newsfirstkannada.com

ರಾಮ್​ಜೀ ನಿರ್ದೇಶನದಲ್ಲಿ ಮತ್ತೊಂದು ಅದ್ಭುತ ಸೀರಿಯಲ್.. ಹೊಸ ವರ್ಷಕ್ಕೆ ‘ಬೃಂದಾವನ’ ತೆರೆಗೆ ಬರುತ್ತಾ?

Share :

06-09-2023

    ಮತ್ತೊಂದು ವಿಭಿನ್ನ ಕಥೆಗೆ ಕೈಹಾಕಿದ ಧಾರಾವಾಹಿಯ ಸ್ಟಾರ್ ನಿರ್ದೇಶಕ

    ಕಿರುತೆರೆಯಲ್ಲಿ ಬಹುದಿನಗಳಿಂದ ಕೇಳಿ ಬರುತ್ತಿದೆ ಈ ಸೀರಿಯಲ್ ಹೆಸರು

    ರಾಮ್ ಜೀ 7 ಗಂಟೆಯ ಸ್ಲಾಟ್​ಗೆ ಮತ್ತೆ ಫಿಕ್ಸಾ, ಬೃಂದಾವನ ಸ್ಲಾಟ್ ಏನು?

ಕಿರುತೆರೆಯ ಲೋಕದಲ್ಲಿ ಈಗ ಹೊಸ ಪ್ರಯೋಗಗಳಿಗೆ ಸಿಕ್ಕಾಪಟ್ಟೆ ಅವಕಾಶಗಳು ದೊರಕುತ್ತಿವೆ. ಈ ಅವಕಾಶಗಳನ್ನ ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಿರೋ ನೆಚ್ಚಿನ ಕಲರ್ಸ್​ ಕನ್ನಡ ವಾಹಿನಿ. ಸದ್ಯ ಹೊಸ ಹೊಸ ಸ್ವಂತ ಕಥೆಗಳನ್ನ ಆಯ್ದು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುತ್ತಿದೆ.

ಈಗಾಗ್ಲೇ ಬಹುತೇಕ ಸೀರಿಯಲ್​ಗಳು ತನ್ನ ಸ್ವಂತ ಕಥೆಗಳಿಂದಾಗಿ ಕರುನಾಡಿನ ಜನರ ಮನಸ್ಸನ್ನು ಗೆಲ್ಲುತ್ತಿವೆ. ಸ್ವಂತ ಕತೆಗಳನ್ನ ತರುವಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿರೋದು ಗಗನ ಎಂಟರ್​ಪ್ರೈಸಸ್ ಪ್ರೊಡಕ್ಷನ್ ತಂಡ. ಹೌದು ರಾಮ್​ಜೀ ಅವ್ರ ನಿರ್ದೇಶನದಲ್ಲಿ ಕಲರ್ಸ್​ಗೆ ಭಿನ್ನ ವಿಭಿನ್ನವಾದ ಕತೆಗಳು ಸಿಕ್ಕಿವೆ. ಈಗ ಇದೇ ನಿರ್ದೆಶಕರು ವಾಹಿನಿಯಲ್ಲಿ ಮತ್ತೊಂದು ಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದೇನು ಅಂದ್ರಾ?.

ಪುಟ್ಟಗೌರಿ ಮದುವೆ ಧಾರಾವಾಹಿ

ಕಿರುತೆರೆಯ ಅಂಗಳದಲ್ಲಿ ಬಹು ತಿಂಗಳಿಂದ ಬೃಂದಾವನ ಎಂಬ ಸೀರಿಯಲ್ ಬರಲಿದೆ ಅನ್ನೋ ಸಾಕಷ್ಟು ಮಾಹಿತಿಗಳು ಬರ್ತಿದ್ದವು. ಈಗ ಅದು ನಿಜವಾಗಿವೆ. ಮತ್ತೊಮ್ಮೆ ರಾಮ್​ಜಿ ಅವರ ನಿರ್ದೇಶನದಲ್ಲಿ ಬೃಂದಾವನ ಸೀರಿಯಲ್ ಸದ್ಯದಲ್ಲೇ ತೆರೆ ಕಾಣಲಿದೆ.

