Saturday, April 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಒನ್​ ಡೇ ಮ್ಯಾಚ್​ನಲ್ಲಿ ಸೂರ್ಯ ಕುಮಾರ್​ಗಿಲ್ಲ ಸಕ್ಸಸ್​.​! ಮಿಸ್ಟರ್​ 360ಗೆ ಇನ್ನೆಷ್ಟು ಚಾನ್ಸ್ ಬೇಕು?

Share on Facebook Share on Twitter Send Share
March 19, 2023

ಈತ ಟಿ20 ಕ್ರಿಕೆಟ್​ನಲ್ಲಿ ಬೆಸ್ಟ್​ ಬ್ಯಾಟಿಂಗ್​ ಪರ್ಫಾರ್ಮರ್​. ಯಾವುದೇ ಎಸೆತವನ್ನಾಗಲಿ ಲೀಲಾಜಾಲವಾಗಿ ಸಿಕ್ಸರ್​ ಬಾರಿಸೋದು ಈತನ ಖಯಾಲಿ. ಒಂದು ಎಸೆತವನ್ನು ಭಿನ್ನ ವಿಭಿನ್ನ ರೀತಿಯಲ್ಲಿ ಬಾರಿಸುವಲ್ಲಿ ಈತ ನಿಸ್ಸೀಮಾ. ಆದ್ರೆ ಏಕದಿನ ಫಾರ್ಮೆಟ್​​ಗೆ ಬಂದರೆ ಈತ ನಿಜಕ್ಕು ಆತನೇನಾ ಅನಿಸುತ್ತೆ. ಈತನ ಸಾಮರ್ಥ್ಯ ಪ್ರೂವ್ ಮಾಡಿಕೊಳ್ಳೋಕೆ ಇನ್ನೆಷ್ಟು ಚಾನ್ಸ್ ನೀಡಬೇಕು?.

ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್​ನ ನಯಾ ಸೂಪರ್ ಸ್ಟಾರ್​. ಈತನ ಬ್ಯಾಟಿಂಗ್​ ಈತನ ಅನ್​ ಪ್ರಿಡೆಕ್ಟಬಲ್ ಶಾಟ್ಸ್​ಗೆ ಫಿದಾ ಆಗದ ಕ್ರಿಕೆಟ್ ಪ್ರೇಮಿಗಳೇ ಇಲ್ಲ. ಎಂಥಹ ಡೇಂಜರಸ್​ ಬಾಲ್​ಗು ಉತ್ತರ ನೀಡಬಲ್ಲ ಕೇಪೆಬಲಿಟಿ ಈತನಲ್ಲಿದೆ. ಒಂದೇ ಎಸೆತವನ್ನು ಅಷ್ಟ ದಿಕ್ಕೂಗಳಿಗೂ ಹೊಡೆಯುವ ಚಾಣಾಕ್ಷ. ಹೀಗಾಗಿಯೇ ಈತ ಟಿ20 ಕ್ರಿಕೆಟ್​​​​ ಸ್ಪೆಷಲಿಸ್ಟ್​ಗಳ ಬಾಪ್​. ಆದ್ರೆ ಏಕದಿನ ಫಾರ್ಮೆಟ್​ನಲ್ಲಿ ಮಾತ್ರ ಎಲ್ಲವೂ ಉಲ್ಟಾ.

ಟಿ20ಯಲ್ಲಿ ಅಬ್ಬರಿಸಿ ಬೊಬ್ಬೆರೆದು. ಮಜಾ, ಮಜಾವಾಗಿ ಫಿಯರ್​ಲೆಸ್ ಕ್ರಿಕೆಟ್ ಆಡೋ ಸೂರ್ಯಕುಮಾರ್. ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಇದಕ್ಕೆಲ್ಲ ಕಾರಣ ಈತ ಏಕದಿನ ಫಾರ್ಮೆಟ್​ನಲ್ಲಿ ನೀಡ್ತಿರೋ ಪರ್ಫಾಮೆನ್ಸ್​.

