newsfirstkannada.com

ತೆಲುಗು ಸ್ಟಾರ್​​​ ನಟಿಯಿಂದ ಯಡವಟ್ಟು.. ಲೈವ್ ಡಿಬೇಟ್​​ನಲ್ಲೇ ಚಪ್ಪಲಿಯಲ್ಲಿ ಹೊಡೆದು ಭಾರೀ ಹೈಡ್ರಾಮಾ..!

Share :

Published August 6, 2024 at 8:16am

Update August 6, 2024 at 9:30am

    ತೆಲುಗು ನಟ ರಾಜ್‌ ತರುಣ್‌-ನಟಿ ಲಾವಣ್ಯ ಬೀದಿ ರಂಪಾಟ

    ಟಿವಿ ಡಿಬೇಟ್ ಕಾರ್ಯಕ್ರಮದಲ್ಲಿ ಹೈಡ್ರಾಮಾ ಸೃಷ್ಟಿಸಿದ ನಟಿ

    ರಾಜ್‌ ತರುಣ್​ ಸ್ನೇಹಿತನಿಗೆ ಚಪ್ಪಲಿಯಿಂದ ಹೊಡೆದ ನಟಿ

ತೆಲುಗು ನಟ ರಾಜ್‌ ತರುಣ್‌ ಹಾಗೂ ನಟಿ ಲಾವಣ್ಯ ನಡುವಿನ ಬೀದಿ ರಂಪಾಟ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಖಾಸಗಿ ಟಿವಿ ಚರ್ಚಾ ಕಾರ್ಯಕ್ರಮದ ನೇರ ಪ್ರಸಾರದ ವೇಳೆ ನಟಿ ಲಾವಣ್ಯ, ರಾಜ್ ತರುಣ್ ಅವರ ಸ್ನೇಹಿತನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಇತ್ತೀಚೆಗೆ ರಾಜ್ ತರುಣ್​​ನಿಂದ ನನಗೆ ಮೋಸ ಆಗಿದೆ ಎಂದು ಆರೋಪಿಸಿ ಲಾವಣ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರ ನಡುವಿನ ಗಲಾಟೆ ಸಂಬಂಧ ಖಾಸಗಿ ಟಿವಿ ಝೀ ತೆಲುಗು ನ್ಯೂಸ್‌ನಲ್ಲಿ ಡಿಬೇಟ್ ನಡೆಯುತ್ತಿತ್ತು. ತಮ್ಮ ನೋವನ್ನು ತೋಡಿಕೊಳ್ಳಲು ನಟಿ ಲಾವಣ್ಯ ಕೂಡ ಆಗಮಿಸಿದ್ದರು. ಆದರೆ ರಾಜ್ ತರುಣ್ ಈ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿಲ್ಲ. ಬದಲಾಗಿ ರಾಜ್ ತರುಣ್ ಅವರ ಸ್ನೇಹಿತ ಶೇಖರ್ ಬಾಷಾ ಬಂದಿದ್ದರು.

ಇದನ್ನೂ ಓದಿ:ವೀಕ್ಷಕರಿಗೆ ಶಾಕ್​ ಕೊಟ್ಟ ಭೂಮಿಗೆ ಬಂದ ಭಗವಂತ ಸೀರಿಯಲ್​ ಟೀಮ್​​.. ಏನದು ಗೊತ್ತಾ?

ಡಿಬೇಟ್ ವೇಳೆ ಶೇಖರ್ ಬಾಷಾ ಮೇಲೆ ಕೋಪಿಸಿಕೊಂಡ ಲಾವಣ್ಯ, ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದು ಹೊಡೆದಿದ್ದಾರೆ. ಬಾಷಾ ಟಿವಿ ನಿರೂಪಕನ ಜತೆ ಮಾತನಾಡುತ್ತಿರುವಾಗಲೇ, ಲಾವಣ್ಯ ತಮ್ಮ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಎಸೆದಿದ್ದಾರೆ. ಇದನ್ನು ನೋಡಿ ಚರ್ಚೆಗೆ ಬಂದಿದ್ದ ಮತ್ತೊಬ್ಬ ಅತಿಥಿ ಆಘಾತಕ್ಕೆ ಒಳಗಾಗಿದ್ದಾರೆ. ಚಪ್ಪಲಿ ಎಸೆದ ಬೆನ್ನಲ್ಲಿಯೇ ಮೇಲೆದ್ದ ಬಾಷಾ, ಮತ್ತೊಮ್ಮೆ ಚಪ್ಪಲಿಯಲ್ಲಿ ಹೊಡೆಯುವಂತೆ ಲಾವಣ್ಯಗೆ ಸವಾಲ್‌ ಹಾಕಿದ್ದಾರೆ.

