ಟೀಮ್ ಇಂಡಿಯಾಗೆ ಶ್ರೀಲಂಕಾ ವಿರುದ್ಧ ಹೀನಾಯ ಸೋಲು!
ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಟೀಮ್ ಇಂಡಿಯಾ ಕೋಚ್
ಭಾರತ ತಂಡದ ಸೋಲಿಗೆ ಇವರೇ ಕಾರಣ ಎಂದ ಅಭಿಷೇಕ್ ನಾಯರ್
ಶ್ರೀಲಂಕಾ, ಟೀಮ್ ಇಂಡಿಯಾ ನಡುವಿನ ಮೊದಲ ಏಕದಿನ ಪಂದ್ಯ ಟೈ ಆಗಿತ್ತು. ಇದಾದ ಬೆನ್ನಲ್ಲೇ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದ್ದು, ಮುಖ್ಯ ಕೋಚ್ ಗಂಭೀರ್ಗೆ ಭಾರೀ ಮುಖಭಂಗ ಆಗಿದೆ. ಹಾಗಾಗಿ ಭಾರತದ ಸೋಲು ಗಂಭೀರ್ ಕೋಚಿಂಗ್ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಈ ಬಗ್ಗೆ ಮಾತಾಡಿರೋ ಟೀಮ್ ಇಂಡಿಯಾದ ಅಸಿಸ್ಟಂಟ್ ಕೋಚ್ ಅಭಿಷೇಕ್ ನಾಯರ್ ತಂಡದ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ.
ಅಭಿಷೇಕ್ ನಾಯರ್ ಹೇಳಿದ್ದೇನು..?
ನಾವು ಸುಧಾರಣೆಗೆ ಅಗತ್ಯವಿರೋ ವಿಷಯಗಳತ್ತ ಗಮನ ಹರಿಸಬೇಕು. ಸತತ 2ನೇ ಪಂದ್ಯಕ್ಕೆ ಯಾಕೆ ಹೀಗಾಯಿತು ಎಂದು ಯೋಚಿಸಬೇಕು. ಮೊದಲ ಪಂದ್ಯದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿ ಆಗಿದ್ದೆವು. 2ನೇ ಪಂದ್ಯದಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡೆವು. ಇದಕ್ಕೆ ಕಾರಣವೇನು ಎಂದು ಹುಡುಕಬೇಕಿದೆ ಎಂದರು ಅಭಿಷೇಕ್ ನಾಯರ್.
ಮಧ್ಯಮ ಓವರ್ಗಳಲ್ಲಿ ನಾವು ವಿಕೆಟ್ ಕಳೆದುಕೊಳ್ಳುತ್ತಿದ್ದೇವೆ. ಮಧ್ಯಮ ಕ್ರಮಾಂಕದ ಬ್ಯಾಟರ್ಸ್ ಕ್ರೀಸ್ನಲ್ಲಿದ್ದು ಸರಿಯಾಗಿ ಆಡಬೇಕು. ಇಲ್ಲದೆ ಹೋದಲ್ಲಿ ಬ್ಯಾಟಿಂಗ್ ಸ್ಥಾನ ಬದಲಾವಣೆ ಮಾಡುವ ನಿರ್ಧಾರ ಮಾಡುತ್ತೇವೆ ಎಂದರು. ಜತೆಗೆ ಒಂದಷ್ಟು ಆಟಗಾರರನ್ನು ಬೆಂಚ್ ಕಾಯಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ದೊಡ್ಡ ತಪ್ಪು ಮಾಡಿದ ಗಂಭೀರ.. ಮುಖ್ಯ ಕೋಚ್ ಕೈಸುಟ್ಟುಕೊಂಡಿದ್ದು ಎಲ್ಲಿ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟೀಮ್ ಇಂಡಿಯಾಗೆ ಶ್ರೀಲಂಕಾ ವಿರುದ್ಧ ಹೀನಾಯ ಸೋಲು!
ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಟೀಮ್ ಇಂಡಿಯಾ ಕೋಚ್
ಭಾರತ ತಂಡದ ಸೋಲಿಗೆ ಇವರೇ ಕಾರಣ ಎಂದ ಅಭಿಷೇಕ್ ನಾಯರ್
ಶ್ರೀಲಂಕಾ, ಟೀಮ್ ಇಂಡಿಯಾ ನಡುವಿನ ಮೊದಲ ಏಕದಿನ ಪಂದ್ಯ ಟೈ ಆಗಿತ್ತು. ಇದಾದ ಬೆನ್ನಲ್ಲೇ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದ್ದು, ಮುಖ್ಯ ಕೋಚ್ ಗಂಭೀರ್ಗೆ ಭಾರೀ ಮುಖಭಂಗ ಆಗಿದೆ. ಹಾಗಾಗಿ ಭಾರತದ ಸೋಲು ಗಂಭೀರ್ ಕೋಚಿಂಗ್ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಈ ಬಗ್ಗೆ ಮಾತಾಡಿರೋ ಟೀಮ್ ಇಂಡಿಯಾದ ಅಸಿಸ್ಟಂಟ್ ಕೋಚ್ ಅಭಿಷೇಕ್ ನಾಯರ್ ತಂಡದ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ.
ಅಭಿಷೇಕ್ ನಾಯರ್ ಹೇಳಿದ್ದೇನು..?
ನಾವು ಸುಧಾರಣೆಗೆ ಅಗತ್ಯವಿರೋ ವಿಷಯಗಳತ್ತ ಗಮನ ಹರಿಸಬೇಕು. ಸತತ 2ನೇ ಪಂದ್ಯಕ್ಕೆ ಯಾಕೆ ಹೀಗಾಯಿತು ಎಂದು ಯೋಚಿಸಬೇಕು. ಮೊದಲ ಪಂದ್ಯದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿ ಆಗಿದ್ದೆವು. 2ನೇ ಪಂದ್ಯದಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡೆವು. ಇದಕ್ಕೆ ಕಾರಣವೇನು ಎಂದು ಹುಡುಕಬೇಕಿದೆ ಎಂದರು ಅಭಿಷೇಕ್ ನಾಯರ್.
ಮಧ್ಯಮ ಓವರ್ಗಳಲ್ಲಿ ನಾವು ವಿಕೆಟ್ ಕಳೆದುಕೊಳ್ಳುತ್ತಿದ್ದೇವೆ. ಮಧ್ಯಮ ಕ್ರಮಾಂಕದ ಬ್ಯಾಟರ್ಸ್ ಕ್ರೀಸ್ನಲ್ಲಿದ್ದು ಸರಿಯಾಗಿ ಆಡಬೇಕು. ಇಲ್ಲದೆ ಹೋದಲ್ಲಿ ಬ್ಯಾಟಿಂಗ್ ಸ್ಥಾನ ಬದಲಾವಣೆ ಮಾಡುವ ನಿರ್ಧಾರ ಮಾಡುತ್ತೇವೆ ಎಂದರು. ಜತೆಗೆ ಒಂದಷ್ಟು ಆಟಗಾರರನ್ನು ಬೆಂಚ್ ಕಾಯಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ದೊಡ್ಡ ತಪ್ಪು ಮಾಡಿದ ಗಂಭೀರ.. ಮುಖ್ಯ ಕೋಚ್ ಕೈಸುಟ್ಟುಕೊಂಡಿದ್ದು ಎಲ್ಲಿ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