ಬಿಸಿಸಿಐ ಹೇಳಿದ್ದೇ ಫೈನಲ್.. ಸ್ಟಾರ್ಗಳ ಆಟ ನಡೆಯಲ್ಲ
12 ವರ್ಷಗಳ ಬಳಿಕ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕಣಕ್ಕೆ
ಈ ಪಂದ್ಯಾವಳಿ ಕೊಹ್ಲಿಗೆ ಇಂಪಾರ್ಟೆಂಟ್ ಏಕೆ..?
ಒಂದು ಕಾಲವಿತ್ತು. ಕಿಂಗ್ ಕೊಹ್ಲಿಯನ್ನ ಎದುರು ಹಾಕಿಕೊಳ್ಳಲು ಬಿಸಿಸಿಐನೇ ಹೆದರುತ್ತಿತ್ತು. ಆದ್ರೀಗ ಕಾಲ ಉರುಳಿದೆ. ಬಿಗ್ಬಾಸ್ಗಳಿಗೆ ರನ್ ಮಷೀನ್ ತಲೆಬಾಗುವ ಸ್ಥಿತಿ ಬಂದಿದೆ. ಲಂಕಾ ಪ್ರವಾಸದ ವೇಳೆ ಒಮ್ಮೆ ತಲೆಬಾಗಿದ್ದಾಯ್ತು. ಇದೀಗ ಮತ್ತೊಮ್ಮೆ ಕೊಹ್ಲಿ ಶರಣಾಗಿದ್ದಾರೆ.
ದುಲೀಪ್ ಟ್ರೋಫಿ ಆಡಲು ಸಜ್ಜಾದ ರನ್ ಮಷೀನ್
ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ಕೋಚ್ ಆಗಿದ್ದೇ ಬಂತು. ಕಠಿಣ ನಿರ್ಧಾರ ತೆಗೆದುಕೊಳ್ತಿದ್ದಾರೆ. ಚಾರ್ಜ್ ತೆಗೆದುಕೊಂಡ ಮೊದಲ ಸಿರೀಸ್ ವೇಳೆಯೇ ರೆಸ್ಟ್ ಇದ್ದಾಗ ಕಾಂಟ್ರಾಕ್ಟೆಡ್ ಪ್ಲೇಯರ್ಸ್ ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕು ಅಂತ ಕಡ್ಡಿ ಮುರಿದಂತೆ ಹೇಳಿದ್ರು. ಇದಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಸಾಥ್ ಕೊಟ್ಟಿದ್ರು. ಇದರ ಹಿಂದಿನ ಸೂತ್ರಧಾರಿ ಬಿಸಿಸಿಐ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಸದ್ಯ ಬಿಸಿಸಿಐಯನ್ನ ಯಾರೂ ಪ್ರಶ್ನೆ ಮಾಡುವಂತಿಲ್ಲ. ಟೀಮ್ ಇಂಡಿಯಾ ವಿಚಾರದಲ್ಲಿ ಬಿಗ್ಬಾಸ್ಗಳು ಹೇಳಿದ್ದೇ ವೇದವಾಕ್ಯ. ಯಾವ ಸೂಪರ್ ಸ್ಟಾರ್ಗಳ ಆಟವು ನಡೆಯಲ್ಲ. ಅದಕ್ಕೆ ಸ್ಟಾರ್ ಕ್ರಿಕೆಟರ್ಸ್ ದುಲೀಪ್ ಟ್ರೋಫಿಯತ್ತ ಮುಖ ಮಾಡಿರೋದೇ ಮತ್ತೊಂದು ನಿದರ್ಶನ.
ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!
ದುಲೀಪ್ ಟ್ರೋಫಿಯಲ್ಲಿ ಘರ್ಜಿಸಲು ಕೊಹ್ಲಿ ರೆಡಿ
ಒಂದು ತಿಂಗಳು ಮಟ್ಟಿಗೆ ಟೀಮ್ ಇಂಡಿಯಾಗೆ ಯಾವುದೇ ಸರಣಿಗಳಿಲ್ಲ. ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ಆರಂಭಗೊಳ್ಳಲಿದೆ. ಈ ಡೊಮೆಸ್ಟಿಕ್ ಪಂದ್ಯಾವಳಿಯಲ್ಲಿ ಎಲ್ಲರಿಗೂ ಆಡುವಂತೆ ಬಿಸಿಸಿಐ ಎಲ್ಲರಿಗೂ ಖಡಕ್ ಆಗಿ ಸೂಚಿಸಿದೆ. ಬಿಗ್ಬಾಸ್ಗಳು ಸೂಚನೆ ಕೊಟ್ಟ ಬೆನ್ನಲ್ಲೆ ಕಿಂಗ್ ಕೊಹ್ಲಿ ದುಲೀಪ್ ಟ್ರೋಫಿಯಲ್ಲಿ ಪ್ಯಾಡ್ ಕಟ್ಟಿ ಘರ್ಜಿಸಲು ಸಜ್ಜಾಗಿದ್ದಾರೆ.
