ಧರ್ಮಶಾಲಾಕ್ಕೆ ಬಸ್ ಮೂಲಕ ವಾಪಸ್ ಆಗ್ತಿದ್ದ ಪ್ರಯಾಣಿಕರು
ಗಂಭೀರವಾಗಿ ಗಾಯಗೊಂಡಿದ್ದ ಕೆಲವರು ಆಸ್ಪತ್ರೆಗೆ ದಾಖಲು..!
ಮೃತಪಟ್ಟ ಮಹಿಳೆಯರ ಕುಟುಂಬಗಳಿಗೆ ಸಾಂತ್ವನ ಹೇಳಿದ ಡಿಸಿ
ಚೆನ್ನೈ: ರಾತ್ರಿ ಪಂಕ್ಚರ್ ಆಗಿ ರಸ್ತೆ ಪಕ್ಕ ನಿಂತಿದ್ದ ಮಿನಿ ಬಸ್ಗೆ ಹಿಂಬಂದಿಯಿಂದ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 7 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಪತ್ತೂರ್ ಜಿಲ್ಲೆಯಲ್ಲಿ ನಡೆದಿದೆ.
ಮೀನಾ, ಸೆತ್ತು, ದೈವನೈ, ದೇವಕಿ, ಕಲಾನಿತಿ, ಸಾವಿತ್ರಿ ಮತ್ತು ಗೀತಾಂಜಲಿ ಎನ್ನುವರು ಮೃತಪಟ್ಟವರು. ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಿನಿ ಬಸ್ 19 ಪ್ರಯಾಣಿಕರೊಂದಿಗೆ ಜಿಲ್ಲೆಯಿಂದ ಧರ್ಮಶಾಲಾಕ್ಕೆ ರಾತ್ರಿ ವಾಪಸ್ ಆಗುತ್ತಿತ್ತು. ಈ ವೇಳೆ ದಾರಿ ಮಧ್ಯೆ ಮಿನಿ ಬಸ್ ಪಂಕ್ಚರ್ ಆಗಿದ್ದರಿಂದ ರಸ್ತೆ ಪಕ್ಕದಲ್ಲೇ ಪಾರ್ಕ್ ಮಾಡಿ 19 ಪ್ರಯಾಣಿಕರಲ್ಲಿ ಕೆಲವರು ಮೆಕ್ಯಾನಿಕ್ನನ್ನು ಕರೆದುಕೊಂಡು ಬರಲು ಹೋಗಿದ್ದಾರೆ. ಉಳಿದವರು ಮಿನಿ ಬಸ್ ಪಕ್ಕದಲ್ಲೇ ಕುಳಿತಿದ್ದರು.
ಇದನ್ನೂ ಓದಿ: Rapido ಸವಾರ ಮತ್ತು ಪ್ರಯಾಣಿಕನಿಗೆ ಯದ್ವಾ-ತದ್ವಾ ಬಾರಿಸಿದ ಪ್ರತಿಭಟನಾಕಾರರು; ಬಂದ್ ಕುರಿತ ಅಪ್ಡೇಟ್ ಹೀಗಿದೆ..
ಈ ವೇಳೆ ವೇಗವಾಗಿ ಬಂದ ಲಾರಿಯೊಂದು ರಭಸವಾಗಿ ಬಸ್ ಹಿಂಬದಿ ಡಿಕ್ಕಿ ಹೊಡೆದು ಕುಳಿತ್ತಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಹೀಗಾಗಿ ಸ್ಥಳದಲ್ಲೇ 7 ಜನರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳನ್ನು ತಿರುಪತ್ತೂರ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಮೆಕ್ಯಾನಿಕ್ನನ್ನು ಕರೆದುಕೊಂಡು ಬರಲು ಹೋಗಿದ್ದ ಗುಂಪು ಈ ಅಪಘಾತದಿಂದ ಎಸ್ಕೇಪ್ ಆಗಿದೆ.
ಜಿಲ್ಲಾಧಿಕಾರಿ ಭಾಸ್ಕರ ಪಾಂಡಿಯನ್ ಆಸ್ಪತ್ರೆಗೆ ಭೇಟಿ ನೀಡಿ ಮೃತಪಟ್ಟ ಮಹಿಳೆಯರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಸಿಎಂ ಎಂ.ಕೆ ಸ್ಟಾಲಿನ್ ಅವರು ಮಾಹಿತಿ ಪಡೆದಿದ್ದು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಧರ್ಮಶಾಲಾಕ್ಕೆ ಬಸ್ ಮೂಲಕ ವಾಪಸ್ ಆಗ್ತಿದ್ದ ಪ್ರಯಾಣಿಕರು
ಗಂಭೀರವಾಗಿ ಗಾಯಗೊಂಡಿದ್ದ ಕೆಲವರು ಆಸ್ಪತ್ರೆಗೆ ದಾಖಲು..!
