ಕೌಂಟಿ ಕ್ರಿಕೆಟ್ನಲ್ಲಿ ಅಬ್ಬರ.. ಕಮ್ಬ್ಯಾಕ್ ಕನಸು
ಫೀಲ್ಡ್ನಲ್ಲಿದ್ದ ಪೃಥ್ವಿ ಷಾಗೆ ಕಟಕಟೆಗೆ ಬರುವಂತೆ ಸಮನ್ಸ್
ಏನಿದು ಪ್ರಕರಣ? ಪೃಥ್ವಿಗೆ ಮತ್ತೆ ಸಂಕಷ್ಟ ಎದುರಾಯ್ತಾ?
ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇವತ್ತು ಈತ ಟೀಮ್ ಇಂಡಿಯಾದ ಓಪನರ್ ಆಗಿ ವಿಶ್ವ ಕ್ರಿಕೆಟ್ ಅನ್ನೇ ಆಳುತ್ತಿದ್ದ. ಸ್ವಯಂಕೃತ ಅಪರಾಧವೋ, ಬ್ಯಾಡ್ ಲಕ್ಕೋ ಗೊತ್ತಿಲ್ಲ. ಅಂದ್ಕೊಂಡಿದ್ದು ಯಾವುದೂ ಮುಂಬೈಕರ್ ಪೃಥ್ವಿ ಷಾ ಜೀವನದಲ್ಲಿ ಆಗಲಿಲ್ಲ. ಇದೀಗ ಕೌಂಟಿ ಕ್ರಿಕೆಟ್ನಲ್ಲಿ ಘರ್ಜಿಸಿ ಟೀಮ್ ಇಂಡಿಯಾಗೆ ವಾಪಾಸ್ಸಾಗೋ ಲೆಕ್ಕಾಚಾರದಲ್ಲಿದ್ದಾರೆ. ಈ ಖುಷಿಯ ಬೆನ್ನಿಗೆ ಮತ್ತೊಂದು ಸಂಕಷ್ಟ ಸುತ್ತಿಕೊಂಡಿದೆ. ಇದ್ರಿಂದಾಗಿ ಕ್ರಿಕೆಟ್ ಫೀಲ್ಡ್ನಿಂದ ಕೋರ್ಟ್ ಕಟಕಟೆಗೆ ಬಂದು ನಿಲ್ಲುವಂತಾಗಿದೆ.
ಪೃಥ್ವಿ ಶಾ..! ಟೀಮ್ ಇಂಡಿಯಾ ಪರ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ಭಾರತದ ಭವಿಷ್ಯ ಎನಿಸಿಕೊಂಡ ಈತನನ್ನ ದಿಗ್ಗಜ ಸಚಿನ್ಗೆ ಹೋಲಿಸಲಾಗಿತ್ತು. ಎಂಟ್ರಿ ಕೊಟ್ಟಾಗ ಅಷ್ಟೊಂದು ನಿರೀಕ್ಷೆ ಹುಟ್ಟಿಸಿದ ಪೃಥ್ವಿ ಷಾಗೆ ಈಗ ಟೀಮ್ ಇಂಡಿಯಾದಲ್ಲಿ ಜಾಗವೇ ಇಲ್ಲದಂತಾಗಿದೆ. ಐಪಿಎಲ್ನಲ್ಲೂ ಪೃಥ್ವಿಗೆ ಬೇಡಿಕೆ ಕುಗ್ಗಿದೆ. ಸ್ಥಾನಕ್ಕಾಗಿ ಮುಂಬೈಕರ್ ಸದ್ಯ ಸರ್ಕಸ್ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ:ಪತ್ನಿ, ಇಬ್ಬರು ಮಕ್ಕಳು, ಹೆತ್ತ ಅಮ್ಮನನ್ನೂ ಕತ್ತು ಸೀಳಿ ಸಾಯಿಸಿದ.. ಪೊಲೀಸ್ ಕ್ವಾರ್ಟರ್ಸ್ನಲ್ಲಿ ಐವರ ಬಲಿ
ಕೌಂಟಿ ಕ್ರಿಕೆಟ್ನಲ್ಲಿ ಅಬ್ಬರ..