12 ವರ್ಷಗಳ ಬಳಿಕ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕಣಕ್ಕೆ
ವಿಶ್ವ ಕ್ರಿಕೆಟ್ನ ತ್ರಿವಿಕ್ರಮನಾಗಿ ಮೆರೆದಾಡ್ತಿರೋ ಕಿಂಗ್ ಕೊಹ್ಲಿ ಡೊಮೆಸ್ಟಿಕ್ ಕ್ರಿಕೆಟ್ ಆಡದೇ ದಶಕಗಳೇ ಉರುಳಿತ್ತು. ಇದೀಗ ದುಲೀಪ್ ಟ್ರೋಫಿಯಲ್ಲಿ ಆಡಲು ರನ್ ಮಷೀನ್ ರೆಡಿ ಆಗಿದ್ದಾರೆ. ಆ ಮೂಲಕ ಬರೋಬ್ಬರಿ 12 ವರ್ಷಗಳ ಬಳಿಕ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ 2012 ರಲ್ಲಿ ಡೆಲ್ಲಿ ಪರ ಕೊನೆ ಡೊಮೆಸ್ಟಿಕ್ ಪಂದ್ಯವನ್ನಾಡಿದ್ದರು.
ದುಲೀಪ್ ಟ್ರೋಫಿ ಕೊಹ್ಲಿಗೆ ಇಂಪಾರ್ಟೆಂಟ್
ಬಾಂಗ್ಲಾದೇಶ ಟೆಸ್ಟ್ ಸರಣಿಗೂ ಮುನ್ನ ನಡೆಯುವ ದುಲೀಪ್ ಟ್ರೋಫಿ ಕಿಂಗ್ ಕೊಹ್ಲಿ ಮಹತ್ವದ್ದಾಗಿದೆ. ಟೀಮ್ ಇಂಡಿಯಾದಲ್ಲಿ ಪೈಪೊಟಿ ಹೆಚ್ಚಿದೆ. ಪ್ರತಿ ಸ್ಲಾಟ್ಗೆ ಇಬ್ಬರಿಂದ ಮೂವರು ಪ್ಲೇಯರ್ಸ್ ಸಿದ್ಧರಿದ್ದಾರೆ. ಹೀಗಾಗಿ ಕೊಹ್ಲಿ ಮೈ ಮರೆಯದೇ ದುಲೀಪ್ ಟ್ರೋಫಿಯಲ್ಲಿ ಪರ್ಫಾಮ್ ಮಾಡಲೇಬೇಕಿದೆ. ಆಗಲಷ್ಟೇ ಮುಂಬರೋ ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಅವಕಾಶದ ಬಾಗಿಲು ತೆರೆಯಲಿದೆ.
ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!
ಲಂಕಾ ODI ಸರಣಿ
ಶ್ರೀಲಂಕಾ ಏಕದಿನ ಸರಣಿಯಲ್ಲಿ ಕೊಹ್ಕಿ ಈ ಮಟ್ಟಿಗೆ ಕಳಪೆ ಪರ್ಫಾಮೆನ್ಸ್ ನೀಡ್ತಾರೆ ಅಂತ. ಸಿಂಹಳೀಯರ ಸ್ಪಿನ್ಗೆ ತಡಬಡಾಯಿಸಿದ ಕೊಹ್ಲಿ ಆಡಿದ 3 ಪಂದ್ಯಗಳಿಂದ ಬರೀ 58 ರನ್ ಗಳಿಸಿ ಟೀಕಾಕಾರರಿಗೆ ಬಾಯಿಗೆ ಆಹಾರವಾಗಿದ್ದಾರೆ.
ಬಾಂಗ್ಲಾ ಸರಣಿಯಲ್ಲಿ ನಡೆಸ್ತಾರಾ ರನ್ ಪ್ರಹಾರ..?