ಮೃತಪಟ್ಟ ಮಹಿಳೆಯರ ಕುಟುಂಬಗಳಿಗೆ ಸಾಂತ್ವನ ಹೇಳಿದ ಡಿಸಿ
ಚೆನ್ನೈ: ರಾತ್ರಿ ಪಂಕ್ಚರ್ ಆಗಿ ರಸ್ತೆ ಪಕ್ಕ ನಿಂತಿದ್ದ ಮಿನಿ ಬಸ್ಗೆ ಹಿಂಬಂದಿಯಿಂದ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 7 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಪತ್ತೂರ್ ಜಿಲ್ಲೆಯಲ್ಲಿ ನಡೆದಿದೆ.
ಮೀನಾ, ಸೆತ್ತು, ದೈವನೈ, ದೇವಕಿ, ಕಲಾನಿತಿ, ಸಾವಿತ್ರಿ ಮತ್ತು ಗೀತಾಂಜಲಿ ಎನ್ನುವರು ಮೃತಪಟ್ಟವರು. ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಿನಿ ಬಸ್ 19 ಪ್ರಯಾಣಿಕರೊಂದಿಗೆ ಜಿಲ್ಲೆಯಿಂದ ಧರ್ಮಶಾಲಾಕ್ಕೆ ರಾತ್ರಿ ವಾಪಸ್ ಆಗುತ್ತಿತ್ತು. ಈ ವೇಳೆ ದಾರಿ ಮಧ್ಯೆ ಮಿನಿ ಬಸ್ ಪಂಕ್ಚರ್ ಆಗಿದ್ದರಿಂದ ರಸ್ತೆ ಪಕ್ಕದಲ್ಲೇ ಪಾರ್ಕ್ ಮಾಡಿ 19 ಪ್ರಯಾಣಿಕರಲ್ಲಿ ಕೆಲವರು ಮೆಕ್ಯಾನಿಕ್ನನ್ನು ಕರೆದುಕೊಂಡು ಬರಲು ಹೋಗಿದ್ದಾರೆ. ಉಳಿದವರು ಮಿನಿ ಬಸ್ ಪಕ್ಕದಲ್ಲೇ ಕುಳಿತಿದ್ದರು.
ಇದನ್ನೂ ಓದಿ: Rapido ಸವಾರ ಮತ್ತು ಪ್ರಯಾಣಿಕನಿಗೆ ಯದ್ವಾ-ತದ್ವಾ ಬಾರಿಸಿದ ಪ್ರತಿಭಟನಾಕಾರರು; ಬಂದ್ ಕುರಿತ ಅಪ್ಡೇಟ್ ಹೀಗಿದೆ..
ಈ ವೇಳೆ ವೇಗವಾಗಿ ಬಂದ ಲಾರಿಯೊಂದು ರಭಸವಾಗಿ ಬಸ್ ಹಿಂಬದಿ ಡಿಕ್ಕಿ ಹೊಡೆದು ಕುಳಿತ್ತಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಹೀಗಾಗಿ ಸ್ಥಳದಲ್ಲೇ 7 ಜನರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳನ್ನು ತಿರುಪತ್ತೂರ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಮೆಕ್ಯಾನಿಕ್ನನ್ನು ಕರೆದುಕೊಂಡು ಬರಲು ಹೋಗಿದ್ದ ಗುಂಪು ಈ ಅಪಘಾತದಿಂದ ಎಸ್ಕೇಪ್ ಆಗಿದೆ.
ಜಿಲ್ಲಾಧಿಕಾರಿ ಭಾಸ್ಕರ ಪಾಂಡಿಯನ್ ಆಸ್ಪತ್ರೆಗೆ ಭೇಟಿ ನೀಡಿ ಮೃತಪಟ್ಟ ಮಹಿಳೆಯರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಸಿಎಂ ಎಂ.ಕೆ ಸ್ಟಾಲಿನ್ ಅವರು ಮಾಹಿತಿ ಪಡೆದಿದ್ದು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