ಆಸೀಸ್ ವಿರುದ್ಧ ಸಿಕ್ಕ ಅವಕಾಶ ಕೈಚೆಲ್ಲಿದ ಸೂರ್ಯ!

ಶ್ರೇಯಸ್​ ಅಯ್ಯರ್ ಅಲಭ್ಯತೆಯಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದ ಸೂರ್ಯಕುಮಾರ್ ತಾನೇನು ಅನ್ನೋದನ್ನ ಫ್ರೂವ್ ಮಾಡೋಕೆ ಉತ್ತಮ ಅವಕಾಶವಾಗಿತ್ತು. ಆದ್ರೆ, ಈ ಅವಕಾಶವನ್ನ ಕೈಯಾರೆ ಹಾಳು ಮಾಡಿಕೊಂಡಿದ್ದು ಸೂರ್ಯಕುಮಾರ್​ ಯಾದವ್.
ಆಸೀಸ್​ ನೀಡಿದ್ದ 189 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಟೀಮ್ ಇಂಡಿಯಾ 16 ರನ್​​ಗಳಿಗೆ ಪ್ರಮುಖ 2 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಸೂರ್ಯಗೆ ಇನ್ನಿಂಗ್ಸ್​ ಕಟ್ಟುವ ಸುವರ್ಣಾವಕಾಶ ದೊರೆತಿತ್ತು. ಆದ್ರೆ, ಸೂರ್ಯ ವಿಕೆಟ್ ಒಪ್ಪಿಸಿದ್ದು ಕೇವಲ ಶೂನ್ಯಕ್ಕೆ. ಇದೇ ಈಗ ಸೂರ್ಯಕುಮಾರ್​​ ಯಾದವ್​ ಬಗ್ಗೆ ಪ್ರಶ್ನಿಸುವಂತೆ ಮಾಡುತ್ತಿದೆ.

ಈ ಪ್ರಶ್ನೆ ಕೇಳ್ತಿರೋದು ಜಸ್ಟ್​ ಮೊನ್ನೆಯ ಬ್ಯಾಟಿಂಗ್ ವೈಫಲ್ಯದಿಂದ ಮಾತ್ರ ಅಲ್ಲ. ಕಳೆದ 2 ವರ್ಷಗಳಿಂದ ಏಕದಿನ ಫಾರ್ಮೆಟ್​ನಲ್ಲಿ ಸೂರ್ಯಕುಮಾರ್ ನೀಡ್ತಿರುವ ಪ್ರದರ್ಶನದಿಂದಾಗಿ. ಯಾಕಂದ್ರೆ. ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ ಆರಂಭದಲ್ಲಿ 6 ಪಂದ್ಯಗಳ ಗುಡುಗಿದ್ದು ಬಿಟ್ರೆ, ಆ ಬಳಿಕ ಸೂರ್ಯ ಮಿಂಚಿದ್ದು ಇರಲಿ, ಕನಿಷ್ಠ ಪಕ್ಷ ತಂಡಕ್ಕೆ ಆಸರೆಯು ಆಗಲಿಲ್ಲ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಸೂರ್ಯ ಬ್ಯಾಟ್​​ನಿಂದ ಮೊದಲ 6 ಏಕದಿನ ಪಂದ್ಯಗಳಲ್ಲಿ 2 ಅರ್ಧಶತಕ ಬಂದಿದ್ದು ಬಿಟ್ಟರೆ, ಉಳಿದೆಲ್ಲವು ಠುಸ್ ಪಟಾಕಿ ಆಗಿವೆ.

ಇದನ್ನು ಓದಿ: ರಾಮ್​ ಚರಣ್​ಗೆ ಕೊಹ್ಲಿ​ ಪಾತ್ರದಲ್ಲಿ ಕಾಣಿಸುವ ಆಸೆ.. ಸ್ಕ್ರೀನ್​​ ಮೇಲೆ ಬ್ಯಾಟ್​​ ಬೀಸಲಿದ್ದಾರೆ ಮೆಗಾ ಪವರ್​ ಸ್ಟಾರ್​​?

