ವಿಶ್ವಕಪ್ ಟೂರ್ನಿಗೂ ಮೊದಲೇ ಯುವ ಆಟಗಾರರ ವೈಫಲ್ಯ
ಬ್ಯಾಟಿಂಗ್ ಲೈನ್ ತಪ್ಪಿದ ಸೂರ್ಯ, ಗಿಲ್, ಸಂಜು ಸ್ಯಾಮ್ಸನ್..!
ಟೆಸ್ಟಿಂಗ್ ಟೈಮ್’ನಲ್ಲಿ ಅವಕಾಶ ಕಳೆದುಕೊಳ್ಳುತ್ತಾರಾ ಇವರು?
ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ. ಅನ್ನೋ ಮಾತು ಟೀಮ್ ಇಂಡಿಯಾದ ಈ ಆಟಗಾರರಿಗೆ ಪರ್ಫೆಕ್ಟ್ ಆಗಿದೆ. ಎಲ್ರೂ, ವಿಶ್ವಕಪ್ ತಂಡದ ಸ್ಥಾನ ಸೀಲ್ ಮಾಡಿಕೊಳ್ಳೋ ಸರ್ಕಸ್ನಲ್ಲಿದ್ರೆ, ಇವ್ರು ನಮಗೆ ಸ್ಥಾನವೇ ಬೇಡ ಎಂದು ನಿರ್ಧರಿಸಿದಂತಿದೆ.
ಇಂಡೋ- ವಿಂಡೀಸ್ ಏಕದಿನ ಸರಣಿ ಹಲ ಪ್ರಯೋಗಗಳಿಗೆ ಸಾಕ್ಷಿಯಾಗ್ತಿದೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಆರ್ಡರ್ನಲ್ಲಿ ಬದಲಾವಣೆಯಾದ್ರೆ, 2ನೇ ಪಂದ್ಯದಲ್ಲಿ ಇಡೀ ತಂಡವೇ ಬದಲಾಯಿತು. ಬೆಂಚ್ ಸ್ಟ್ರೆಂಥ್ನ ಸಾಮರ್ಥ್ಯ ಚೆಕ್ ಮಾಡೋಕೆ ಮ್ಯಾನೇಜ್ಮೆಂಟ್ ಮುಂದಾಯಿತು.
ಟೆಸ್ಟಿಂಗ್ ಟೈಮ್ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡವರು ಫೇಲ್.!
ವಿಶ್ವಕಪ್ಗೂ ಮುನ್ನ ಭಾರತಕ್ಕೆ 11 ಏಕದಿನ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ ಪ್ರಮುಖವಾಗಿ ಪರ್ಫೆಕ್ಟ್ ಬ್ಯಾಟಿಂಗ್ ಲೈನ್ ಅಪ್ ಫೈನಲ್ ಮಾಡಿಕೊಳ್ಳೋದು ಮ್ಯಾನೇಜ್ಮೆಂಟ್ನ ಲೆಕ್ಕಾಚಾರ. ಹೀಗಾಗಿ ನಿನ್ನೆಯ ಪಂದ್ಯಗಳಲ್ಲಿ ಯಂಗ್ಸ್ಟರ್ಸ್ಗೆ ಬ್ಯಾಟಿಂಗ್ನಲ್ಲಿ ಅವಕಾಶ ನೀಡಲಾಯಿತು. ಆದ್ರೆ, ಈ ‘ಟೆಸ್ಟಿಂಗ್ ಟೈಮ್’ನಲ್ಲಿ ಅವಕಾಶ ಗಿಟ್ಟಿಸಿಕೊಂಡವರು ಆಗಿದ್ದು ಫೇಲ್.
ಮುಂದುವರೆದ ಶುಭ್ಮನ್ ಗಿಲ್ ವೈಫಲ್ಯ.!
ನಿನ್ನೆಯ ಪಂದ್ಯಕ್ಕೂ ಮುನ್ನ ಶುಭ್ಮನ್ ಗಿಲ್ ಸಾಮರ್ಥ್ಯದ ಬಗ್ಗೆ ತೀವ್ರ ಚರ್ಚೆಯಾಗಿತ್ತು. ಅದರ ನಡುವೆ ಸ್ಥಾನ ಗಿಟ್ಟಿಸಿಕೊಂಡ ಶುಭ್ಮನ್, ಎಚ್ಚರಿಕೆಯ ಆರಂಭವನ್ನೇ ಮಾಡಿದ್ರು. ಆದ್ರೆ, ಬಿಗ್ಸ್ಕೋರ್ ಕಲೆ ಹಾಕುವಲ್ಲಿ ಎಡವಿದ್ರು. ಈ ಫೇಲ್ಯೂರ್ ವಿಶ್ವಕಪ್ ಸ್ಥಾನಕ್ಕೆ ಕುತ್ತು ತಂದಿದೆ.
