ಸಾಮಾಜಿಕ ಜಾಲಾತಾಣದಲ್ಲಿ ಕೀರ್ತಿ ಬೇಗ ಬಾ ಅಂತ ಕಾಮೆಂಟ್ಸ್ ಹಾಕಿದ ಫ್ಯಾನ್ಸ್
ಹೊಸ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ ಈ ಸೀರಿಯಲ್
ತಪ್ಪು ಮಾಡಿದ ಕಾವೇರಿಗೆ ಶಿಕ್ಷೆ ಕೊಡಿಸಬೇಕು ಎಂದು ವೀಕ್ಷಕರಿಂದ ಭಾರೀ ಆಕ್ರೋಶ
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ತನ್ನದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ.
ಈಗಂತೂ ಲಕ್ಷ್ಮೀ ಬಾರಮ್ಮ ಸೀರಿಯಲ್ ಕಥೆಯನ್ನು ಬಹಳ ರೋಚಕವಾಗಿ ತೆರೆಗೆ ತರುತ್ತಿದ್ದಾರೆ. ಅದರಂತೆ ಒಂದು ವಾರದಿಂದ ನಡೆಯುತ್ತಿರೋ ಎಪಿಸೋಡ್ಗೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಥೆಗೆ ಬರುವುದಾದರೆ, ಕಾವೇರಿಯ ಅಸಲಿ ಮುಖವಾಡ ಕಳಚಲೆಂದು ಬೆಟ್ಟದ ತುದಿಯಲ್ಲಿ ಮಂಟಪ ಹಾಕಿಸಿದ್ದಳು ಕೀರ್ತಿ. ಅದಕ್ಕಾಗಿ ಕಾವೇರಿಯನ್ನು ಡೋಲು ಬಡಿಸುತ್ತಲೇ ಅಲ್ಲಿಗೆ ಕರೆಸಿಕೊಂಡಿದ್ದಳು. ಅದೇ ಸಮಯದಲ್ಲಿ ಕಾವೇರಿ ಹಾಗೂ ಕೀರ್ತಿ ನಡುವೆ ಮಾತಿನ ಚಕಮಕಿ ನಡೆದಿದೆ. ಆ ವೇಳೆ ಕೀರ್ತಿ ಮುಂದೆ ಮತ್ತೆ ಕಾವೇರಿ ನಾಟಕ ಮಾಡಿ ಬೆಟ್ಟದ ಮೇಲಿಂದ ಕೀರ್ತಿ ಕೆಳಗೆ ಬಿದ್ದಿದ್ದಳು. ಬಳಿಕ ತನಗೆ ಏನೂ ಗೊತ್ತಿಲ್ಲದ ಹಾಗೇ ಮನೆಯವರ ಮುಂದೆ ನಟಕವಾಡುತ್ತಿದ್ದಾಳೆ.
ಇದನ್ನೂ ಓದಿ: ಡಾ.ಬ್ರೋ ಕಾರ್ಯಕ್ಕೆ ಫ್ಯಾನ್ಸ್ ಫಿದಾ.. ಸ್ವಾತಂತ್ರ್ಯ ದಿನಾಚರಣೆ ದಿನವೇ ಗಗನ್ ಹೊಸ ಸಾಹಸ; ಏನದು?
ಇನ್ನು, ಕೀರ್ತಿಯ ಪಾತ್ರಕ್ಕೆ ನ್ಯಾಯ ಸಿಗದೆ ಕೊನೆ ಮಾಡಿರೋದಕ್ಕೆ ವೀಕ್ಷಕರು ನಿರ್ದೇಶಕರ ಮೇಲೆ ಕೋಪಗೊಂಡಿದ್ದಾರೆ. ಕೀರ್ತಿಗೆ ಏನಾಗಿದೆ? ವಿ ಮಿಸ್ ಯೂ ಕೀರ್ತಿ, ಸತ್ಯ ಹುಡುಕಲು ಹೋಗಿದ್ದ ಕೀರ್ತಿ ಮತ್ತೆ ಬದುಕಿ ಬರೋದಿಲ್ವಾ? ಯಾಕೆ ಕೀರ್ತಿಯನ್ನು ಮತ್ತೆ ತೆರೆ ಮೇಲೆ ತೋರಿಸುತ್ತಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು, ಕಾವೇರಿಗೆ ಶಿಕ್ಷೆ ಆಗಲೇಬೇಕು ಅಂತ ಕಾಮೆಂಟ್ಸ್ ಹಾಕುವ ಮೂಲಕ ಕೀರ್ತಿ ಪರವಾಗಿ ಮಾತಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಯಾವ ರೀತಿ ಟ್ವಿಸ್ಟ್ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಾಮಾಜಿಕ ಜಾಲಾತಾಣದಲ್ಲಿ ಕೀರ್ತಿ ಬೇಗ ಬಾ ಅಂತ ಕಾಮೆಂಟ್ಸ್ ಹಾಕಿದ ಫ್ಯಾನ್ಸ್
ಹೊಸ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ ಈ ಸೀರಿಯಲ್
ತಪ್ಪು ಮಾಡಿದ ಕಾವೇರಿಗೆ ಶಿಕ್ಷೆ ಕೊಡಿಸಬೇಕು ಎಂದು ವೀಕ್ಷಕರಿಂದ ಭಾರೀ ಆಕ್ರೋಶ
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ತನ್ನದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ.
