newsfirstkannada.com

ಪೆನ್​ಡ್ರೈವ್​ ಕುಮಾರಸ್ವಾಮಿ ಹಂಚಿದ್ರಾ? ಏನಿದು ಶಿವರಾಮೇಗೌಡ, ದೇವರಾಜೇಗೌಡ ಸೀಕ್ರೆಟ್​ ಸಂಭಾಷಣೆ?

Share :

Published May 19, 2024 at 4:25pm

    ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಟ್ವಿಸ್​ ಮೇಲೆ ಟ್ವಿಸ್ಟ್​!

    ದೇವರಾಜೇಗೌಡ ಮೇಲೆ ಒತ್ತಡ ಹಾಕಿದ ಶಿವರಾಮೇಗೌಡ ಆಡಿಯೋ

    ಹೆಚ್​​.ಡಿ ಕುಮಾರಸ್ವಾಮಿ ಹೆಸರನ್ನು ಸಿಕ್ಕಿಸುವ ಪ್ರಯತ್ನ ನಡೆದಿದ್ಯಾ?

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಕೇಸ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಸಿಗುತ್ತಿದೆ. ನ್ಯೂಸ್ ಫಸ್ಟ್​ಗೆ ವೈರಲ್ ಆಗಿರುವ ಆಡಿಯೋ ಕಾಪಿ ಲಭ್ಯವಾಗಿದೆ. ಆಡಿಯೋದಲ್ಲಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೆಸರನ್ನು ಹೇಳುವಂತೆ ಬಿಜೆಪಿ ಮುಖಂಡ ದೇವರಾಜೇಗೌಡಗೆ ಎಲ್.ಆರ್ ಶಿವರಾಮೇಗೌಡ ಒತ್ತಡ ಹಾಕಿದ್ದಾರೆ ಅನ್ನೋ ಸ್ಫೋಟಕ ಅಂಶ ಬಯಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ. ಇದರಲ್ಲಿ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಹೆಸರನ್ನು ಸಿಕ್ಕಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಅಲ್ಲದೇ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಬಗ್ಗೆ ಎಲ್.ಆರ್ ಶಿವರಾಮೇಗೌಡರು ಹಗುರವಾಗಿ ಮಾತನಾಡಿದ್ದಾರೆ. ಹೆಚ್​​.ಡಿ ಕುಮಾರಸ್ವಾಮಿ ಹೆಸರನ್ನು ಹೇಳುವಂತೆ ಎಲ್.ಆರ್ ಶಿವರಾಮೇಗೌಡ, ದೇವರಾಜೇಗೌಡನ ಮೇಲೆ ಒತ್ತಡ ಹಾಕಿದ್ದರು ಎಂದು ಹೇಳಲಾಗ್ತಿದೆ.

ಹೆಚ್​.ಡಿ ಕುಮಾರಸ್ವಾಮಿಯೇ ಬಿಟ್ಟಿರಬೇಕು ಅಂತಾ ಹೇಳಿ 

ವೈರಲ್ ಆಗಿರುವ ಆಡಿಯೋದಲ್ಲಿ ಶಿವರಾಮೇಗೌಡ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಆಡಿಯೋದಲ್ಲಿ ಹೆಚ್​.ಡಿ ಕುಮಾರಸ್ವಾಮಿಯೇ ಬಿಟ್ಟಿರಬೇಕು ಅಂತಾ ಹೇಳಿ. ಅವರಿಗೆ ಅವರ ಮಗ ಮುಂದೆ ಬರಬೇಕು ಅನ್ನೋ ಆಸೆ ಇದೆ. ಹೀಗಾಗಿ ಅವರೇ ಹೀಗೆ ಮಾಡಿದ್ದಾರೆ ಎಂದು ಶಿವರಾಮೇಗೌಡ, ದೇವರಾಜೇಗೌಡ ಮೇಲೆ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ.