ಸ್ಥಾನ ಸಿಗದೆ ಪರದಾಡ್ತಿರೋ ಪೃಥ್ವಿ ಷಾ, ಸದ್ಯ ಭಾರತ ತೊರೆದು ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡ್ತಿದ್ದಾರೆ. ಕೌಂಟಿ ಕ್ರಿಕೆಟ್ನಲ್ಲಿ ಆರ್ಭಟಿಸಿ, ಕಮ್ಬ್ಯಾಕ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ. ಒಂಡೇ ಕಪ್ನಲ್ಲಿ ನಾರ್ಥಂಪ್ಟನ್ ಶೈರ್ ಪರ ಸಾಲಿಡ್ ಆಟವಾಡ್ತಿದ್ದಾರೆ. 120+ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿರೋ ಪೃಥ್ವಿ ಷಾ, ಸತತ 3 ಹಾಫ್ ಸೆಂಚುರಿ ಸಿಡಿಸಿ ಘರ್ಜಿಸಿದ್ದಾರೆ. 7 ಪಂದ್ಯದಿಂದ 326 ರನ್ಗಳಿಸಿ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಕನಸು ಕಾಣ್ತಿದ್ದಾರೆ.
ಕಮ್ಬ್ಯಾಕ್ ಕನವರಿಕೆಯಲ್ಲಿದ್ದ ಪೃಥ್ವಿಗೆ ಶಾಕ್..!
ಕೌಂಟಿ ಕ್ರಿಕೆಟ್ನಲ್ಲಿ ಆಡಿ, ಭಾರತಕ್ಕೆ ಬಂದ ಬಳಿಕ ಡೊಮೆಸ್ಟಿಕ್ ಕ್ರಿಕೆಟ್ನಲ್ಲೂ, ಇಂಪ್ರೆಸ್ಸಿವ್ ಪರ್ಫಾಮೆನ್ಸ್ ನೀಡೋ ನಿಟ್ಟಿನಲ್ಲಿ ಪೃಥ್ವಿ ಷಾ ಸಿದ್ಧತೆ ನಡೆಸ್ತಿದ್ದಾರೆ. ಇದ್ರ ಹಿಂದಿರೋದು ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಬೇಕು ಅನ್ನೋ ಕನಸು.! ಈ ಕನವರಿಕೆಯಲ್ಲಿದ್ದಾಗಲೇ ಪೃಥ್ವಿಗೆ ಶಾಕ್ ಎದುರಾಗಿದೆ. ಕ್ರಿಕೆಟ್ ಫೀಲ್ಡ್ನಿಂದ ಕೋರ್ಟ್ನ ಕಟಕಟೆಗೆ ಬಂದು ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ:ಕೊನೆಗೂ ತಲೆ ಬಾಗಿದ ಕಿಂಗ್, ನಡೆಯಲಿಲ್ಲ ಕೊಹ್ಲಿ ಆಟ.. ಕಾಲಚಕ್ರ ತಿರುಗುವುದು ಅಂದ್ರೆ ಇದೇ..!
