newsfirstkannada.com

ಜೈಲಿನಿಂದ ರಿಲೀಸ್​ ಆಗುತ್ತಿದ್ದಂತೆ ರೌಡಿ ಜೀವ ತೆಗೆದ ಕೇಸ್​​ಗೆ ಟ್ವಿಸ್ಟ್​​; ಐವರು ಸರೆಂಡರ್​​

Share :

06-08-2023

    ರೌಡಿ ಶೀಟರ್​ ಸಿದ್ದಾಪುರ ಮಹೇಶ್​ ಕೊಲೆ ಕೇಸ್​​..!

    ಪೊಲೀಸ್​ ಮುಂದೆ ಐವರು ಆರೋಪಿಗಳು ಶರಣು​​

    ಪರಪ್ಪನ ಅಗ್ರಹಾರ ಪೊಲೀಸರಿಗೆ ಸರೆಂಡರ್​ ಆದ್ರು

ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗುತ್ತಿದ್ದಂತೆ ರೌಡಿ ಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಬೀದಿ ಹೆಣವಾಗಿದ್ದ. ಶುಕ್ರವಾರ ರಾತ್ರಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್​​​ ಮಹೇಶ್​​ನನ್ನು ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಆರೋಪಿಗಳ ಪತ್ತೆಗಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದರು. ಹೀಗಿರುವಾಗಲೇ ಪ್ರಮುಖ ಆರೋಪಿ ಸಿದ್ದಾಪುರ ಸುನೀಲ್​ ಸೇರಿ ಐವರು ಪೊಲೀಸರಿಗೆ ಸರೆಂಡರ್​ ಆಗಿದ್ದಾರೆ.

ಹೌದು, ಪ್ರಮುಖ ಆರೋಪಿಗಳಾದ ಸಿದ್ದಾಪುರ ಸುನೀಲ್​​, ವಾಲ್ಟರ್​​ ಸೇರಿ ಐವರು ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಇನ್ನು, A1 ಆರೋಪಿ ವಿಲ್ಸನ್​​ ಗಾರ್ಡನ್​​ ನಾಗ, A2 ಆರೋಪಿ ಡಬಲ್​ ಮೀಟರ್​​​ ಮೋಹನ ಸೇರಿದಂತೆ ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸ್​​ ತಂಡ ರಚನೆ

ಈ ಹಿಂದೆ ಡಿಸಿಪಿ ಸೌತ್​​-ಈಸ್ಟ್​​​ ಮತ್ತು ಸಿಸಿಬಿ ಪೊಲೀಸರ ತಂಡ ರಚನೆಯಾಗಿದೆ. ಮಹೇಶ್​ ಮೇಲೂ 2 ಕೊಲೆ ಸೇರಿ 11 ಕೇಸ್​ ಇವೆ. ತನಿಖೆ ನಡೆಯುತ್ತಿರೋ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಮಹೇಶ್​​ ಹೆಂಡತಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್​​​ ಮೇಲೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲೂ ತನಿಖೆ ಆಗಲಿದೆ ಎಂದು ಕಮಿಷನರ್​​ ದಯಾನಂದ್​ ಮಾಹಿತಿ ನೀಡಿದ್ದರು.

ಏನಿದು ಕೇಸ್​..​?

ರೌಡಿ ಶೀಟರ್​​ ಮಹೇಶ್ ಕೊಲೆ, ಕೊಲೆ ಯತ್ನ, ಸುಫಾರಿ ಸೇರಿ ಹಲವು ಕೇಸ್‍ನಲ್ಲಿ ಜೈಲು ಸೇರಿದ್ದ. ಶುಕ್ರವಾರ ರಾತ್ರಿ ಜಾಮೀನು ಮೇಲೆ ಹೊರ ಬಂದಿದ್ದ. ಜೈಲಿನಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್​​ ಕಾರಿಗೆ ಅಡ್ಡ ಹಾಕಿ ಲಾಂಗ್‍ನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್​ ಆಗಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿನಿಂದ ರಿಲೀಸ್​ ಆಗುತ್ತಿದ್ದಂತೆ ರೌಡಿ ಜೀವ ತೆಗೆದ ಕೇಸ್​​ಗೆ ಟ್ವಿಸ್ಟ್​​; ಐವರು ಸರೆಂಡರ್​​

https://newsfirstlive.com/wp-content/uploads/2023/08/Sideesha.jpg

    ರೌಡಿ ಶೀಟರ್​ ಸಿದ್ದಾಪುರ ಮಹೇಶ್​ ಕೊಲೆ ಕೇಸ್​​..!