ಸೀರಿಯಲ್ ರಾಮಚಾರಿ

ರಾಮ್​ಜೀ ಅವರ ಎವರ್​ ಗ್ರೀನ್ ಹಿಟ್ ಸೀರಿಯಲ್ ಅಂದ್ರೆ, ಅದು ಪುಟ್ಟಗೌರಿ ಮದುವೆ ಹಾಗೂ ಮಂಗಳ ಗೌರಿ ಮದುವೆ. ಸತತ 10 ವರ್ಷ ಕಾಲ ರಾಮ್​ಜೀ ಅವ್ರು 7 ಗಂಟೆಯ ಸ್ಲಾಟ್​ನ ಯಾರಿಗೂ ಬಿಟ್ಟು ಕೊಡದೇ ತಮ್ಮ ಹಿಟ್ ಮೇಲೆ ಹಿಟ್​ ಕೊಟ್ಟಿದ್ದಾರೆ. ಇದಾದ ನಂತರದಲ್ಲಿ ಕಲರ್ಸ್​ ಹಾಗೂ ರಾಮ್​ಜೀ ಅವರ ಅನುಬಂಧ ಬೆಳೆದು ದೊಡ್ಡದಾಯಿತು. ಈ ಮಧ್ಯೆ ಗೀತಾ, ರಾಮಾಚಾರಿ ಹಾಗೂ ಗಂಡ ಹೆಂಡ್ತಿ ಹೀಗೆ ಸೀರಿಯಲ್​ಗಳನ್ನ ಕೊಡ್ತಾ ಬಂದಿದ್ದಾರೆ. ಈಗ ಇದೇ ಸಾಲಿಗೆ ಬೃಂದಾವನ ಎಂಬ ಧಾರಾವಾಹಿ ಕೂಡ ಸದ್ಯದಲ್ಲೇ ಸೇರ್ಪಡೆ ಆಗಲಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಬಿಗ್ಬಾಸ್ ಸೀಸನ್-10 ಮುಗಿದ ಬಳಿಕ ಜನವರಿಯಲ್ಲಿ ಈ ಧಾರಾವಾಹಿ ತೆರೆ ಕಾಣಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ್​ಜೀ ನಿರ್ದೇಶನದಲ್ಲಿ ಮತ್ತೊಂದು ಅದ್ಭುತ ಸೀರಿಯಲ್.. ಹೊಸ ವರ್ಷಕ್ಕೆ ‘ಬೃಂದಾವನ’ ತೆರೆಗೆ ಬರುತ್ತಾ?

https://newsfirstlive.com/wp-content/uploads/2023/09/RAM_JI.jpg

    ಮತ್ತೊಂದು ವಿಭಿನ್ನ ಕಥೆಗೆ ಕೈಹಾಕಿದ ಧಾರಾವಾಹಿಯ ಸ್ಟಾರ್ ನಿರ್ದೇಶಕ

    ಕಿರುತೆರೆಯಲ್ಲಿ ಬಹುದಿನಗಳಿಂದ ಕೇಳಿ ಬರುತ್ತಿದೆ ಈ ಸೀರಿಯಲ್ ಹೆಸರು

    ರಾಮ್ ಜೀ 7 ಗಂಟೆಯ ಸ್ಲಾಟ್​ಗೆ ಮತ್ತೆ ಫಿಕ್ಸಾ, ಬೃಂದಾವನ ಸ್ಲಾಟ್ ಏನು?

ಕಿರುತೆರೆಯ ಲೋಕದಲ್ಲಿ ಈಗ ಹೊಸ ಪ್ರಯೋಗಗಳಿಗೆ ಸಿಕ್ಕಾಪಟ್ಟೆ ಅವಕಾಶಗಳು ದೊರಕುತ್ತಿವೆ. ಈ ಅವಕಾಶಗಳನ್ನ ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಿರೋ ನೆಚ್ಚಿನ ಕಲರ್ಸ್​ ಕನ್ನಡ ವಾಹಿನಿ. ಸದ್ಯ ಹೊಸ ಹೊಸ ಸ್ವಂತ ಕಥೆಗಳನ್ನ ಆಯ್ದು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುತ್ತಿದೆ.

