಫಿಫ್ಟಿ ಸಿಡಿಸಿದ್ರು. ಅಂದ್ರೆ ಕೇವಲ 54 ಎಸೆತಗಳಲ್ಲಿ ಚೊಚ್ಚಲ ಸೆಂಚುರಿ ಬಾರಿಸಿದ್ರು. ಈ ಮೂಲಕ ಚುಟುಕು ಫಾರ್ಮೆಟ್​​ನಲ್ಲಿ ಸೆಂಚುರಿ ಸಿಡಿಸಿದ ಭಾರತದ 7ನೇ ಬ್ಯಾಟ್ಸ್​​ಮನ್​ ಅನ್ನೋ ಸಾಧನೆ ಮಾಡಿದ್ರು.

ಶುಭ್​ಮನ್​ ಅಬ್ಬರದ ಮುಂದೆ ದಾಖಲೆಗಳೆಲ್ಲಾ ಉಡೀಸ್​

ಕಿವೀಸ್ ಬೌಲಿಂಗ್​ ದಾಳಿಯನ್ನ ಧೂಳಿಪಟ ಮಾಡಿದ ಶುಭ್​ಮನ್​ ದಾಖಲೆಗಳನ್ನೂ ಉಡೀಸ್​ ಮಾಡಿದ್ರು. ಟೆಸ್ಟ್​, ಏಕದಿನ ಹಾಗೂ ಟಿ20 ಈ 3 ಮಾದರಿಯಲ್ಲಿ ಶತಕ ಸಿಡಿಸಿದ ದಿಗ್ಗಜ ಆಟಗಾರರ ಲಿಸ್ಟ್​ನಲ್ಲಿ ಯುವ ಬ್ಯಾಟ್ಸ್​ಮನ್​ ಹೆಸರು ನೋಂದಾಯಿಸಿಕೊಂಡ್ರು. 3 ಮಾದರಿಯಲ್ಲಿ ಶತಕ ಸಿಡಿಸಿ ಭಾರತದ 5ನೇ ಬ್ಯಾಟ್ಸ್​ಮನ್​ ಅನ್ನೋ ಹೆಗ್ಗಳಿಕೆಗೆ ಪಾತ್ರರಾದ್ರು. ಇಷ್ಟೇ ಅಲ್ಲ, ಕಿವೀಸ್​​ ವಿರುದ್ಧ ಏಕದಿನದಲ್ಲಿ ದ್ವಿಶತಕ, ಟಿ20ಯಲ್ಲಿ ಶತಕ ಸಿಡಿಸಿದ ವಿಶಿಷ್ಟ ಸಾಧನೆಯನ್ನೂ ಮಾಡಿದ್ರು.

ಕಿಂಗ್​ ಕೊಹ್ಲಿಯನ್ನೇ ಹಿಂದಿಕ್ಕಿದ ಶೈನಿಂಗ್​ ಶುಭ್​ಮನ್

ಕೊಹ್ಲಿ ಅಂದ್ರೆ ದಾಖಲೆಯ ಒಡೆಯ. ಅಂತಹ ಕೊಹ್ಲಿಯ ಒಂದು ದಾಖಲೆಯನ್ನೇ ಶುಭ್​ಮನ್​ ಕಸಿದುಕೊಂಡ್ರು. ಪಂದ್ಯದಲ್ಲಿ 200ರ ಸ್ಟ್ರೇಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ ಶುಭ್​ಮನ್​ 63 ಎಸೆತಗಳಲ್ಲಿ ಅಜೇಯ 126 ರನ್​​ಗಳಿಸಿದ್ರು. ಈ ಮೂಲಕ ಟಿ20 ಮಾದರಿಯಲ್ಲಿ ಟೀಮ್​ ಇಂಡಿಯಾ ಪರ ಗರಿಷ್ಠ ರನ್​ ಸಿಡಿಸಿದ ಬ್ಯಾಟ್ಸ್​​ಮನ್​ ಅನ್ನೋ ದಾಖಲೆ ಬರೆದ್ರು. ಈ ಹಿಂದೆ ಈ ಹೆಗ್ಗಳಿಕೆ 122 ರನ್​ ಸಿಡಿಸಿದ್ದ ಕಿಂಗ್​ ಕೊಹ್ಲಿ ಹೆಸರಲ್ಲಿತ್ತು.