ಈಗಂತೂ ಲಕ್ಷ್ಮೀ ಬಾರಮ್ಮ ಸೀರಿಯಲ್ ಕಥೆಯನ್ನು ಬಹಳ ರೋಚಕವಾಗಿ ತೆರೆಗೆ ತರುತ್ತಿದ್ದಾರೆ. ಅದರಂತೆ ಒಂದು ವಾರದಿಂದ ನಡೆಯುತ್ತಿರೋ ಎಪಿಸೋಡ್ಗೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಥೆಗೆ ಬರುವುದಾದರೆ, ಕಾವೇರಿಯ ಅಸಲಿ ಮುಖವಾಡ ಕಳಚಲೆಂದು ಬೆಟ್ಟದ ತುದಿಯಲ್ಲಿ ಮಂಟಪ ಹಾಕಿಸಿದ್ದಳು ಕೀರ್ತಿ. ಅದಕ್ಕಾಗಿ ಕಾವೇರಿಯನ್ನು ಡೋಲು ಬಡಿಸುತ್ತಲೇ ಅಲ್ಲಿಗೆ ಕರೆಸಿಕೊಂಡಿದ್ದಳು. ಅದೇ ಸಮಯದಲ್ಲಿ ಕಾವೇರಿ ಹಾಗೂ ಕೀರ್ತಿ ನಡುವೆ ಮಾತಿನ ಚಕಮಕಿ ನಡೆದಿದೆ. ಆ ವೇಳೆ ಕೀರ್ತಿ ಮುಂದೆ ಮತ್ತೆ ಕಾವೇರಿ ನಾಟಕ ಮಾಡಿ ಬೆಟ್ಟದ ಮೇಲಿಂದ ಕೀರ್ತಿ ಕೆಳಗೆ ಬಿದ್ದಿದ್ದಳು. ಬಳಿಕ ತನಗೆ ಏನೂ ಗೊತ್ತಿಲ್ಲದ ಹಾಗೇ ಮನೆಯವರ ಮುಂದೆ ನಟಕವಾಡುತ್ತಿದ್ದಾಳೆ.
ಇದನ್ನೂ ಓದಿ: ಡಾ.ಬ್ರೋ ಕಾರ್ಯಕ್ಕೆ ಫ್ಯಾನ್ಸ್ ಫಿದಾ.. ಸ್ವಾತಂತ್ರ್ಯ ದಿನಾಚರಣೆ ದಿನವೇ ಗಗನ್ ಹೊಸ ಸಾಹಸ; ಏನದು?
ಇನ್ನು, ಕೀರ್ತಿಯ ಪಾತ್ರಕ್ಕೆ ನ್ಯಾಯ ಸಿಗದೆ ಕೊನೆ ಮಾಡಿರೋದಕ್ಕೆ ವೀಕ್ಷಕರು ನಿರ್ದೇಶಕರ ಮೇಲೆ ಕೋಪಗೊಂಡಿದ್ದಾರೆ. ಕೀರ್ತಿಗೆ ಏನಾಗಿದೆ? ವಿ ಮಿಸ್ ಯೂ ಕೀರ್ತಿ, ಸತ್ಯ ಹುಡುಕಲು ಹೋಗಿದ್ದ ಕೀರ್ತಿ ಮತ್ತೆ ಬದುಕಿ ಬರೋದಿಲ್ವಾ? ಯಾಕೆ ಕೀರ್ತಿಯನ್ನು ಮತ್ತೆ ತೆರೆ ಮೇಲೆ ತೋರಿಸುತ್ತಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು, ಕಾವೇರಿಗೆ ಶಿಕ್ಷೆ ಆಗಲೇಬೇಕು ಅಂತ ಕಾಮೆಂಟ್ಸ್ ಹಾಕುವ ಮೂಲಕ ಕೀರ್ತಿ ಪರವಾಗಿ ಮಾತಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಯಾವ ರೀತಿ ಟ್ವಿಸ್ಟ್ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