ಲಂಕಾ ಒನ್ಡೆ ಸರಣಿಯಲ್ಲಿ ಅಟ್ಟರ್ ಫ್ಲಾಪ್ ಶೋ ನೀಡಿದ ಕೊಹ್ಲಿಗೆ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳುವ ಬಾಂಗ್ಲಾ ಟೆಸ್ಟ್ ಸರಣಿ ಮಹತ್ವ ಪಡೆದುಕೊಂಡಿದೆ. 9 ತಿಂಗಳ ಬಳಿಕ ರೆಡ್ ಬಾಲ್ ಕ್ರಿಕೆಟ್ ಆಡಲಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ್ರು. ಅದೇ ರಿದಮ್ ಬಾಂಗ್ಲಾ ವಿರುದ್ಧ ಕಂಟಿನ್ಯೂ ಮಾಡಬೇಕಾದ ಅಗತ್ಯವಿದೆ. ಒಂದು ವೇಳೆ ಸೆಂಚುರಿ ಮಾಸ್ಟರ್ ಇಲ್ಲಿಯೂ ರನ್ ಬರ ಎದುರಿಸಿದ್ರೆ ಸಂಕಷ್ಟ ತಪ್ಪಿದ್ದಲ್ಲ. ಯಾಕಂದ್ರೆ ಯಂಗ್ಸ್ಟರ್ಸ್ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಯಾವ ಕ್ಷಣದಲ್ಲಿ ಬೇಕಾದ್ರೂ, ಸ್ಥಾನವನ್ನ ಕಬ್ಜಾ ಮಾಡಿಕೊಳ್ಳಬಹುದು. ಹೀಗಾಗಿ ವಿರಾಟ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ರನ್ ಪ್ರಹಾರ ನಡೆಸಬೇಕಿದೆ. ಇಲ್ಲವಾದ್ರೆ ಕುತ್ತು ತಪ್ಪಿದ್ದಲ್ಲ.
ಇದನ್ನೂ ಓದಿ: ಮಹಿಳೆಯ ನಗ್ನ ಫೋಟೋ ಬರುತ್ತೆ.. ಆಮೇಲೆ ನಿಮ್ಮ ಬ್ರೈನ್ ಕೂಡ ಹೈಜಾಕ್ ಆಗುತ್ತೆ.. ಹುಷಾರಾಗಿರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಬಿಸಿಸಿಐ ಹೇಳಿದ್ದೇ ಫೈನಲ್.. ಸ್ಟಾರ್ಗಳ ಆಟ ನಡೆಯಲ್ಲ
12 ವರ್ಷಗಳ ಬಳಿಕ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕಣಕ್ಕೆ
ಈ ಪಂದ್ಯಾವಳಿ ಕೊಹ್ಲಿಗೆ ಇಂಪಾರ್ಟೆಂಟ್ ಏಕೆ..?
ಒಂದು ಕಾಲವಿತ್ತು. ಕಿಂಗ್ ಕೊಹ್ಲಿಯನ್ನ ಎದುರು ಹಾಕಿಕೊಳ್ಳಲು ಬಿಸಿಸಿಐನೇ ಹೆದರುತ್ತಿತ್ತು. ಆದ್ರೀಗ ಕಾಲ ಉರುಳಿದೆ. ಬಿಗ್ಬಾಸ್ಗಳಿಗೆ ರನ್ ಮಷೀನ್ ತಲೆಬಾಗುವ ಸ್ಥಿತಿ ಬಂದಿದೆ. ಲಂಕಾ ಪ್ರವಾಸದ ವೇಳೆ ಒಮ್ಮೆ ತಲೆಬಾಗಿದ್ದಾಯ್ತು. ಇದೀಗ ಮತ್ತೊಮ್ಮೆ ಕೊಹ್ಲಿ ಶರಣಾಗಿದ್ದಾರೆ.
