newsfirstkannada.com

ಬೆಟ್ಟದ ಮೇಲೆ ಹೆಂಡತಿಯ ಬರ್ಬರ ಹತ್ಯೆ.. ಡ್ರಾಮಾ ಮಾಡಿ ಕೊಲೆ ಮಾಡಿದ ಗಂಡ ಎಸ್ಕೇಪ್‌; ಕಾರಣವೇನು?

Share :

Published August 14, 2024 at 1:07pm

Update August 14, 2024 at 1:08pm

    ಹೂಜುಗಲ್ಲು ಬೆಟ್ಟಕ್ಕೆ ಕರೆದೊಯ್ದು ದಿವ್ಯಾಳನ್ನು ಹತ್ಯೆ ಮಾಡಿದ ಪಾಪಿ ಪತಿ

    ಡ್ರಾಮಾ ಮಾಡಿ ಪತ್ನಿಯನ್ನ ದೇವಸ್ಥಾನಕ್ಕೆ ಕರೆದೊಯ್ದಿದ್ದ ಪತಿ ಉಮೇಶ್

    ಕೊಲೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದಲೇ ಪತ್ನಿ ಬರ್ಬರವಾಗಿ ಕೊಲೆಯಾಗಿರೋ ಘಟನೆ ತಾಲೂಕಿನ ಹೂಜಗಲ್ಲು ಬೆಟ್ಟದಲ್ಲಿ ನಡೆದಿದೆ. ದಿವ್ಯಾ (32) ಗಂಡನಿಂದಲೇ ಕೊಲೆಯಾದ ಮಹಿಳೆ. ಉಮೇಶ್ ಪತ್ನಿಯನ್ನೇ ಹತ್ಯೆಗೈದಿರೋ ಆರೋಪಿ ಪತಿ.

ಇದನ್ನೂ ಓದಿ: ಕಾಮಿ ಅಲ್ಲ ವಿಕೃತ ಕ್ರಿಮಿ.. ಕೊಲ್ಕತ್ತಾ ವೈದ್ಯೆ ಕೊಂದ ಹೆಣ್ಣು ಬಾಕನ ಇತಿಹಾಸ ಏನು ಗೊತ್ತಾ?

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ವಿಚ್ಛೇದನ ಪಡೆಯಲು ಮುಂದಾಗಿದ್ದರು. ನಿನ್ನೆ ದಂಪತಿ ಮಾಗಡಿ ಕೋರ್ಟ್​ಗೆ ಹಾಜರಾಗಿದ್ದರು. ಬಳಿಕ ಡ್ರಾಮಾ ಮಾಡಿ ಪತ್ನಿಯನ್ನ ಉಮೇಶ್ ಹೂಜುಗಲ್ಲು ಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ದೇವರಿಗೆ ಪೂಜೆ ಮಾಡುತ್ತಿದ್ದಾಗ ದಿವ್ಯಾಳನ್ನು ಹತ್ಯೆ ಮಾಡಿದ್ದಾನೆ.

ಇದಾದ ಬಳಿಕ ಚೀಲೂರು ಅರಣ್ಯ ಪ್ರದೇಶದಲ್ಲಿ ಶವ ಎಸೆದು ಎಸ್ಕೇಪ್ ಆಗಿದ್ದಾನೆ. ಸದ್ಯ ಈ ಸಂಬಂಧ ಐವರ ಮೇಲೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೂವರು ಆರೋಪಿಗಳು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪತಿ ಉಮೇಶ್ ಸೇರಿ ಮತ್ತೊರ್ವ ಆರೋಪಿಗಾಗಿ ತಲಾಶ್ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಟ್ಟದ ಮೇಲೆ ಹೆಂಡತಿಯ ಬರ್ಬರ ಹತ್ಯೆ.. ಡ್ರಾಮಾ ಮಾಡಿ ಕೊಲೆ ಮಾಡಿದ ಗಂಡ ಎಸ್ಕೇಪ್‌; ಕಾರಣವೇನು?

https://newsfirstlive.com/wp-content/uploads/2024/08/death3.jpg

    ಹೂಜುಗಲ್ಲು ಬೆಟ್ಟಕ್ಕೆ ಕರೆದೊಯ್ದು ದಿವ್ಯಾಳನ್ನು ಹತ್ಯೆ ಮಾಡಿದ ಪಾಪಿ ಪತಿ

    ಡ್ರಾಮಾ ಮಾಡಿ ಪತ್ನಿಯನ್ನ ದೇವಸ್ಥಾನಕ್ಕೆ ಕರೆದೊಯ್ದಿದ್ದ ಪತಿ ಉಮೇಶ್

    ಕೊಲೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದಲೇ ಪತ್ನಿ ಬರ್ಬರವಾಗಿ ಕೊಲೆಯಾಗಿರೋ ಘಟನೆ ತಾಲೂಕಿನ ಹೂಜಗಲ್ಲು ಬೆಟ್ಟದಲ್ಲಿ ನಡೆದಿದೆ. ದಿವ್ಯಾ (32) ಗಂಡನಿಂದಲೇ ಕೊಲೆಯಾದ ಮಹಿಳೆ. ಉಮೇಶ್ ಪತ್ನಿಯನ್ನೇ ಹತ್ಯೆಗೈದಿರೋ ಆರೋಪಿ ಪತಿ.

ಇದನ್ನೂ ಓದಿ: ಕಾಮಿ ಅಲ್ಲ ವಿಕೃತ ಕ್ರಿಮಿ.. ಕೊಲ್ಕತ್ತಾ ವೈದ್ಯೆ ಕೊಂದ ಹೆಣ್ಣು ಬಾಕನ ಇತಿಹಾಸ ಏನು ಗೊತ್ತಾ?

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ವಿಚ್ಛೇದನ ಪಡೆಯಲು ಮುಂದಾಗಿದ್ದರು. ನಿನ್ನೆ ದಂಪತಿ ಮಾಗಡಿ ಕೋರ್ಟ್​ಗೆ ಹಾಜರಾಗಿದ್ದರು. ಬಳಿಕ ಡ್ರಾಮಾ ಮಾಡಿ ಪತ್ನಿಯನ್ನ ಉಮೇಶ್ ಹೂಜುಗಲ್ಲು ಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ದೇವರಿಗೆ ಪೂಜೆ ಮಾಡುತ್ತಿದ್ದಾಗ ದಿವ್ಯಾಳನ್ನು ಹತ್ಯೆ ಮಾಡಿದ್ದಾನೆ.

ಇದಾದ ಬಳಿಕ ಚೀಲೂರು ಅರಣ್ಯ ಪ್ರದೇಶದಲ್ಲಿ ಶವ ಎಸೆದು ಎಸ್ಕೇಪ್ ಆಗಿದ್ದಾನೆ. ಸದ್ಯ ಈ ಸಂಬಂಧ ಐವರ ಮೇಲೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೂವರು ಆರೋಪಿಗಳು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪತಿ ಉಮೇಶ್ ಸೇರಿ ಮತ್ತೊರ್ವ ಆರೋಪಿಗಾಗಿ ತಲಾಶ್ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More