ಸಂಜು ಸ್ಯಾಮ್ಸನ್ಗೆ ಇನ್ನೆಷ್ಟು ಚಾನ್ಸ್ ಬೇಕು..?
ಸಂಜು ಸ್ಯಾಮ್ಸನ್ಗೆ ಸ್ಥಾನ ನೀಡಲ್ಲ ಅಂತಾ ಸಿಕ್ಕಾಪಟ್ಟೆ ಚರ್ಚೆಯಾಗುತ್ತೆ.. ಆದ್ರೆ, ಸ್ಥಾನ ಸಿಕ್ಕಾಗ ಸ್ಯಾಮ್ಸನ್ ಪರ್ಫಾಮ್ ಮಾಡ್ತಿಲ್ಲ.. ನಿನ್ನೆಯ ಪಂದ್ಯದಲ್ಲೂ ಚಾನ್ಸ್ ಗಿಟ್ಟಿಸಿಕೊಂಡ ಸಂಜು, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ್ರು. ಸಾಲಿಡ್ ಇನ್ನಿಂಗ್ಸ್ ಕಟ್ಟೋಕೆ ಟೈಮ್ ಇತ್ತು. ಓವರ್ಗಳೂ ಕೂಡ ಇತ್ತು. ಆದ್ರೆ, ಕೇವಲ 9 ರನ್ಗೆ ಸಂಜು ಆಟವೇ ಅಂತ್ಯವಾಯಿತು.
ಮ್ಯಾನೇಜ್ಮೆಂಟ್ಗೆ ತಲೆ ನೋವಾದ ಹಾರ್ದಿಕ್.!
ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಪರ್ಫಾಮೆನ್ಸ್ ಕೂಡ ಮ್ಯಾನೇಜ್ಮೆಂಟ್ ತಲೆ ನೋವಾಗಿದೆ. ಮೊದಲ ಏಕದಿನದಲ್ಲಿ 5 ರನ್ಗಳಿಗೆ ಆಟ ಮುಗಿಸಿದ್ದ ಪಾಂಡ್ಯ, 2ನೇ ಏಕದಿನದಲ್ಲಿ 7 ರನ್ಗಳಿಗೆ ಆಟ ಮುಗಿಸಿದ್ರು. ಈ ಎರಡು ಇನ್ನಿಂಗ್ಸ್ ಮಾತ್ರವಲ್ಲ.. ಈ ವರ್ಷದಲ್ಲಿ ಹಾರ್ದಿಕ್ ಆಡಿರೋ 9 ಇನ್ನಿಂಗ್ಸ್ಗಳ ಸರಾಸರಿ ಕೇವಲ 23.33.
ಸೂರ್ಯನಿಗೆ ವಿಶ್ವಕಪ್ ಚಾನ್ಸ್.. ಕಷ್ಟ.. ಕಷ್ಟ..!
ಏಕದಿನ ಫಾರ್ಮೆಟ್ನಲ್ಲಿ ಸೂರ್ಯ ಕುಮಾರ್ ವೈಫಲ್ಯ ಮುಂದುವರೆಯಿತು. ಮ್ಯಾನೇಜ್ಮೆಂಟ್ ಇಟ್ಟ ಭರವಸೆಯನ್ನ ಮತ್ತೆ ಹುಸಿಯಾಗಿಸಿದ ಸೂರ್ಯ, ಕೇವಲ 24 ರನ್ಗಳಿಸಿ ಔಟಾದ್ರು. ಇದ್ರೊಂದಿಗೆ ಸೂರ್ಯನ ವಿಶ್ವಕಪ್ ಆಡೋ ಕನಸು ಬಹುತೇಕ ಕಮರಿತು.
ಇವರಿಷ್ಟೇ ಅಲ್ಲ, ಸ್ಪಿನ್ ಆಲ್ರೌಂಡರ್ ಕೋಟಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಅಕ್ಷರ್ ಪಟೇಲ್ ಕೂಡ ಪ್ಲಾಫ್ ಶೋ ನೀಡಿದ್ರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ 1 ರನ್ಗೆ ಸುಸ್ತಾದ್ರು.
ವಿಂಡೀಸ್ ವಿರುದ್ಧದ 2ನೇ ಪಂದ್ಯದ ವೈಫಲ್ಯದೊಂದಿಗೆ ಟೀಮ್ ಮ್ಯಾನೇಜ್ಮೆಂಟ್ನ ಪ್ಲಾನ್ ಸಂಪೂರ್ಣ ತಲೆಕೆಳಗಾಗಿದೆ. ಹೀಗಾಗಿ 3ನೇ ಏಕದಿನದಲ್ಲಿ ಮತ್ತೆ ಬದಲಾವಣೆಯಾಗೋದು ಖಚಿತ..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಶ್ವಕಪ್ ಟೂರ್ನಿಗೂ ಮೊದಲೇ ಯುವ ಆಟಗಾರರ ವೈಫಲ್ಯ
ಬ್ಯಾಟಿಂಗ್ ಲೈನ್ ತಪ್ಪಿದ ಸೂರ್ಯ, ಗಿಲ್, ಸಂಜು ಸ್ಯಾಮ್ಸನ್..!