ಶೈನಿಂಗ್​ ಶುಭ್​ಮನ್​​ಗಿನ್ನೂ ಕೇವಲ 23 ವರ್ಷ, ಅದಾಗಲೇ ಏಕದಿನದಲ್ಲಿ ಡಬಲ್​ ಸೆಂಚುರಿ, ಟಿ20ಯಲ್ಲಿ ಸೆಂಚುರಿಗಳನ್ನ ಚಚ್ಚಿ ದಾಖಲೆಯ ಪುಟಗಳಲ್ಲಿ ದಿಗ್ಗಜರೊಂದಿಗೆ ಸ್ಥಾನ ಪಡೀತಾ ಇದ್ದಾರೆ. ಸದ್ಯಕ್ಕಂತೂ ಶುಭ್​ಮನ್​ ಗಿಲ್​ ಟೀಮ್​ ಇಂಡಿಯಾದ ಪ್ಯೂಚರ್​ ಸ್ಟಾರ್​ ಅನ್ನೋ ಮಾತನ್ನ ಎಲ್ಲರೂ ಆಡ್ತಿದ್ದಾರೆ. ಇದೇ ಕನ್ಸಿಸ್ಟೆನ್ಸಿಯನ್ನೇ ಮುಂದುವರೆಸಿದ್ರೆ ಶುಭ್​ಮನ್​ ಗಿಲ್​ ಲೆಜೆಂಡ್​ ಪಟ್ಟ ಅಲಂಕರಿಸೋದ್ರಲ್ಲಿ ಅನುಮಾನವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: kohlishubman gillT20I ton

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಬೆಂಗಳೂರು: ಕರ್ಲಾನ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ -Video

by NewsFirst Kannada
April 1, 2023
0

ಬೆಂಗಳೂರು: ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯಿರುವ ಕರ್ಲಾನ್ ಕಾರ್ಖಾನೆಗೆ ಬೆಂಕಿ ಬಿದ್ದಿದೆ. ಬೆಂಕಿಯ ಜ್ವಾಲೇ ಧಗಧಗಿಸುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಬೆಂಕಿ...

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್​​ ದರ ಮತ್ತೆ ಏರಿಕೆ; ದ್ವಿಮುಖ ಸಂಚಾರಕ್ಕೆ ಎಷ್ಟು ಗೊತ್ತಾ?

by NewsFirst Kannada
April 1, 2023
0

ಲೋಕಾರ್ಪಣೆಗೊಂಡ ದಿನದಿಂದಲೂ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ದರ ಮತ್ತೆ ಏರಿಕೆಯಾಗಿದೆ. ಟೋಲ್ ಸಂಗ್ರಹ ಪ್ರಾರಂಭವಾದ 17 ದಿನಕ್ಕೆ ಶೇ.22ರಷ್ಟು ಟೋಲ್ ದರ...

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

by NewsFirst Kannada
April 1, 2023
0

ವಾಣಿಜ್ಯ ಸಿಲಿಂಡರ್​ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರು ಕೊಂಚ ನಿಟ್ಟುಸಿರುವ ಬಿಡುವ ಸುದ್ದಿಯೊಂದು ಇಲ್ಲಿದೆ. ಕೊರೋನಾ ಮತ್ತು ಆರ್ಥಿಕ ಹೊಡೆತಕ್ಕೆ ಕಂಗೆಟ್ಟಿದ್ದ ಜನರಿಗೆ ವಾಣಿಜ್ಯ ಎಲ್​ಪಿಜಿ ಗ್ಯಾಸ್​...

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

by NewsFirst Kannada
April 1, 2023
0

ಅರ್ಥಿಕ ಸಂಕಷ್ಟಕ್ಕೆ ತುತ್ತಾಗಿರೋ ಪಾಕಿಸ್ತಾನದ ಜನ ನರಕಯಾತನೆ ಪಡ್ತಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಪಾಕ್​ನ ತಾಯಂದಿರು ಮಕ್ಕಳ ಹೊಟ್ಟೆ ತುಂಬಿಸಲು ಹೆಣಗಾಡುತ್ತಿದ್ದಾರೆ. ಫ್ರೀ ಫುಡ್​...