Download the Newsfirstlive app

ಒನ್​ ಡೇಯಲ್ಲಿ ಸೂರ್ಯ ಸಾಧನೆ

ಹೌದು! ಕೊನೆ 10 ಏಕದಿನ ಇನ್ನಿಂಗ್ಸ್​ಗಳಿಂದ 123 ರನ್​ಗಳಿಸಿರುವ ಸೂರ್ಯಕುಮಾರ್ ಯಾದವ್, ಅಜೇಯ 34 ರನ್​ ಗಳಿಸಿದ್ದು ಬೆಸ್ಟ್​ ಪರ್ಫಾಮೆನ್ಸ್​ ಆಗಿದೆ. 13.66 ಸರಾಸರಿಯಲ್ಲಿ ರನ್​​ಗಳಿಸಿರುವ ಸೂರ್ಯ, 116.03 ಸ್ಟ್ರೈಕ್​ರೇಟ್​ ಹೊಂದಿದ್ದಾರೆ.

ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಈ ಕೊನೆ 10 ಇನ್ನಿಂಗ್ಸ್​ಳಿಂದ ಸೂರ್ಯ ಒಂದಂಕಿ ಮೊತ್ತ ದಾಟಿದ್ದು ಜಸ್ಟ್​ 4 ಬಾರಿ ಮಾತ್ರ. ಹೀಗಾದರು ಮುಂಬೈಕರ್​ಗೆ ಟೀಮ್ ಮ್ಯಾನೇಜ್​ಮೆಂಟ್​ ಕೃಪಾಕಟಾಕ್ಷ ತೋರಿಸ್ತಿದೆ. ಇದು ನಿಜಕ್ಕು ಅಭಿಮಾನಿಗಳನ್ನ ಪ್ರಶ್ನಿಸುವಂತೆ ಮಾಡಿದೆ.

ಮತ್ತೆರೆಡು ಚಾನ್ಸ್​ ಫಿಕ್ಸ್​.. ಅಬ್ಬರಿಸ್ತಾರಾ SKY?

ಸದ್ಯ ಶ್ರೇಯಸ್​ ಅಲಭ್ಯತೆಯಲ್ಲಿ ಬದಲಿ ಆಟಗಾರನನ್ನ ನೇಮಿಸದ ಸೆಲೆಕ್ಷನ್ ಕಮಿಟಿ, ಒಂದು ರೀತಿ ಸೂರ್ಯಕುಮಾರ್​ ಯಾದವ್​ಗೆ ವರದಾನವಾಗುವಂತೆ ಮಾಡಿದೆ. ಇದಕ್ಕೆ ಕಾರಣ ಸದ್ಯ ತಂಡದಲ್ಲಿ ಸೂಕ್ತ ಮಿಡಲ್ ಆರ್ಡರ್ ಬ್ಯಾಟರ್​ನ ಕೊರತೆ ಇದೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಇನ್ನೊಂದು ಪಂದ್ಯದಲ್ಲಿ ಸೂರ್ಯನೇ ಮುಂದುವರಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಸಿಗುವ ಈ ಇನ್ನೊಂದು ಅವಕಾಶವನ್ನ ಸದ್ಬಳಕೆ ಮಾಡಿಕೊಳ್ಳುವ ಸುವರ್ಣಾವಕಾಶ ಸೂರ್ಯಗೆ ಇದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಸದ್ಬಳಕೆ ಮಾಡಿಕೊಳ್ತಾರೆ ಅನ್ನೋದನ್ನ​ ಕಾದು ನೋಡಬೇಕಷ್ಟೇ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Tags: IND Vs AUSODI inningsSuryakumar Yadav

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಸಿನಿಮಾದಲ್ಲಿ ಹೀರೋ ಆಗೋ ಕನಸ ಹೊತ್ತವರೇ ಹುಷಾರ್​! ಪಂಗನಾಮ ಹಾಕ್ತಾರೆ ಎಚ್ಚರ

by NewsFirst Kannada
April 1, 2023
0

ನಾನು‌ ಹೀರೋ ಆಗಬೇಕು. ಸಿನಿಮಾದಲ್ಲಿ ನಟಿಸಬೇಕು ಎಂದು ಆಸೆ ಇಟ್ಟುಕೊಂಡವರೇ ಹುಷಾರ್​!. ನೀವು ಮೋಸ ಹೋಗೋದರಲ್ಲಿ ಯಾವುದೇ ಅನುಮಾನವೇ ಇಲ್ಲ. ಯಾಕಂದ್ರೆ ಸಿನಿಮಾ ಅವಕಾಶ ಕೊಡ್ತೀನಿ ಅಂತ...