ಸಪ್ನಾ ಗಿಲ್ ಕೇಸಲ್ಲಿ ಪೃಥ್ವಿಗೆ 2ನೇ ಸಮನ್ಸ್
2023ರಲ್ಲಿ ಸೋಷಿಯಲ್ ಮೀಡಿಯಾ Influencer ಸಪ್ನಾ ಗಿಲ್ ಕೇಸ್ಗೆ ಸಂಬಂಧಿಸಿದಂತೆ ಪೃಥ್ವಿ ಷಾಗೆ ಸದ್ಯ ಸಂಕಷ್ಟ ಎದುರಾಗಿದೆ. ಈ ಕೇಸ್ಗೆ ಸಂಬಂಧಿಸಿದಂತೆ ಈ ಹಿಂದೆ ಪೃಥ್ವಿಗೆ ಕೋರ್ಟ್ ಮೊದಲ ಸಮನ್ಸ್ ನೀಡಿತ್ತು. ಕೋರ್ಟ್ ಸಮನ್ಸ್ಗೆ ಪೃಥ್ವಿ ಆಗಲಿ ಅಥವಾ ಅವ್ರ ಲಾಯರ್ ಆಗಲಿ ಉತ್ತರಿಸಿಲ್ಲ. ಕೋರ್ಟ್ಗೂ ಹಾಜಾರಾಗಿಲ್ಲ. ಇದೀಗ ಮುಂಬೈ ಸೆಷನ್ ಕೋರ್ಟ್ ಮತ್ತೊಂದು ಸಮನ್ಸ್ ನೀಡಿದ್ದು, ಅಕ್ಟೋಬರ್ 1ರ ಬಳಗೆ ಖುದ್ದು ಪೃಥ್ವಿ ಷಾ ಬಂದು ಕೋರ್ಟ್ ಹಾಜಾರಾಗುವಂತೆ ತಿಳಿಸಿದೆ.
ಏನಿದು ಸಪ್ನಾ ಗಿಲ್ ಕೇಸ್?
2023ರ ಫೆಬ್ರವರಿಯಲ್ಲಿ ಸೋಷಿಯಲ್ ಮೀಡಿಯಾ INFLUENCER ಸಪ್ನಾ ಗಿಲ್ ಹಾಗೂ ಪೃಥ್ವಿ ಷಾ ನಡುವೆ ಸೆಲ್ಫಿಗಾಗಿ ಬೀದಿಯಲ್ಲಿ ಗಲಾಟೆ ನಡೆದಿತ್ತು. ಪೃಥ್ವಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಸ್ವಪ್ನಾ ಗಿಲ್ ಗೆಳೆಯರು ತೆರಳಿದ್ರು. ಅವರ ಜೊತೆ ಫೋಟೋಗೆ ಷಾ ಪೋಸ್ ಕೊಟ್ಟಿದ್ರು. ಕೆಲ ನಿಮಿಷಗಳ ಬಳಿಕ ಮತ್ತೆ ಸೆಲ್ಫಿ ಕೇಳಿದಾಗ ಪೃಥ್ವಿ ನೋ ಎಂದಿದ್ದಾರೆ. ಈ ವಿಚಾರ ದೊಡ್ಡ ಸ್ವರೂಪ ಪಡೆದು ಹಲ್ಲೆಯವರೆಗೂ ಹೋಗಿತ್ತು. ಬಳಿಕ ಪರಸ್ಪರ ಆರೋಪಿಸಿಕೊಂಡು ಪೊಲೀಸ್ ದೂರು ದಾಖಲಿಸಿದ್ರು. ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಡ್ರಿಂಕ್ ಮಾಡಿದ್ರು. ಬೇಸ್ಬಾಲ್ ಬ್ಯಾಟ್ನಿಂದ ಹಲ್ಲೆಗೆ ಮುಂದಾದ್ರು ಎಂದು ಸ್ವಪ್ನಾ ಗಿಲ್ ಕೇಸು ದಾಖಲಿಸಿದ್ರು.
ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!
ಸಪ್ನಾ ಗಿಲ್ ಇದ್ದ 8 ಜನರ ಗುಂಪೇ ನನ್ನ ಮೇಲೆ ದಾಳಿ ನಡೆಸಿ ಬೆದರಿಕೆ ಹಾಕಿತ್ತು ಎಂದು ಪೃಥ್ವಿ ಮರು ದೂರಿ ನೀಡಿದ್ರು. ಕಾರಿನ ಗಾಜುಗಳನ್ನ ಒಡೆದು ಹಾಕಿದ್ರು. ಬೇಸ್ಬಾಲ್ ಬ್ಯಾಟ್ನಿಂದ ಹಲ್ಲೆಗೆ ಮುಂದಾಗಿದ್ರು ಅಂತ ಪೃಥ್ವಿ ದೂರಿನಲ್ಲಿ ಹೇಳಿದ್ರು. ವಿಚಾರಣೆ ನಡೆಸಿದ ಪೋಲಿಸರು ಅಂತಿಮವಾಗಿ ಸಪ್ನಾ ಗಿಲ್ ಹಾಗೂ ಗೆಳೆಯರನ್ನ ಬಂಧಿಸಿದ್ರು. ಸದ್ಯ ಬೇಲ್ ಮೇಲೆ ಸಪ್ನಾ ಗಿಲ್ ಬಿಡುಗಡೆಯಾಗಿದ್ದಾರೆ.