ಇಬ್ಬರ ಆರೋಪ ಏನು..?
ನಟಿ ಮಾಳವಿ ಮಲ್ಹೋತ್ರಾಗಾಗಿ ರಾಜ್‌ ತರುಣ್‌ ತನ್ನನ್ನು ತೊರೆದಿದ್ದಾನೆ ಎಂದು ನಟಿ ಲಾವಣ್ಯ ಆರೋಪ ಮಾಡುತ್ತಿದ್ದಾರೆ. ಲಾವಣ್ಯ ಅತಿಯಾಗಿ ಮಾದಕ ದ್ರವ್ಯ ಸೇವನೆ ಮಾಡುತ್ತಾರೆ. ಇದರಿಂದ ಅನೇಕ ಬಾರಿ ಕಾನೂನಿನ ಸಮಸ್ಯೆಗೆ ಒಳಗಾಗಿದ್ದೇನೆ. ಇದರಿಂದ ನಾನು ಆಕೆಯಿಂದ ದೂರ ಆಗಿದ್ದೇನೆ ಅನ್ನೋದು ರಾಜ್ ತರುಣ್ ವಾದ.

ಇದನ್ನೂ ಓದಿ:BSNL 5G ಮೂಲಕ ಮೊದಲ ಕರೆ.. ಇದು ಜಿಯೋ, ಏರ್​ಟೆಲ್​ಗಿಂತ ಎಷ್ಟು ಕಮ್ಮಿಗೆ ರೀಚಾರ್ಜ್ ಸಿಗುತ್ತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲುಗು ಸ್ಟಾರ್​​​ ನಟಿಯಿಂದ ಯಡವಟ್ಟು.. ಲೈವ್ ಡಿಬೇಟ್​​ನಲ್ಲೇ ಚಪ್ಪಲಿಯಲ್ಲಿ ಹೊಡೆದು ಭಾರೀ ಹೈಡ್ರಾಮಾ..!

https://newsfirstlive.com/wp-content/uploads/2024/08/RAJ-TARUN.jpg

    ತೆಲುಗು ನಟ ರಾಜ್‌ ತರುಣ್‌-ನಟಿ ಲಾವಣ್ಯ ಬೀದಿ ರಂಪಾಟ

    ಟಿವಿ ಡಿಬೇಟ್ ಕಾರ್ಯಕ್ರಮದಲ್ಲಿ ಹೈಡ್ರಾಮಾ ಸೃಷ್ಟಿಸಿದ ನಟಿ

    ರಾಜ್‌ ತರುಣ್​ ಸ್ನೇಹಿತನಿಗೆ ಚಪ್ಪಲಿಯಿಂದ ಹೊಡೆದ ನಟಿ

ತೆಲುಗು ನಟ ರಾಜ್‌ ತರುಣ್‌ ಹಾಗೂ ನಟಿ ಲಾವಣ್ಯ ನಡುವಿನ ಬೀದಿ ರಂಪಾಟ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಖಾಸಗಿ ಟಿವಿ ಚರ್ಚಾ ಕಾರ್ಯಕ್ರಮದ ನೇರ ಪ್ರಸಾರದ ವೇಳೆ ನಟಿ ಲಾವಣ್ಯ, ರಾಜ್ ತರುಣ್ ಅವರ ಸ್ನೇಹಿತನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಇತ್ತೀಚೆಗೆ ರಾಜ್ ತರುಣ್​​ನಿಂದ ನನಗೆ ಮೋಸ ಆಗಿದೆ ಎಂದು ಆರೋಪಿಸಿ ಲಾವಣ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರ ನಡುವಿನ ಗಲಾಟೆ ಸಂಬಂಧ ಖಾಸಗಿ ಟಿವಿ ಝೀ ತೆಲುಗು ನ್ಯೂಸ್‌ನಲ್ಲಿ ಡಿಬೇಟ್ ನಡೆಯುತ್ತಿತ್ತು. ತಮ್ಮ ನೋವನ್ನು ತೋಡಿಕೊಳ್ಳಲು ನಟಿ ಲಾವಣ್ಯ ಕೂಡ ಆಗಮಿಸಿದ್ದರು. ಆದರೆ ರಾಜ್ ತರುಣ್ ಈ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿಲ್ಲ. ಬದಲಾಗಿ ರಾಜ್ ತರುಣ್ ಅವರ ಸ್ನೇಹಿತ ಶೇಖರ್ ಬಾಷಾ ಬಂದಿದ್ದರು.

