newsfirstkannada.com

3 ಹೆಂಡ್ತಿಯರ ಬಿಟ್ಟು 4ನೇ ಮದುವೆ.. ವೈದ್ಯೆಯ ರೇಪ್ & ಮರ್ಡರ್‌ ಹಂತಕನಿಗಿದೆ ಕರಾಳ ಚಾಳಿ; ಏನದು?

Share :

Published August 12, 2024 at 4:12pm

    ಕೊಲ್ಕತ್ತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಂತಕನಿಗೆ ಕರಾಳ ಇತಿಹಾಸ

    ಅವನು ಆಗಿದ್ದು ಎಷ್ಟು ಮದುವೆ ಗೊತ್ತಾ..? ಬಿಟ್ಟು ಹೋದ ಹೋದ ಪತ್ನಿಯರೆಷ್ಟು?

    ಪಕ್ಕದ ಮನೆಯವರು ತೆರೆದಿಟ್ಟಿದ್ದಾರೆ ಸಂಜಯ್ ರಾಯ್​ನ ಮತ್ತೊಂದು ಮುಖ

ಕೊಲ್ಕತ್ತಾ: ಆರ್​ಜಿ ಕಾರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಹತ್ಯೆ ಪ್ರಕರಣದ ದಿನಕ್ಕೊಂದು ಹೊಸ ವಿಷಯಗಳನ್ನು ಬಯಲಿಗೆಳೆಯುತ್ತಿದೆ. ಹಂತಕ ಸಂಜಯ್ ರಾಯ್​ನ ಒಂದೊಂದು ಅಸಲಿ ಮುಖಗಳು ಆಚೆ ಬರುತ್ತಿವೆ. ಅವನು ಅಪ್ಪಟ ಹೆಣ್ಣುಬಾಕ ಅನ್ನೋ ವಿಚಾರ ವಿಚಾರಣೆಯಿಂದ ತಿಳಿದು ಬರುತ್ತಿದೆ. ಆತನ ನೆರಮನೆಯವರು ಅವನ ಬಗ್ಗೆ ಬೆಚ್ಚಿ ಬೀಳಿಸುವಂತಹ ವಿಷಯಗಳನ್ನು ಹೊರಗೆಡವಿದ್ದಾರೆ.

ಇದನ್ನೂ ಓದಿ: ನೀಲಿ ಚಿತ್ರಗಳನ್ನು ನೋಡೋ ಚಟ.. ವೈದ್ಯ ರೇಪ್ & ಮರ್ಡರ್‌ ಭಯಾನಕ ಸತ್ಯ ಬಹಿರಂಗ; ಆಗಿದ್ದೇನು?

ಕೊಲ್ಕೊತ್ತಾದ ಆರ್​ಜಿ ಕಾರ್ ಆಸ್ಪತ್ರೆಯ ವೈದ್ಯೆಯನ್ನ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಮುಖ ಆರೋಪಿ ಸಂಜಯ್ ರಾಯ್, ತನ್ನ ದಾಂಪತ್ಯದ ವಿಚಾರದಲ್ಲಿಯೂ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಮದುವೆಯಾಗಿದ್ದಾನೆ ಈ ಭೂಪ. ಇವನ ನೀಚ ವರ್ತನೆಯನ್ನು ತಾಳಲಾರದೆ ಮೂವರು ಹೆಂಡತಿಯರು ನಿನ್ನ ಸಹವಾಸವೇ ಬೇಡ ಎಂದು ಇವನನ್ನು ಬಿಟ್ಟು ಹೋಗಿದ್ದಾರೆ. ಮತ್ತೊಬ್ಬ ಹೆಂಡತಿ ಇತ್ತೀಚೆಗಷ್ಟೇ ಕ್ಯಾನ್ಸರ್ ಕಾಯಿಲೆಯಿಂದ ತೀರಿಕೊಂಡಿದ್ದಾಳೆ.

ಇದನ್ನೂ ಓದಿ: ಕೋಲ್ಕತ್ತಾ ಕೇಸ್‌ಗೆ ಹೊಸ ಟ್ವಿಸ್ಟ್‌.. ವೈದ್ಯೆ ರೇಪ್ & ಮರ್ಡರ್‌ ಬಳಿಕ ಕಿರಾತಕ ಮಾಡಿದ್ದೇನು? ಸ್ಫೋಟಕ ಮಾಹಿತಿ!