ಹೆಚ್​.ಡಿ ದೇವೆಗೌಡ ಮತ್ತು ಅವರ ಮಕ್ಕಳು ಏನ್ ಕಡಿಮೆ ಅಂತಾ ತಿಳ್ಕೋಬೇಡಿ. ಇನ್ನೂ ದೇವೇಗೌಡ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವಲ್ಲ. ಕೇಳಣ್ಣ, ಕೇಳಣ್ಣ ಇಲ್ಲಿ ಒಂದು ನಿಮಿಷ ಕೇಳು ಎಂದು ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: RCB ವಿನ್​ ಆಗಲೆಂದು ಪ್ರಾರ್ಥಿಸಿದ್ದು ಅಷ್ಟಿಷ್ಟಲ್ಲ.. ಪಂದ್ಯ ಗೆದ್ರು ಅಭಿಮಾನಿಗಳು​ ಬೇಸರವಾಗಿದ್ದಕ್ಕೆ ಕಾರಣವೇನು?

ಗೌಡರ ಫ್ಯಾಮಿಲಿಯನ್ನ ಬಲಿ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಇನ್ನೇನು ವಿಡಿಯೋ ಇದೆ. ನನ್ನ ಬಳಿ ಬೆಳಗ್ಗೆ ಡಿ.ಕೆ ಅವ್ರು ಮಾತಾಡಿದ್ದಾರೆ. ನಿಮ್ಮ ಬಳಿ ಏನೇ ಇದ್ರು ತಗೊಂಡು ಬಂದು ನಮಗೆ ಕೊಡಿ. ನೀವು ತಲೆನೇ ಕೇಡಿಸ್ಕೋಬೇಡಿ. ಅವರನ ಬಲಿ ಹಾಕೋಕೆ ಗೌರ್ನಮೆಂಟ್ ತೀರ್ಮಾನ ಮಾಡಿದೆ. ಅರ್ಥವಾಯ್ತಾ ಎಂದು ಶಿವರಾಮೇಗೌಡ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ.

ಶಿವರಾಮೇಗೌಡ; ಪೆನ್ ಡ್ರೈವ್ ಹಂಚಿದರೆ ತಪ್ಪೇನಿದೆ. ನೀನೇನು ಪೆನ್ ಡ್ರೈವ್​ನ ಹಾಸನದಲ್ಲಿ ಹಂಚಿಲ್ಲ. What is the Wrong?.
ದೇವರಾಜೇಗೌಡ; ಅಲ್ಲಾ ರಾಂಗ್ ರೈಟ್ ಅಂತಾ ಇರತ್ತಲ್ಲಣ್ಣ
ಶಿವರಾಮೇಗೌಡ; ಏನ್ ಅದೇನು ಆಗಲ್ಲ, ನೀವು ಲಾಯರ್ ಅಲ್ಲವೇನ್ರಿ?
ದೇವರಾಜೇಗೌಡ; ಅಣ್ಣ ಇದು ಪನಿಷ್ಮೆಂಟ್, ಕಾನೂನು ಪ್ರಕಾರ ಪನಿಷ್ಮೆಂಟ್ ಅಲ್ವಾ ಅಣ್ಣ? ಇದು ಹೆಣ್ಣು ಮಕ್ಕಳ ಮಾನ ಮರ್ಯಾದೆ ಅಲ್ವಾ ಅಣ್ಣ?. ಅವರ ಶೀಲದ ಬಗ್ಗೆ ನಾವು ಯೋಚನೆ ಮಾಡಬೇಕು ಅಲ್ವಾ ಅಣ್ಣ?.
ಶಿವರಾಮೇಗೌಡ; ಅದರ ಬಗ್ಗೆ ನೀವೇಕೆ ಟೆನ್ಷನ್ ಮಾಡಿಕೊಳ್ಳುತ್ತೀರಾ? ಅಮಿತ್ ಶಾ ಚೆನ್ನೈನಲ್ಲಿ ಹೇಳಿದ್ದನಲ್ವಾ ಕರ್ನಾಟಕ ಹೆಣ್ಣು ಮಕ್ಕಳಿಗೆ ಸುರಕ್ಷಿತ ತಾಣವಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೆನ್​ಡ್ರೈವ್​ ಕುಮಾರಸ್ವಾಮಿ ಹಂಚಿದ್ರಾ? ಏನಿದು ಶಿವರಾಮೇಗೌಡ, ದೇವರಾಜೇಗೌಡ ಸೀಕ್ರೆಟ್​ ಸಂಭಾಷಣೆ?

https://newsfirstlive.com/wp-content/uploads/2024/05/HDK-1.jpg

    ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಟ್ವಿಸ್​ ಮೇಲೆ ಟ್ವಿಸ್ಟ್​!