ದುಲೀಪ್ ಟ್ರೋಫಿ ಆಡಲು ಸಜ್ಜಾದ ರನ್ ಮಷೀನ್
ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ಕೋಚ್ ಆಗಿದ್ದೇ ಬಂತು. ಕಠಿಣ ನಿರ್ಧಾರ ತೆಗೆದುಕೊಳ್ತಿದ್ದಾರೆ. ಚಾರ್ಜ್ ತೆಗೆದುಕೊಂಡ ಮೊದಲ ಸಿರೀಸ್ ವೇಳೆಯೇ ರೆಸ್ಟ್ ಇದ್ದಾಗ ಕಾಂಟ್ರಾಕ್ಟೆಡ್ ಪ್ಲೇಯರ್ಸ್ ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕು ಅಂತ ಕಡ್ಡಿ ಮುರಿದಂತೆ ಹೇಳಿದ್ರು. ಇದಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಸಾಥ್ ಕೊಟ್ಟಿದ್ರು. ಇದರ ಹಿಂದಿನ ಸೂತ್ರಧಾರಿ ಬಿಸಿಸಿಐ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಸದ್ಯ ಬಿಸಿಸಿಐಯನ್ನ ಯಾರೂ ಪ್ರಶ್ನೆ ಮಾಡುವಂತಿಲ್ಲ. ಟೀಮ್ ಇಂಡಿಯಾ ವಿಚಾರದಲ್ಲಿ ಬಿಗ್ಬಾಸ್ಗಳು ಹೇಳಿದ್ದೇ ವೇದವಾಕ್ಯ. ಯಾವ ಸೂಪರ್ ಸ್ಟಾರ್ಗಳ ಆಟವು ನಡೆಯಲ್ಲ. ಅದಕ್ಕೆ ಸ್ಟಾರ್ ಕ್ರಿಕೆಟರ್ಸ್ ದುಲೀಪ್ ಟ್ರೋಫಿಯತ್ತ ಮುಖ ಮಾಡಿರೋದೇ ಮತ್ತೊಂದು ನಿದರ್ಶನ.
ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!
ದುಲೀಪ್ ಟ್ರೋಫಿಯಲ್ಲಿ ಘರ್ಜಿಸಲು ಕೊಹ್ಲಿ ರೆಡಿ
ಒಂದು ತಿಂಗಳು ಮಟ್ಟಿಗೆ ಟೀಮ್ ಇಂಡಿಯಾಗೆ ಯಾವುದೇ ಸರಣಿಗಳಿಲ್ಲ. ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ಆರಂಭಗೊಳ್ಳಲಿದೆ. ಈ ಡೊಮೆಸ್ಟಿಕ್ ಪಂದ್ಯಾವಳಿಯಲ್ಲಿ ಎಲ್ಲರಿಗೂ ಆಡುವಂತೆ ಬಿಸಿಸಿಐ ಎಲ್ಲರಿಗೂ ಖಡಕ್ ಆಗಿ ಸೂಚಿಸಿದೆ. ಬಿಗ್ಬಾಸ್ಗಳು ಸೂಚನೆ ಕೊಟ್ಟ ಬೆನ್ನಲ್ಲೆ ಕಿಂಗ್ ಕೊಹ್ಲಿ ದುಲೀಪ್ ಟ್ರೋಫಿಯಲ್ಲಿ ಪ್ಯಾಡ್ ಕಟ್ಟಿ ಘರ್ಜಿಸಲು ಸಜ್ಜಾಗಿದ್ದಾರೆ.
12 ವರ್ಷಗಳ ಬಳಿಕ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕಣಕ್ಕೆ
ವಿಶ್ವ ಕ್ರಿಕೆಟ್ನ ತ್ರಿವಿಕ್ರಮನಾಗಿ ಮೆರೆದಾಡ್ತಿರೋ ಕಿಂಗ್ ಕೊಹ್ಲಿ ಡೊಮೆಸ್ಟಿಕ್ ಕ್ರಿಕೆಟ್ ಆಡದೇ ದಶಕಗಳೇ ಉರುಳಿತ್ತು. ಇದೀಗ ದುಲೀಪ್ ಟ್ರೋಫಿಯಲ್ಲಿ ಆಡಲು ರನ್ ಮಷೀನ್ ರೆಡಿ ಆಗಿದ್ದಾರೆ. ಆ ಮೂಲಕ ಬರೋಬ್ಬರಿ 12 ವರ್ಷಗಳ ಬಳಿಕ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ 2012 ರಲ್ಲಿ ಡೆಲ್ಲಿ ಪರ ಕೊನೆ ಡೊಮೆಸ್ಟಿಕ್ ಪಂದ್ಯವನ್ನಾಡಿದ್ದರು.