ಒಂದೆಡೆ ಕಮ್ಬ್ಯಾಕ್ನ ಸರ್ಕಸ್ ಆದ್ರೆ ಇನ್ನೊಂದೆಡೆ ಆಫ್ ದ ಫೀಲ್ಡ್ ಕಾಂಟ್ರವರ್ಸಿ.! ಸಪ್ನಾ ಗಿಲ್ ಕೇಸ್ ಒಂದೇ ಅಲ್ಲ. ಇನ್ನೂ ಹಲವು ಕಾಂಟ್ರವರ್ಸಿಗಳಲ್ಲಿ ಪೃಥ್ವಿ ಹೆಸರು ತಳುಕು ಹಾಕಿಕೊಂಡಿದ್ದಿದೆ. ಈ ಎಲ್ಲಾ ಸಂಕಷ್ಟಗಳನ್ನ ಗೆದ್ದು, ಟೀಮ್ ಇಂಡಿಯಾದಲ್ಲಿರೋ ಪೈಪೋಟಿಯನ್ನ ಮೀರಿ ತಂಡಕ್ಕೆ ವಾಪಾಸ್ಸಾಗೋ ಹಾದಿ ನಿಜಕ್ಕೂ ಕಷ್ಟಕರವಾಗಿದೆ.
ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೌಂಟಿ ಕ್ರಿಕೆಟ್ನಲ್ಲಿ ಅಬ್ಬರ.. ಕಮ್ಬ್ಯಾಕ್ ಕನಸು
ಫೀಲ್ಡ್ನಲ್ಲಿದ್ದ ಪೃಥ್ವಿ ಷಾಗೆ ಕಟಕಟೆಗೆ ಬರುವಂತೆ ಸಮನ್ಸ್
ಏನಿದು ಪ್ರಕರಣ? ಪೃಥ್ವಿಗೆ ಮತ್ತೆ ಸಂಕಷ್ಟ ಎದುರಾಯ್ತಾ?
ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇವತ್ತು ಈತ ಟೀಮ್ ಇಂಡಿಯಾದ ಓಪನರ್ ಆಗಿ ವಿಶ್ವ ಕ್ರಿಕೆಟ್ ಅನ್ನೇ ಆಳುತ್ತಿದ್ದ. ಸ್ವಯಂಕೃತ ಅಪರಾಧವೋ, ಬ್ಯಾಡ್ ಲಕ್ಕೋ ಗೊತ್ತಿಲ್ಲ. ಅಂದ್ಕೊಂಡಿದ್ದು ಯಾವುದೂ ಮುಂಬೈಕರ್ ಪೃಥ್ವಿ ಷಾ ಜೀವನದಲ್ಲಿ ಆಗಲಿಲ್ಲ. ಇದೀಗ ಕೌಂಟಿ ಕ್ರಿಕೆಟ್ನಲ್ಲಿ ಘರ್ಜಿಸಿ ಟೀಮ್ ಇಂಡಿಯಾಗೆ ವಾಪಾಸ್ಸಾಗೋ ಲೆಕ್ಕಾಚಾರದಲ್ಲಿದ್ದಾರೆ. ಈ ಖುಷಿಯ ಬೆನ್ನಿಗೆ ಮತ್ತೊಂದು ಸಂಕಷ್ಟ ಸುತ್ತಿಕೊಂಡಿದೆ. ಇದ್ರಿಂದಾಗಿ ಕ್ರಿಕೆಟ್ ಫೀಲ್ಡ್ನಿಂದ ಕೋರ್ಟ್ ಕಟಕಟೆಗೆ ಬಂದು ನಿಲ್ಲುವಂತಾಗಿದೆ.