    ದೇವರಾಜೇಗೌಡ ಮೇಲೆ ಒತ್ತಡ ಹಾಕಿದ ಶಿವರಾಮೇಗೌಡ ಆಡಿಯೋ

    ಹೆಚ್​​.ಡಿ ಕುಮಾರಸ್ವಾಮಿ ಹೆಸರನ್ನು ಸಿಕ್ಕಿಸುವ ಪ್ರಯತ್ನ ನಡೆದಿದ್ಯಾ?

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಕೇಸ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಸಿಗುತ್ತಿದೆ. ನ್ಯೂಸ್ ಫಸ್ಟ್​ಗೆ ವೈರಲ್ ಆಗಿರುವ ಆಡಿಯೋ ಕಾಪಿ ಲಭ್ಯವಾಗಿದೆ. ಆಡಿಯೋದಲ್ಲಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೆಸರನ್ನು ಹೇಳುವಂತೆ ಬಿಜೆಪಿ ಮುಖಂಡ ದೇವರಾಜೇಗೌಡಗೆ ಎಲ್.ಆರ್ ಶಿವರಾಮೇಗೌಡ ಒತ್ತಡ ಹಾಕಿದ್ದಾರೆ ಅನ್ನೋ ಸ್ಫೋಟಕ ಅಂಶ ಬಯಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ. ಇದರಲ್ಲಿ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಹೆಸರನ್ನು ಸಿಕ್ಕಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಅಲ್ಲದೇ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಬಗ್ಗೆ ಎಲ್.ಆರ್ ಶಿವರಾಮೇಗೌಡರು ಹಗುರವಾಗಿ ಮಾತನಾಡಿದ್ದಾರೆ. ಹೆಚ್​​.ಡಿ ಕುಮಾರಸ್ವಾಮಿ ಹೆಸರನ್ನು ಹೇಳುವಂತೆ ಎಲ್.ಆರ್ ಶಿವರಾಮೇಗೌಡ, ದೇವರಾಜೇಗೌಡನ ಮೇಲೆ ಒತ್ತಡ ಹಾಕಿದ್ದರು ಎಂದು ಹೇಳಲಾಗ್ತಿದೆ.

ಹೆಚ್​.ಡಿ ಕುಮಾರಸ್ವಾಮಿಯೇ ಬಿಟ್ಟಿರಬೇಕು ಅಂತಾ ಹೇಳಿ 

ವೈರಲ್ ಆಗಿರುವ ಆಡಿಯೋದಲ್ಲಿ ಶಿವರಾಮೇಗೌಡ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಆಡಿಯೋದಲ್ಲಿ ಹೆಚ್​.ಡಿ ಕುಮಾರಸ್ವಾಮಿಯೇ ಬಿಟ್ಟಿರಬೇಕು ಅಂತಾ ಹೇಳಿ. ಅವರಿಗೆ ಅವರ ಮಗ ಮುಂದೆ ಬರಬೇಕು ಅನ್ನೋ ಆಸೆ ಇದೆ. ಹೀಗಾಗಿ ಅವರೇ ಹೀಗೆ ಮಾಡಿದ್ದಾರೆ ಎಂದು ಶಿವರಾಮೇಗೌಡ, ದೇವರಾಜೇಗೌಡ ಮೇಲೆ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ.