ಟೆಸ್ಟಿಂಗ್ ಟೈಮ್’ನಲ್ಲಿ ಅವಕಾಶ ಕಳೆದುಕೊಳ್ಳುತ್ತಾರಾ ಇವರು?
ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ. ಅನ್ನೋ ಮಾತು ಟೀಮ್ ಇಂಡಿಯಾದ ಈ ಆಟಗಾರರಿಗೆ ಪರ್ಫೆಕ್ಟ್ ಆಗಿದೆ. ಎಲ್ರೂ, ವಿಶ್ವಕಪ್ ತಂಡದ ಸ್ಥಾನ ಸೀಲ್ ಮಾಡಿಕೊಳ್ಳೋ ಸರ್ಕಸ್ನಲ್ಲಿದ್ರೆ, ಇವ್ರು ನಮಗೆ ಸ್ಥಾನವೇ ಬೇಡ ಎಂದು ನಿರ್ಧರಿಸಿದಂತಿದೆ.
ಇಂಡೋ- ವಿಂಡೀಸ್ ಏಕದಿನ ಸರಣಿ ಹಲ ಪ್ರಯೋಗಗಳಿಗೆ ಸಾಕ್ಷಿಯಾಗ್ತಿದೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಆರ್ಡರ್ನಲ್ಲಿ ಬದಲಾವಣೆಯಾದ್ರೆ, 2ನೇ ಪಂದ್ಯದಲ್ಲಿ ಇಡೀ ತಂಡವೇ ಬದಲಾಯಿತು. ಬೆಂಚ್ ಸ್ಟ್ರೆಂಥ್ನ ಸಾಮರ್ಥ್ಯ ಚೆಕ್ ಮಾಡೋಕೆ ಮ್ಯಾನೇಜ್ಮೆಂಟ್ ಮುಂದಾಯಿತು.
ಟೆಸ್ಟಿಂಗ್ ಟೈಮ್ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡವರು ಫೇಲ್.!
ವಿಶ್ವಕಪ್ಗೂ ಮುನ್ನ ಭಾರತಕ್ಕೆ 11 ಏಕದಿನ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ ಪ್ರಮುಖವಾಗಿ ಪರ್ಫೆಕ್ಟ್ ಬ್ಯಾಟಿಂಗ್ ಲೈನ್ ಅಪ್ ಫೈನಲ್ ಮಾಡಿಕೊಳ್ಳೋದು ಮ್ಯಾನೇಜ್ಮೆಂಟ್ನ ಲೆಕ್ಕಾಚಾರ. ಹೀಗಾಗಿ ನಿನ್ನೆಯ ಪಂದ್ಯಗಳಲ್ಲಿ ಯಂಗ್ಸ್ಟರ್ಸ್ಗೆ ಬ್ಯಾಟಿಂಗ್ನಲ್ಲಿ ಅವಕಾಶ ನೀಡಲಾಯಿತು. ಆದ್ರೆ, ಈ ‘ಟೆಸ್ಟಿಂಗ್ ಟೈಮ್’ನಲ್ಲಿ ಅವಕಾಶ ಗಿಟ್ಟಿಸಿಕೊಂಡವರು ಆಗಿದ್ದು ಫೇಲ್.
ಮುಂದುವರೆದ ಶುಭ್ಮನ್ ಗಿಲ್ ವೈಫಲ್ಯ.!
ನಿನ್ನೆಯ ಪಂದ್ಯಕ್ಕೂ ಮುನ್ನ ಶುಭ್ಮನ್ ಗಿಲ್ ಸಾಮರ್ಥ್ಯದ ಬಗ್ಗೆ ತೀವ್ರ ಚರ್ಚೆಯಾಗಿತ್ತು. ಅದರ ನಡುವೆ ಸ್ಥಾನ ಗಿಟ್ಟಿಸಿಕೊಂಡ ಶುಭ್ಮನ್, ಎಚ್ಚರಿಕೆಯ ಆರಂಭವನ್ನೇ ಮಾಡಿದ್ರು. ಆದ್ರೆ, ಬಿಗ್ಸ್ಕೋರ್ ಕಲೆ ಹಾಕುವಲ್ಲಿ ಎಡವಿದ್ರು. ಈ ಫೇಲ್ಯೂರ್ ವಿಶ್ವಕಪ್ ಸ್ಥಾನಕ್ಕೆ ಕುತ್ತು ತಂದಿದೆ.