IPLನಲ್ಲಿ ಇಂದು ಡಬಲ್ ಪಂದ್ಯ: ಹೈ-ವೋಲ್ಟೇಜ್ ಕದನದಲ್ಲಿ ಗೆಲ್ಲೋದು ಯಾರು..?

by NewsFirst Kannada
April 1, 2023
0

ಉದ್ಘಾಟನಾ ಪಂದ್ಯದಲ್ಲೇ ಐಪಿಎಲ್ ಸೀಸನ್​-16 ಥ್ರಿಲ್ಲಿಂಗ್ ಕಿಕ್​ ನೀಡಿದೆ. ಇಂದಿನ ಡಬಲ್ ಡೆಕ್ಕರ್ ಮ್ಯಾಚ್​ನಲ್ಲಿ ಮತ್ತಷ್ಟು ಕಿಚ್ಚು ಹೆಚ್ಚಿಸೋಕೆ ರೆಡಿಯಾಗಿದೆ. ನಾಲ್ಕು ತಂಡಗಳ ನಡುವಿನ ಎರಡು ಹೈವೋಲ್ಟೇಜ್...

ಬೆಂಗಳೂರು: ಕರ್ಲಾನ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ -Video

by NewsFirst Kannada
April 1, 2023
0

ಬೆಂಗಳೂರು: ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯಿರುವ ಕರ್ಲಾನ್ ಕಾರ್ಖಾನೆಗೆ ಬೆಂಕಿ ಬಿದ್ದಿದೆ. ಬೆಂಕಿಯ ಜ್ವಾಲೇ ಧಗಧಗಿಸುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಬೆಂಕಿ...

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್​​ ದರ ಮತ್ತೆ ಏರಿಕೆ; ದ್ವಿಮುಖ ಸಂಚಾರಕ್ಕೆ ಎಷ್ಟು ಗೊತ್ತಾ?

by NewsFirst Kannada
April 1, 2023
0

ಲೋಕಾರ್ಪಣೆಗೊಂಡ ದಿನದಿಂದಲೂ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ದರ ಮತ್ತೆ ಏರಿಕೆಯಾಗಿದೆ. ಟೋಲ್ ಸಂಗ್ರಹ ಪ್ರಾರಂಭವಾದ 17 ದಿನಕ್ಕೆ ಶೇ.22ರಷ್ಟು ಟೋಲ್ ದರ...

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

by NewsFirst Kannada
April 1, 2023
0

ವಾಣಿಜ್ಯ ಸಿಲಿಂಡರ್​ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರು ಕೊಂಚ ನಿಟ್ಟುಸಿರುವ ಬಿಡುವ ಸುದ್ದಿಯೊಂದು ಇಲ್ಲಿದೆ. ಕೊರೋನಾ ಮತ್ತು ಆರ್ಥಿಕ ಹೊಡೆತಕ್ಕೆ ಕಂಗೆಟ್ಟಿದ್ದ ಜನರಿಗೆ ವಾಣಿಜ್ಯ ಎಲ್​ಪಿಜಿ ಗ್ಯಾಸ್​...

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

by NewsFirst Kannada
April 1, 2023
0

ಅರ್ಥಿಕ ಸಂಕಷ್ಟಕ್ಕೆ ತುತ್ತಾಗಿರೋ ಪಾಕಿಸ್ತಾನದ ಜನ ನರಕಯಾತನೆ ಪಡ್ತಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಪಾಕ್​ನ ತಾಯಂದಿರು ಮಕ್ಕಳ ಹೊಟ್ಟೆ ತುಂಬಿಸಲು ಹೆಣಗಾಡುತ್ತಿದ್ದಾರೆ. ಫ್ರೀ ಫುಡ್​...