    ಪೊಲೀಸ್​ ಮುಂದೆ ಐವರು ಆರೋಪಿಗಳು ಶರಣು​​

    ಪರಪ್ಪನ ಅಗ್ರಹಾರ ಪೊಲೀಸರಿಗೆ ಸರೆಂಡರ್​ ಆದ್ರು

ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗುತ್ತಿದ್ದಂತೆ ರೌಡಿ ಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಬೀದಿ ಹೆಣವಾಗಿದ್ದ. ಶುಕ್ರವಾರ ರಾತ್ರಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್​​​ ಮಹೇಶ್​​ನನ್ನು ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಆರೋಪಿಗಳ ಪತ್ತೆಗಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದರು. ಹೀಗಿರುವಾಗಲೇ ಪ್ರಮುಖ ಆರೋಪಿ ಸಿದ್ದಾಪುರ ಸುನೀಲ್​ ಸೇರಿ ಐವರು ಪೊಲೀಸರಿಗೆ ಸರೆಂಡರ್​ ಆಗಿದ್ದಾರೆ.

ಹೌದು, ಪ್ರಮುಖ ಆರೋಪಿಗಳಾದ ಸಿದ್ದಾಪುರ ಸುನೀಲ್​​, ವಾಲ್ಟರ್​​ ಸೇರಿ ಐವರು ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಶರಣಾಗಿದ್ದಾರೆ. ಇನ್ನು, A1 ಆರೋಪಿ ವಿಲ್ಸನ್​​ ಗಾರ್ಡನ್​​ ನಾಗ, A2 ಆರೋಪಿ ಡಬಲ್​ ಮೀಟರ್​​​ ಮೋಹನ ಸೇರಿದಂತೆ ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸ್​​ ತಂಡ ರಚನೆ

ಈ ಹಿಂದೆ ಡಿಸಿಪಿ ಸೌತ್​​-ಈಸ್ಟ್​​​ ಮತ್ತು ಸಿಸಿಬಿ ಪೊಲೀಸರ ತಂಡ ರಚನೆಯಾಗಿದೆ. ಮಹೇಶ್​ ಮೇಲೂ 2 ಕೊಲೆ ಸೇರಿ 11 ಕೇಸ್​ ಇವೆ. ತನಿಖೆ ನಡೆಯುತ್ತಿರೋ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಮಹೇಶ್​​ ಹೆಂಡತಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್​​​ ಮೇಲೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲೂ ತನಿಖೆ ಆಗಲಿದೆ ಎಂದು ಕಮಿಷನರ್​​ ದಯಾನಂದ್​ ಮಾಹಿತಿ ನೀಡಿದ್ದರು.

ಏನಿದು ಕೇಸ್​..​?

ರೌಡಿ ಶೀಟರ್​​ ಮಹೇಶ್ ಕೊಲೆ, ಕೊಲೆ ಯತ್ನ, ಸುಫಾರಿ ಸೇರಿ ಹಲವು ಕೇಸ್‍ನಲ್ಲಿ ಜೈಲು ಸೇರಿದ್ದ. ಶುಕ್ರವಾರ ರಾತ್ರಿ ಜಾಮೀನು ಮೇಲೆ ಹೊರ ಬಂದಿದ್ದ. ಜೈಲಿನಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್​​ ಕಾರಿಗೆ ಅಡ್ಡ ಹಾಕಿ ಲಾಂಗ್‍ನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್​ ಆಗಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More