newsfirstkannada.com

6 ರಾಜ್ಯ 7 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ; ಇಂಡಿಯಾ ಮೈತ್ರಿಕೂಟಕ್ಕೆ ಇದು ಮೊದಲ ಅಗ್ನಿಪರೀಕ್ಷೆ

Share :

05-09-2023

    ಕಾಂಗ್ರೆಸ್, ಬಿಜೆಪಿ, ಟಿಎಂಸಿ ಪಕ್ಷಗಳಿಗೆ ಈ ಎಲೆಕ್ಷನ್ ಬಹಳ ಮುಖ್ಯ

    ಇಂಡಿಯಾ ಕೂಟ ರಚನೆ ಬಳಿಕ ಎದುರಾಗಿರುವ ಮೊದಲ ಚುನಾವಣೆ

    6 ರಾಜ್ಯಗಳಲ್ಲಿ ಇಂಡಿಯಾ ಕೂಟದ ಮಿತ್ರಪಕ್ಷಗಳಿಗೆ ಅಗ್ನಿ ಪರೀಕ್ಷೆ

ದೇಶದ 6 ರಾಜ್ಯದಲ್ಲಿ ಇಂದು ಮಹತ್ವದ ಉಪಚುನಾವಣೆ ನಡೆಯುತ್ತಿದೆ. 6 ರಾಜ್ಯದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿದೆ. ಬಿಜೆಪಿ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಇಂಡಿಯಾ ಕೂಟ ರಚಿಸಿಕೊಂಡ ಬಳಿಕ ಎದುರಾಗಿರುವ ಮೊದಲ ಚುನಾವಣೆ ಇದಾಗಿದೆ. 6 ರಾಜ್ಯಗಳ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.

ಮತದಾನ ನಡೆಯುತ್ತಿರೋ 6 ರಾಜ್ಯಗಳಲ್ಲಿ ಇಂಡಿಯಾ ಕೂಟದ ಮಿತ್ರಪಕ್ಷಗಳಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಈ 6 ರಾಜ್ಯಗಳಲ್ಲಿ ವಿರೋಧಪಕ್ಷಗಳು ಹೆಚ್ಚಿನ ಸೀಟುಗಳನ್ನ ಗೆದ್ದುಕೊಂಡ್ರೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆಡಳಿತ ಪಕ್ಷದ ಪರ ಜನಾಭಿಮತ ಎಷ್ಟಿದೆ ಅನ್ನೋದು ಈ ಉಪಚುನಾವಣೆಯಿಂದ ನಿರ್ಧಾರವಾಗುತ್ತಿದೆ.

ಇದನ್ನೂ ಓದಿ: ಉದಯನಿಧಿ ‘ಸನಾತನ’ ವಿವಾದದಿಂದ ಇಂಡಿಯಾ ಕೂಟದಲ್ಲೇ ಮಹಾ ಬಿರುಕು?; ಕ್ಷಮೆಯಾಚಿಸಲು ಒತ್ತಡ

ಎಲ್ಲೆಲ್ಲಿ ಉಪಚುನಾವಣಾ ಸಮರ

ಉತ್ತರಪ್ರದೇಶ- ಘೋಸಿ

ಪಶ್ಚಿಮ ಬಂಗಾಳ- ಧೂಪಗುರಿ

ಕೇರಳ- ಪುತ್ತುಪ್ಪಲ್ಲಿ

ಉತ್ತರಾಖಂಡ- ಬಾಗೇಶ್ವರ

ಜಾರ್ಖಂಡ್- ಡುಮ್ರಿ

ತ್ರಿಪುರ – ಬೊಕ್ಸಾನಗರ ಮತ್ತು ಧನಪುರ್

6 ರಾಜ್ಯದ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅಕಾಲಿಕ ನಿಧನ ಹಾಗೂ ಪಕ್ಷಾಂತರದ ಕಾರಣಗಳಿಂದ ಉಪಚುನಾವಣೆ ಎದುರಾಗಿದೆ. ಇಂದು ಸಂಜೆವರೆಗೂ ಮತದಾನ ನಡೆಯಲಿದ್ದು ಸೆಪ್ಟೆಂಬರ್ 8 ರಂದು ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಉಪಚುನಾವಣೆ 6 ರಾಜ್ಯದಲ್ಲಿ ಹೆಚ್ಚು ಪರಿಣಾಮ ಬೀರುವುದಿಲ್ಲವಾದ್ರೂ ಕಾಂಗ್ರೆಸ್, ಬಿಜೆಪಿ, ಟಿಎಂಸಿ ಪಕ್ಷಗಳಿಗೆ ಈ ಎಲೆಕ್ಷನ್ ರಿಸಲ್ಟ್‌ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6 ರಾಜ್ಯ 7 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ; ಇಂಡಿಯಾ ಮೈತ್ರಿಕೂಟಕ್ಕೆ ಇದು ಮೊದಲ ಅಗ್ನಿಪರೀಕ್ಷೆ