ಪೃಥ್ವಿ ಶಾ..! ಟೀಮ್ ಇಂಡಿಯಾ ಪರ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ಭಾರತದ ಭವಿಷ್ಯ ಎನಿಸಿಕೊಂಡ ಈತನನ್ನ ದಿಗ್ಗಜ ಸಚಿನ್ಗೆ ಹೋಲಿಸಲಾಗಿತ್ತು. ಎಂಟ್ರಿ ಕೊಟ್ಟಾಗ ಅಷ್ಟೊಂದು ನಿರೀಕ್ಷೆ ಹುಟ್ಟಿಸಿದ ಪೃಥ್ವಿ ಷಾಗೆ ಈಗ ಟೀಮ್ ಇಂಡಿಯಾದಲ್ಲಿ ಜಾಗವೇ ಇಲ್ಲದಂತಾಗಿದೆ. ಐಪಿಎಲ್ನಲ್ಲೂ ಪೃಥ್ವಿಗೆ ಬೇಡಿಕೆ ಕುಗ್ಗಿದೆ. ಸ್ಥಾನಕ್ಕಾಗಿ ಮುಂಬೈಕರ್ ಸದ್ಯ ಸರ್ಕಸ್ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ:ಪತ್ನಿ, ಇಬ್ಬರು ಮಕ್ಕಳು, ಹೆತ್ತ ಅಮ್ಮನನ್ನೂ ಕತ್ತು ಸೀಳಿ ಸಾಯಿಸಿದ.. ಪೊಲೀಸ್ ಕ್ವಾರ್ಟರ್ಸ್ನಲ್ಲಿ ಐವರ ಬಲಿ
ಕೌಂಟಿ ಕ್ರಿಕೆಟ್ನಲ್ಲಿ ಅಬ್ಬರ..
ಸ್ಥಾನ ಸಿಗದೆ ಪರದಾಡ್ತಿರೋ ಪೃಥ್ವಿ ಷಾ, ಸದ್ಯ ಭಾರತ ತೊರೆದು ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡ್ತಿದ್ದಾರೆ. ಕೌಂಟಿ ಕ್ರಿಕೆಟ್ನಲ್ಲಿ ಆರ್ಭಟಿಸಿ, ಕಮ್ಬ್ಯಾಕ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ. ಒಂಡೇ ಕಪ್ನಲ್ಲಿ ನಾರ್ಥಂಪ್ಟನ್ ಶೈರ್ ಪರ ಸಾಲಿಡ್ ಆಟವಾಡ್ತಿದ್ದಾರೆ. 120+ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿರೋ ಪೃಥ್ವಿ ಷಾ, ಸತತ 3 ಹಾಫ್ ಸೆಂಚುರಿ ಸಿಡಿಸಿ ಘರ್ಜಿಸಿದ್ದಾರೆ. 7 ಪಂದ್ಯದಿಂದ 326 ರನ್ಗಳಿಸಿ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಕನಸು ಕಾಣ್ತಿದ್ದಾರೆ.
ಕಮ್ಬ್ಯಾಕ್ ಕನವರಿಕೆಯಲ್ಲಿದ್ದ ಪೃಥ್ವಿಗೆ ಶಾಕ್..!