ಹೆಚ್​.ಡಿ ದೇವೆಗೌಡ ಮತ್ತು ಅವರ ಮಕ್ಕಳು ಏನ್ ಕಡಿಮೆ ಅಂತಾ ತಿಳ್ಕೋಬೇಡಿ. ಇನ್ನೂ ದೇವೇಗೌಡ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವಲ್ಲ. ಕೇಳಣ್ಣ, ಕೇಳಣ್ಣ ಇಲ್ಲಿ ಒಂದು ನಿಮಿಷ ಕೇಳು ಎಂದು ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: RCB ವಿನ್​ ಆಗಲೆಂದು ಪ್ರಾರ್ಥಿಸಿದ್ದು ಅಷ್ಟಿಷ್ಟಲ್ಲ.. ಪಂದ್ಯ ಗೆದ್ರು ಅಭಿಮಾನಿಗಳು​ ಬೇಸರವಾಗಿದ್ದಕ್ಕೆ ಕಾರಣವೇನು?

ಗೌಡರ ಫ್ಯಾಮಿಲಿಯನ್ನ ಬಲಿ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಇನ್ನೇನು ವಿಡಿಯೋ ಇದೆ. ನನ್ನ ಬಳಿ ಬೆಳಗ್ಗೆ ಡಿ.ಕೆ ಅವ್ರು ಮಾತಾಡಿದ್ದಾರೆ. ನಿಮ್ಮ ಬಳಿ ಏನೇ ಇದ್ರು ತಗೊಂಡು ಬಂದು ನಮಗೆ ಕೊಡಿ. ನೀವು ತಲೆನೇ ಕೇಡಿಸ್ಕೋಬೇಡಿ. ಅವರನ ಬಲಿ ಹಾಕೋಕೆ ಗೌರ್ನಮೆಂಟ್ ತೀರ್ಮಾನ ಮಾಡಿದೆ. ಅರ್ಥವಾಯ್ತಾ ಎಂದು ಶಿವರಾಮೇಗೌಡ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ.

ಶಿವರಾಮೇಗೌಡ; ಪೆನ್ ಡ್ರೈವ್ ಹಂಚಿದರೆ ತಪ್ಪೇನಿದೆ. ನೀನೇನು ಪೆನ್ ಡ್ರೈವ್​ನ ಹಾಸನದಲ್ಲಿ ಹಂಚಿಲ್ಲ. What is the Wrong?.
ದೇವರಾಜೇಗೌಡ; ಅಲ್ಲಾ ರಾಂಗ್ ರೈಟ್ ಅಂತಾ ಇರತ್ತಲ್ಲಣ್ಣ
ಶಿವರಾಮೇಗೌಡ; ಏನ್ ಅದೇನು ಆಗಲ್ಲ, ನೀವು ಲಾಯರ್ ಅಲ್ಲವೇನ್ರಿ?
ದೇವರಾಜೇಗೌಡ; ಅಣ್ಣ ಇದು ಪನಿಷ್ಮೆಂಟ್, ಕಾನೂನು ಪ್ರಕಾರ ಪನಿಷ್ಮೆಂಟ್ ಅಲ್ವಾ ಅಣ್ಣ? ಇದು ಹೆಣ್ಣು ಮಕ್ಕಳ ಮಾನ ಮರ್ಯಾದೆ ಅಲ್ವಾ ಅಣ್ಣ?. ಅವರ ಶೀಲದ ಬಗ್ಗೆ ನಾವು ಯೋಚನೆ ಮಾಡಬೇಕು ಅಲ್ವಾ ಅಣ್ಣ?.
ಶಿವರಾಮೇಗೌಡ; ಅದರ ಬಗ್ಗೆ ನೀವೇಕೆ ಟೆನ್ಷನ್ ಮಾಡಿಕೊಳ್ಳುತ್ತೀರಾ? ಅಮಿತ್ ಶಾ ಚೆನ್ನೈನಲ್ಲಿ ಹೇಳಿದ್ದನಲ್ವಾ ಕರ್ನಾಟಕ ಹೆಣ್ಣು ಮಕ್ಕಳಿಗೆ ಸುರಕ್ಷಿತ ತಾಣವಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More