newsfirstkannada.com

ಮಣಿಪುರದಲ್ಲಿ ಮೀಸಲಾತಿ ಸಂಘರ್ಷ.. 98 ಸಾವು, 310 ಮಂದಿಗೆ ಗಾಯ

Share :

02-06-2023

    10 ಜಿಲ್ಲೆಗಳಲ್ಲಿ ಭಾರೀ ಹಿಂಸಾಚಾರ

    ‘ಟ್ರೈಬಲ್ ಸಾಲಿಡಾರಿಟಿ ಮಾರ್ಚ್​’ ಹೆಸರಿನಲ್ಲಿ ನಡೆದ ಪ್ರತಿಭಟನೆ

    ಮಣಿಪುರಲ್ಲಿ ನಿಜಕ್ಕೂ ಆಗುತ್ತಿರೋದು ಏನು..?

ಮೇಟಿಗಳಿಗೆ ಮೀಸಲಾತಿ ವಿರೋಧಿಸಿ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಸಾವು-ನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಮೀಸಲಾತಿ ಸಂಘರ್ಷದಲ್ಲಿ ಇದುವರೆಗೆ ಒಟ್ಟು 98 ಮಂದಿ ಸಾವನ್ನಪ್ಪಿ, 310 ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಣಿಪುರದಲ್ಲಿ ಮೇ 3 ರಂದು ನಡೆದ ಪ್ರತಿಭಟನೆಯಲ್ಲಿ ಅಲ್ಲಿನ 10 ಜಿಲ್ಲೆಗಳಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ಈ ಗಲಾಟೆಯಲ್ಲಿ ಒಟ್ಟು 98 ಮಂದಿ ಸಾವನ್ನಪ್ಪಿದ್ದಾರೆ. ಮಾತ್ರವಲ್ಲ ರಾಜ್ಯದ ಹಲವು ಭಾಗಗಳಲ್ಲಿರುವ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಅಪಾರ ಹಾನಿಯುಂಟಾಗಿದೆ ಎಂದು ವರದಿಯಾಗಿದೆ.

ಮಣಿಪಾಲ್​ನಲ್ಲಿ ಆಗ್ತಿರೋದು ಏನು..?
ಅಲ್ಲಿನ ಮೇಟಿಗಳಿಗೆ ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡಿರೋದನ್ನು ವಿರೋಧಿಸಿ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿವೆ. ಮಣಿಪುರದಲ್ಲಿ ಮೇಟಿಗಳು ಬಹುಸಂಖ್ಯಾತರಾಗಿದ್ದಾರೆ. ಈ ಸಮುದಾಯ ತಮಗೆ ST ಸ್ಥಾನಮಾನ ನೀಡಬೇಕು ಎಂದು ದಶಕಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದೆ.

 

ಮಣಿಪುರದ ಕಣಿವೆಗಳಲ್ಲಿ ವಾಸಿಸುತ್ತಿರುವ ಮೇಟಿಗಳ ಸಂಖ್ಯೆ ರಾಜ್ಯದಲ್ಲಿರುವ ಜನಸಂಖ್ಯೆಯಲ್ಲಿ ಶೇಕಡಾ 53 ರಷ್ಟು ಇದೆ. ಅಲ್ಲಿರುವ ಪ್ರಸ್ತುತ ಕಾನೂನು ಪ್ರಕಾರ, ಈ ಮೇಟಿ ಜನಾಂಗ ಬುಡಕಟ್ಟು ಸಮುದಾಯವಲ್ಲದ ಕಾರಣ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವಂತಿಲ್ಲ. ಹೀಗಿರುವಾಗ ತಮಗೆ ಎಸ್​ಟಿ ಸ್ಥಾನಮಾನ ನೀಡುವಂತೆ ಈ ಸಮುದಾಯ ಆಗ್ರಹಿಸಿಕೊಂಡು ಬಂದಿದೆ. ಒಂದು ವೇಳೆ ಎಸ್​​​ಟಿ ಸ್ಥಾನಮಾನ ನೀಡಿದರೆ, ಪರಿಶಿಷ್ಟ ಪಂಗಡಕ್ಕೆ ಸಿಗುವ ಎಲ್ಲಾ ಸೌಲಭ್ಯಗಳು ಸಿಗಲಿವೆ. ಅದಕ್ಕೆ ಮೇಟಿಗಳಿಗೆ ST ಸ್ಥಾನಮಾನ ನೀಡುವುದನ್ನ ಆದಿವಾಸಿ ಬುಡಕಟ್ಟು ಸಮುದಾಯ ವಿರೋಧಿಸುತ್ತಿದೆ.