ಸಂಜಯ್ ರಾಯ್​ನ ನೆರೆಮನೆಯವರು ಇವನ ಒಂದೊಂದು ಅವತಾರವನ್ನು ಬಹಿರಂಗಪಡಿಸಿದ್ದಾರೆ. ಇವನು ತಡರಾತ್ರಿ ಮನೆಗೆ ತೇಲಾಡಿಕೊಂಡು ಬಂದು ತನ್ನ ಪತ್ನಿಯರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದನಂತೆ. ನಿತ್ಯವೂ ಅಮಲೇರಿಸಿಕೊಂಡೇ ಮನೆಗೆ ಬರುತ್ತಿದ್ದನಂತೆ ಹೀಗಾಗಿಯೇ ಈ ಹಿಂದೆ ಇದ್ದ ಮೂವರು ಪತ್ನಿಯರು ಇವನ ಕಾಟದಿಂದ ಬೇಸತ್ತು ಮನೆ ತೊರೆದು ಹೋಗಿದ್ದಾರೆ. ಇತ್ತೀಚೆಗಷ್ಟೇ ಈತ ಮತ್ತೊಂದು ಮದುವೆಯಾಗಿದ್ದ. ನಾಲ್ಕನೆ ಪತ್ನಿ ಇತ್ತೀಚೆಗಷ್ಟೇ ಕ್ಯಾನ್ಸರ್​ನಿಂದ ಮೃತಪಟ್ಟಿರುವ ಬಗ್ಗೆ ಸಂಜಯ್​ ರಾಯ್​ನ ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

ಇದನ್ನೂ ಓದಿ:ನವಿಲು ಮಾಂಸದ ಅಡುಗೆ ಮಾಡಿ ವಿಡಿಯೋ ಅಪ್​​ಲೋಡ್​.. ಯೂಟ್ಯೂಬರ್​​​​​ ಅರೆಸ್ಟ್​

ನನ್ನ ಮಗ ನಿರಪರಾಧಿ ಎಂದ ಸಂಜಯ್ ತಾಯಿ

ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು ಅನ್ನೋ ಗಾದೆಯಿದೆ. ಅದೇ ರೀತಿ ಸಂಜಯ್​ ತಾಯಿ ಕೂಡ ನನ್ನ ಮಗ ನಿರಪರಾಧಿ ಎಂದು ಮಗನ ಪರ ವಕಾಲತ್ತು ಮಾಡಿದ್ದಾರೆ.  ಸಂಜಯ್ ರಾಯ್​ ಮೇಲೆ ಬಂದ ಯಾವ ಆರೋಪಗಳನ್ನು ಅವನ ತಾಯಿ ಒಪ್ಪುತ್ತಿಲ್ಲ. ನನ್ನ ಮಗ ನಿರಪರಾಧಿ, ಪೊಲೀಸರು ಅವನ ಮೇಲೆ ಒತ್ತಡ ಹೇರಿ ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ನನ್ನ ಮಗ ಮುದ್ಧ, ಅವನಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸಂಜಯ್ ರಾಯ್​ನ ತಾಯಿ ಮಾಲಿತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ಹೆಂಡ್ತಿಯರ ಬಿಟ್ಟು 4ನೇ ಮದುವೆ.. ವೈದ್ಯೆಯ ರೇಪ್ & ಮರ್ಡರ್‌ ಹಂತಕನಿಗಿದೆ ಕರಾಳ ಚಾಳಿ; ಏನದು?

https://newsfirstlive.com/wp-content/uploads/2024/08/kolkata-rape-and-murder-2-1.jpg

    ಕೊಲ್ಕತ್ತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಂತಕನಿಗೆ ಕರಾಳ ಇತಿಹಾಸ

    ಅವನು ಆಗಿದ್ದು ಎಷ್ಟು ಮದುವೆ ಗೊತ್ತಾ..? ಬಿಟ್ಟು ಹೋದ ಹೋದ ಪತ್ನಿಯರೆಷ್ಟು?

    ಪಕ್ಕದ ಮನೆಯವರು ತೆರೆದಿಟ್ಟಿದ್ದಾರೆ ಸಂಜಯ್ ರಾಯ್​ನ ಮತ್ತೊಂದು ಮುಖ

ಕೊಲ್ಕತ್ತಾ: ಆರ್​ಜಿ ಕಾರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಹತ್ಯೆ ಪ್ರಕರಣದ ದಿನಕ್ಕೊಂದು ಹೊಸ ವಿಷಯಗಳನ್ನು ಬಯಲಿಗೆಳೆಯುತ್ತಿದೆ. ಹಂತಕ ಸಂಜಯ್ ರಾಯ್​ನ ಒಂದೊಂದು ಅಸಲಿ ಮುಖಗಳು ಆಚೆ ಬರುತ್ತಿವೆ. ಅವನು ಅಪ್ಪಟ ಹೆಣ್ಣುಬಾಕ ಅನ್ನೋ ವಿಚಾರ ವಿಚಾರಣೆಯಿಂದ ತಿಳಿದು ಬರುತ್ತಿದೆ. ಆತನ ನೆರಮನೆಯವರು ಅವನ ಬಗ್ಗೆ ಬೆಚ್ಚಿ ಬೀಳಿಸುವಂತಹ ವಿಷಯಗಳನ್ನು ಹೊರಗೆಡವಿದ್ದಾರೆ.

ಇದನ್ನೂ ಓದಿ: ನೀಲಿ ಚಿತ್ರಗಳನ್ನು ನೋಡೋ ಚಟ.. ವೈದ್ಯ ರೇಪ್ & ಮರ್ಡರ್‌ ಭಯಾನಕ ಸತ್ಯ ಬಹಿರಂಗ; ಆಗಿದ್ದೇನು?