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

by NewsFirst Kannada
April 1, 2023
0

ಮತಯುದ್ಧದಲ್ಲಿ ಗೆದ್ದು ಬೀಗೋಕೆ ಕಾಂಗ್ರೆಸ್​​ ಸಮರಾಭ್ಯಾಸವನ್ನ ಬಿರುಸುಗೊಳಿಸಿದೆ. ಅಭ್ಯರ್ಥಿಗಳ 2ನೇ ಪಟ್ಟಿಗಾಗಿ ಸಕಲ ತಯಾರಿ ನಡೆಸಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಲ ಕ್ಷೇತ್ರಗಳ ಟಿಕೆಟ್ ಗೊಂದಲವನ್ನ ಬಗೆಹರಿಸಿದೆ....

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

by NewsFirst Kannada
April 1, 2023
0

IPL 2023ರ ಉದ್ಘಾಟನೆಗೆ ರಶ್ಮಿಕಾ ಮಂದಣ್ಣ ಬರುತ್ತಾರೆ. ಸೊಂಟ ಬಳುಕಿಸುತ್ತಾ ಡ್ಯಾನ್ಸ್​ ಮಾಡುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿತ್ತು. ಆದರೆ ನಿನ್ನೆ ನಡೆದ ಐಪಿಎಲ್​ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್​...

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

by NewsFirst Kannada
April 1, 2023
0

ಒಂದು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ ಮಹೇಂದ್ರ ಸಿಂಗ್ ಧೋನಿಯ ದರ್ಶನವಾಗಿದೆ. ನಿರೀಕ್ಷೆಯಂತೆ ಮೈದಾನದಲ್ಲಿ ತಲಾ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ...

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

by NewsFirst Kannada
April 1, 2023
0

ರಾಜ್ಯ ವಿಧಾನ ಸಭೆಯ ಮತಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ 10ಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗ್ತಿದ್ದಂತೆ ಚುನಾವಣಾ ಅಖಾಡದಲ್ಲಿ ಸಮರಾಭ್ಯಾಸ ಜೋರಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗೆಲ್ಲುವ...

Next Post

ಶಿವಮೊಗ್ಗ ಡಿಸಿ ಕಚೇರಿ ಮುಂದೆ ಆಜಾನ್​ ಕೂಗಿ ಯುವಕ ಉದ್ಧಟತನ; ಆಮೇಲೆ ಏನಾಯ್ತು?

ಮತ್ತೆ ವಿವಾದಾತ್ಮಕ ತೀರ್ಪಿಗೆ ಕೊಹ್ಲಿ ಬಲಿ..? ಈ ಅಂಪೈರ್​ ವಿರಾಟ್​​ಗೆ ಪದೇ ಪದೇ ಹೀಗೆ ಮಾಡ್ತಿರೋದ್ಯಾಕೆ?

Bhimappa

Bhimappa

LATEST NEWS

ಸಿನಿಮಾದಲ್ಲಿ ಹೀರೋ ಆಗೋ ಕನಸ ಹೊತ್ತವರೇ ಹುಷಾರ್​! ಪಂಗನಾಮ ಹಾಕ್ತಾರೆ ಎಚ್ಚರ

April 1, 2023

IPLನಲ್ಲಿ ಇಂದು ಡಬಲ್ ಪಂದ್ಯ: ಹೈ-ವೋಲ್ಟೇಜ್ ಕದನದಲ್ಲಿ ಗೆಲ್ಲೋದು ಯಾರು..?

April 1, 2023

ಬೆಂಗಳೂರು: ಕರ್ಲಾನ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ -Video

April 1, 2023

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್​​ ದರ ಮತ್ತೆ ಏರಿಕೆ; ದ್ವಿಮುಖ ಸಂಚಾರಕ್ಕೆ ಎಷ್ಟು ಗೊತ್ತಾ?

April 1, 2023

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

April 1, 2023

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

April 1, 2023

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

April 1, 2023

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

April 1, 2023

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

April 1, 2023

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

April 1, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