ಸಂಜು ಸ್ಯಾಮ್ಸನ್ಗೆ ಇನ್ನೆಷ್ಟು ಚಾನ್ಸ್ ಬೇಕು..?
ಸಂಜು ಸ್ಯಾಮ್ಸನ್ಗೆ ಸ್ಥಾನ ನೀಡಲ್ಲ ಅಂತಾ ಸಿಕ್ಕಾಪಟ್ಟೆ ಚರ್ಚೆಯಾಗುತ್ತೆ.. ಆದ್ರೆ, ಸ್ಥಾನ ಸಿಕ್ಕಾಗ ಸ್ಯಾಮ್ಸನ್ ಪರ್ಫಾಮ್ ಮಾಡ್ತಿಲ್ಲ.. ನಿನ್ನೆಯ ಪಂದ್ಯದಲ್ಲೂ ಚಾನ್ಸ್ ಗಿಟ್ಟಿಸಿಕೊಂಡ ಸಂಜು, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ್ರು. ಸಾಲಿಡ್ ಇನ್ನಿಂಗ್ಸ್ ಕಟ್ಟೋಕೆ ಟೈಮ್ ಇತ್ತು. ಓವರ್ಗಳೂ ಕೂಡ ಇತ್ತು. ಆದ್ರೆ, ಕೇವಲ 9 ರನ್ಗೆ ಸಂಜು ಆಟವೇ ಅಂತ್ಯವಾಯಿತು.
ಮ್ಯಾನೇಜ್ಮೆಂಟ್ಗೆ ತಲೆ ನೋವಾದ ಹಾರ್ದಿಕ್.!
ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಪರ್ಫಾಮೆನ್ಸ್ ಕೂಡ ಮ್ಯಾನೇಜ್ಮೆಂಟ್ ತಲೆ ನೋವಾಗಿದೆ. ಮೊದಲ ಏಕದಿನದಲ್ಲಿ 5 ರನ್ಗಳಿಗೆ ಆಟ ಮುಗಿಸಿದ್ದ ಪಾಂಡ್ಯ, 2ನೇ ಏಕದಿನದಲ್ಲಿ 7 ರನ್ಗಳಿಗೆ ಆಟ ಮುಗಿಸಿದ್ರು. ಈ ಎರಡು ಇನ್ನಿಂಗ್ಸ್ ಮಾತ್ರವಲ್ಲ.. ಈ ವರ್ಷದಲ್ಲಿ ಹಾರ್ದಿಕ್ ಆಡಿರೋ 9 ಇನ್ನಿಂಗ್ಸ್ಗಳ ಸರಾಸರಿ ಕೇವಲ 23.33.
ಸೂರ್ಯನಿಗೆ ವಿಶ್ವಕಪ್ ಚಾನ್ಸ್.. ಕಷ್ಟ.. ಕಷ್ಟ..!
ಏಕದಿನ ಫಾರ್ಮೆಟ್ನಲ್ಲಿ ಸೂರ್ಯ ಕುಮಾರ್ ವೈಫಲ್ಯ ಮುಂದುವರೆಯಿತು. ಮ್ಯಾನೇಜ್ಮೆಂಟ್ ಇಟ್ಟ ಭರವಸೆಯನ್ನ ಮತ್ತೆ ಹುಸಿಯಾಗಿಸಿದ ಸೂರ್ಯ, ಕೇವಲ 24 ರನ್ಗಳಿಸಿ ಔಟಾದ್ರು. ಇದ್ರೊಂದಿಗೆ ಸೂರ್ಯನ ವಿಶ್ವಕಪ್ ಆಡೋ ಕನಸು ಬಹುತೇಕ ಕಮರಿತು.
ಇವರಿಷ್ಟೇ ಅಲ್ಲ, ಸ್ಪಿನ್ ಆಲ್ರೌಂಡರ್ ಕೋಟಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಅಕ್ಷರ್ ಪಟೇಲ್ ಕೂಡ ಪ್ಲಾಫ್ ಶೋ ನೀಡಿದ್ರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ 1 ರನ್ಗೆ ಸುಸ್ತಾದ್ರು.
ವಿಂಡೀಸ್ ವಿರುದ್ಧದ 2ನೇ ಪಂದ್ಯದ ವೈಫಲ್ಯದೊಂದಿಗೆ ಟೀಮ್ ಮ್ಯಾನೇಜ್ಮೆಂಟ್ನ ಪ್ಲಾನ್ ಸಂಪೂರ್ಣ ತಲೆಕೆಳಗಾಗಿದೆ. ಹೀಗಾಗಿ 3ನೇ ಏಕದಿನದಲ್ಲಿ ಮತ್ತೆ ಬದಲಾವಣೆಯಾಗೋದು ಖಚಿತ..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