ಕೌಂಟಿ ಕ್ರಿಕೆಟ್ನಲ್ಲಿ ಆಡಿ, ಭಾರತಕ್ಕೆ ಬಂದ ಬಳಿಕ ಡೊಮೆಸ್ಟಿಕ್ ಕ್ರಿಕೆಟ್ನಲ್ಲೂ, ಇಂಪ್ರೆಸ್ಸಿವ್ ಪರ್ಫಾಮೆನ್ಸ್ ನೀಡೋ ನಿಟ್ಟಿನಲ್ಲಿ ಪೃಥ್ವಿ ಷಾ ಸಿದ್ಧತೆ ನಡೆಸ್ತಿದ್ದಾರೆ. ಇದ್ರ ಹಿಂದಿರೋದು ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಬೇಕು ಅನ್ನೋ ಕನಸು.! ಈ ಕನವರಿಕೆಯಲ್ಲಿದ್ದಾಗಲೇ ಪೃಥ್ವಿಗೆ ಶಾಕ್ ಎದುರಾಗಿದೆ. ಕ್ರಿಕೆಟ್ ಫೀಲ್ಡ್ನಿಂದ ಕೋರ್ಟ್ನ ಕಟಕಟೆಗೆ ಬಂದು ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ:ಕೊನೆಗೂ ತಲೆ ಬಾಗಿದ ಕಿಂಗ್, ನಡೆಯಲಿಲ್ಲ ಕೊಹ್ಲಿ ಆಟ.. ಕಾಲಚಕ್ರ ತಿರುಗುವುದು ಅಂದ್ರೆ ಇದೇ..!
ಸಪ್ನಾ ಗಿಲ್ ಕೇಸಲ್ಲಿ ಪೃಥ್ವಿಗೆ 2ನೇ ಸಮನ್ಸ್
2023ರಲ್ಲಿ ಸೋಷಿಯಲ್ ಮೀಡಿಯಾ Influencer ಸಪ್ನಾ ಗಿಲ್ ಕೇಸ್ಗೆ ಸಂಬಂಧಿಸಿದಂತೆ ಪೃಥ್ವಿ ಷಾಗೆ ಸದ್ಯ ಸಂಕಷ್ಟ ಎದುರಾಗಿದೆ. ಈ ಕೇಸ್ಗೆ ಸಂಬಂಧಿಸಿದಂತೆ ಈ ಹಿಂದೆ ಪೃಥ್ವಿಗೆ ಕೋರ್ಟ್ ಮೊದಲ ಸಮನ್ಸ್ ನೀಡಿತ್ತು. ಕೋರ್ಟ್ ಸಮನ್ಸ್ಗೆ ಪೃಥ್ವಿ ಆಗಲಿ ಅಥವಾ ಅವ್ರ ಲಾಯರ್ ಆಗಲಿ ಉತ್ತರಿಸಿಲ್ಲ. ಕೋರ್ಟ್ಗೂ ಹಾಜಾರಾಗಿಲ್ಲ. ಇದೀಗ ಮುಂಬೈ ಸೆಷನ್ ಕೋರ್ಟ್ ಮತ್ತೊಂದು ಸಮನ್ಸ್ ನೀಡಿದ್ದು, ಅಕ್ಟೋಬರ್ 1ರ ಬಳಗೆ ಖುದ್ದು ಪೃಥ್ವಿ ಷಾ ಬಂದು ಕೋರ್ಟ್ ಹಾಜಾರಾಗುವಂತೆ ತಿಳಿಸಿದೆ.
ಏನಿದು ಸಪ್ನಾ ಗಿಲ್ ಕೇಸ್?