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

by NewsFirst Kannada
April 1, 2023
0

ಮತಯುದ್ಧದಲ್ಲಿ ಗೆದ್ದು ಬೀಗೋಕೆ ಕಾಂಗ್ರೆಸ್​​ ಸಮರಾಭ್ಯಾಸವನ್ನ ಬಿರುಸುಗೊಳಿಸಿದೆ. ಅಭ್ಯರ್ಥಿಗಳ 2ನೇ ಪಟ್ಟಿಗಾಗಿ ಸಕಲ ತಯಾರಿ ನಡೆಸಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಲ ಕ್ಷೇತ್ರಗಳ ಟಿಕೆಟ್ ಗೊಂದಲವನ್ನ ಬಗೆಹರಿಸಿದೆ....

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

by NewsFirst Kannada
April 1, 2023
0

IPL 2023ರ ಉದ್ಘಾಟನೆಗೆ ರಶ್ಮಿಕಾ ಮಂದಣ್ಣ ಬರುತ್ತಾರೆ. ಸೊಂಟ ಬಳುಕಿಸುತ್ತಾ ಡ್ಯಾನ್ಸ್​ ಮಾಡುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿತ್ತು. ಆದರೆ ನಿನ್ನೆ ನಡೆದ ಐಪಿಎಲ್​ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್​...

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

by NewsFirst Kannada
April 1, 2023
0

ಒಂದು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ ಮಹೇಂದ್ರ ಸಿಂಗ್ ಧೋನಿಯ ದರ್ಶನವಾಗಿದೆ. ನಿರೀಕ್ಷೆಯಂತೆ ಮೈದಾನದಲ್ಲಿ ತಲಾ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ...

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

by NewsFirst Kannada
April 1, 2023
0

ರಾಜ್ಯ ವಿಧಾನ ಸಭೆಯ ಮತಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ 10ಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗ್ತಿದ್ದಂತೆ ಚುನಾವಣಾ ಅಖಾಡದಲ್ಲಿ ಸಮರಾಭ್ಯಾಸ ಜೋರಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗೆಲ್ಲುವ...

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

by veena
April 1, 2023
0

2023ರ ರಾಜ್ಯ ಚುನಾವಣೆಯೂ ಘೋಷಣೆ ಆಗಿದೆ. ಕೈ-ತೆನೆ ಪಕ್ಷದ ಅಭ್ಯರ್ಥಿಗಳ ಫಸ್ಟ್ ಲಿಸ್ಟ್​​ ಅನೌನ್ಸ್​ ಕೂಡ ಆಗಿದೆ. ಆದ್ರೆ ಕೇಸರಿ ಪಡೆಯ ಸೇನಾನಿಗಳ ಹೆಸರು ಘೋಷಣೆಯಾಗೋದು ಯಾವಾಗ?...

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

by NewsFirst Kannada
April 1, 2023
0

ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಭಾರೀ ಮುಖಭಂಗ ಉಂಟಾಗಿದೆ. ಮೋದಿ ಅವರು ಡಿಗ್ರಿ ಸರ್ಟಿಫಿಕೇಟ್‍ಗಳನ್ನ ಪ್ರದರ್ಶಿಸುವ ಅಗತ್ಯವಿಲ್ಲ ಅಂತ...

Next Post

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

Bhimappa

Bhimappa

LATEST NEWS

ಬೆಂಗಳೂರು: ಕರ್ಲಾನ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ -Video

April 1, 2023

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್​​ ದರ ಮತ್ತೆ ಏರಿಕೆ; ದ್ವಿಮುಖ ಸಂಚಾರಕ್ಕೆ ಎಷ್ಟು ಗೊತ್ತಾ?

April 1, 2023

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

April 1, 2023

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

April 1, 2023

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

April 1, 2023

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

April 1, 2023

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

April 1, 2023

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

April 1, 2023

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

April 1, 2023

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

April 1, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