ಕೊಲ್ಕೊತ್ತಾದ ಆರ್​ಜಿ ಕಾರ್ ಆಸ್ಪತ್ರೆಯ ವೈದ್ಯೆಯನ್ನ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಮುಖ ಆರೋಪಿ ಸಂಜಯ್ ರಾಯ್, ತನ್ನ ದಾಂಪತ್ಯದ ವಿಚಾರದಲ್ಲಿಯೂ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಮದುವೆಯಾಗಿದ್ದಾನೆ ಈ ಭೂಪ. ಇವನ ನೀಚ ವರ್ತನೆಯನ್ನು ತಾಳಲಾರದೆ ಮೂವರು ಹೆಂಡತಿಯರು ನಿನ್ನ ಸಹವಾಸವೇ ಬೇಡ ಎಂದು ಇವನನ್ನು ಬಿಟ್ಟು ಹೋಗಿದ್ದಾರೆ. ಮತ್ತೊಬ್ಬ ಹೆಂಡತಿ ಇತ್ತೀಚೆಗಷ್ಟೇ ಕ್ಯಾನ್ಸರ್ ಕಾಯಿಲೆಯಿಂದ ತೀರಿಕೊಂಡಿದ್ದಾಳೆ.

ಇದನ್ನೂ ಓದಿ: ಕೋಲ್ಕತ್ತಾ ಕೇಸ್‌ಗೆ ಹೊಸ ಟ್ವಿಸ್ಟ್‌.. ವೈದ್ಯೆ ರೇಪ್ & ಮರ್ಡರ್‌ ಬಳಿಕ ಕಿರಾತಕ ಮಾಡಿದ್ದೇನು? ಸ್ಫೋಟಕ ಮಾಹಿತಿ!

ಸಂಜಯ್ ರಾಯ್​ನ ನೆರೆಮನೆಯವರು ಇವನ ಒಂದೊಂದು ಅವತಾರವನ್ನು ಬಹಿರಂಗಪಡಿಸಿದ್ದಾರೆ. ಇವನು ತಡರಾತ್ರಿ ಮನೆಗೆ ತೇಲಾಡಿಕೊಂಡು ಬಂದು ತನ್ನ ಪತ್ನಿಯರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದನಂತೆ. ನಿತ್ಯವೂ ಅಮಲೇರಿಸಿಕೊಂಡೇ ಮನೆಗೆ ಬರುತ್ತಿದ್ದನಂತೆ ಹೀಗಾಗಿಯೇ ಈ ಹಿಂದೆ ಇದ್ದ ಮೂವರು ಪತ್ನಿಯರು ಇವನ ಕಾಟದಿಂದ ಬೇಸತ್ತು ಮನೆ ತೊರೆದು ಹೋಗಿದ್ದಾರೆ. ಇತ್ತೀಚೆಗಷ್ಟೇ ಈತ ಮತ್ತೊಂದು ಮದುವೆಯಾಗಿದ್ದ. ನಾಲ್ಕನೆ ಪತ್ನಿ ಇತ್ತೀಚೆಗಷ್ಟೇ ಕ್ಯಾನ್ಸರ್​ನಿಂದ ಮೃತಪಟ್ಟಿರುವ ಬಗ್ಗೆ ಸಂಜಯ್​ ರಾಯ್​ನ ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

ಇದನ್ನೂ ಓದಿ:ನವಿಲು ಮಾಂಸದ ಅಡುಗೆ ಮಾಡಿ ವಿಡಿಯೋ ಅಪ್​​ಲೋಡ್​.. ಯೂಟ್ಯೂಬರ್​​​​​ ಅರೆಸ್ಟ್​

ನನ್ನ ಮಗ ನಿರಪರಾಧಿ ಎಂದ ಸಂಜಯ್ ತಾಯಿ

ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು ಅನ್ನೋ ಗಾದೆಯಿದೆ. ಅದೇ ರೀತಿ ಸಂಜಯ್​ ತಾಯಿ ಕೂಡ ನನ್ನ ಮಗ ನಿರಪರಾಧಿ ಎಂದು ಮಗನ ಪರ ವಕಾಲತ್ತು ಮಾಡಿದ್ದಾರೆ.  ಸಂಜಯ್ ರಾಯ್​ ಮೇಲೆ ಬಂದ ಯಾವ ಆರೋಪಗಳನ್ನು ಅವನ ತಾಯಿ ಒಪ್ಪುತ್ತಿಲ್ಲ. ನನ್ನ ಮಗ ನಿರಪರಾಧಿ, ಪೊಲೀಸರು ಅವನ ಮೇಲೆ ಒತ್ತಡ ಹೇರಿ ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ನನ್ನ ಮಗ ಮುದ್ಧ, ಅವನಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸಂಜಯ್ ರಾಯ್​ನ ತಾಯಿ ಮಾಲಿತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More