2023ರ ಫೆಬ್ರವರಿಯಲ್ಲಿ ಸೋಷಿಯಲ್ ಮೀಡಿಯಾ INFLUENCER ಸಪ್ನಾ ಗಿಲ್ ಹಾಗೂ ಪೃಥ್ವಿ ಷಾ ನಡುವೆ ಸೆಲ್ಫಿಗಾಗಿ ಬೀದಿಯಲ್ಲಿ ಗಲಾಟೆ ನಡೆದಿತ್ತು. ಪೃಥ್ವಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಸ್ವಪ್ನಾ ಗಿಲ್ ಗೆಳೆಯರು ತೆರಳಿದ್ರು. ಅವರ ಜೊತೆ ಫೋಟೋಗೆ ಷಾ ಪೋಸ್ ಕೊಟ್ಟಿದ್ರು. ಕೆಲ ನಿಮಿಷಗಳ ಬಳಿಕ ಮತ್ತೆ ಸೆಲ್ಫಿ ಕೇಳಿದಾಗ ಪೃಥ್ವಿ ನೋ ಎಂದಿದ್ದಾರೆ. ಈ ವಿಚಾರ ದೊಡ್ಡ ಸ್ವರೂಪ ಪಡೆದು ಹಲ್ಲೆಯವರೆಗೂ ಹೋಗಿತ್ತು. ಬಳಿಕ ಪರಸ್ಪರ ಆರೋಪಿಸಿಕೊಂಡು ಪೊಲೀಸ್ ದೂರು ದಾಖಲಿಸಿದ್ರು. ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಡ್ರಿಂಕ್ ಮಾಡಿದ್ರು. ಬೇಸ್ಬಾಲ್ ಬ್ಯಾಟ್ನಿಂದ ಹಲ್ಲೆಗೆ ಮುಂದಾದ್ರು ಎಂದು ಸ್ವಪ್ನಾ ಗಿಲ್ ಕೇಸು ದಾಖಲಿಸಿದ್ರು.
ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!
ಸಪ್ನಾ ಗಿಲ್ ಇದ್ದ 8 ಜನರ ಗುಂಪೇ ನನ್ನ ಮೇಲೆ ದಾಳಿ ನಡೆಸಿ ಬೆದರಿಕೆ ಹಾಕಿತ್ತು ಎಂದು ಪೃಥ್ವಿ ಮರು ದೂರಿ ನೀಡಿದ್ರು. ಕಾರಿನ ಗಾಜುಗಳನ್ನ ಒಡೆದು ಹಾಕಿದ್ರು. ಬೇಸ್ಬಾಲ್ ಬ್ಯಾಟ್ನಿಂದ ಹಲ್ಲೆಗೆ ಮುಂದಾಗಿದ್ರು ಅಂತ ಪೃಥ್ವಿ ದೂರಿನಲ್ಲಿ ಹೇಳಿದ್ರು. ವಿಚಾರಣೆ ನಡೆಸಿದ ಪೋಲಿಸರು ಅಂತಿಮವಾಗಿ ಸಪ್ನಾ ಗಿಲ್ ಹಾಗೂ ಗೆಳೆಯರನ್ನ ಬಂಧಿಸಿದ್ರು. ಸದ್ಯ ಬೇಲ್ ಮೇಲೆ ಸಪ್ನಾ ಗಿಲ್ ಬಿಡುಗಡೆಯಾಗಿದ್ದಾರೆ.
ಒಂದೆಡೆ ಕಮ್ಬ್ಯಾಕ್ನ ಸರ್ಕಸ್ ಆದ್ರೆ ಇನ್ನೊಂದೆಡೆ ಆಫ್ ದ ಫೀಲ್ಡ್ ಕಾಂಟ್ರವರ್ಸಿ.! ಸಪ್ನಾ ಗಿಲ್ ಕೇಸ್ ಒಂದೇ ಅಲ್ಲ. ಇನ್ನೂ ಹಲವು ಕಾಂಟ್ರವರ್ಸಿಗಳಲ್ಲಿ ಪೃಥ್ವಿ ಹೆಸರು ತಳುಕು ಹಾಕಿಕೊಂಡಿದ್ದಿದೆ. ಈ ಎಲ್ಲಾ ಸಂಕಷ್ಟಗಳನ್ನ ಗೆದ್ದು, ಟೀಮ್ ಇಂಡಿಯಾದಲ್ಲಿರೋ ಪೈಪೋಟಿಯನ್ನ ಮೀರಿ ತಂಡಕ್ಕೆ ವಾಪಾಸ್ಸಾಗೋ ಹಾದಿ ನಿಜಕ್ಕೂ ಕಷ್ಟಕರವಾಗಿದೆ.
ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