ಮಣಿಪುರ ಬಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು ಈ ಸಮುದಾಯದ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿತ್ತು. ಅದರಂತೆ ಮೊನ್ನೆ ‘ಟ್ರೈಬಲ್ ಸಾಲಿಡಾರಿಟಿ ಮಾರ್ಚ್​’ ಹೆಸರಿನಲ್ಲಿ ಪ್ರತಿಭಟನೆ ನಡೆಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಣಿಪುರದಲ್ಲಿ ಮೀಸಲಾತಿ ಸಂಘರ್ಷ.. 98 ಸಾವು, 310 ಮಂದಿಗೆ ಗಾಯ

https://newsfirstlive.com/wp-content/uploads/2023/06/MANIPURA.jpg

    10 ಜಿಲ್ಲೆಗಳಲ್ಲಿ ಭಾರೀ ಹಿಂಸಾಚಾರ

    ‘ಟ್ರೈಬಲ್ ಸಾಲಿಡಾರಿಟಿ ಮಾರ್ಚ್​’ ಹೆಸರಿನಲ್ಲಿ ನಡೆದ ಪ್ರತಿಭಟನೆ

    ಮಣಿಪುರಲ್ಲಿ ನಿಜಕ್ಕೂ ಆಗುತ್ತಿರೋದು ಏನು..?

ಮೇಟಿಗಳಿಗೆ ಮೀಸಲಾತಿ ವಿರೋಧಿಸಿ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಸಾವು-ನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಮೀಸಲಾತಿ ಸಂಘರ್ಷದಲ್ಲಿ ಇದುವರೆಗೆ ಒಟ್ಟು 98 ಮಂದಿ ಸಾವನ್ನಪ್ಪಿ, 310 ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಣಿಪುರದಲ್ಲಿ ಮೇ 3 ರಂದು ನಡೆದ ಪ್ರತಿಭಟನೆಯಲ್ಲಿ ಅಲ್ಲಿನ 10 ಜಿಲ್ಲೆಗಳಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ಈ ಗಲಾಟೆಯಲ್ಲಿ ಒಟ್ಟು 98 ಮಂದಿ ಸಾವನ್ನಪ್ಪಿದ್ದಾರೆ. ಮಾತ್ರವಲ್ಲ ರಾಜ್ಯದ ಹಲವು ಭಾಗಗಳಲ್ಲಿರುವ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಅಪಾರ ಹಾನಿಯುಂಟಾಗಿದೆ ಎಂದು ವರದಿಯಾಗಿದೆ.

ಮಣಿಪಾಲ್​ನಲ್ಲಿ ಆಗ್ತಿರೋದು ಏನು..?
ಅಲ್ಲಿನ ಮೇಟಿಗಳಿಗೆ ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡಿರೋದನ್ನು ವಿರೋಧಿಸಿ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿವೆ. ಮಣಿಪುರದಲ್ಲಿ ಮೇಟಿಗಳು ಬಹುಸಂಖ್ಯಾತರಾಗಿದ್ದಾರೆ. ಈ ಸಮುದಾಯ ತಮಗೆ ST ಸ್ಥಾನಮಾನ ನೀಡಬೇಕು ಎಂದು ದಶಕಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದೆ.

 

ಮಣಿಪುರದ ಕಣಿವೆಗಳಲ್ಲಿ ವಾಸಿಸುತ್ತಿರುವ ಮೇಟಿಗಳ ಸಂಖ್ಯೆ ರಾಜ್ಯದಲ್ಲಿರುವ ಜನಸಂಖ್ಯೆಯಲ್ಲಿ ಶೇಕಡಾ 53 ರಷ್ಟು ಇದೆ. ಅಲ್ಲಿರುವ ಪ್ರಸ್ತುತ ಕಾನೂನು ಪ್ರಕಾರ, ಈ ಮೇಟಿ ಜನಾಂಗ ಬುಡಕಟ್ಟು ಸಮುದಾಯವಲ್ಲದ ಕಾರಣ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವಂತಿಲ್ಲ. ಹೀಗಿರುವಾಗ ತಮಗೆ ಎಸ್​ಟಿ ಸ್ಥಾನಮಾನ ನೀಡುವಂತೆ ಈ ಸಮುದಾಯ ಆಗ್ರಹಿಸಿಕೊಂಡು ಬಂದಿದೆ. ಒಂದು ವೇಳೆ ಎಸ್​​​ಟಿ ಸ್ಥಾನಮಾನ ನೀಡಿದರೆ, ಪರಿಶಿಷ್ಟ ಪಂಗಡಕ್ಕೆ ಸಿಗುವ ಎಲ್ಲಾ ಸೌಲಭ್ಯಗಳು ಸಿಗಲಿವೆ. ಅದಕ್ಕೆ ಮೇಟಿಗಳಿಗೆ ST ಸ್ಥಾನಮಾನ ನೀಡುವುದನ್ನ ಆದಿವಾಸಿ ಬುಡಕಟ್ಟು ಸಮುದಾಯ ವಿರೋಧಿಸುತ್ತಿದೆ.

ಮಣಿಪುರ ಬಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು ಈ ಸಮುದಾಯದ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿತ್ತು. ಅದರಂತೆ ಮೊನ್ನೆ ‘ಟ್ರೈಬಲ್ ಸಾಲಿಡಾರಿಟಿ ಮಾರ್ಚ್​’ ಹೆಸರಿನಲ್ಲಿ ಪ್ರತಿಭಟನೆ ನಡೆಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More