ಈಗಾಗ್ಲೇ ಬಹುತೇಕ ಸೀರಿಯಲ್​ಗಳು ತನ್ನ ಸ್ವಂತ ಕಥೆಗಳಿಂದಾಗಿ ಕರುನಾಡಿನ ಜನರ ಮನಸ್ಸನ್ನು ಗೆಲ್ಲುತ್ತಿವೆ. ಸ್ವಂತ ಕತೆಗಳನ್ನ ತರುವಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿರೋದು ಗಗನ ಎಂಟರ್​ಪ್ರೈಸಸ್ ಪ್ರೊಡಕ್ಷನ್ ತಂಡ. ಹೌದು ರಾಮ್​ಜೀ ಅವ್ರ ನಿರ್ದೇಶನದಲ್ಲಿ ಕಲರ್ಸ್​ಗೆ ಭಿನ್ನ ವಿಭಿನ್ನವಾದ ಕತೆಗಳು ಸಿಕ್ಕಿವೆ. ಈಗ ಇದೇ ನಿರ್ದೆಶಕರು ವಾಹಿನಿಯಲ್ಲಿ ಮತ್ತೊಂದು ಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದೇನು ಅಂದ್ರಾ?.

ಪುಟ್ಟಗೌರಿ ಮದುವೆ ಧಾರಾವಾಹಿ

ಕಿರುತೆರೆಯ ಅಂಗಳದಲ್ಲಿ ಬಹು ತಿಂಗಳಿಂದ ಬೃಂದಾವನ ಎಂಬ ಸೀರಿಯಲ್ ಬರಲಿದೆ ಅನ್ನೋ ಸಾಕಷ್ಟು ಮಾಹಿತಿಗಳು ಬರ್ತಿದ್ದವು. ಈಗ ಅದು ನಿಜವಾಗಿವೆ. ಮತ್ತೊಮ್ಮೆ ರಾಮ್​ಜಿ ಅವರ ನಿರ್ದೇಶನದಲ್ಲಿ ಬೃಂದಾವನ ಸೀರಿಯಲ್ ಸದ್ಯದಲ್ಲೇ ತೆರೆ ಕಾಣಲಿದೆ.

ಸೀರಿಯಲ್ ರಾಮಚಾರಿ

ರಾಮ್​ಜೀ ಅವರ ಎವರ್​ ಗ್ರೀನ್ ಹಿಟ್ ಸೀರಿಯಲ್ ಅಂದ್ರೆ, ಅದು ಪುಟ್ಟಗೌರಿ ಮದುವೆ ಹಾಗೂ ಮಂಗಳ ಗೌರಿ ಮದುವೆ. ಸತತ 10 ವರ್ಷ ಕಾಲ ರಾಮ್​ಜೀ ಅವ್ರು 7 ಗಂಟೆಯ ಸ್ಲಾಟ್​ನ ಯಾರಿಗೂ ಬಿಟ್ಟು ಕೊಡದೇ ತಮ್ಮ ಹಿಟ್ ಮೇಲೆ ಹಿಟ್​ ಕೊಟ್ಟಿದ್ದಾರೆ. ಇದಾದ ನಂತರದಲ್ಲಿ ಕಲರ್ಸ್​ ಹಾಗೂ ರಾಮ್​ಜೀ ಅವರ ಅನುಬಂಧ ಬೆಳೆದು ದೊಡ್ಡದಾಯಿತು. ಈ ಮಧ್ಯೆ ಗೀತಾ, ರಾಮಾಚಾರಿ ಹಾಗೂ ಗಂಡ ಹೆಂಡ್ತಿ ಹೀಗೆ ಸೀರಿಯಲ್​ಗಳನ್ನ ಕೊಡ್ತಾ ಬಂದಿದ್ದಾರೆ. ಈಗ ಇದೇ ಸಾಲಿಗೆ ಬೃಂದಾವನ ಎಂಬ ಧಾರಾವಾಹಿ ಕೂಡ ಸದ್ಯದಲ್ಲೇ ಸೇರ್ಪಡೆ ಆಗಲಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಬಿಗ್ಬಾಸ್ ಸೀಸನ್-10 ಮುಗಿದ ಬಳಿಕ ಜನವರಿಯಲ್ಲಿ ಈ ಧಾರಾವಾಹಿ ತೆರೆ ಕಾಣಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More