https://newsfirstlive.com/wp-content/uploads/2023/09/Election-Voting.jpg

    ಕಾಂಗ್ರೆಸ್, ಬಿಜೆಪಿ, ಟಿಎಂಸಿ ಪಕ್ಷಗಳಿಗೆ ಈ ಎಲೆಕ್ಷನ್ ಬಹಳ ಮುಖ್ಯ

    ಇಂಡಿಯಾ ಕೂಟ ರಚನೆ ಬಳಿಕ ಎದುರಾಗಿರುವ ಮೊದಲ ಚುನಾವಣೆ

    6 ರಾಜ್ಯಗಳಲ್ಲಿ ಇಂಡಿಯಾ ಕೂಟದ ಮಿತ್ರಪಕ್ಷಗಳಿಗೆ ಅಗ್ನಿ ಪರೀಕ್ಷೆ

ದೇಶದ 6 ರಾಜ್ಯದಲ್ಲಿ ಇಂದು ಮಹತ್ವದ ಉಪಚುನಾವಣೆ ನಡೆಯುತ್ತಿದೆ. 6 ರಾಜ್ಯದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿದೆ. ಬಿಜೆಪಿ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಇಂಡಿಯಾ ಕೂಟ ರಚಿಸಿಕೊಂಡ ಬಳಿಕ ಎದುರಾಗಿರುವ ಮೊದಲ ಚುನಾವಣೆ ಇದಾಗಿದೆ. 6 ರಾಜ್ಯಗಳ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.

ಮತದಾನ ನಡೆಯುತ್ತಿರೋ 6 ರಾಜ್ಯಗಳಲ್ಲಿ ಇಂಡಿಯಾ ಕೂಟದ ಮಿತ್ರಪಕ್ಷಗಳಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಈ 6 ರಾಜ್ಯಗಳಲ್ಲಿ ವಿರೋಧಪಕ್ಷಗಳು ಹೆಚ್ಚಿನ ಸೀಟುಗಳನ್ನ ಗೆದ್ದುಕೊಂಡ್ರೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆಡಳಿತ ಪಕ್ಷದ ಪರ ಜನಾಭಿಮತ ಎಷ್ಟಿದೆ ಅನ್ನೋದು ಈ ಉಪಚುನಾವಣೆಯಿಂದ ನಿರ್ಧಾರವಾಗುತ್ತಿದೆ.

ಇದನ್ನೂ ಓದಿ: ಉದಯನಿಧಿ ‘ಸನಾತನ’ ವಿವಾದದಿಂದ ಇಂಡಿಯಾ ಕೂಟದಲ್ಲೇ ಮಹಾ ಬಿರುಕು?; ಕ್ಷಮೆಯಾಚಿಸಲು ಒತ್ತಡ

ಎಲ್ಲೆಲ್ಲಿ ಉಪಚುನಾವಣಾ ಸಮರ

ಉತ್ತರಪ್ರದೇಶ- ಘೋಸಿ

ಪಶ್ಚಿಮ ಬಂಗಾಳ- ಧೂಪಗುರಿ

ಕೇರಳ- ಪುತ್ತುಪ್ಪಲ್ಲಿ

ಉತ್ತರಾಖಂಡ- ಬಾಗೇಶ್ವರ

ಜಾರ್ಖಂಡ್- ಡುಮ್ರಿ

ತ್ರಿಪುರ – ಬೊಕ್ಸಾನಗರ ಮತ್ತು ಧನಪುರ್

6 ರಾಜ್ಯದ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅಕಾಲಿಕ ನಿಧನ ಹಾಗೂ ಪಕ್ಷಾಂತರದ ಕಾರಣಗಳಿಂದ ಉಪಚುನಾವಣೆ ಎದುರಾಗಿದೆ. ಇಂದು ಸಂಜೆವರೆಗೂ ಮತದಾನ ನಡೆಯಲಿದ್ದು ಸೆಪ್ಟೆಂಬರ್ 8 ರಂದು ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಉಪಚುನಾವಣೆ 6 ರಾಜ್ಯದಲ್ಲಿ ಹೆಚ್ಚು ಪರಿಣಾಮ ಬೀರುವುದಿಲ್ಲವಾದ್ರೂ ಕಾಂಗ್ರೆಸ್, ಬಿಜೆಪಿ, ಟಿಎಂಸಿ ಪಕ್ಷಗಳಿಗೆ ಈ ಎಲೆಕ್ಷನ್ ರಿಸಲ್ಟ್‌ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More