ಇದನ್ನೂ ಓದಿ:ವೀಕ್ಷಕರಿಗೆ ಶಾಕ್​ ಕೊಟ್ಟ ಭೂಮಿಗೆ ಬಂದ ಭಗವಂತ ಸೀರಿಯಲ್​ ಟೀಮ್​​.. ಏನದು ಗೊತ್ತಾ?

ಡಿಬೇಟ್ ವೇಳೆ ಶೇಖರ್ ಬಾಷಾ ಮೇಲೆ ಕೋಪಿಸಿಕೊಂಡ ಲಾವಣ್ಯ, ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದು ಹೊಡೆದಿದ್ದಾರೆ. ಬಾಷಾ ಟಿವಿ ನಿರೂಪಕನ ಜತೆ ಮಾತನಾಡುತ್ತಿರುವಾಗಲೇ, ಲಾವಣ್ಯ ತಮ್ಮ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಎಸೆದಿದ್ದಾರೆ. ಇದನ್ನು ನೋಡಿ ಚರ್ಚೆಗೆ ಬಂದಿದ್ದ ಮತ್ತೊಬ್ಬ ಅತಿಥಿ ಆಘಾತಕ್ಕೆ ಒಳಗಾಗಿದ್ದಾರೆ. ಚಪ್ಪಲಿ ಎಸೆದ ಬೆನ್ನಲ್ಲಿಯೇ ಮೇಲೆದ್ದ ಬಾಷಾ, ಮತ್ತೊಮ್ಮೆ ಚಪ್ಪಲಿಯಲ್ಲಿ ಹೊಡೆಯುವಂತೆ ಲಾವಣ್ಯಗೆ ಸವಾಲ್‌ ಹಾಕಿದ್ದಾರೆ.

ಇಬ್ಬರ ಆರೋಪ ಏನು..?
ನಟಿ ಮಾಳವಿ ಮಲ್ಹೋತ್ರಾಗಾಗಿ ರಾಜ್‌ ತರುಣ್‌ ತನ್ನನ್ನು ತೊರೆದಿದ್ದಾನೆ ಎಂದು ನಟಿ ಲಾವಣ್ಯ ಆರೋಪ ಮಾಡುತ್ತಿದ್ದಾರೆ. ಲಾವಣ್ಯ ಅತಿಯಾಗಿ ಮಾದಕ ದ್ರವ್ಯ ಸೇವನೆ ಮಾಡುತ್ತಾರೆ. ಇದರಿಂದ ಅನೇಕ ಬಾರಿ ಕಾನೂನಿನ ಸಮಸ್ಯೆಗೆ ಒಳಗಾಗಿದ್ದೇನೆ. ಇದರಿಂದ ನಾನು ಆಕೆಯಿಂದ ದೂರ ಆಗಿದ್ದೇನೆ ಅನ್ನೋದು ರಾಜ್ ತರುಣ್ ವಾದ.

ಇದನ್ನೂ ಓದಿ:BSNL 5G ಮೂಲಕ ಮೊದಲ ಕರೆ.. ಇದು ಜಿಯೋ, ಏರ್​ಟೆಲ್​ಗಿಂತ ಎಷ್ಟು ಕಮ್ಮಿಗೆ ರೀಚಾರ್ಜ್ ಸಿಗುತ್ತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More