ದುಲೀಪ್ ಟ್ರೋಫಿ ಕೊಹ್ಲಿಗೆ ಇಂಪಾರ್ಟೆಂಟ್
ಬಾಂಗ್ಲಾದೇಶ ಟೆಸ್ಟ್ ಸರಣಿಗೂ ಮುನ್ನ ನಡೆಯುವ ದುಲೀಪ್ ಟ್ರೋಫಿ ಕಿಂಗ್ ಕೊಹ್ಲಿ ಮಹತ್ವದ್ದಾಗಿದೆ. ಟೀಮ್ ಇಂಡಿಯಾದಲ್ಲಿ ಪೈಪೊಟಿ ಹೆಚ್ಚಿದೆ. ಪ್ರತಿ ಸ್ಲಾಟ್ಗೆ ಇಬ್ಬರಿಂದ ಮೂವರು ಪ್ಲೇಯರ್ಸ್ ಸಿದ್ಧರಿದ್ದಾರೆ. ಹೀಗಾಗಿ ಕೊಹ್ಲಿ ಮೈ ಮರೆಯದೇ ದುಲೀಪ್ ಟ್ರೋಫಿಯಲ್ಲಿ ಪರ್ಫಾಮ್ ಮಾಡಲೇಬೇಕಿದೆ. ಆಗಲಷ್ಟೇ ಮುಂಬರೋ ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಅವಕಾಶದ ಬಾಗಿಲು ತೆರೆಯಲಿದೆ.
ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!
ಲಂಕಾ ODI ಸರಣಿ
ಶ್ರೀಲಂಕಾ ಏಕದಿನ ಸರಣಿಯಲ್ಲಿ ಕೊಹ್ಕಿ ಈ ಮಟ್ಟಿಗೆ ಕಳಪೆ ಪರ್ಫಾಮೆನ್ಸ್ ನೀಡ್ತಾರೆ ಅಂತ. ಸಿಂಹಳೀಯರ ಸ್ಪಿನ್ಗೆ ತಡಬಡಾಯಿಸಿದ ಕೊಹ್ಲಿ ಆಡಿದ 3 ಪಂದ್ಯಗಳಿಂದ ಬರೀ 58 ರನ್ ಗಳಿಸಿ ಟೀಕಾಕಾರರಿಗೆ ಬಾಯಿಗೆ ಆಹಾರವಾಗಿದ್ದಾರೆ.
ಬಾಂಗ್ಲಾ ಸರಣಿಯಲ್ಲಿ ನಡೆಸ್ತಾರಾ ರನ್ ಪ್ರಹಾರ..?
ಲಂಕಾ ಒನ್ಡೆ ಸರಣಿಯಲ್ಲಿ ಅಟ್ಟರ್ ಫ್ಲಾಪ್ ಶೋ ನೀಡಿದ ಕೊಹ್ಲಿಗೆ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳುವ ಬಾಂಗ್ಲಾ ಟೆಸ್ಟ್ ಸರಣಿ ಮಹತ್ವ ಪಡೆದುಕೊಂಡಿದೆ. 9 ತಿಂಗಳ ಬಳಿಕ ರೆಡ್ ಬಾಲ್ ಕ್ರಿಕೆಟ್ ಆಡಲಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ್ರು. ಅದೇ ರಿದಮ್ ಬಾಂಗ್ಲಾ ವಿರುದ್ಧ ಕಂಟಿನ್ಯೂ ಮಾಡಬೇಕಾದ ಅಗತ್ಯವಿದೆ. ಒಂದು ವೇಳೆ ಸೆಂಚುರಿ ಮಾಸ್ಟರ್ ಇಲ್ಲಿಯೂ ರನ್ ಬರ ಎದುರಿಸಿದ್ರೆ ಸಂಕಷ್ಟ ತಪ್ಪಿದ್ದಲ್ಲ. ಯಾಕಂದ್ರೆ ಯಂಗ್ಸ್ಟರ್ಸ್ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಯಾವ ಕ್ಷಣದಲ್ಲಿ ಬೇಕಾದ್ರೂ, ಸ್ಥಾನವನ್ನ ಕಬ್ಜಾ ಮಾಡಿಕೊಳ್ಳಬಹುದು. ಹೀಗಾಗಿ ವಿರಾಟ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ರನ್ ಪ್ರಹಾರ ನಡೆಸಬೇಕಿದೆ. ಇಲ್ಲವಾದ್ರೆ ಕುತ್ತು ತಪ್ಪಿದ್ದಲ್ಲ.
ಇದನ್ನೂ ಓದಿ: ಮಹಿಳೆಯ ನಗ್ನ ಫೋಟೋ ಬರುತ್ತೆ.. ಆಮೇಲೆ ನಿಮ್ಮ ಬ್ರೈನ್ ಕೂಡ ಹೈಜಾಕ್ ಆಗುತ್ತೆ.. ಹುಷಾರಾಗಿರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್